Bhagya Lakshmi Serial: ರಾಮ್ದಾಸ್ ಮನೆಗೆ ಬಂದ ಭಾಗ್ಯ-ಕುಸುಮಾ: ಆದೀಯನ್ನು ನೋಡಿ ಶಾಕ್
ಕಿಶನ್ ನಮ್ಮ ಅಣ್ಣ ವಿದೇಶದಿಂದ ಬಂದಿದ್ದಾನೆ. ಅವನನ್ನು ಭೇಟಿ ಮಾಡಲು ಒಮ್ಮೆ ಮನೆಗೆ ಬನ್ನಿ ಎಂದು ಭಾಗ್ಯ ಹಾಗೂ ಕುಸುಮಾ ಅವರ ಬಳಿ ಹೇಳಿದ್ದಾನೆ. ಅದರಂತೆ ಇವರಿಬ್ಬರು ರಾಮ್ದಾಸ್ ಮನೆಗೆ ಬಂದಿದ್ದಾರೆ. ಆದೀಯನ್ನು ಕರೆದು ಇವನೇ ನನ್ನ ಅಣ್ಣ ಎಂದು ಕಿಶನ್ ಪರಿಚಯಿಸಿದ್ದಾನೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ರೋಚಕಕತೆ ಸೃಷ್ಟಿಸುತ್ತಿದೆ. ಹೊಸದಾಗಿ ಸೃಷ್ಟಿಯಾಗಿರುವ ಆದೀಶ್ವರ್ ಕಾಮತ್ ಪಾತ್ರದಲ್ಲಿ ಹರೀಶ್ ರಾಜ್ ನಟಿಸುತ್ತಿದ್ದು ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಕಳೆದ ಎಪಿಸೋಡ್ನಲ್ಲಿ ಕಿಶನ್ನ ಅಣ್ಣ ಎಂದು ತಿಳಿಯದೆ ಭಾಗ್ಯ ಹಾಗೂ ಕುಸುಮಾ ಆದೀಯ ಮೈಚಳಿ ಬಿಡಿಸಿದ್ದರು. ಇದೀಗ ಇವರೇ ಕಿಶನ್ ಅಣ್ಣ ಎಂಬ ಸತ್ಯ ಭಾಗ್ಯ ಹಾಗೂ ಕುಸುಮಾಗೆ ಗೊತ್ತಾಗುವ ಸಮಯ ಬಂದಿದೆ. ಇವರಿಬ್ಬರು ರಾಮ್ದಾಸ್ ಮನೆಗೆ ಬಂದಿದ್ದು, ಇಲ್ಲಿ ಅಧಿಕೃತವಾಗಿ ಆದೀಶ್ವರ್-ಭಾಗ್ಯ-ಕುಸುಮಾ ಮುಖಾಮುಖಿ ಆಗಿದ್ದಾರೆ.
ಕಳೆದ ಎರಡು ದಿನಗಳಿಂದ ಕಿಶನ್ ಅಣ್ಣ ಎಂದು ತಿಳಿಯದೆ ಭಾಗ್ಯ-ಕುಸುಮಾ ಆದೀ ಜೊತೆ ಆಡಿದ ಜಗಳ ಅಷ್ಟಿಟ್ಟಲ್ಲ. ಯಾವ ಮಟ್ಟಿಗೆ ಎಂದರೆ ಆದೀಶ್ವರ್ನ ಕಾರು ಭಾಗ್ಯ ಕಾರಿಗೆ ಒರೆಸಿಕೊಂಡು ಹೋಯಿತೆಂದು ಕುಸುಮಾ ಆದೀ ಜೊತೆ ಜಗಳವಾಡಿ ಹಣ ವಸೂಲಿ ಮಾಡಿದ್ದಲ್ಲದೆ ಕೋಪದಲ್ಲಿ ಆದೀ ಕಾರಿನ ಗಾಜಿಗೆ ಕಲ್ಲು ಬಿಸಾಡಿ ಗಾಜು ಪುಡಿಪುಡಿ ಮಾಡಿದ್ದರು. ಅಷ್ಟೇ ಅಲ್ಲದೆ ನಮ್ಮ ಹತ್ರ ಕಾಲು ಕೆರ್ಕೊಂಡು ಜಗಳಕ್ಕೆ ಬರ್ಬೇಡ.. ಇನ್ನುಮುಂದೆ ಯಾವತ್ತೂ ನೀನು ನನ್ನ ಕಣ್ಣಮುಂದೆ ಕಾಣಿಸಿಕೊಳ್ಳಬೇಡ ಎಂದು ಕುಸುಮಾ ವಾರ್ನ್ ಮಾಡಿದ್ದಳು.
ಇದಾದ ಬಳಿಕ ಕಿಶನ್ ನಮ್ಮ ಅಣ್ಣ ವಿದೇಶದಿಂದ ಬಂದಿದ್ದಾನೆ. ಅವನನ್ನು ಭೇಟಿ ಮಾಡಲು ಒಮ್ಮೆ ಮನೆಗೆ ಬನ್ನಿ ಎಂದು ಭಾಗ್ಯ ಹಾಗೂ ಕುಸುಮಾ ಅವರ ಬಳಿ ಹೇಳಿದ್ದಾನೆ. ಅದರಂತೆ ಇವರಿಬ್ಬರು ರಾಮ್ದಾಸ್ ಮನೆಗೆ ಬಂದಿದ್ದಾರೆ. ಆದೀಯನ್ನು ಕರೆದು ಇವನೇ ನನ್ನ ಅಣ್ಣ ಎಂದು ಕಿಶನ್ ಪರಿಚಯಿಸಿದ್ದಾನೆ. ಆಗ ಆದೀಯನ್ನು ಕಂಡು ಭಾಗ್ಯ-ಕುಸುಮಾಗೆ ಶಾಕ್ ಆಗಿದೆ. ಅಯ್ಯೋ ಇವನೇನಾ ಕಿಶನ್ ಅಣ್ಣ.. ಎಂಥ ಎಡವಟ್ಟು ಆಗೋಯ್ತು ಎಂದು ಕುಸುಮಾ ಭಾಗ್ಯ ಬಳಿ ಹೇಳಿದ್ದಾಳೆ.
ಮತ್ತೊಂದೆಡೆ ದಿನದಿಂದ ದಿನಕ್ಕೆ ತಾಂಡವ್ಗೆ ಭಾಗ್ಯ ಮೇಲಿನ ಕೋಪ ಏರುತ್ತಲೇ ಇದೆ. ಎಲ್ಲಿ ಹೋದರು ಭಾಗ್ಯ ಹೆಸರು ತಾಂಡವ್ನ ಎದುರು ಬರುತ್ತಲೇ ಇದೆ. ಆಫೀಸ್ನಲ್ಲಿ ಒಂದು ಕೆಲಸ ಆಗಿಲ್ಲ ಎಂದು ತನ್ನ ಅಸಿಸ್ಟೆಂಟ್ ಬಳಿಕ ತಾಂಡವ್ ಜಗಳ ಆಡುತ್ತ ಇರುತ್ತಾನೆ. ಆದರೆ, ಆತ ಈಗ ಈ ಕೆಲಸ ಮಾಡೋಕೆ ಆಗಲ್ಲ.. ಬಾಸ್ ನನ್ನ ಬಳಿ ಬೇರೆ ಕೆಲಸ ಹೇಳಿದ್ದಾರೆ.. ನಾನು ಅವರು ಹೇಳಿದ ಕೆಲಸ ಮಾಡಿಲ್ಲ ಎಂದರೆ ನನ್ನ ಕೆಲಸ ಹೋಗುತ್ತದೆ.. ಎಲ್ಲಾದರು ಕೆಲಸ ಹೋದರೆ ಮತ್ತೆ ನನ್ಗೆ ಕೆಲಸ ತೆಗೆದಿಕೊಡಲು ಭಾಗ್ಯ ಮೇಡಂ ಅಂತವರು ಯಾರೂ ಇಲ್ಲ.. ನಿಮ್ಗೆ ಈ ಹಿಂದೆ ಕೆಲಸ ಹೋದಾಗ ಪುನಃ ಭಾಗ್ಯ ಮೇಡಣ ಕೆಲಸ ತೆಗೆಸಿಕೊಟ್ಟಿದ್ದರು.. ಆದರೆ ನನಗೆ ಆರೀತಿ ಯಾರೂ ಇಲ್ಲ ಎಂದಿದ್ದಾನೆ.
ಇದು ತಾಂಡವ್ಗೆ ಮತ್ತಷ್ಟು ಪಿತ್ತ ನೆತ್ತಿಗೇರಿಸಿದೆ. ತನ್ನ ಅಸಿಸ್ಟೆಂಟ್ನ ಕೆನ್ನೆಗೆ ತಾಂಡವ್ ಜೋರಾಗಿ ಬಾರಿಸಿದ್ದಾನೆ. ಅಲ್ಲದೆ ಮನೆಗೆ ಬಂದಮೇಲೂ ಶ್ರೇಷ್ಠಾ ಜೊತೆ ಜಗಳ ಆಡಿದ್ದಾನೆ. ಶ್ರೇಷ್ಠಾ ಏನಾಯಿತು?, ಆ ಭಾಗ್ಯಾಳ ವಿಷಯ ಮರೆತು ಬಿಡು ಎಂದು ಹೇಳಿದರೂ.. ನನ್ನಿಂದ ಆಗುತ್ತಿಲ್ಲ.. ಅವಳಿಗೆ ಏನಾದರು ಮಾಡಬೇಕು ಎಂದು ತಾಂಡವ್ ವಿಪರೀತ ಕೋಪಗೊಂಡಿದ್ದಾನೆ.
ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿಯ ಮುಂಬರುವ ಎಪಿಸೋಡ್ಗಳು ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಒಂದೆಡೆ ತನಗೆ ಕಾಟ ಕೊಟ್ಟವರು ಕಿಶನ್ನ ಮದುವೆ ಆಗುವ ಹುಡುಗಿಯ ಮನೆಯವರು ಎಂದು ತಿಳಿದು ಆದೀ ಏನು ಮಾಡುತ್ತಾನೆ ಎಂಬುದು ನೋಡಬೇಕಿದೆ.. ಮತ್ತೊಂದೆಡೆ ತಾಂಡವ್ ಸುಮ್ಮನೆ ಕೂರುವವನಲ್ಲ, ಭಾಗ್ಯಾಳನ್ನು ಸೋಲಿಸಲು ಮತ್ತೊಂದು ಪ್ಲ್ಯಾನ್ ಮಾಡುವುದು ಖಚಿತ. ಹೀಗಾಗಿ ಭಾಗ್ಯ ಲಕ್ಷ್ಮೀ ಧಾರಾವಾಹಿ ಹೇಗೆ ಸಾಗಲಿದೆ ಎಂಬುದು ಕುತೂಹಲ ಕೆರಳಸಿದೆ.
Vaishnavi Gowda: ಸೀತಾ ರಾಮ ಮುಗಿದ ಬೆನ್ನಲ್ಲೇ ಮದುವೆಗೆ ರೆಡಿಯಾದ ವೈಷ್ಣವಿ ಗೌಡ