ಕೆಆರ್ಐಡಿಎಲ್ ಲಂಚ ಪ್ರಕರಣ: ಸಿಬಿಐ ತನಿಖೆ ಮಾಡಿ: ಅಶೋಕ್
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳು ಕೂಡ ರೌಡಿಗಳಾಗಿದ್ದಾರೆ. ಅಂದರೆ ಈ ಸರಕಾರ ಕಮಿಶನ್ ಆಡಳಿತ ಮಾಡುತ್ತಿದೆ. 100 ರು. ಬಿಡುಗಡೆಯಾದರೆ 30 ರು.ಗಳಷ್ಟು ಕೆಲಸ ಮಾತ್ರ ಆಗುತ್ತದೆ. ಉಳಿದ ಶೇ.70ರಷ್ಟು ಕಮಿಷನ್ಗೆ ಹೋಗುತ್ತದೆ. ನಾವು ಆರೋಪ ಮಾಡಿದಾಗ ದಾಖಲೆ ಕೊಡಲು ಕೇಳಿದ್ದರು. ಈಗ ಕಾಂಗ್ರೆಸ್ ಪಕ್ಷದ ಶಾಸಕರೇ ಕಮಿಷನ್ ಬಗ್ಗೆ ಹೇಳಿದ್ದಾರೆ.