ಬೆಂಗಳೂರು ವರ್ತೂರು ರಸ್ತೆಯ ಮಣಿಪಾಲ ಆಸ್ಪತ್ರೆಯಿಂದ ಜಾಗೃತಿ
ಬೆಂಗಳೂರು ವರ್ತೂರು ರಸ್ತೆಯ ಮಣಿಪಾಲ್ ಆಸ್ಪತ್ರೆಯು ವಯಸ್ಕರಲ್ಲಿ ಮೂಳೆ ಆರೋಗ್ಯ ರಕ್ಷಣೆ ಹಾಗೂ ರೋಬೋಟಿಕ್ ಕೀಲು ಬದಲಿ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಳ ಪರಿವರ್ತನಾತ್ಮಕ ಪಾತ್ರದ ಕುರಿತು ಸಂವಾದಾತ್ಮಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಏ. 28ರಂದು ಆಸ್ಪತ್ರೆ ಆಯೋಜಿಸಿದ್ದ ನಿಮ್ಮ ವೈದ್ಯರನ್ನು ತಿಳಿದುಕೊಳ್ಳಿ ಕಾರ್ಯಕ್ರಮದಲ್ಲಿ ಪ್ರಮುಖ ತಜ್ಞರು ಮೂಳೆ ಅರೋಗ್ಯ ಮತ್ತು ಕೀಲು ನೋವಿನ ಚಿಕಿತ್ಸೆ ಬಗ್ಗೆ ಅಮೂಲ್ಯವಾದ ಮಾಹಿತಿ ಹಂಚಿಕೊಂಡರು.