Chikkaballapur News: ಕೋಟೆ ಬಾಲಕಿಯರ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆಯಂತೆ ಮಕ್ಕಳ ಸಂಸತ್ ಚುನಾವಣೆ
ಅಭ್ಯರ್ಥಿಗಳು ಬೆಳಗ್ಗೆಯಿಂದಲೇ ಮತದಾರರನ್ನು ಸೆಳೆಯಲು ತಮ್ಮ ಅಜೆಂಡಾಗಳನ್ನು ಮತದಾರ ರಿಗೆ ಮನವರಿಕೆ ಮಾಡಿ ಕೊಟ್ಟು ಮತದಾನ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಮತದಾರರು ಆಧಾರ್ ಕಾರ್ಡ್ ಹಿಡಿದು ಉತ್ಸಾಹದಿಂದ ತಮ್ಮ ನೆಚ್ಚಿನ ಅಭ್ಯರ್ಥಿಗಳ ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ಯಲ್ಲಿ ಭಾಗವಹಿಸಿದ್ದರು.


ಗೌರಿಬಿದನೂರು: ಪ್ರಜಾಪ್ರಭುತ್ವದ ಮೌಲ್ಯ, ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಲು ವಿದ್ಯಾರ್ಥಿಗಳಿಂದಲೇ ಮತದಾನ ಮಾಡಿಸುವ ಮೂಲಕ ನಗರದ ಕೋಟೆ ಬಾಲಕಿಯರ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆಯಂತೆ ಮಕ್ಕಳ ಸಂಸತ್ ಚುನಾವಣೆಯನ್ನು ಶನಿವಾರ ನಡೆಸಲಾಯಿತು.
12 ಕ್ಷೇತ್ರಗಳಿಗೆ ನಡೆದ ಚುನಾವಣೆಗೆ 49 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.
10ನೇ ತರಗತಿ ಬಿ ಕ್ಷೇತ್ರದಿಂದ ಇಬ್ಬರು ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾದರೆ, 8ನೇ ತರಗತಿಗೆ 4 ಸ್ಥಾನಗಳು, 9ನೇ ತರಗತಿಗೆ 4 ಸ್ಥಾನಗಳು ಹಾಗೂ 10ನೇ ತರಗತಿಯಿಂದ 8, ಒಟ್ಟು 16 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಒಟ್ಟು 560 ಮತದಾರರು ತಮ್ಮ ಮತವನ್ನು ಚಲಾಯಿಸಿದರು.
ಇದನ್ನೂ ಓದಿ: Chikkaballapur News: ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿ ನೇಮಕವಾದ ಮಳ್ಳೂರು ಶಿವಣ್ಣನವರಿಗೆ ಸನ್ಮಾನ
ಅಭ್ಯರ್ಥಿಗಳು ಬೆಳಗ್ಗೆಯಿಂದಲೇ ಮತದಾರರನ್ನು ಸೆಳೆಯಲು ತಮ್ಮ ಅಜೆಂಡಾಗಳನ್ನು ಮತದಾರ ರಿಗೆ ಮನವರಿಕೆ ಮಾಡಿ ಕೊಟ್ಟು ಮತದಾನ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಮತದಾರರು ಆಧಾರ್ ಕಾರ್ಡ್ ಹಿಡಿದು ಉತ್ಸಾಹದಿಂದ ತಮ್ಮ ನೆಚ್ಚಿನ ಅಭ್ಯರ್ಥಿಗಳ ಆಯ್ಕೆ ಮಾಡಲು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಪ್ರತಿಜ್ಞಾ ವಿಧಿ ಸ್ವೀಕಾರ, ನೋಟಾ, ರಹಸ್ಯ ಮತದಾನ, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸು ವಿಕೆ, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಕುರಿತು ವಿವಿಧ ಮಾಹಿತಿಯನ್ನು ಚುನಾವಣೆ ಸಾಕ್ಷರತಾ ಕ್ಲಬ್ ಸಂಚಾಲಕಿ ಸುಮ ಜಿ ಎನ್ ಮಾಹಿತಿ ನೀಡಿದರು. ಚುನಾವಣೆ ಉಸ್ತುವಾರಿಯನ್ನು ಸಂಚಾಲಕಿ ಮಂಜುಳ ಎ. ವಹಿಸಿದ್ದರು. ಎಣಿಕೆ ಮೇಲ್ವಿಚಾರಕರಾಗಿ ಜಯಮ್ಮ ಎನ್ ಹಾಗೂ ರೂಪ ಎಂ ಡಿ ವಹಿಸಲಾಗಿತ್ತು,
ಮುಖ್ಯ ಶಿಕ್ಷಕಿ ಪದ್ಮಾವತಿ ಎಸ್ ರವರ ಮಾರ್ಗದರ್ಶನದಲ್ಲಿ ಮತಗಟ್ಟೆ ಅಧಿಕಾರಿಗಳಾಗಿ ಮಂಜುಳ ಎಸ್, ವಾಣಿಶ್ರೀ ಎಚ್, ಅಂಬುಜಾ ಪಿ, ಚಂದ್ರಪ್ಪ ಕೆ, ಲಕ್ಷ್ಮೀ ದೇವಮ್ಮ ಎಚ್ ಆರ್. ಆಯಿಷಾ ಜಬೀನ್, ಸುಮಂಗಳ ಆರ್.,ನರಸಿಂಹ ಮೂರ್ತಿ ಸಿ, ಮಮತಾ ಹಾಗೂ ಸುನೀತಾ ಅವರನ್ನು ನಿಯೋಜಿಸಲಾಗಿತ್ತು.
ರಾಮಚಂದ್ರಯ್ಯ ಜಿ ಸಿ ವೀಕ್ಷಕರಾಗಿ ಭಾಗವಹಿಸಿದ್ದರು. ಇಡೀ ಚುನಾವಣೆ ಕಾರ್ಯದಲ್ಲಿ ಶಾಂತಿ ಮತ್ತು ಭದ್ರತೆ ಕಾರ್ಯವನ್ನು ದೈಹಿಕ ಶಿಕ್ಷಣ ಶಿಕ್ಷಕಿ ಶಬ್ರಿನ್ ತಾಜ್ ವಹಿಸಿಕೊಂಡಿದ್ದರು.
*
ವಿದ್ಯಾರ್ಥಿಗಳಿಗೆ ಕಲಿಕಾ ಹಂತದಿಂದಲೇ ಚುನಾವಣೆ ಪ್ರಕ್ರಿಯೆಯ ವಿವಿಧ ಮಜಲುಗಳನ್ನು ಪ್ರಾತ್ಯ ಕ್ಷಕೆ ಮೂಲಕ ಅನುಭವಕ್ಕೆ ತರಲು ಇಂತಹ ಚುನಾವಣೆಗಳು ಅನುಕೂಲವಾಗಲಿವೆ, ಇದರಿಂದ ನಾಯಕತ್ವ ಗುಣಗಳು ಬೆಳೆಯುವುದರ ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯ ವನ್ನು ಎತ್ತಿ ಹಿಡಿಯಲು ವಿದ್ಯಾರ್ಥಿ ದೆಸೆಯಲ್ಲೇ ಕಲಿಸಿದಂತಾಗುತ್ತದೆ.
ಜಿ.ಸಿ.ರಾಮಚಂದ್ರಯ್ಯ, ಮುಖ್ಯಮಂತ್ರಿ ಶಿಕ್ಷಕರು. ಕೋಟೆ ಬಾಲಕಿಯರ ಶಾಲೆ.