Bhavya Gowda: ಒಂದು ಶೋಗೆ ಸಹಿ ಹಾಕಿದ್ಮೇಲೆ..: ಭವ್ಯಾ ಗೌಡ ರೂಲ್ಸ್ ಬ್ರೇಕ್ ಬಗ್ಗೆ ಪ್ರಥಮ್ ಮಾತು
ಭವ್ಯಾ ಗೌಡ, ಕರ್ಣ ಧಾರಾವಾಹಿ ಪ್ರಕರಣ ಕೋರ್ಟ್ನಲ್ಲಿದ್ದು, ಎಲ್ಲ ಇತ್ಯರ್ಥ ಆದ ಬಳಿಕ ಟೆಲಿಕಾಸ್ಟ್ ಕಾಣಲಿದೆ. ಕರ್ಣ ಧಾರಾವಾಹಿಯ ನಿರ್ಮಾಪಕಿ ಶ್ರುತಿ ನಾಯ್ಡು ಅವರಿಗೆ ಭವ್ಯಾ ಮಾಡಿದ ಈ ಒಂದು ತಪ್ಪು ತುಂಬಾ ನಷ್ಟವನ್ನುಂಟು ಮಾಡಿದೆ. ಇದೀಗ ಈ ಘಟನೆ ಬಗ್ಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ಮಾತನಾಡಿದ್ದಾರೆ.

Pratham and Bhavya Gowda

ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡು ಭವ್ಯಾ ಗೌಡ (Bhavya Gowda) ಈಗ ಸಂಕಷ್ಟದಲ್ಲಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಜೂನ್ 16 ರಂದು ರಾತ್ರಿ 8 ಗಂಟೆಗೆ ಪ್ರಸಾರ ಕಾಣಬೇಕಿದ್ದ ಹೊಸ ಕರ್ಣ ಧಾರಾವಾಹಿ ರದ್ದಾಗಲು ಭವ್ಯಾ ಅವರೇ ಎನ್ನಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸತ್ತಿದ್ದಾರೆ.
ಮೂಲಗಳ ಪ್ರಕಾರ ಝೀ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಚಾನೆಲ್ ಜೊತೆಗೆ ಭವ್ಯಾ ಗೌಡ ಅವರ ಅಗ್ರೀಮೆಂಟ್ ಆಗಿತ್ತು. ಅಗ್ರೀಮೆಂಟ್ ಪ್ರಕಾರ, ಕೆಲ ತಿಂಗಳ ಮಟ್ಟಿಗೆ ಭವ್ಯಾ ಗೌಡ ಬೇರೆ ಚಾನೆಲ್ಗಾಗಿ ಕೆಲಸ ಮಾಡುವಂತಿಲ್ಲ. ಇದನ್ನೇ ಇಟ್ಟುಕೊಂಡು ಪ್ರತಿಸ್ಪರ್ಧಿ ಚಾನೆಲ್ ಕೋರ್ಟ್ ಮೆಟ್ಟಿಲೇರಿತು. ಹೀಗಾಗಿ ಕರ್ಣ ಧಾರಾವಾಹಿ ಪ್ರಸಾರಕ್ಕೆ ಸ್ಟೇ ತಂದಿದೆ. ಈ ಧಾರಾವಾಹಿ ಪ್ರಸಾರ ಆಗುತ್ತಿಲ್ಲ ಎಂಬ ಸುದ್ದಿಯ ಜೊತೆಗೆ ಭವ್ಯಾ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಿಂದ ಕರ್ಣ ಧಾರಾವಾಹಿಯ ಎಲ್ಲ ಪೋಸ್ಟರ್ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದರು.
ಸದ್ಯ ಈ ಪ್ರಕರಣ ಕೋರ್ಟ್ನಲ್ಲಿದ್ದು, ಎಲ್ಲ ಇತ್ಯರ್ಥ ಆದ ಬಳಿಕ ಟೆಲಿಕಾಸ್ಟ್ ಕಾಣಲಿದೆ. ಕರ್ಣ ಧಾರಾವಾಹಿಯ ನಿರ್ಮಾಪಕಿ ಶ್ರುತಿ ನಾಯ್ಡು ಅವರಿಗೆ ಭವ್ಯಾ ಮಾಡಿದ ಈ ಒಂದು ತಪ್ಪು ತುಂಬಾ ನಷ್ಟವನ್ನುಂಟು ಮಾಡಿದೆ. ಇದೀಗ ಈ ಘಟನೆ ಬಗ್ಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ಮಾತನಾಡಿದ್ದಾರೆ.
Bhagya Lakshmi Serial: ಮದುವೆ ಆಗಲು ಒಪ್ಪದ ಪೂಜಾ: ಕಷ್ಟಕ್ಕೆ ಸಿಲುಕಿಕೊಂಡ ಕಿಶನ್
ಒಂದು ಶೋಗೆ ಸಹಿ ಹಾಕಿದ ಮೇಲೆ ಅದು ಮುಗಿಯುವ ವರೆಗೆ ಏನೇನು ಅಗ್ರೀಮೆಂಟ್ ಆಗಿರುತ್ತೋ, ಅದು ಆ ಆರ್ಟಿಸ್ಟ್ ಹಾಗೂ ಚಾನೆಲ್ ಮಧ್ಯೆ ಇರುತ್ತದೆ. ಲೀಗಲ್ ಆಗಿ ಅದನ್ನ ಪಾಲಿಸಲೇ ಬೇಕಾಗುತ್ತದೆ. ಕಲಾವಿದರು ಎಚ್ಚೆತ್ತುಕೊಳ್ಳಬೇಕು. ಶ್ರುತಿ ನಾಯ್ಡು ಬಗ್ಗೆ ತುಂಬಾ ಬೇಜಾರಾಯಿತು. ಲಾಸ್ ಆದಾಗಲೂ ಅವರು ಎದ್ದು ನಿಂತಿದ್ದಾರೆ. ಏನೇ ಸಮಸ್ಯೆ ಇದ್ದರೂ ಪ್ರೊಡ್ಯೂಸರ್ವರೆಗೂ ತಗೊಂಡು ಬರಬಾರದಿತ್ತು. ಈ ಸಮಸ್ಯೆಯನ್ನ ಬಗೆಹರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ’ ಎಂದು ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.