ಭಾರಿ ಮಳೆಗೆ ಕುಸಿದ ಸಿದ್ದರಾಮಯ್ಯ ನಿವಾಸದ ಕಾಂಪೌಂಡ್
Bengaluru Rains: ಸಿಲಿಕಾನ್ ಸಿಟಿ ಬೆಂಗಳೂರು ಬುಧವಾರ (ಏಪ್ರಿಲ್ 29) ಸಂಜೆ ಸುರಿದ ಮಳೆಗೆ ತತ್ತರಿಸಿದೆ. ಸಿಎಂ ಅಧಿಕೃತ ನಿವಾಸ 'ಕಾವೇರಿ'ಯ ಕಾಂಪೌಂಡ್ ಮೇಲೆ ಭಾರಿ ಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದ ಜಖಂಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾಗಲೇ ಈ ಅನಾಹುತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.