ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಬುಡ ಅಲುಗಾಡುವ ಆತಂಕ
ರಾಜ್ಯ ಕಾಂಗ್ರೆಸ್ನಲ್ಲಿ ದಾವಣಗೆರೆ ಉಪಚುನಾವಣೆ ನಂತರದ ಬೆಳವಣಿಗೆ ಪಕ್ಷದ ಅಧಿಕಾರದ ಅಸ್ತ್ರವಾಗಿರುವ ಅಹಿಂದ ಬುಡವನ್ನೇ ಅಲ್ಲಾಡಿಸುತ್ತಿದೆಯೇ ಎನ್ನುವ ಆತಂಕ ಶುರುವಾಗಿದೆ. ಉಪ ಚುನಾವಣೆಯ ನಂತರ ಉಂಟಾಗಿರುವ ಗೊಂದಲ, ಗದ್ದಲಗಳು ಅಹಿಂದ ಸಮುದಾಯಗಳ ಮನಸ್ಸು ಕೆಡಿಸುತ್ತಿದ್ದು, ಇದರಿಂದ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಎರಡರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಭೀತಿ ಇದೆ.