Ahmedabad Plane Crash: ವಿಮಾನ ದುರಂತದಲ್ಲಿ ಮಡಿದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಲಂಡನ್ಗೆ ಹೊರಟಿದ್ದೇಕೆ?
ಅಹಮದಾಬಾದ್ನ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕೂಡ ಮೃತಪಟ್ಟಿದ್ದಾರೆ. ಅಹಮದಾಬಾದ್ನಿಂದ ಲಂಡನ್ಗೆ ತೆರಳಲು ಟೇಕ್ಆಫ್ ಆಗುತ್ತಿದ್ದ ವೇಳೆ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಇದರ ಪರಿಣಾಮ 240ಕ್ಕೂ ಅಧಿಕ ಪ್ರಯಾಣಿಕರು ಸಾವಿಗೀಡಾಗಿದ್ದಾರೆಂದು ವರದಿಯಾಗಿದೆ.

ವಿಮಾನ ದುರಂತದಲ್ಲಿ ಸಾವಿಗೀಡಾದ ವಿಜಯ್ ರೂಪಾನಿ.

ಅಹಮದಾಬಾದ್: ಗುರುವಾರ ಮಧ್ಯಾಹ್ನ ಅಹಮದಾಬಾದ್ನಿಂದ (Ahmedabad) ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (Plane Crash) ಟೇಕ್ ಆಫ್ ಆದ ತಕ್ಷಣ ಅಪಘಾತಕ್ಕೀಡಾಗಿದೆ. ಇದರ ಪರಿಣಾಮ ವಿಮಾನದಲ್ಲಿದ್ದ 240ಕ್ಕೂ ಅಧಿಕ ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಇದರಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ಕೂಡ ಇದ್ದರು ಹಾಗೂ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ರೂಪಾನಿ ಅವರ ಪತ್ನಿ ಅಂಜಲಿ ರೂಪಾನಿ ಲಂಡನ್ನಲ್ಲಿದ್ದಾರೆ ಮತ್ತು ಅವರನ್ನು ಮರಳಿ ತವರಿಗೆ ಕರೆತರಲು ಮಾಜಿ ಸಿಎಂ ಲಂಡನ್ಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗುತ್ತಿದೆ. ಆದರೆ, ದುರದೃಷ್ಟವಶಾತ್ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ಸಾವಿಗೀಡಾಗಿದ್ದಾರೆ. ವಿಮಾನದ 12ನೇ ಸಾಲಿನ ಆಸನದ ಸಂಖ್ಯೆ 2ಡಿ ವಿಜಯ್ ರೂಪಾನಿ ಅವರ ಸೀಟ್ ಎಂದು ಹೇಳಲಾಗಿದೆ. ಆದರೆ, ಅವರು ವಿಮಾನದಲ್ಲಿ ಇದ್ದರಾ? ಇಲ್ಲವಾ? ಎಂಬುದರ ಬಗ್ಗೆ ಅದಿಕಾರಿಗಳು ಸ್ಪಷ್ಟನೆ ನೀಡಿಲ್ಲ.
ವಿಜಯ್ ರೂಪಾನಿ ಅವರು ಭಾರತೀಯ ಜನತಾ ಪಕ್ಷದಿಂದ (BJP) ಗುಜರಾತ್ನ 16ನೇ ಮುಖ್ಯಮಂತ್ರಿಯಾಗಿದ್ದಾರೆ. 2016 ಆಗಸ್ಟ್ 7 ರಿಂದ 2021ರ ಸೆಪ್ಟಂಬರ್ 11ರ ವರೆಗೆ ಇವರು ಗುಜರಾತ್ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಗುಜರಾತ್ ವಿಧಾನ ಸಭಾ ಚೆನಾವಣೆಯಲ್ಲಿ ಅವರು ರಾಜ್ಕೋಟ್ನ ಪಶ್ಚಿಮ ವಲಯವನ್ನು ಪ್ರತಿನಿಧಿಸಿದ್ದರು. ಆನಂದಿಬೆನ್ ಪಟೇಲ್ ಅವರ ನಂತರ ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು ಮತ್ತು 2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜ್ಕೋಟ್ ಪಶ್ಚಿಮದಿಂದ ಮರು ಆಯ್ಕೆಯಾಗಿದ್ದರು.
Ahmedabad Plane Crash: ಗುಜರಾತ್ ವಿಮಾನ ಪತನ; ಟೇಕ್ಆಫ್ ವೇಳೆ ಆಪಘಾತವಾಗಿದ್ದೇಕೆ?
ಎರಡನೇ ಸಲ ಮುಖ್ಯಮಂತ್ರಿಯಾದ ಬಳಿಕ ನಿತಿನ್ ಪಟೇಲ್ ಇವರಿಗೆ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 2021ರ ಸೆಪ್ಟಂಬರ್ನಲ್ಲಿ ವಿಜಯ್ ರೂಪಾನಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನವನ್ನು ಭೂಪೇಂದ್ರ ಪಟೇಲ್ ಅಲಂಕರಿಸಿದ್ದರು. ಗುಜರಾತ್ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ಅವರು ಹಲವು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆನಂದಿಬೆನ್ ಪಟೇಲ್ ಅವರ ಅಡಿಯಲ್ಲಿ ರೂಪಾನಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
2014 ನವೆಂಬರ್ ನಿಂದ 2016ರ ಆಗಸ್ಟ್ ವರೆಗೆ ಅವರು ಸಾರಿಗೆ, ಕಾನೂನು ಹಾಗೂ ಉದ್ಯೋಗ ಮತ್ತು ನೀರು ಸರಬರಾಜು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2006 ರಿಂದ 2012ರ ವರೆಗೂ ಅವರು ರಾಜ್ಯ ಸಭೆಯ ಸದಸ್ಯರು ಕೂಡ ಆಗಿದ್ದರು. ಇದರ ಜಿತೆಗೆ 2016ರಲ್ಲಿ ಫೆಬ್ರವರಿಯಿಂದ ಆಗಸ್ಟ್ವರೆಗೆ ಗುಜರಾತ್ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು.
Ahmedabad Plane Crash Live Updates: ಏರ್ ಇಂಡಿಯಾ ವಿಮಾನ ಪತನ; ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಾವು ದೃಢ
ಕಾರ್ಪೋರೇಟರ್ ಆಗಿ ರಾಜಕೀಯಕ್ಕೆ ಎಂಟ್ರಿ
ವಿಜಯ್ ರೂಪಾನಿ ಅವರು ಸಚಿವ ಹಾಗೂ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ1987 ರಲ್ಲಿ ರಾಜ್ಕೋಟ್ ಮುನ್ಸಿಪಾಲ್ ಕಾರ್ಪೋರೇಷನ್ನಲ್ಲಿ ಕಾರ್ಪೋರೇಟರ್ ಆಗುವ ಮೂಲಕ ತಮ್ಮ ರಾಜಕೀಯ ವೃತ್ತಿ ಜೀವನವನ್ನು ಆರಂಭಿಸಿದ್ದರು. 1996ರಿಂದ 1997ರ ವರೆಗೆ ಅವರು ಮೇಯರ್ ಆಗಿದ್ದರು. 1998ರಲ್ಲಿ ಕೇಶುಬಾಯಿ ಪಟೇಲ್ ಅವರ ಮುಖ್ಯಮಂತ್ರಿ ಅವಧಿಯಲ್ಲಿ ವಿಜಯ್ ರೂಪಾನಿ ಅವರನ್ನು ಗುಜರಾತ್ ಬಿಜೆಪಿ ಪಂದ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ವಿಜಯ್ ರೂಪಾನಿ ಅವರು ನಾಲ್ಕು ಬಾರಿ ಗುಜರಾತ್ ರಾಜ್ಯ ಬಿಜೆಪಿಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. 2013ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿದ್ದ ವೇಳೆ, ವಿಜಯ್ ರೂಪಾನಿ ಅವರು, ಗುಜರಾತ್ ಮುನ್ಸಿಪಾಲ್ ಫೈನಾನ್ಷ್ ಮಂಡಳಿಗೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
Ahmedabad Plane Crash: ಅಹಮದಾಬಾದ್ ವಿಮಾನ ದುರಂತ; ಸಿಎಂ ಸಿದ್ದರಾಮಯ್ಯ ಸಂತಾಪ
ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಪತನಗೊಂಡು ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ, 232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯನ್ನು ಹೊತ್ತ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1.17 ಕ್ಕೆ ಲಂಡನ್ಗೆ ಹೊರಟಾಗ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು ಎನ್ನಲಾಗಿದೆ.