ಜ್ಞಾನೇಂದ್ರ ಅಮಾನತು: ಕರ್ಮಕಾಂಡಕ್ಕೆ ಮತ್ತೊಂದು ಬಲಿ
2016ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಂದ್ರ, ಇತ್ತೀಚೆಗೆ ದಿಢೀರನೆ ದೆಹಲಿಗೆ ಪರಾರಿ ಯಾಗಿದ್ದರು. ಈ ವೇಳೆ ಅವರ ನಿವಾಸದ ಬೀಗ ತೆರೆದು ಇಡಿ ಅಧಿಕಾರಿಗಳು ಮನೆಯ ಶೋಧ ನಡೆಸಿದ್ದರು. ಈ ವೇಳೆ ದೊರೆತ ದಾಖಲೆಗಳು ನೇಮ ಕಾತಿ ಅಕ್ರಮದಲ್ಲಿ ಇವರ ನೇರ ಪಾತ್ರವಿರುವುದನ್ನು ಸೂಚಿಸು ತ್ತವೆ ಎಂದು ಸರಕಾರ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.