ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಗನಿಗೆ ಮಚ್ಚಿನೇಟು: ತಾಯಿ ಹೃದಯಾಘಾತದಿಂದ ಸಾವು

ಕೋರೇನಹಳ್ಳಿಯಲ್ಲಿ ಯಶೋಧಮ್ಮ ಮೃತ ತಾಯಿ. ಆಕೆಯ ಪುತ್ರ ನವೀನ್ ಎಂಬ ಯುವಕ ಬುಧವಾರ ಸಂಜೆ ಗ್ರಾಮದ ಹಾಲಿನ ಡೇರಿಗೆ ಹಾಲು ಹಾಕಲು ಹೊರಟಿದ್ದ. ಅಷ್ಟರಲ್ಲಿ ಹಿಂದಿನಿಂದ ಬಂದ ಗ್ರಾಮದ ಶಿವಣ್ಣ ಅಲಿಯಾಸ್ ಶಿವಶಂಕರರೆಡ್ಡಿ ಎಂಬ ವ್ಯಕ್ತಿ ಮಚ್ಚಿನಿಂದ ನವೀನ್ ಮೇಲೆ ಬೀಸಿದ್ದಾನೆ. ಅಷ್ಟರಲ್ಲಿ ನವೀನ್ ತಪ್ಪಿಸಿಕೊಂಡು ಓಡಿದ್ದಾನೆ.

ಮಗನಿಗೆ ಮಚ್ಚಿನೇಟು ಹಾಕಿದ್ದ ಆರೋಪಿ ಬಂಧನ

ಜಮೀನು ವಿವಾದದ ಹಿನ್ನಲೆ ಯುವಕನೊಬ್ಬನನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಲಾಗಿದ್ದು, ಮಗನ ಈ ಸ್ಥಿತಿಯನ್ನು ಕಂಡ ತಾಯಿ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆಯು ತಾಲೂಕಿನ ಕೋರೇನಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.

Profile Ashok Nayak Jun 12, 2025 10:45 PM

ಚಿಕ್ಕಬಳ್ಳಾಪುರ : ಜಮೀನು ವಿವಾದದ ಹಿನ್ನಲೆ ಯುವಕನೊಬ್ಬನನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಲಾಗಿದ್ದು, ಮಗನ ಈ ಸ್ಥಿತಿಯನ್ನು ಕಂಡ ತಾಯಿ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆಯು ತಾಲೂಕಿನ ಕೋರೇನಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಯುವಕನ ಕೊಲೆಗೆ ಯತ್ನಿಸಿದ ಆರೋಪಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಕೋರೇನಹಳ್ಳಿಯಲ್ಲಿ ಯಶೋಧಮ್ಮ ಮೃತ ತಾಯಿ. ಆಕೆಯ ಪುತ್ರ ನವೀನ್ ಎಂಬ ಯುವಕ ಬುಧವಾರ ಸಂಜೆ ಗ್ರಾಮದ ಹಾಲಿನ ಡೇರಿಗೆ ಹಾಲು ಹಾಕಲು ಹೊರಟಿದ್ದ. ಅಷ್ಟರಲ್ಲಿ ಹಿಂದಿನಿAದ ಬಂದ ಗ್ರಾಮದ ಶಿವಣ್ಣ ಅಲಿಯಾಸ್ ಶಿವಶಂಕರರೆಡ್ಡಿ ಎಂಬ ವ್ಯಕ್ತಿ ಮಚ್ಚಿನಿಂದ ನವೀನ್ ಮೇಲೆ ಬೀಸಿದ್ದಾನೆ. ಅಷ್ಟರಲ್ಲಿ ನವೀನ್ ತಪ್ಪಿಸಿಕೊಂಡು ಓಡಿದ್ದಾನೆ. ಆದರೂ ಬೀಡದ ಶಿವಣ್ಣ ನವೀನ್ ಕುತ್ತಿಗೆಗೆ ಮಚ್ಚು ಬೀಸಿದ್ದಾನೆ. ಆದರೂ ನವೀನ್ ತಪ್ಪಿಸಿಕೊಂಡು ಹೋಗಿ ಸ್ಥಳಿಯ ಗಂಗಣ್ಣ ಎಂಬುವರ ಮನೆಗೆ ನುಗ್ಗಿ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ.

ಇದನ್ನೂ ಓದಿ: Crime News: ಬಾಲಕಿಗೆ ಅಶ್ಲೀಲ ಸಂದೇಶ, ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ

ನವೀನ್ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ಈ ಘಟನೆ ತಿಳಿದು ಮಗನ ರಕ್ಷಣೆಗೆ ಧಾವಿಸಿದ ನವೀನ್ ತಾಯಿ ಯಶೋಧಮ್ಮನ ಮೇಲೂ ಹಲ್ಲೆ ಮಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ತಾಯಿ ಮಗ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಆದರೆ ಆಸ್ಪತ್ರೆಗೆ ಬರುವುಷ್ಟರಲ್ಲಿ ತಾಯಿ ಯಶೋಧಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡೀಕರಿಸಿದ್ದಾರೆ.

ಗಾಯಗೊಂಡಿರುವ ನವೀನ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಈ ಘಟನೆಗೆ ಜಮೀನು ವಿವಾದವೇ ಮೂಲ ಕಾರಣ ಎನ್ನಲಾಗಿದೆ.ಯಶೋಧಮ್ಮ ಮೃತ ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅವರ ಪುತ್ರಿಯರ ಗೋಳಾಟ ಮುಗಿಲು ಮುಟ್ಟಿತ್ತು. ಘಟನೆ ನಂತರ ಆರೋಪಿ ಶಿವಣ್ಣ ಅಲಿಯಾಸ್ ಶಿವಶಂಕರರೆಡ್ಡಿ ಎಸ್ಕೇಪ್ ಆಗಿದ್ದಾನೆ.

ಈ ಸಂಬಂಧ ಪೆರೇಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.