ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Khalistani Terrorist: ಭಾರತದ ಧ್ವಜ, ಪ್ರಧಾನಿ ಮೋದಿ ಫೋಟೋವನ್ನು ಕಾಲಿನಿಂದ ಒದ್ದ ಖಲಿಸ್ತಾನಿ ಸಿಖ್‌ ಬಾಲಕರು! ವಿಡಿಯೋ ನೋಡಿ

ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಗೆ ತೆರಳಿದ್ದಾರೆ. ಅಲ್ಲಿ ಅವರು ವಿಶದ್ವ ಹಲವು ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಇದೀಗ ಮೋದಿ ಕೆನಡಾಗೆ ತೆರಳುತ್ತಿದ್ದಂತೆ ಅಲ್ಲಿರುವ ಖಲಿಸ್ತಾನಿಗಳು ಬಾಲ ಬಿಚ್ಚಿದ್ದಾರೆ. ಖಲಿಸ್ತಾನಿಗಳು ಮಕ್ಕಳನ್ನು 'ಪ್ರತಿಭಟನೆ' ಮತ್ತು ಭಾರತ ವಿರೋಧಿ ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ.

ಭಾರತದ ಧ್ವಜ, ಪ್ರಧಾನಿ ಮೋದಿ ಫೋಟೋವನ್ನು ಒದ್ದ ಖಲಿಸ್ತಾನಿ ಸಿಖ್‌ ಬಾಲಕರು

Profile Vishakha Bhat Jun 17, 2025 11:23 AM

ಒಟ್ಟಾವಾ: ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಯಲ್ಲಿ (Khalistani Terrorist) ಭಾಗವಹಿಸಲು ಕೆನಡಾಗೆ ತೆರಳಿದ್ದಾರೆ. ಅಲ್ಲಿ ಅವರು ವಿಶದ್ವ ಹಲವು ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಇದೀಗ ಮೋದಿ (Narendra Modi) ಕೆನಡಾಗೆ ತೆರಳುತ್ತಿದ್ದಂತೆ ಅಲ್ಲಿರುವ ಖಲಿಸ್ತಾನಿಗಳು ಬಾಲ ಬಿಚ್ಚಿದ್ದಾರೆ. ಖಲಿಸ್ತಾನಿಗಳು ಮಕ್ಕಳನ್ನು 'ಪ್ರತಿಭಟನೆ' ಮತ್ತು ಭಾರತ ವಿರೋಧಿ ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಕಾಣಿಸಿಕೊಂಡಿರುವ ಆತಂಕಕಾರಿ ವಿಡಿಯೋವೊಂದರಲ್ಲಿ, ಖಲಿಸ್ತಾನಿಯರು ಮಕ್ಕಳನ್ನು ಬಳಸಿಕೊಂಡು ಭಾರತೀಯ ತ್ರಿವರ್ಣ ಧ್ವಜಕ್ಕೆ ಅಪಮಾನವೆಸಗಿದ್ದಾರೆ.

ವಿಡಿಯೋದಲ್ಲಿ ಕಾಣಿಸುವಂತೆ ಸಿಖ್‌ ಸಮುದಾಯದ ಕೆಲ ಮಕ್ಕಳು ಪ್ರಧಾನಿ ಮೋದಿ ಅವರ ಭಾವಚಿತ್ರ ಹಾಗೂ ಭಾರತದ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ದೂರ ನಿಂತು ಭಾರತೀಯ ಧ್ವಜ ಮತ್ತು ಭಾರತದ ಪ್ರಧಾನ ಮಂತ್ರಿಯ ಭಾವಚಿತ್ರವನ್ನು ಕಾಲಿನಿಂದ ಒದೆಯುವಂತೆ ಖಲಿಸ್ತಾನಿಗಳು ಮಕ್ಕಳನ್ನು ಬೆಂಬಲಿಸುತ್ತಿದ್ದಾರೆ. 6 ಮಕ್ಕಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಘಟನೆಯ ಕುರಿತು ಹಲವು ಸಿಖ್‌ ನಾಯಕರು ಆಕ್ರೋಶ ಪಡಿಸಿದ್ದಾರೆ.ವಿಶ್ವ ಪಂಜಾಬಿ ಸಂಘಟನೆಯ ಅಂತರರಾಷ್ಟ್ರೀಯ ಅಧ್ಯಕ್ಷ ಸಾಹ್ನಿ ಈ ಘಟನೆಯನ್ನು ಖಂಡಿಸಿದರು. ಸಿಖ್ ಸಮುದಾಯಕ್ಕಾಗಿ ಮೋದಿ ಸರ್ಕಾರ ಕೈಗೊಂಡ ವಿವಿಧ ಉಪಕ್ರಮಗಳನ್ನು ಅವರು ಹೇಳಿದ್ದಾರೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ಪ್ರಯತ್ನಗಳು ಮತ್ತು ವಿದೇಶಿ ಸಿಖ್ಖರಿಗೆ ವೀಸಾ ಮತ್ತು ಎಫ್‌ಸಿಆರ್‌ಎ ಮಾನದಂಡಗಳನ್ನು ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ.

ರಾಜ್ಯಸಭಾ ಸಂಸದ ಸತ್ನಾಮ್ ಸಿಂಗ್ ಸಂಧು ಕೂಡ ಈ ಘಟನೆಯನ್ನು ಖಂಡಿಸಿ, ಇದನ್ನು "ಆತಂಕಕಾರಿ" ಮತ್ತು "ಅಪಾಯಕಾರಿ" ಎಂದು ಬಣ್ಣಿಸಿದ್ದಾರೆ. ಅವರು "ಇದು ಸಿಖ್ ಧರ್ಮವಲ್ಲ" ಎಂದು ಬರೆದಿದ್ದಾರೆ ಮತ್ತು ಜಾಗತಿಕ ಸಿಖ್ ಸಮುದಾಯವು ಧರ್ಮದ ಹೆಸರಿನಲ್ಲಿ ದ್ವೇಷ ಹರಡುವುದನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದರು. "ಸಿಖ್ ಧರ್ಮವು ಯುದ್ಧಭೂಮಿಯಲ್ಲಿ ಜನಿಸಿದ ನಂಬಿಕೆಯಾಗಿದೆ, ಆದರೆ ಕರುಣೆ, ಘನತೆ ಮತ್ತು ಸರ್ಬತ್ ದ ಭಾಲಾದಲ್ಲಿ ಆಳವಾಗಿ ಬೇರೂರಿದೆ" ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Narendra Modi: ಜಿ7 ಶೃಂಗಸಭೆಗಾಗಿ ಕೆನಡಾಗೆ ತೆರಳಿದ ಪ್ರಧಾನಿ ಮೋದಿ; ವಿಶ್ವದ ನಾಯಕರ ಜೊತೆ ಚರ್ಚೆ

ಇನ್ನೂ ಜಗತ್ತನ್ನು ಅರ್ಥಮಾಡಿಕೊಳ್ಳದ ಚಿಕ್ಕ ಮಕ್ಕಳು ಕುರುಡು ದ್ವೇಷದಿಂದ ಹೊರೆಯಾಗುವುದನ್ನು ನೋಡುವುದು ನೋವಿನ ಸಂಗತಿ ಎಂದು ಹೇಳಿದರು. ಪ್ರಧಾನಿ ಮೋದಿ ಅವರು ಸಿಖ್ ಸಮುದಾಯಕ್ಕೆ ನೀಡಿದ ಸಂಪರ್ಕವನ್ನು ಶ್ಲಾಘಿಸಿದ ಅವರು, ವಿಶ್ವಾದ್ಯಂತ ಸಿಖ್ಖರು ಗುರುಗಳ ಪರಂಪರೆಯನ್ನು ಎತ್ತಿಹಿಡಿಯಬೇಕು ಮತ್ತು ವಿಭಜಕ ಪ್ರಚಾರವನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.