Bhagya Lakshmi Serial: ಮೈಮೇಲೆ ಹಣ ಸುರಿದ ಆದೀಶ್ವರ್ನ ಮೈಚಳಿ ಬಿಡಿಸಿದ ಭಾಗ್ಯ
ಭಾಗ್ಯ ಆದೀಗೆ ಖಡಕ್ ತಿರುಗೇಟು ಕೊಟ್ಟು ಅಲ್ಲಿಂದ ಹೊರಟಿದ್ದಾಳೆ. ಹಣದಿಂದ ಏನು ಬೇಕಾದರು ಮಾಡಬಹುದು ಎಂಬ ಭ್ರಮೆಯಲ್ಲಿದ್ದ ಆದೀಶ್ವರ್ಗೆ ಆಘಾತ ಉಂಟಾಗಿದೆ. ಸದ್ಯ, ಮಿಡಲ್ ಕ್ಲಾಸ್ ಜನರೆಲ್ಲ ಹಣಕ್ಕೋಸ್ಕರ ಏನು ಬೇಕಾದ್ರು ಮಾಡುತ್ತಾರೆ ಎಂದು ಅಂದುಕೊಂಡಿರುವ ಆದೀಶ್ವರ್ನ ಆಲೋಚನೆ ಬದಲಾಗುತ್ತ? ಎಂಬುದು ನೋಡಬೇಕಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಭಾಗ್ಯ ತನ್ನ ನೈಜ್ಯ ರೂಪವನ್ನು ಆದೀಶ್ವರ್ಗೆ ತೋರಿಸಿದ್ದಾಳೆ. ಹಣದಿಂದ ಏನು ಬೇಕಾದರು ಕೊಂಡುಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದ ಆದೀಶ್ವರ್ನ ಮೈಚಳಿ ಬಿಡಿಸಿದ್ದಾಳೆ ಭಾಗ್ಯ. ತನ್ನ ಮೇಲೆ ಹಣದ ಮಳೆ ಸುರಿಸಿದ ಆದೀಗೆ ಅದೇ ಹಣವನ್ನು ವಾಪಾಸ್ ಕೊಟ್ಟು ಬುದ್ದಿ ಹೇಳಿದ್ದಾಳೆ.
ನಿನ್ನೆ ಆದೀಶ್ವರ್ ಭಾಗ್ಯಾಗೆ ಕಾಲ್ ಮಾಡಿ, ಈ ಮದುವೆಯ ಮಾತುಕತೆ ಬಂದಾಗಿನಿಂದ ನಮ್ಮ ಮನೆಯಲ್ಲಿ ಏನೇನೋ ನಡಿತಾ ಇದೆ.. ಇದನ್ನೆಲ್ಲ ಇಲ್ಲಿಗೆ ಎಂಡ್ ಮಾಡೋಣ ಅಂತ ಹೇಳಿದ್ದಾನೆ. ಅಲ್ಲದೆ ಒಂದು ಸ್ಥಳಕ್ಕೆ ಬಂದು ನನ್ನನ್ನ ಒಮ್ಮೆ ಭೇಟಿ ಮಾಡಿ ಎಂದು ಹೇಳಿದ್ದಾನೆ. ಅದರಂತೆ ಭಾಗ್ಯ ಅಲ್ಲಿಗೆ ಹೊರಡುತ್ತಾಳೆ.
ವಿಶೇಷ ಎಂದರೆ ಭಾಗ್ಯ ಬರಲು ಸ್ವತಃ ಆದೀಯೆ ಭಾಗ್ಯಾಳಿಗೆ ಕಾರಿನ ವ್ಯವಸ್ಥೆಯನ್ನು ಮಾಡಿದ್ದಾನೆ. ಕಾರಿನ ಡ್ರೈವರ್ ಬಂದು, ಮೇಡಂ ನಿಮ್ಮನ್ನು ಒಂದು ಸ್ಥಳಕ್ಕೆ ಆದೀ ಸರ್ ಕರೆದುಕೊಂಡು ಬರಲು ಹೇಳಿದ್ದಾರೆ ಬನ್ನಿ ಹೋಗೋಣ ಎಂದು ಹೇಳಿದ್ದಾನೆ. ಆದರೆ, ಇದಕ್ಕೆ ಒಪ್ಪದ ಭಾಗ್ಯ, ನಾನು ನನ್ನ ಕಾರಿನಲ್ಲೇ ಬರುತ್ತೇನೆ ಎನ್ನುತ್ತಾಳೆ. ಹೀಗೆ ಕಾರಿನಲ್ಲಿ ಹೋಗುವಾಗ ಭಾಗ್ಯ ಕಾರಿಗೆ ಮತ್ತೊಂದು ಕಾರು ಅಡ್ಡ ಬಂದು ಅದರಿಂದ ಓರ್ವ ಇಳಿದು ಒಂದು ಪೇಪರ್ನ ಅಟ್ಟಿ ಕೊಡುತ್ತಾನೆ..ಈ ಪೇಪರ್ಗೆ ಸೈನ್ ಮಾಡಿ.. ನಿಮ್ಮ ಹಣದ ಸಮಸ್ಯೆ ಎಲ್ಲ ದೂರವಾಗುತ್ತೆ ಎಂದು ಹೇಳಿ ಹೋಗುತ್ತಾನೆ. ಆ ಬಳಿಕ ಒಂದು ಲೇಡಿ ಈ ಪೇಪರ್ಗೆ ಸೈನ್ ಮಾಡಿ ಈ ಹೋಟೆಲ್ ನಿಮ್ಮದೇ ಎನ್ನುತ್ತಾಳೆ.
ಭಾಗ್ಯಾಗೆ ಏನಾಗುತ್ತಿದೆ ಎಂದು ಅರ್ಥವಾಗುವುದಿಲ್ಲ. ಅದೇನೆ ಇರಲಿ ಸದ್ಯ ಆದೀಶ್ವರ್ನ ಮೀಟ್ ಮಾಡೋಣ ಎಂದು ಲೊಕೇಷನ್ಗೆ ತಲುಪುತ್ತಾಳೆ. ಅಲ್ಲಿ ಆದೀಶ್ವರ್ ಮೂರು ಸ್ಯೂಟ್ ಕೇಸ್ ತಂದಿದ್ದು, ಇದರಲ್ಲಿ ಒಂದು ಸ್ಯೂಟ್ ಕೇಸ್ ತೆರೆದು ಅದರಲ್ಲಿದ್ದ ದುಡ್ಡನ್ನು ಭಾಗ್ಯಾಳ ಮೈಮೇಲೆ ಸುರಿದು ಪೂಜಾ-ಆದೀ ಮದವೆಯನ್ನು ನಿಲ್ಲಿಸಬೇಕು ಎಂದು ಹೇಳುತ್ತಾನೆ. ನಿನ್ನ ಕೈಯಲ್ಲಿರುವ ಪೇಪರ್ನ ಅಟ್ಟಿಗೆ ಒಂದು ಸೈನ್ ಮಾಡು ನಿನ್ನ ಎಲ್ಲ ಇಎಮ್ಐ ಪ್ರಾಬ್ಲಂ ದೂರವಾಗುತ್ತೆ.. ಹಾಗೆ ನಿನಗೆ ಜೀವನ ನಡೆಸಲು ಒಂದು ಹೋಟೆಲ್ ಅನ್ನೇ ಕೊಡುತ್ತೇನೆ. ಇಷ್ಟು ಹಣ ಸಾಕಾಗಿಲ್ಲ ಅಂತ ಅಂದ್ರೆ ಹೇಳು ಇನ್ನೂ ಹಣ ಕೊಡುತ್ತೇನೆ ಎಂದು ಹೇಳುತ್ತಾನೆ.
ನಿಮ್ಮ ಮಿಡಲ್ ಕ್ಲಾಸ್ ಮೆಂಟಾಲಿಟಿ ನನ್ಗೆ ಗೊತ್ತು.. ನೀವೆಲ್ಲ ಹಣಕ್ಕೋಸ್ಕರ ಈರೀತಿ ಮಾಡೋದು.. ಈ ಹಣವನ್ನೆಲ್ಲ ತೆಗೆದುಕೊಂಡು ಆರಾಮವಾಗಿರಿ ಎಂದು ಆದೀ ಭಾಗ್ಯಾಗೆ ಹೇಳಿ ಹೊರಡುತ್ತಾನೆ. ಅಷ್ಟು ಹೊತ್ತು ಸುಮ್ಮನಿದ್ದ ಭಾಗ್ಯ, ಆದೀ ಹೊರಡುವ ಹೊತ್ತಿಗೆ.. ಮಾತಾಡೋಣ ಅಂತ ಕರೆದು ನೀವು ಮಾತ್ರ ಮಾತಾಡಿ ಹೊರಡ್ತಾ ಇದ್ದೀರಲ್ವಾ ಆದೀ ಸರ್.. ನನ್ಗೂ ಮಾತಾಡೋಕೆ ಇದೆ ಎಂದು ಹೇಳುತ್ತಾಳೆ.
ಆದೀ ಭಾಗ್ಯಾಳ ಮೈಮೇಲೆ ಸುರಿದ ಹಣವೆಲ್ಲ ಕೆಳಕ್ಕೆ ಬಿದ್ದಿರುತ್ತೆ ಅದನ್ನೆಲ್ಲ ತೆಗೆದುಕೊಂಡ ಭಾಗ್ಯ ಸ್ಯೂಟ್ ಕೇಸ್ನಲ್ಲಿ ತುಂಬಿಸಿ ಆದೀ ಕೈಗೆ ಕೊಡುತ್ತಾಳೆ. ‘‘ಇಷ್ಟೆಲ್ಲ ದುಡ್ಡಲ್ಲಿ ನನ್ನ ಸ್ವಾಭಿಮಾನ ಕೊಂಡುಕೊಳ್ಳೋಕೆ ಆಗುತ್ತಾ?, ನಾವು ಮಿಡಲ್ ಕ್ಲಾಸ್ ಪೀಪಲ್ ಆಗಿರಬಹುದು.. ಕಷ್ಟ ಪಟ್ಟು ಕೆಲಸ ಮಾಡುತ್ತೇವೆ.. ನಿಮ್ಮಂತವರನ್ನು ಸರ್.. ಬಾಸ್ ಅಂತನೂ ಕರಿತೇವೆ.. ಹಾಗಂದ ಮಾತ್ರಕ್ಕೆ ನಮ್ಮನ್ನ ನಾವು ದುಡ್ಡಿಗೆ ಮಾರ್ಕೊಳ್ಳುತ್ತೇವೆ ಎಂದರ್ಥ ಅಲ್ಲ.. ನಾನು ಮಿಡಲ್ ಕ್ಲಾಸ್ ಫ್ಯಾಮಿಲಿಯವಳೇ ಆದ್ರೆ ದುಡ್ಡಿಗೆ ಕೈಚಾಚುವವಳಂತು ಖಂಡಿತಾ ಅಲ್ಲ.. ಜೀವನ ಪೂರ್ತಿ ದುಡಿದ್ರೂ ಇಷ್ಟು ದುಡ್ಡು ನಮಗೆ ಸಿಗಲ್ಲ ನಿಜ.. ಹಾಗಂತ ನಿಮ್ಮ ಮುಂದೆ ಕೈಚಾಚಿ ಹಣ ಪಡೆಯುವ ಫ್ಯಾಮಿಲಿಯಿಂದ ನಾನು ಬಂದಿಲ್ಲ. ನನ್ನಂತ ಎಷ್ಟೋ ಜನರನ್ನು ನೀವು ಲೈಫ್ನಲ್ಲಿ ನೋಡಿರಬಹುದು ಆದರೆ, ನನ್ನನ್ನ ನೋಡಿರಲ್ಲ.. ಎಲ್ಲ ಮಿಡಲ್ ಕ್ಲಾಸ್ನವರೂ ನೀವು ಅಂದುಕೊಂಡಂತೆ ಇರಲ್ಲ.. ನಾನು ಆಗ್ಲಿ ನಮ್ಮ ಅತ್ತೆ ಆಗಲಿ ನಿಮ್ಮ ಮನೆಯ ಹೊಸ್ತಿಲು ತುಳಿದಿದ್ದು ಕಾಮತ್ ಸರ್ ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಮತ್ತು ಕಿಶನ್ ಪೂಜಾ ಮೇಲೆ ತೋರಿಸುತ್ತಿರುವ ಪ್ರೀತಿಗೆ ಹೊರತು ಈ ದುಡ್ಡಿಗಾಗಿ ಅಲ್ಲ. ಜೀವನ ನಡೆಸೋಕೆ ದುಡ್ಡು ಬೇಕು ಆದ್ರೆ ದುಡ್ಡೇ ಜೀವನ ಆಗಬಾರದು ಎಂಬ ಪಾಠ ಕಲಿಸಿದ್ದಾಳೆ.
ಭಾಗ್ಯ ಆದೀಗೆ ಖಡಕ್ ತಿರುಗೇಟು ಕೊಟ್ಟು ಅಲ್ಲಿಂದ ಹೊರಟಿದ್ದಾಳೆ. ಹಣದಿಂದ ಏನು ಬೇಕಾದರು ಮಾಡಬಹುದು ಎಂಬ ಭ್ರಮೆಯಲ್ಲಿದ್ದ ಆದೀಶ್ವರ್ಗೆ ಆಘಾತ ಉಂಟಾಗಿದೆ. ಸದ್ಯ, ಮಿಡಲ್ ಕ್ಲಾಸ್ ಜನರೆಲ್ಲ ಹಣಕ್ಕೋಸ್ಕರ ಏನು ಬೇಕಾದ್ರು ಮಾಡುತ್ತಾರೆ ಎಂದು ಅಂದುಕೊಂಡಿರುವ ಆದೀಶ್ವರ್ನ ಆಲೋಚನೆ ಬದಲಾಗುತ್ತ?, ಭಾಗ್ಯ ಹೇಳಿದ ಮಾತುಗಳಿಂದ ಆದೀ ಬದಲಾಗಿ ಈ ಮದುವೆಗೆ ಒಪ್ಪಿಗೆ ಸೂಚಿಸುತ್ತಾನ ಅಥವಾ ತನ್ನ ಸಿಟ್ಟನ್ನು ಹೀಗೆ ಮುಂದುವರೆಸುತ್ತಾನ ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
Prithwi Bhat: ಹನಿಮೂನ್ಗೆ ಮಲೇಷ್ಯಾಕ್ಕೆ ಹಾರಿದ ಪೃಥ್ವಿ ಭಟ್: ಫೋಟೋ ನೋಡಿ