ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Stampede: ಆರ್‌ಸಿಬಿಯನ್ನು ಸನ್ಮಾನಿಸುವ ಬಗ್ಗೆ ಬಿಸಿಸಿಐಗೆ ತಿಳಿದಿರಲಿಲ್ಲ; ಐಪಿಎಲ್ ಅಧ್ಯಕ್ಷ

ಗೃಹ ಸಚಿವ ಪರಮೇಶ್ವರ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮ ಆಯೋಜಿಸಿದವರು ನಾವಲ್ಲ ಎಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA) ಈ ಕಾರ್ಯಕ್ರಮವನ್ನು ನಡೆಸಲು ಬಯಸಿದ್ದವು. ಸರಕಾರ ಅದಕ್ಕೆ ಅನುಮತಿ ನೀಡಿತ್ತಷ್ಟೇ ಎಂದು ಪರಮೇಶ್ವರ ಹೇಳಿದ್ದಾರೆ.

ದುರಂತಕ್ಕೆ ಬಿಸಿಸಿಐ ಹೊಣೆಯಲ್ಲ; ಐಪಿಎಲ್ ಅಧ್ಯಕ್ಷ

Profile Abhilash BC Jun 5, 2025 12:06 PM

ನವದೆಹಲಿ: ಬುಧವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಜಯೋತ್ಸವದ(RCB victory parade stampede) ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ(Bengaluru Stampede) ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಲ್ತುಳಿತ ಸಂಭವಿಸಿದ್ದು ದುರಂತವಾದರೂ, ಆ ಕಾರ್ಯಕ್ರಮವನ್ನು ಬಿಸಿಸಿಐ(BCCI) ಆಗಲಿ ಐಪಿಎಲ್‌ ಆಡಳಿತ ಮಂಡಳಿ ಆಯೋಜಿಸಿದ್ದಲ್ಲ, ಈ ಘಟನೆಗೂ ನಮಗೂ ಸಂಬಂಧವಿಲ್ಲ ಎಂದು ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌(Arun Dhumal) ಸ್ಪಷ್ಟಪಡಿಸಿದ್ದಾರೆ. ಸುರಕ್ಷತೆ ಇಲ್ಲದೆ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಅರುಣ್‌ ಧುಮಾಲ್‌, ಐಪಿಎಲ್ ಮಂಗಳವಾರ ರಾತ್ರಿ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಇದಾದ ಬಳಿಕ ನಡೆಯುವ ಯಾವುದೇ ವಿಜಯೋತ್ಸವಕ್ಕೆ ಬಿಸಿಸಿಐ ಆಗಲಿ ಐಪಿಎಲ್‌ ಆಡಲಿತ ಮಂಡಳಿ ಹೊಣೆಯಲ್ಲ. ಫೈನಲ್‌ ಮುಕ್ತಾಯದ ಬಳಿಕ ಏನೇ ಘಟನೆ ನಡೆದರೂ ಅದಕ್ಕೆ ಫ್ರಾಂಚೈಸಿ ಮತ್ತು ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದವರು ಜವಾಬ್ದಾರರು ಎಂದು ಹೇಳಿದ್ದಾರೆ.

'ಐಪಿಎಲ್ ಅಧ್ಯಕ್ಷನಾಗಿ, ನಾನು ಲೀಗ್ ಪರವಾಗಿ ಮಾತ್ರ ಮಾತನಾಡಬಲ್ಲೆ. ಆರ್‌ಸಿಬಿ ಒಂದು ಫ್ರಾಂಚೈಸಿ ಮತ್ತು ಐಪಿಎಲ್ ವ್ಯವಸ್ಥೆಯ ಭಾಗವಾಗಿದ್ದರೂ ಟೂರ್ನಿ ಮತ್ತು ಪಂದ್ಯಾವಳಿಯ ಸಮಯದಲ್ಲಿ ಮಾತ್ರ ನಾವು ಫ್ರಾಂಚೈಸಿ ಮೇಲೆ ಹಿಡಿತ ಸಾಧಿಸಲು ಸಾಧ್ಯ. ಗೆದ್ದ ಬಳಿಕ ತಂಡವನ್ನು ಮತ್ತು ಆಟಗಾರರನ್ನು ಆಹ್ವಾನಿಸಿದ್ದು ಯಾರು?, ಅವರಿಗೆ ಅನುಕೂಲ ಕಲ್ಪಿಸಿದವರು ಯಾರು? ಹೀಗೆ ಎಲ್ಲ ಪ್ರಶ್ನೆಗಳಿಗೆ ಸ್ಥಳೀಯ ಆಡಳಿತವು ತನಿಖೆ ಮಾಡಬೇಕು. ಈ ಘಟನೆಗೂ ಬಿಸಿಸಿಐ ಅಥವಾ ಐಪಿಎಲ್‌ ಆಡಳಿತ ಮಂಡಳಿಗೆ ಯಾವುದೇ ಸಂಬಂಧವಿಲ್ಲ. ಹೀಗಾಗಿ ಐಪಿಎಲ್‌ ಮಂಡಳಿ ಮತ್ತು ಬಿಸಿಸಿಐಯನ್ನು ಈ ಘಟನೆಯಲ್ಲಿ ಎಳೆ ತರುವ ಅಗತ್ಯವಿಲ್ಲ' ಎಂದಿದ್ದಾರೆ.

ಇದನ್ನೂ ಓದಿ IPL 2025: ʻನಾವು ತೀವ್ರ ದುಖಃದಲ್ಲಿದ್ದೇವೆʼ-ಕಾಲ್ತುಳಿತದ ಪ್ರಕರಣದ ಬಗ್ಗೆ ಆರ್‌ಸಿಬಿ ಪ್ರತಿಕ್ರಿಯೆ!

ಇನ್ನೊಂದೆಡೆ ಗೃಹ ಸಚಿವ ಪರಮೇಶ್ವರ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮ ಆಯೋಜಿಸಿದವರು ನಾವಲ್ಲ ಎಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA) ಈ ಕಾರ್ಯಕ್ರಮವನ್ನು ನಡೆಸಲು ಬಯಸಿದ್ದವು. ಸರಕಾರ ಅದಕ್ಕೆ ಅನುಮತಿ ನೀಡಿತ್ತಷ್ಟೇ ಎಂದು ಪರಮೇಶ್ವರ ಹೇಳಿದ್ದಾರೆ.

ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ. ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದು, ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಿದೆ.