ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kailash Vijayvargiya: ಕಡಿಮೆ ಬಟ್ಟೆ ಧರಿಸುವ ಹುಡುಗಿಯರೆಂದರೆ ಇಷ್ಟವಾಗುವುದಿಲ್ಲ; ಬಿಜೆಪಿ ನಾಯಕನಿಂದ ವಿವಾದಾತ್ಮಕ ಹೇಳಿಕೆ

ಮಧ್ಯಪ್ರದೇಶದ (Madhya Pradesh) ಹಿರಿಯ ಬಿಜೆಪಿ ನಾಯಕ ಮತ್ತು ನಗರಾಭಿವೃದ್ಧಿ ಸಚಿವ ಕೈಲಾಶ್ ವಿಜಯವರ್ಗೀಯ (Kailash Vijayvargiya) ಅವರು ಮಹಿಳೆಯರ ಬಟ್ಟೆಯ ಬಗ್ಗೆ (Women's Clothing) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಪಾಶ್ಚಿಮಾತ್ಯ ದೇಶಗಳಲ್ಲಿ ಕಡಿಮೆ ಬಟ್ಟೆ ಧರಿಸಿದ ಮಹಿಳೆಯನ್ನು ಸುಂದರಿ ಎಂದು ಪರಿಗಣಿಸುತ್ತಾರೆ. ನಾನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಹಿಳೆಯರ ಉಡುಪಿನ ಕುರಿತು ವಿವಾದ ಸೃಷ್ಟಿಸಿದ ಬಿಜೆಪಿ ನಾಯಕ

Profile Vishakha Bhat Jun 6, 2025 3:07 PM

ಭೋಪಾಲ್: ಮಧ್ಯಪ್ರದೇಶದ (Madhya Pradesh) ಹಿರಿಯ ಬಿಜೆಪಿ ನಾಯಕ ಮತ್ತು ನಗರಾಭಿವೃದ್ಧಿ ಸಚಿವ ಕೈಲಾಶ್ ವಿಜಯವರ್ಗೀಯ (Kailash Vijayvargiya) ಅವರು ಮಹಿಳೆಯರ ಬಟ್ಟೆಯ ಬಗ್ಗೆ (Women's Clothing) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದೋರ್‌ನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಕಡಿಮೆ ಬಟ್ಟೆ ಧರಿಸುವ ಹುಡುಗಿಯರೆಂದರೆ ನನಗೆ ಇಷ್ಟವಿಲ್ಲ,” ಎಂದಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಉಲ್ಲೇಖಿಸಿ, “ಪಾಶ್ಚಿಮಾತ್ಯ ದೇಶಗಳಲ್ಲಿ ಕಡಿಮೆ ಬಟ್ಟೆ ಧರಿಸಿದ ಮಹಿಳೆಯನ್ನು ಸುಂದರಿ ಎಂದು ಪರಿಗಣಿಸುತ್ತಾರೆ. ನಾನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಚೆನ್ನಾಗಿ ಒಡವೆ ಧರಿಸಿ, ಆಭರಣಗಳೊಂದಿಗೆ ಸೊಗಸಾಗಿ ಕಾಣುವ ಹುಡುಗಿಯನ್ನು ಸುಂದರಿ ಎಂದು ಭಾವಿಸುತ್ತೇವೆ” ಎಂದರು. ಸಣ್ಣ ಭಾಷಣ ಮತ್ತು ಸಣ್ಣ ಬಟ್ಟೆಯನ್ನು ಹೋಲಿಕೆ ಮಾಡಿದ ಅವರು, “ಪಾಶ್ಚಿಮಾತ್ಯ ದೇಶಗಳಲ್ಲಿ ಕಡಿಮೆ ಮಾತನಾಡುವ ನಾಯಕನನ್ನು ಒಳ್ಳೆಯವನೆಂದು, ಕಡಿಮೆ ಬಟ್ಟೆ ಧರಿಸಿದವವರನ್ನು ಸುಂದರಿ ಎಂದು ಭಾವಿಸುತ್ತಾರೆ. ಆದರೆ, ಮಹಿಳೆ ದೇವಿಯ ಸ್ವರೂಪ. ಒಳ್ಳೆಯ ಬಟ್ಟೆ ಧರಿಸಬೇಕು. ಬಿಚ್ಚಿಕೊಂಡ ಬಟ್ಟೆಯ ಮಹಿಳೆಯರನ್ನು ಆಕರ್ಷಕ ಎಂದು ಭಾವಿಸುವುದಿಲ್ಲ” ಎಂದಿದ್ದಾರೆ.

“ಕೆಲವೊಮ್ಮೆ ಹುಡುಗಿಯರು ಸೆಲ್ಫಿಗೆ ಬರುತ್ತಾರೆ. ನಾನು ಅವರಿಗೆ, “ಮಗೂ, ಮುಂದಿನ ಬಾರಿ ಸರಿಯಾದ ಬಟ್ಟೆ ಧರಿಸಿ ಬಾ ಆಗ ಫೋಟೋ ತೆಗೆದುಕೊಳ್ಳೋಣ ಎಂದು ಹೇಳುತ್ತೇನೆ” ಎಂದು ವಿಜಯವರ್ಗೀಯ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Couple missing: ಇಂದೋರ್ ದಂಪತಿ ಮಿಸ್ಸಿಂಗ್‌ ಕೇಸ್‌; ನಾಪತ್ತೆಗೂ ಮೊದಲಿನ ಸಿಸಿಟಿವಿ ಫೂಟೇಜ್‌ ವೈರಲ್‌

ಇದು ವಿಜಯವರ್ಗೀಯರ ಮೊದಲ ವಿವಾದವಲ್ಲ. 2022ರ ಹನುಮಾನ್ ಜಯಂತಿಯ ಕಾರ್ಯಕ್ರಮದಲ್ಲಿ, “ಹನುಮಾನ್ ಜಯಂತಿಯಂದು ಸುಳ್ಳು ಹೇಳುವುದಿಲ್ಲ. ಈಗಿನ ಹುಡುಗಿಯರು ಕೊಳಕಾದ ಬಟ್ಟೆ ಧರಿಸುತ್ತಾರೆ. ಮಹಿಳೆಯರನ್ನು ದೇವಿಯರೆಂದು ಕರೆಯುತ್ತೇವೆ, ಆದರೆ ಅವರು ಶೂರ್ಪಣಖಿಯಂತೆ ಕಾಣುತ್ತಾರೆ. ದೇವರು ಸುಂದರ ದೇಹ ಕೊಟ್ಟಿದ್ದಾನೆ, ಕನಿಷ್ಠ ಸಭ್ಯ ಬಟ್ಟೆ ಧರಿಸಿ. ಮಕ್ಕಳಿಗೆ ಸಂಸ್ಕಾರ ಕಲಿಸಿ” ಎಂದು ಹೇಳಿದ್ದರು.