ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

EX MLA P Rajeev: ಸವಾಲುಗಳನ್ನು ಮೆಟ್ಟಿ ನಿಂತವನೇ ನಿಜವಾದ ನಾಯಕನಾಗುತ್ತಾನೆ: ಮಾಜಿ ಶಾಸಕ.ಪಿ.ರಾಜೀವ್

ಭಗತ್ ಸಿಂಗ್ ಹೇಗೆ ಹಠವಾದಿಯಾಗಿ ತಮ್ಮ ಬದುಕಿನುದ್ದಕ್ಕೂ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರೋ ಹಾಗೇ ಗ್ರಾಮೀಣ ಪ್ರದೇಶದ ಜನರ ಬದುಕು ಸುಧಾರಣೆ ಆಗಬೇಕು ಎನ್ನುವ ಸಂಕಲ್ಪ ಬಲದಲ್ಲಿ ಯುವ ಸಮೂಹವನ್ನು ಒಗ್ಗೂಡಿಸುತ್ತಿದ್ದಾರೆ. ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಸಂದೀಪ್‌ರೆಡ್ಡಿ ಒಬ್ಬ ವ್ಯಕ್ತಿಯಾಗಿ ಮಾಡುತ್ತಿರುವುದೇ ದೊಡ್ಡದು.ಇಂತಹ ಸಮಾಜ ಸೇವೆಯ ಕೆಲಸಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ

ಸವಾಲುಗಳನ್ನು ಮೆಟ್ಟಿ ನಿಂತವನೇ ನಿಜವಾದ ನಾಯಕನಾಗುತ್ತಾನೆ

Profile Ashok Nayak Jun 15, 2025 10:44 PM

ಚಿಕ್ಕಬಳ್ಳಾಪುರ : ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತವನೇ ನಿಜವಾದ ನಾಯಕನಾಗುತ್ತಾನೆ.ಗಟ್ಟಿ ತಳಹದಿಯ ಮೇಲೆ ನೀವು ಬಿತ್ತಿರುವ ಬೀಜಗಳು ಭವಿಷ್ಯದಲ್ಲಿ ಖಂಡಿತ ಫಲಕೊಟ್ಟೇ ಕೊಡುತ್ತದೆಂಬ ವಿಶ್ವಾಸ ನನಗಿದೆ. ಎದೆಗುಂದದೆ ನಿಮ್ಮ ಕಾಯಕದಲ್ಲಿ ನೀವು ಮುನ್ನಡೆಯಿರಿ ಎಂದು ಕುಡಚಿ ಮಾಜಿ ಶಾಸಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸ್ಪಂದನ ವಿದ್ಯಾರ್ಥಿ ವೇತನ ನಿಮ್ಮ ಪರಿಶ್ರಮಕ್ಕೆ ನಮ್ಮ ಸ್ಪಂದನೆ ಹೆಸರಿನಲ್ಲಿ ನಡೆದ ಎಸ್‌ಎಸ್‌ ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Chikkaballapur News: ಕರ್ನಾಟಕ ರೈತ ಜನಸೇನಾ ಸಂಘಟನೆ ವತಿಯಿಂದ ಕಾರ್ಯಕ್ರಮ ಆಯೋಜನೆ

ಸಂದೀಪ್‌ ರೆಡ್ಡಿ ಭವಿಷ್ಯದ ಬಹುದೊಡ್ಡ ನಾಯಕರಾಗಿ ಬೆಳೆಯುವವರಿದ್ದಾರೆ. ಸಮಸಮಾಜದ ಆಶಯಗಳಿಗೆ ಜೀವತುಂಬುತ್ತಾ, ಅಲಕ್ಷಿತ ಜನವರ್ಗಗಳಿಗೆ ಶಿಕ್ಷಣವೇ ವಿಮೋಚನೆಯ ಅಸ್ತ್ರ ಎಂಬು ದನ್ನು ಮತಲ್ಲಿ ಹೇಳದೆ ಕೃತಿಯಲ್ಲಿ ಮಾಡಿ ತೋರಿಸುತ್ತಿದ್ದಾರೆ. ಭಗತ್ ಸಿಂಗ್ ಹೇಗೆ ಹಠವಾದಿಯಾಗಿ ತಮ್ಮ ಬದುಕಿನುದ್ದಕ್ಕೂ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರೋ ಹಾಗೇ ಗ್ರಾಮೀಣ ಪ್ರದೇಶದ ಜನರ ಬದುಕು ಸುಧಾರಣೆ ಆಗಬೇಕು ಎನ್ನುವ ಸಂಕಲ್ಪ ಬಲದಲ್ಲಿ ಯುವ ಸಮೂಹ ವನ್ನು ಒಗ್ಗೂಡಿಸು ತ್ತಿದ್ದಾರೆ. ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಸಂದೀಪ್‌ ರೆಡ್ಡಿ ಒಬ್ಬ ವ್ಯಕ್ತಿಯಾಗಿ ಮಾಡುತ್ತಿರುವುದೇ ದೊಡ್ಡದು.ಇಂತಹ ಸಮಾಜ ಸೇವೆಯ ಕೆಲಸಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದರು.

ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗುತ್ತಿರುವ ವಿದ್ಯಾರ್ಥಿಗಳೇ ಅಂಬೇಡ್ಕರ್ ಹೇಳಿದ ಮಾತನ್ನು ಮರೆಯಬಾರದು.ಅವರು ಹೇಳುತ್ತಾರೆ ನಾವು ಹೇಗೆ ಓದಬೇಕು ಎಂದರೆ ನಮ್ಮನ್ನು ನೋಡಿ ಜಗತ್ತು ಹೆದರಬೇಕು ಹಾಗೆ ಓದಬೇಕು.ಏಕೆಂದರೆ ಶಿಕ್ಷಣವೇ ಎಲ್ಲಾ ಶೋಷಣೆಯ ಬಿಡುಗಡೆಯ ಸಾಧನ ವಾಗಿದೆ. ಆತ್ಮವಿಶ್ವಾಸದಲ್ಲಿ ಮುನ್ನಡೆಯುವವರಿಗೆ ಎಂದಿಗೂ ಸೋಲಿಲ್ಲ. ನಿಮ್ಮೊಳಗಿನ ಶಕ್ತಿಯಾಗಲಿ, ವಿಶೇಷತೆಯಾಗಲಿ ಇನ್ನೊಬ್ಬರಲ್ಲಿ ಇರಲು ಸಾಧ್ಯವಿಲ್ಲ. ನಿಮ್ಮೆಲ್ಲರ ಮೇಲೆ ದೇಶದ ಭವಿಷ್ಯ ನಿಂತಿದೆ.ಇದನ್ನರಿತು ಜವಾಬ್ದಾರಿಯಿಂದ ಶಿಕ್ಷಣ ಮುಗಿಸಿ. ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ, ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಯಂಡಮೂರಿ ವೀರೇಂದ್ರನಾಥ್ ಅವರ ಧ್ಯೇಯ ಕಾದಂಬರಿ ಓದಿ.ನಾನು ಪಿಯುಸಿಯಲ್ಲಿದ್ದಾಗಲೇ ಇದನ್ನು ಓದಿದ್ದೆ. ನನ್ನ ಜೀವನದ ಪರಿವರ್ತನೆಗೆ ಕಾರಣವಾದ ಪುಸ್ತಕಗಳಲ್ಲಿ ಧ್ಯೇಯ ಕಾದಂಬರಿಗೆ ಅಗ್ರಸ್ಥಾನವಿದೆ ಎಂದರು.

cbpm2

ಶಾಶ್ವತ ನೀರಾವರಿ ಹೋಋಆಟಗಾರ ಆರ್.ಆಂಜನೇಯ ರೆಡ್ಡಿ ಮಾತನಾಡಿ, ೨ನೇ ವರ್ಷದ ಸ್ಪಂದನ ವಿದ್ಯಾರ್ಥಿ ವೇತನ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆದಿದೆ. ಸಹೋದರ ಸಂದೀಪ್ ರೆಡ್ಡಿ ಸಮಸಮಾಜ ನಿರ್ಮಾಣದ ಆಶಯದಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿದ್ದಾರೆ. ಈಗಾಗಲೇ ಹತ್ತಾರು ಸರಕಾರಿ ಶಾಲೆಗಳನ್ನು ದತ್ತು ಪಡೆದು ಕಾರ್ಪೋರೇಟ್ ಶೈಲಿಯ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ.ಇದರೊಟ್ಟಿಗೆ ವಿದ್ಯಾರ್ಥಿಗಳಿಗೆ ಸಂವಿಧಾನ ಪುಸ್ತಕ ನೀಡಿ ಓದುವ ಸಂಸ್ಕೃತಿಗೆ ನೀರೆರೆಯಬೇಕು ಎಂದು ಸಲಹೆ ನೀಡಿದರು.

ಚುನಾವಣೆ ದೃಷ್ಠಿಯಿಂದ ಇದನ್ನು ಮಾಡುತ್ತಿಲ್ಲ. ಬಡವರ ಮಕ್ಕಳು ಸಾರ್ವಜನಿಕ ಸೇವೆಯಲ್ಲಿರ ಬೇಕು ಎಂಬ ಮಹದೋದ್ದೇಶದಿಂದ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಬಂಡೆಗಳ ಮೇಲೆ ಚಿಗುರಿದ ಶೊಷಿತ ಸಮುದಾಯದ ಪ್ರತಿಮೆಗಳು ನೀವು.ಶ್ರದ್ದೆಯಿಂದ ಓದಿದರೆ ಉದ್ಯೋಗ ದೊರೆ ಯುತ್ತದೆ. ರಾಜಕೀಯಕ್ಕೆ ಯುವ ಶಕ್ತಿ ಬರಬೇಕಿದೆ. ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಟ್ರಸ್ಟ್ನ ಸೇವೆ ಸಾರ್ಥಕ ಆಗಲಿದೆ ಎಂದರು.

ವಿದ್ಯಾರ್ಥಿ ಯುವಸಮೂಹ ಸಾಮಾಜಿಕ ಜಾಲತಾಣ, ಮೊಬೈಲ್ ಗೀಳಿನಿಂದ ಹೊರಗೆ ಸಮಾಜದ ಬಗ್ಗೆ ಕಳಕಳಿ ಕಾಳಜಿ ಇಟ್ಟುಕೊಂಡು ಮುನ್ನಡೆಯಬೇಕು.ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯ ಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಹಾರೈಸಿದರು.

ಸುಷ್ಮಾ ಶ್ರೀನಿವಾಸ್ ಮಾತನಾಡಿ ವಂಚನೆಯಿಲ್ಲದ ಸಮಾಜ ಕಟ್ಟಲು ಯುದ್ದಕ್ಕೆ ನಿಂತಿದ್ದಾರೆ. ಸ್ವಾರ್ಥವೇ ತುಂಬಿರುವ ಈ ಸಮಾಜದಲ್ಲಿ ಸಂದೀಪ್‌ರೆಡ್ಡಿ ತರದ ಪೀಳಿಗೆ ಸಾವಿರವಾಗಬೇಕು. ಶಿಕ್ಷಣಕ್ಕೆ ಸಹಾಯ ಮಾಡಿದರೆ ದೇಶ ಸುಭಿಕ್ಷವಾಗಿರಲಿದೆ.ಮಕ್ಕಳೇ ಶೋಕಿಯ ಬದುಕು ದೂರವಾಗಲಿ, ಹೆತ್ತವರನ್ನು ಆಧರಿಸಿ, ಗುರುಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಿ ಎಂದರು.

ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ, ಬ್ರಾಹ್ಮಣಶಾಹಿ ವ್ಯವಸ್ಥೆ ಶೂದ್ರರಿಗೆ ಶಿಕ್ಷಣ ನಿರಾಕರಿಸಿದ ಸಂದರ್ಭದಲ್ಲಿ ಜ್ಯೋತಿಬಾಪುಲೆ ಸಮಾಜ ಪರಿವರ್ತನೆ ಮೂಲಕ ಶಿಕ್ಷಣ ಸಾರ್ವತ್ರಿಕರಣಕ್ಕಾಗಿ ಮುನ್ನುಡಿ ಬರೆಯುತ್ತಾರೆ.ಅಂಬೇಡ್ಕರ್ ಬಂದ ನಂತರ ಶಿಕ್ಷಣ ಎಲ್ಲಾ ಜಾತಿ ಜನವರ್ಗಗಳಿಗೆ ಶಿಕ್ಷಣ ದೊರೆಯುವಂತಾಯಿತು.ಆದ್ದರಿAದ ಮಕ್ಕಳಿಗೆ ಆಸ್ತಿ ಮಾಡಬೇಡಿ ಮಕ್ಕಳನ್ನು ಆಸ್ತಿಯಾಗಿಸಿ ಎಂದರು.

ಸುಧಾ ವೆಂಕಟೇಶ್ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಆರ್ಥಿಕ ಸಹಾಯ ಮುಖ್ಯ.ಇಂತಹ ಸತ್ಕಾರ್ಯ ಮಾಡುತ್ತಿರುವ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಸಂದೀಪ್ ರೆಡ್ಡಿ ಅವರಿಗೆ ಭಗವಂತ ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದರು.

ರಾಜಾಕಾಂತ್ ಮಾತನಾಡಿ ಗ್ರಾಮೀಣ ಪರಿಶಿಷ್ಟ ಜಾತಿ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಸಂದೀಪ್ ರೆಡ್ಡಿ ಪ್ರಾತಃ ಸ್ಮರಣೀಯರು ಎಂದು ಹೇಳುತ್ತಾ ಕುದ್ಮುಲ್ ರಂಗರಾಯರನ್ನು ಇವರಲ್ಲಿ ಕಂಡಂತಾಯಿತು ಎಂದರು.

ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ ಮಾತನಾಡಿ ಸರ್ಕಾರ ಮಾಡುವ ಕೆಲಸವನ್ನು ಸಂದೀಪ್ ರೆಡ್ಡಿ ಮಾಡುತ್ತಿದ್ದಾರೆ. ದೇವಾಲಯ ಕಟ್ಟಿದರೆ ಭಿಕ್ಷುಕರು ಸೃಷ್ಟಿ ಆಗುತ್ತಾರೆ, ಗ್ರಂಥಾಲಯ ಸ್ಥಾಪನೆ ಆದರೆ ಜ್ಞಾನವಂತರು ಹುಟ್ಟುತ್ತಾರೆ ಎನ್ನು ವುದು ಬಾಬಾ ಸಾಹೇಬರು ಮಾತು ನೆನಪಲ್ಲಿರಲಿ ಎಂದರು.

ಬಿ.ವಿ.ಆನAದ್ ಮಾತನಾಡಿ ಭಗತ್ಸಿಂಗ್ ಜೀವನ ಆದರ್ಶ ನಿಮಗೆ ದಾರಿದೀಪವಾಗಲಿ.ಶಿಕ್ಷಣ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಕೀಲಿಕೈ ಎಂದು ಅಂಬೇಡ್ಕರ್ ಹೇಳುತ್ತಾರೆ.ಅಂತಹ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಸAದೀಪ್ ರೆಡ್ಡಿ ಮಾತನಾಡಿ ಜೀವನ ಪರ್ಯಂತ ಸಾರ್ಥಕವಾದ ಕೆಲಸ ಮಾಡುವುದೇ ನನ್ನ ಗುರಿಯಾಗಿದ್ದು ಈ ಹಾದಿಯಲ್ಲಿ ಎದುರಾಗುವ ಸವಾಲು, ಸಂಕಟ,ಸೋಲು ಗೆಲುವು ಕೊನೆಗೆ ಸಾವನ್ನು ಕೂಡ ಸಂತೋಷದಿಂದಲೇ ಸ್ವಾಗತಿಸುತ್ತೇನೆ.ಮನುಷ್ಯ ಮನುಷ್ಯರ ಜತೆ ನಿಲ್ಲುವ ಬದ್ಧತೆ ಪ್ರಬುದ್ಧತೆ ನಾಯಕರಿಗೆ ಬರಬೇಕು. ಇರುವಷ್ಟು ಕಾಲ ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾ ಬದುಕೋಣ, ಪ್ರೀತಿಯನ್ನೇ ಎಲ್ಲೆಡೆ ಹಂಚೋಣ ಎಂದ ಅವರು ಕಾನೂನು ಬದ್ದ ಕೆಲಸಗಳಿಗೆ ಅಡ್ಡ ಹಾಕಲು ಬರಬೇಡಿ ಎಂದು ವಿರೋಧಿಗಳಿಗೆ ಕೈ ಮುಗಿದರು.

ಜನಪ್ರಿಯ ಚಿತ್ರಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ ಮಾತನಾಡಿ ಸಂದೀಪ್‌ರೆಡ್ಡಿ ನಿಜವಾದ ಸಮಾಜ ಸೇವಕ.ವಾಟೆ ಚಿಗುರಿ ಹೆಮ್ಮರವಾಗುವಂತೆ ನೀವು ಬಿತ್ತಿರುವ ಶಿಕ್ಷಣದ ಬೀಜಗಳು ವನವಾಗಲಿ, ನೆರವು ಪಡೆದ ವಿದ್ಯಾರ್ಥಿಗಳ ಬದುಕು ಸಾರ್ಥಕತೆ ಪಡೆಯಲಿ ಎಂದು ಶುಭಹಾರೈಸಿ ದರು.

ಸಂದೀಪ್‌ರೆಡ್ಡಿ ಹೇಳಿದ ಕ್ಯಾನ್ಸರ್ ಕಥೆ ಸಭೆಯನ್ನು ಒಂದು ಕ್ಷಣ ಕಣ್ಣೀರಲ್ಲಿ ಮುಳುಗಿಸುವಲ್ಲಿ ಸಫಲವಾಯಿತು.ಈ ಕಥೆ ಹೇಳುವಾಗ ಸ್ವತಃ ಸಂದೀಪ್‌ರೆಡ್ಡಿಗೂ ಕೂಡ ಕಣ್ಣಂಚಲ್ಲಿ ನೀರು ಬಂದಿತು
ಸ್ಪAದನ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ೯೫೦ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿ ವ್ಯವಸ್ಥಿತವಾಗಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು,ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಒಡನಾಡಿಗಳು, ಪ್ರತಿಭಾಪುರಸ್ಕಾರಕ್ಕೆ ಬಂದಿದ್ದ ವಿದ್ಯಾರ್ಥಿಗಳು, ಪೋಷಕರು ಇದ್ದರು.