ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maja Talkies: ಮಜಾ ಟಾಕೀಸ್ ಮುಗಿದ ಬೆನ್ನಲ್ಲೇ ಬಂಪರ್ ಸುದ್ದಿ ಕೊಟ್ಟ ಸೃಜನ್ ಲೋಕೇಶ್

ಮಜಾ ಟಾಕೀಸ್‌ ಮುಕ್ತಾಯದ ಬಗ್ಗೆ ಸೃಜನ್ ಲೋಕೇಶ್‌ ಅವರು ಕಲರ್ಸ್ ಕನ್ನಡ ಪೇಜ್‌ನಲ್ಲಿ ಲೈವ್ಗೆ ಬಂದು ಬೇಸರ ಕೂಡ ಹೊರ ಹಾಕಿದ್ದರು. ಅದರ ಜೊತೆಗೆ ಗುಡ್ ನ್ಯೂಸ್ ಕೂಡ ಕೊಟ್ಟಿದ್ದಾರೆ. ಅದೇನಪ್ಪ ಅಂದರೆ ಅವರ 'ಜಿಎಸ್‌ಟಿ' ಸಿನಿಮಾ ತೆರೆಗೆ ಬರ್ತಿದೆ.

ಮಜಾ ಟಾಕೀಸ್ ಮುಗಿದ ಬೆನ್ನಲ್ಲೇ ಬಂಪರ್ ಸುದ್ದಿ ಕೊಟ್ಟ ಸೃಜನ್

Srujan Lokesh

Profile Vinay Bhat Jun 3, 2025 6:56 AM

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ವೀಕೆಂಡ್​ನಲ್ಲಿ ಎರಡು ಹೊಸ ಶೋ ಆರಂಭವಾಯಿತು. ಒಂದು ಬಾಯ್ಸ್ vs ಗರ್ಲ್ಸ್ ಮತ್ತೊಂದು ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ (Maja Talkies). ಬಾಯ್ಸ್ vs ಗರ್ಲ್ಸ್ ಶೋಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿರಲಿಲ್ಲ, ಟಿಆರ್​ಪಿ ಕೂಡ ಬರುತ್ತಿರಲಿಲ್ಲ. ಹೀಗಾಗಿ ಇತ್ತೀಚೆಗಷ್ಟೆ ಈ ಶೋನ ಮುಗಿಸಲಾಯಿತು. ಬಳಿಕ ಕಳೆದ ವಾರ ದಿಢೀರ್ ಆಗಿ ಮಜಾ ಟಾಕೀಸ್ ಕೂಡ ಕೊನೆಗೊಂಡಿದೆ. ಯಾವುದೇ ಸೂಚನೆ ನೀಡದೆ ಮಜಾ ಟಾಕೀಸ್ ಫಿನಾಲೆ ವೀಕ್ ಎಂಬ ಪ್ರೊಮೋ ಹಂಚಿಕೊಂಡು ಕಲರ್ಸ್ ಕನ್ನಡ ಮಜಾ ಟಾಕೀಸನ್ ಅನ್ನು ಮುಗಿಸಿದೆ.

ಕೇವಲ 32 ಎಪಿಸೋಡ್​ಗೆ ಮಜಾ ಟಾಕೀಸ್ ಎಂಡ್ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ವಿಶೇಷ ಈ ಬಾರಿಯ ಮಜಾ ಟಾಕೀಸ್ ಬರೀ ಹೊಸಬರಿಂದಲೇ ಕೂಡಿತ್ತು. ಕುರಿ ಪ್ರತಾಪ್ ಮತ್ತು ಸೃಜನ್ ಲೊಕೇಶ್ ಬಿಟ್ಟರೆ ಮತ್ಯಾರು ಹಳಬರು ಇರಲಿಲ್ಲ. ಮುತ್ತುಮಣಿ ಕ್ಯಾರೆಕ್ಟನ್ ಮಾಡುತ್ತಿದ್ದ ತರಂಗ ವಿಶ್ವ ಕೂಡ ಅರ್ಧಕ್ಕೆ ಶೋನಿಂದ ಹೊರಬಂದಿದ್ದರು.

ಉಳಿದಂತೆ ತುಕಾಲಿ ಸಂತೋಷ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿದಂತೆ ಹೊಸಬರೇ ಮಜಾ ಮನೇಲಿದ್ದರು. ಅಲ್ಲದೆ ಇಂದ್ರಜಿತ್ ಲಂಕೇಶ್ ಇಜಿಲ-ಸೃಜನ್ ಕಾಂಬಿನೇಷನ್ ಕೂಡ ಇರಲಿಲ್ಲ. ಇವರ ಜಾಗಕ್ಕೆ ಯೋಗರಾಜ್ ಭಟ್ ಬಂದಿದ್ದರು.

ಮಜಾ ಟಾಕೀಸ್‌ ಮುಕ್ತಾಯದ ಬಗ್ಗೆ ಸೃಜನ್ ಲೋಕೇಶ್‌ ಅವರು ಕಲರ್ಸ್ ಕನ್ನಡ ಪೇಜ್‌ನಲ್ಲಿ ಲೈವ್​ಗೆ ಬಂದು ಬೇಸರ ಕೂಡ ಹೊರ ಹಾಕಿದ್ದರು. ಅದರ ಜೊತೆಗೆ ಗುಡ್ ನ್ಯೂಸ್ ಕೂಡ ಕೊಟ್ಟಿದ್ದಾರೆ. ಅದೇನಪ್ಪ ಅಂದರೆ ಅವರ 'ಜಿಎಸ್‌ಟಿ' ಸಿನಿಮಾ ತೆರೆಗೆ ಬರ್ತಿದೆ. ‘‘ಪ್ರೀತಿಯ ಕನ್ನಡಿಗರಿಗೆ ನಾನು ತಲೆಬಾಗಿ ಧನ್ಯವಾದಗಳನ್ನು ಹೇಳುತ್ತೇನೆ. ನೀವಿಲ್ಲದೇ ನಾವು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಮಜಾ ಟಾಕೀಸ್ ಅನ್ನು ಮುಕ್ತಾಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಬೇರೆ ಒಳ್ಳೊಳ್ಳೆಯ ಕಾರ್ಯಕ್ರಮಗಳೊಂದಿಗೆ ಬರುತ್ತಿದ್ದೇವೆ. ಇದರ ಜೊತೆಗೆ ನನ್ನ ಸಿನಿಮಾ ಜಿಎಸ್‌ಟಿ ಬರ್ತಿದೆ. ಘೋಸ್ಟ್ ಇನ್ ಟ್ರಬಲ್ ಅಂತ ಅದರ ಪೂರ್ತಿ ಹೆಸರು. ಕೆಲವೇ ವಾರಗಳಲ್ಲೇ ಅದನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡ್ತಾ ಇದ್ದೇವೆ’’ ಎಂದು ಹೇಳಿದ್ದಾರೆ.

Mokshitha Pai: ಮೂಗುತಿ ಸುಂದರಿ: ಹೊಸ ಫೋಟೋ ಶೂಟ್​ನಲ್ಲಿ ಮಿಂಚಿದ ಮೋಕ್ಷಿತಾ ಪೈ

‘‘ನನ್ನ ಸಿನಿಮಾಗೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಬೇಕು. ಕನ್ನಡ ಸಿನಿಮಾಗಳನ್ನು ಎಲ್ಲರೂ ಬೆಳೆಸಿ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಹಳೆಯ ವಿಜೃಂಭಣೆಯ ದಿನಗಳನ್ನು ನಾವು ನೋಡಬೇಕಿದೆ. ಜಿಎಸ್‌ಟಿ ಮೂಲಕ ಈ ಬಾರಿ ಒಳ್ಳೆಯ ಸಿನಿಮಾ ಮಾಡಿದ್ದೇನೆ ಎಂಬ ನಂಬಿಕೆ ಇದೆ. ಈಗಾಗಲೇ ಮಜಾ ಟಾಕೀಸ್‌ನಲ್ಲೂ ಜಿಎಸ್‌ಟಿ ಬಗ್ಗೆ ಹೇಳಿದ್ದೇವೆ. ಬೇರೆ ಭಾಷೆಯ ಸಿನಿಮಾಗಳಿಗಿಂತಲೂ ನಮ್ಮ ಸಿನಿಮಾಗಳು ಮೇಲೆ ಹೋಗಬೇಕು. ನಮ್ಮ ಮಜಾ ಟಾಕೀಸ್‌ನಲ್ಲಿ ಹಲವು ಕನ್ನಡ ಸಿನಿಮಾಗಳನ್ನು ಪ್ರಮೋಷನ್ ಮಾಡಿದ್ದೇವೆ. ಸುಮಾರು 10 ವರ್ಷಗಳಿಂದ ಕನ್ನಡಿಗರ ಪ್ರೀತಿ ಗಳಿಸಿರುವ ಮಜಾ ಟಾಕೀಸ್‌ನ ಕಲಾವಿದರಿಗೆ ಧನ್ಯವಾದಗಳು. ಮಿಮಿಕ್ರಿ ದಯಾನಂದ್, ಅಪರ್ಣಾ, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್‌, ತರಂಗ ವಿಶ್ವ, ನವೀನ್ ಪಡೀಲ್, ಪವನ್, ವಿ. ಮನೋಹರ್, ಇಂದ್ರಜಿತ್ ಲಂಕೇಶ್‌, ರಜನಿ, ಯೋಗರಾಜ್ ಭಟ್, ಮಿಮಿಕ್ರಿ ಗೋಪಿ, ರಾಘವೇಂದ್ರ ಮತ್ತು ಗಿಚ್ಚಿ ಗಿಲಿಗಿಲಿ ಶೋ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು’’ ಎಂದು ಸೃಜನ್ ಹೇಳಿದ್ದಾರೆ.