Allu Arjun: ಟಾಲಿವುಡ್ನಲ್ಲಿ ಸೆಟ್ಟೇರಲಿದೆ ಮತ್ತೊಂದು ಡ್ರೀಮ್ ಪ್ರಾಜೆಕ್ಟ್; ಅಲ್ಲು ಅರ್ಜುನ್ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್?
Prashanth Neel: ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಸ್ಯಾಂಡಲ್ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಟಾಲಿವುಡ್ನಲ್ಲಿ ತಳವೂರುವ ಎಲ್ಲ ಲಕ್ಷನ ಕಾಣಿಸುತ್ತಿದೆ. ಜೂ.ಎನ್ಟಿಆರ್ ಜತೆಗಿನ ಚಿತ್ರ ಕೈಗೆತ್ತಿಕೊಂಡಿರುವ ಅವರು ಅಲ್ಲು ಅರ್ಜುನ್ ಸಿನಿಮಾವನ್ನೂ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಅಲ್ಲು ಅರ್ಜುನ್ ಮತ್ತು ಪ್ರಶಾಂತ್ ನೀಲ್.

ಹೈದರಾಬಾದ್: ಸದ್ಯ ಟಾಲಿವುಡ್ ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಒಂದೆಡೆ ಅಲ್ಲು ಅರ್ಜುನ್-ಅಟ್ಲಿ, ಪ್ರಭಾಸ್-ಸಂದೀಪ್ ರೆಡ್ಡಿ ವಂಗ ಕಾಂಬಿನೇಷನ್ನ ಚಿತ್ರ ಸೆಟ್ಟೇರಲು ಸಜ್ಜಾಗಿದ್ದರೆ, ಜೂ.ಎನ್ಟಿಆರ್-ಪ್ರಶಾಂತ್ ನೀಲ್ ಮೊದಲ ಬಾರಿಗೆ ಒಂದಾಗುತ್ತಿರುವ ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಈ ಮಧ್ಯೆ ಮತ್ತೊಂದು ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ. ಅಲ್ಲು ಅರ್ಜುನ್ (Allu Arjun) ಅವರ ಮುಂದಿನ ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ. ಅದಾಗಲೇ ಫ್ಯಾನ್ಸ್ ಚಿತ್ರದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.
ಅಲ್ಲು ಅರ್ಜುನ್-ಪ್ರಶಾಂತ್ ನೀಲ್ ಚಿತ್ರಕ್ಕೆ ʼರಾವಣಂʼ (Ravanam) ಎಂಬ ಟೈಟಲ್ ಇಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಹಿರಿಯ ನಿರ್ಮಾಪಕ ದಿಲ್ ರಾಜು ಈ ಸಿನಿಮಾ ತಯಾರಿಸಲಿದ್ದಾರೆ. ಒಂದುವೇಳೆ ಈ ಸುದ್ದಿ ನಿಜವಾದರೆ ಭಾರತೀಯ ಸಿನಿರಂಗದಲ್ಲೇ ಬಹು ನಿರೀಕ್ಷಿತ ಚಿತ್ರ ಇದಾಗಲಿದೆ.
ಮೂಲಗಳ ಪ್ರಕಾರ ʼರಾವಣಂʼ ಚಿತ್ರ ಪ್ರಶಾಂತ್ ನೀಲ್ ಅವರ ಹಲವು ವರ್ಷಗಳ ಕನಸು. ಅವರ ಇತರ ಚಿತ್ರಗಳಂತೆ ಇದು ಅದ್ಧೂರಿ ಬಜೆಟ್ನಲ್ಲಿ ತಯಾರಾಗಲಿದೆ. ಅಲ್ಲದೆ ನೀಲ್ ಅವರ ಈ ಹಿಂದಿನ ಸಿನಿಮಾಗಳಂತೆಯೇ ಮೈ ನವಿರೇಳಿಸುವ ಆ್ಯಕ್ಷನ್ ಜತೆಗೆ ಡ್ರಾಮ, ಸೆಂಟಿಮೆಂಟ್ ಈ ಚಿತ್ರದಲ್ಲಿ ಇರಲಿದೆ ಎಂದು ಮೂಲಗಳಿವೆ. ʼಕೆಜಿಎಫ್ʼ ಮತ್ತು ʼಸಲಾರ್ʼನಂತೆಯೇ ಡಾರ್ಕ್ ಥೀಮ್ ಮಾದರಿಯಲ್ಲಿ ಮೂಡಿಬರುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Dipika Padukone: ಅಲ್ಲು ಅರ್ಜುನ್ ಬಿಗ್ ಬಜೆಟ್ ಸಿನಿಮಾಕ್ಕೆ ದೀಪಿಕಾ ಹೀರೋಯಿನ್- ಶೂಟಿಂಗ್ ಶುರುವಾಯ್ತಾ? ವಿಡಿಯೊ ಫುಲ್ ವೈರಲ್
ಯಾವಾಗ ಶೂಟಿಂಗ್ ಆರಂಭ?
ಅದಾಗ್ಯೂ ಈ ಚಿತ್ರ ಸದ್ಯ ಆರಂಭವಾಗುವುದು ಸಂಶಯ ಎನ್ನಲಾಗಿದೆ. ಯಾಕೆಂದರೆ ಅಲ್ಲು ಅರ್ಜುನ್ ಮತ್ತು ಪ್ರಶಾಂತ್ ನೀಲ್ ಇಬ್ಬರೂ ಇದೀಗ ಬೇರೆ ಬೇರೆ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಸದ್ಯ ಪ್ರಶಾಂತ್ ನೀಲ್ ಜೂ.ಎನ್ಟಿಆರ್ ಜತೆಗಿನ ಪ್ಯಾನ್ ಇಂಡಿಯಾ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಶೂಟಿಂಗ್ ಆರಂಭವಾಗಿದ್ದು, ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾಕ್ಕಾಗಿ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ ಹಾಕಲಾಗಿದ್ದು, ಇಲ್ಲಿ ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ. 2026ರ ಜೂ. 25ರಂದು ತೆರೆ ಕಾಣುವ ಸಾಧ್ಯತೆ ಇದ್ದು, ಇದರಲ್ಲಿ ಭರಪೂರ ಆ್ಯಕ್ಷನ್ ದೃಶ್ಯಗಳಿವೆ ಎನ್ನಲಾಗಿದೆ. ಕುಮಟಾದಲ್ಲಿ ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದೆ.
ಇತ್ತ ಅಲ್ಲು ಅರ್ಜುನ್ ಅಟ್ಲಿ ಜತೆಗಿನ ಸೈನ್ಸ್ ಫಿಕ್ಷನ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿಂದೆದೂ ಮಾಡಿರದ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಿದ್ದಾರೆ. 123 ತೆಲುಗು ವೆಬ್ಸೈಟ್ ವರದಿ ಪ್ರಕಾರ, ಮುಂಬೈಯಲ್ಲಿ 3 ತಿಂಗಳು ಶೂಟಿಂಗ್ ನಡೆಯಲಿದ್ದು, ಶೀಘ್ರದಲ್ಲೇ ಅಲ್ಲು ಅರ್ಜುನ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಅಲ್ಲು ಅರ್ಜುನ್ ತ್ರಿವಳಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೃಣಾಲ್ ಠಾಕೂರ್, ಜಾಹ್ನವಿ ಕಪೂರ್ ಮತ್ತು ಭಾಗ್ಯಶ್ರೀ ಬೋರ್ಸೆ ಮತ್ತಿತರೂ ಅಭಿನಯಿಸುವ ಸಾಧ್ಯತೆ ಇದೆ.
ಮೊದಲ ಬಾರಿ ಒಂದಾಗಲಿದ್ದಾರೆ ಅಲ್ಲು-ದೀಪಿಕಾ
ಈಗಾಗಲೇ ದೀಪಿಕಾ ಆಯ್ಕೆಯಾಗಿರುವ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಮತ್ತು ದೀಪಿಕಾ ಮೊದಲ ಬಾರಿಗೆ ತೆರೆಮೇಲೆ ಒಂದಾಗಲಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ದೀಪಿಕಾ ಕೆಲವು ಸಮಯಗಳ ಬ್ರೇಕ್ ನಂತರ ಮತ್ತೆ ಈ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.