ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಂಬಾಕು ಉಗುಳಲೆಂದು ಕಾರಿನ ಬಾಗಿಲು ತೆಗೆದ ಚಾಲಕನಿಂದಾಗಿ ಭೀಕರ ಅಪಘಾತ

ಛತ್ತೀಸ್‌ಗಢದ ರಾಯ್‌ಪುರದಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಬಿಲಾಸ್‌ಪುರದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಚಕರ್‌ಭಾತದ ಬಟ್ಟೆ ವ್ಯಾಪಾರಿ ಜಾಕಿ ಗೆಹಿ (31) ಎಂಬಾತ ಮೃತಪಟ್ಟಿದ್ದಾನೆ. ಬಿಲಾಸ್‌ಪುರದಲ್ಲಿ ಭಾನುವಾರ ತಡರಾತ್ರಿ ಅಂದರೆ ಸೋಮವಾರ ಮುಂಜಾನೆ ಕಾರು ಚಾಲಕ 100 ಕಿ.ಮೀ. ವೇಗದಲ್ಲಿರುವಾಗ ತಂಬಾಕು ಉಗುಳಲೆಂದು ಕಾರಿನ ಬಾಗಿಲು ತೆರೆದಿದ್ದು ಇದರಿಂದ ಭೀಕರ ಅಪಘಾತ ಉಂಟಾಗಿದೆ.

ಬಿಲಾಸ್‌ಪುರದಲ್ಲಿ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ರಾಯ್‌ಪುರ: ತಂಬಾಕು ಉಗುಳಲೆಂದು (Spit Tobacco) ಕಾರು ಚಾಲಕನೊಬ್ಬ 100 ಕಿ.ಮೀ. ವೇಗದಲ್ಲಿರುವಾಗ ಬಾಗಿಲು ತೆರೆದಿದ್ದು, ಇದರಿಂದ ಭೀಕರ ಅಪಘಾತ (Accident) ಸಂಭವಿಸಿ ಒಬ್ಬ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದಲ್ಲಿ (Chhattisgarh) ನಡೆದಿದೆ. ಈ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಛತ್ತೀಸ್‌ಗಢದ ರಾಯ್‌ಪುರದಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಬಿಲಾಸ್‌ಪುರದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಚಕರ್‌ಭಾತದ ಬಟ್ಟೆ ವ್ಯಾಪಾರಿ ಜಾಕಿ ಗೆಹಿ (31) ಎಂಬಾತ ಮೃತಪಟ್ಟಿದ್ದಾನೆ.

ಬಿಲಾಸ್‌ಪುರದಲ್ಲಿ ಭಾನುವಾರ ತಡರಾತ್ರಿ ಅಂದರೆ ಸೋಮವಾರ ಮುಂಜಾನೆ ಕಾರು ಚಾಲಕ 100 ಕಿ.ಮೀ. ವೇಗದಲ್ಲಿರುವಾಗ ತಂಬಾಕು ಉಗುಳಲೆಂದು ಕಾರಿನ ಬಾಗಿಲು ತೆರೆದಿದ್ದು ಇದರಿಂದ ಭೀಕರ ಅಪಘಾತ ಉಂಟಾಗಿದೆ.



ಭಾನುವಾರ ತಡರಾತ್ರಿ ಪಾರ್ಟಿಗೆ ಹೋಗಿ ಬರುತ್ತಿದ್ದ ಚಕರ್‌ಭಾತದ ಬಟ್ಟೆ ವ್ಯಾಪಾರಿ ಜಾಕಿ ಗೆಹಿ ಎಂಬಾತ ತನ್ನ ಸ್ನೇಹಿತ ಆಕಾಶ್ ಚಂದಾ ಹಾಗೂ ಆಕಾಶ್‌ನ ಮತ್ತೊಬ್ಬ ಸ್ನೇಹಿತ ಪಂಕಜ್ ಛಾಬ್ರಾ ಜತೆ ಕಾರಿನಲ್ಲಿ ಬರುತ್ತಿದ್ದನು. ಈ ಸಂದರ್ಭದಲ್ಲಿ ಆಕಾಶ್ ಕಾರು ಚಾಲನೆ ಮಾಡುತ್ತಿದ್ದು, ಪಂಕಜ್ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದನು. ಜಾಕಿ ಹಿಂಭಾಗದಲ್ಲಿದ್ದನು. ಬಿಲಾಸ್‌ಪುರ- ರಾಯ್‌ಪುರ ಹೆದ್ದಾರಿಯಲ್ಲಿ ತಂಬಾಕು ಉಗುಳಲು ಆಕಾಶ್ ವಾಹನ ಚಲಾಯಿಸುವಾಗ ಇದ್ದಕ್ಕಿದ್ದಂತೆ ಬಾಗಿಲು ತೆರೆದಿದ್ದ. ತಕ್ಷಣವೇ ಅವನು ವಾಹನದ ನಿಯಂತ್ರಣ ಕಳೆದುಕೊಂಡು, ಅದು ವಿಭಜಕಕ್ಕೆ ಡಿಕ್ಕಿಯಾಗಿ ಹಲವು ಬಾರಿ ತಿರುಗಿ ರಸ್ತೆಗೆ ಉರುಳಿದೆ.

ಈ ಅಪಘಾತದ ಪರಿಣಾಮ ವಾಹನದಲ್ಲಿದ್ದ ಮೂವರು ಪ್ರಯಾಣಿಕರ ಪೈಕಿ ಜಾಕಿ ರಸ್ತೆಗೆ ಎಸೆಯಲ್ಪಟ್ಟು ವಿಭಜಕಕ್ಕೆ ಬಿದ್ದಿದ್ದಾನೆ. ಇದರಿಂದ ಆತನ ಎದೆ, ತಲೆ ಮತ್ತು ಭುಜಕ್ಕೆ ಗಂಭೀರ ಗಾಯಗಳಾಗಿವೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಕಾಶ್ ಮತ್ತು ಪಂಕಜ್ ಕೂಡ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಅವರಿಗೂ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: French Open 2025: ಫ್ರೆಂಚ್ ಓಪನ್ ಸೆಮಿ ಫೈನಲ್‌ ಪ್ರವೇಶಿಸಿ ದಾಖಲೆ ಬರೆದ ಜೊಕೊವಿಕ್‌

ಚಾಲಕನ ನಿಯಂತ್ರಣ ತಪ್ಪಿದ ಕಾರು ನಿಲ್ಲಿಸಿದ್ದ ವಾಹನವೊಂದಕ್ಕೆ ಡಿಕ್ಕಿಯಾಗಿ ನಾಲ್ಕರಿಂದ ಐದು ಬಾರಿ ಪಲ್ಟಿಯಾಗಿ ಬಳಿಕ ನಿಲ್ಲಿಸಿದ್ದ ಎರ್ಟಿಗಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಅದರ ಚಾಲಕನೂ ಗಾಯಗೊಂಡಿದ್ದಾನೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದಾರಿಹೋಕರು ಪೊಲೀಸರಿಗೆ ಕೂಡಲೇ ಮಾಹಿತಿ ನೀಡಿದ್ದು, ತುರ್ತು ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿತ್ತು. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಬಳಿಕ ರಸ್ತೆಯಲ್ಲಿದ್ದ ವಾಹನಗಳ ಅವಶೇಷಗಳನ್ನು ತೆರವುಗೊಳಿಸಿದರು.