ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಪೀಟರ್ಸನ್ ಸಲಹೆಯನ್ನು ಬಹಿರಂಗಪಡಿಸಿದ ಕುಲ್ದೀಪ್

Kuldeep Yadav: ದ್ವಿತೀಯ ಟೆಸ್ಟ್‌ನಲ್ಲಿ ವೇಗಿ ಶಾರ್ದೂಲ್‌ ಠಾಕೂರ್‌ ಬದಲು ಸ್ಪಿನ್ನರ್‌ ಕುಲ್ದೀಪ್ ಯಾದವ್‌ ಭಾರತೀಯ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.ಲೀಡ್ಸ್‌ನಲ್ಲಿ ನಡೆದ ಆರಂಭಿಕ ಟೆಸ್ಟ್‌ನಲ್ಲಿ ಶಾರ್ದೂಲ್‌ 16 ಓವರ್‌ಗಳಲ್ಲಿ 89 ರನ್ನಿಗೆ 2 ವಿಕೆಟ್‌ ಉರುಳಿಸಿದ್ದರು. ಪಂದ್ಯವನ್ನು ಭಾರತ 5 ವಿಕೆಟ್‌ನಿಂದ ಸೋತಿತ್ತು.

ಪೀಟರ್ಸನ್ ಸಲಹೆಯನ್ನು ಬಹಿರಂಗಪಡಿಸಿದ ಕುಲ್ದೀಪ್

Profile Abhilash BC Jun 30, 2025 12:37 PM

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್(IND vs ENG) ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ(IND vs ENG 2nd Test) ಮುನ್ನ ಇಂಗ್ಲೆಂಡ್‌ನ ಮಾಜಿ ನಾಯಕ ಹಾಗೂ ಆಟಗಾರ ಕೆವಿನ್ ಪೀಟರ್ಸನ್(Kevin Pietersen) ನೀಡಿದ ಸಲಹೆಯನ್ನು ಕುಲ್ದೀಪ್ ಯಾದವ್(kuldeep yadav) ಬಹಿರಂಗಪಡಿಸಿದ್ದಾರೆ. ಪೀಟರ್ಸನ್ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು. ಕುಲ್ದೀಪ್ ಯಾದವ್ ಕೂಡ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದರು. ಇದೇ ಕಾರಣದಿಂದ ಪೀಟರ್ಸನ್ ಅವರು ಇಂಗ್ಲೆಂಡ್‌ನ ಪರಿಸ್ಥಿತಿಗಳ ಬಗ್ಗೆ ಕುಲ್ದೀಪ್ ಸಲಹೆ ನೀಡಿದ್ದಾರೆ.

"ಕೆವಿನ್ ಪೀಟರ್ಸನ್ ಐಪಿಎಲ್‌ ವೇಳೆ ನಮ್ಮ ತಂಡದ(ಡೆಲ್ಲಿ ಕ್ಯಾಪಿಟಲ್ಸ್‌) ಭಾಗವಾಗಿದ್ದರು. ಇಂಗ್ಲೆಂಡ್ ಪ್ರವಾಸಕ್ಕಾಗಿ ಅವರು ನನಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಫೀಲ್ಡಿಂಗ್ ಸ್ಥಾನಗಳು, ಪಿಚ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳ ಬಗ್ಗೆ ಅವರು ನನಗೆ ಹೇಳಿದ್ದಾರೆ. ನಾವು ಇಂಗ್ಲೆಂಡ್‌ ಬ್ಯಾಟಿಂಗ್ ಲೈನ್ ಅಪ್ ಪರಿಶೀಲಿಸಿದ್ದೇವೆ. ಇಂಗ್ಲೆಂಡ್‌ನಲ್ಲಿ ಅಗತ್ಯವಿರುವ ಮನಸ್ಥಿತಿಯ ಬಗ್ಗೆ ಪೀಟರ್ಸನ್ ನನಗೆ ಮಾಹಿತಿ ನೀಡಿದ್ದಾರೆ" ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಕುಲ್ದೀಪ್ ಹೇಳಿದರು.

ಇದಲ್ಲದೆ, ಇಂಗ್ಲೆಂಡ್‌ನಲ್ಲಿ ಸ್ಪಿನ್ನರ್‌ಗಳು ರಕ್ಷಣಾತ್ಮಕ ಮನಸ್ಥಿತಿಯೊಂದಿಗೆ ಹೇಗೆ ಆಡಬೇಕು ಎಂಬುದನ್ನು ಕೆವಿನ್ ಪೀಟರ್ಸನ್ ಹೇಗೆ ನನಗೆ ತೋರಿಸಿಕೊಟ್ಟಿದ್ದಾರೆ ಎಂದು ಕುಲ್ದೀಪ್ ಹೇಳಿದರು. ಇಂಗ್ಲೆಂಡ್‌ನಲ್ಲಿ ವೇಗದ ಬೌಲರ್‌ಗಳು ಹೆಚ್ಚಾಗಿ ವಿಕೆಟ್ ಪಡೆಯುತ್ತಾರೆ ಮತ್ತು ಅವರು ಪ್ರಧಾನ ಪಾತ್ರದಲ್ಲಿರುತ್ತಾರೆ. ಈ ಮಧ್ಯೆ ಸ್ಪಿನ್ನರ್‌ಗಳು ಆಕ್ರಮಣಕಾರಿ ಮನಸ್ಥಿತಿಯನ್ನು ತೆಗೆದುಕೊಳ್ಳಲು ಮತ್ತು ನಿರಂತರವಾಗಿ ವಿಕೆಟ್‌ಗಳನ್ನು ಹೇಗೆ ತೆಗೆಯಬೇಕೆಂದು ಪೀಟರ್ಸನ್ ನನಗೆ ಬೆಂಬಲಿಸಿದರು ಎಂದು ಕುಲ್ದೀಪ್ ಯಾದವ್ ಬಹಿರಂಗಪಡಿಸಿದರು.

ಕುಲ್ದೀಪ್ ಆಡುವ ಸಾಧ್ಯತೆ

ದ್ವಿತೀಯ ಟೆಸ್ಟ್‌ನಲ್ಲಿ ವೇಗಿ ಶಾರ್ದೂಲ್‌ ಠಾಕೂರ್‌ ಬದಲು ಸ್ಪಿನ್ನರ್‌ ಕುಲ್ದೀಪ್ ಯಾದವ್‌ ಭಾರತೀಯ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.ಲೀಡ್ಸ್‌ನಲ್ಲಿ ನಡೆದ ಆರಂಭಿಕ ಟೆಸ್ಟ್‌ನಲ್ಲಿ ಶಾರ್ದೂಲ್‌ 16 ಓವರ್‌ಗಳಲ್ಲಿ 89 ರನ್ನಿಗೆ 2 ವಿಕೆಟ್‌ ಉರುಳಿಸಿದ್ದರು. ಪಂದ್ಯವನ್ನು ಭಾರತ 5 ವಿಕೆಟ್‌ನಿಂದ ಸೋತಿತ್ತು.

ಈ ಸೋಲಿನ ಬೆನ್ನಲ್ಲೇ ತಂಡದಲ್ಲಿ ಬದಲಾವಣೆಗೆ ಒತ್ತಾಯ ಕೇಳಿಬಂದಿದೆ. ಕುಲ್ದೀಪ್ ಅಲ್ಲಿ ಆಡಬೇಕಿತ್ತು. ನಾಲ್ವರು ವೇಗಿಗಳನ್ನು ಇಂಗ್ಲೆಂಡ್‌ನ‌ಲ್ಲಿ ಆಡಿಸುವ ಅಗತ್ಯ ಇಲ್ಲ ಎಂದು ಹಲವು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ ಜಡೇಜಾ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಕುಲ್ದೀಪ್‌ಗೆ ಅವಕಾಶ ಸಿಗುವುದು ಬಹುತೇಕ ಖಚಿತ ಎನ್ನುವಂತಿದೆ.