Gujarat Plane Crash: ʼʼವಿಮಾನ ಪತನ ಪ್ರಮುಖ ಸುದ್ದಿಯಾಗಲಿದೆʼʼ; ವಾರದ ಹಿಂದೆಯೇ ಭಯಾನಕ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿ ನಗರದ ವಸತಿ ಪ್ರದೇಶದಲ್ಲಿ ಪತನಗೊಂಡಿದೆ. ಈ ಮಧ್ಯೆ ವಿಮಾನ ಅಪಘಾತದ ಬಗೆ ವಾರದ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿಯ ಎಕ್ಸ್ ಪೋಸ್ಟ್ ವೈರಲ್ ಆಗಿದೆ.


ಗಾಂಧಿನಗರ: ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿ ನಗರದ ವಸತಿ ಪ್ರದೇಶದಲ್ಲಿ ಪತನಗೊಂಡಿದೆ (Gujarat Plane Crash). ಒಟ್ಟು 242 ಪ್ರಯಾಣಿಕರು ವಿಮಾನದಲ್ಲಿದ್ದರು. ಅಪಘಾತದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ಸೇರಿ ಎಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ದೇಶದ ಅತೀ ದೊಡ್ಡ ವಿಮಾನ ದುರಂತಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ವಿಮಾನ ಅಪಘಾತದ ಬಗೆ ಜ್ಯೋತಿಷಿಯೊಬ್ಬರು ನುಡಿದ ಭವಿಷ್ಯ ವೈರಲ್ ಆಗಿದೆ. ಶರ್ಮಿಷ್ಠಾ ಎನ್ನುವವರು ಜೂ. 5ರಂದು ಎಕ್ಸ್ನಲ್ಲಿ ವಿಮಾನ ಪತನವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಆಗ ಯಾರೂ ಈ ಭವಿಷ್ಯವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುರುವಾರ (ಜೂ. 12) ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಒಂದು ವಾರದ ಮೊದಲು ಹೇಳಲಾದ ಈ ಭಯಾನಕ ಭವಿಷ್ಯವಾಣಿಯು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭವಿಷ್ಯವಾಣಿಯ ನಿಖರತೆಗೆ ಅನೇಕರು ಬೆರಗಾಗಿದ್ದಾರೆ. ಶರ್ಮಿಷ್ಠಾ 6 ತಿಂಗಳ ಅವಧಿಯಲ್ಲಿ 2 ವಿಮಾನ ಅಪಘಾತವಾಗುವ ಸಾಧ್ಯತೆ ಇದೆ ಎಂದಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ.
Aviation sector will do better in 2025, also plane crash headlines may give us shock, predicted this two months back, check the tweet below. Already a bit betterment in aviation sector started. When Jupiter will be in Gemini part of Mrigashira & Ardra with the speed of approx…
— Astro Sharmistha (@AstroSharmistha) December 29, 2024
ಈ ಸುದ್ದಿಯನ್ನೂ ಓದಿ: Ahmedabad Plane Crash: ಅಹಮದಾಬಾದ್ ವಿಮಾನ ದುರಂತ; ಸಿಎಂ ಸಿದ್ದರಾಮಯ್ಯ ಸಂತಾಪ
ಭವಿಷ್ಯವಾಣಿಯಲ್ಲಿ ಏನಿತ್ತು?
"2025ರಲ್ಲಿ ವಿಮಾನಯಾನ ಕ್ಷೇತ್ರವು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಅದಾಗ್ಯೂ ವಿಮಾನ ಅಪಘಾತ ಸಂಭವಿಸಲಿದೆ. ಈ ಅಪಘಾತವನ್ನು ಹಿಂದೆಯೇ ಊಹಿಸಲಾಗಿದೆʼʼ ಎಂದು ಜ್ಯೋತಿಷಿ ಶರ್ಮಿಷ್ಠಾ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ. ಮೃಗಶಿರ ಮತ್ತು ಆರ್ದ್ರ ನಕ್ಷತ್ರದಲ್ಲಿ ಗುರುವಿನ (ಗುರು) ಜ್ಯೋತಿಷ್ಯ ಸ್ಥಾನವು ವಾಯುಯಾನ ಕ್ಷೇತ್ರದಲ್ಲಿ ಪ್ರಗತಿಯನ್ನು ತರುತ್ತದೆ. ಅದಾಗ್ಯೂ ಬಹುದೊಡ್ಡ ವಿಮಾನ ಅಪಘಾತ ಸಂಭವಿಸುತ್ತದೆ ಎಂದು ಅವರು ಈ ಹಿಂದೆಯೇ ಊಹಿಸಿದ್ದರು. "ವಿಮಾನಯಾನ ಕ್ಷೇತ್ರದಲ್ಲಿ ಈಗಾಗಲೇ ಸ್ವಲ್ಪ ಸುಧಾರಣೆ ಪ್ರಾರಂಭವಾಗಿದೆ. ಅದಾಗ್ಯೂ ಕೆಲವು ದಿನಗಳಲ್ಲಿ ಸುರಕ್ಷತೆ ಮತ್ತು ಭದ್ರತೆ ಮರೆಯಾಗುತ್ತದೆ" ಎಂದು ಅವರು ಹೇಳಿದ್ದಾರೆ.
"ಟಾಟಾ ಹೈದರಾಬಾದ್ನಲ್ಲಿ ರಫೇಲ್ ವಿಮಾನ ನಿರ್ಮಾಣ ಮಾಡಲಿದೆ. ಇಸ್ರೋ ಮುಂಬರುವ ಎರಡು ವರ್ಷಗಳಲ್ಲಿ ಬಾಹ್ಯಾಕಾಶ ಮತ್ತು ಉಪಗ್ರಹ ಎಂಜಿನಿಯರಿಂಗ್, ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಜಗತ್ತನ್ನು ಅಚ್ಚರಿಗೆ ದೂಡಲಿದೆ. ವಿಮಾನ ಅಪಘಾತದ ಮುನ್ಸೂಚನೆಯನ್ನು ನಾನು ಬಲವಾಗಿ ನಂಬಿದ್ದೇನೆ" ಎಂದು ಪೋಸ್ಟ್ನಲ್ಲಿ ತಿಳಿಸಿದ್ದರು.
Tata will make Rafale fuselage in Hyderabad. This is just aviation expansion, ISRO will surprise the world in Space and satellite engineering, space tourism in coming two years. Predicted this last year via Nakshatra transit. I am still holding high the prediction of Plane crash… https://t.co/WjX39R7E47
— Astro Sharmistha (@AstroSharmistha) June 5, 2025
ಎಲ್ಲ 242 ಮಂದಿ ಸಾವು?
ಸದ್ಯದ ಮಾಹಿತಿ ಪ್ರಕಾರ ವಿಮಾದಲ್ಲಿದ್ದ ಎಲ್ಲ 242 ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬರಬೇಕಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಪತನವಾಗಿದ್ದು, ಈ ವೇಳೆ ಅಲ್ಲಿದ್ದ ವಿದ್ಯಾರ್ಥಿಗಳೂ ಮೃತಪಟ್ಟಿರುವ ಶಂಕೆ ಇದೆ. ಭಾರತ, ಇಂಗ್ಲೆಂಡ್, ಕೆನಡಾ, ಪೋರ್ಚುಗೀಸ್ನ ಪ್ರಯಾಣಿಕರು ಈ ವಿಮಾದಲ್ಲಿದ್ದರು ಎನ್ನಲಾಗಿದೆ.