ಗುರುಪೂಜೆ-ಸಂಗೀತೋತ್ಸವದ ಪೂರ್ವಭಾವಿ ಸಭೆ
ಗುರುಹುಣ್ಣಿಮೆಯ ಅಂಗವಾಗಿ ಶ್ರೀಕ್ಷೇತ್ರ ಕೈವಾರದಲ್ಲಿ ಹಲವಾರು ವರ್ಷಗಳಿಂದಲೂ ವೈಶಿಷ್ಟ್ಯತೆ ಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೈವಾರದ ಶ್ರೀಯೋಗಿನಾರೇಯಣ ತಾತಯ್ಯ ನವರು ತತ್ವಬೋಧನೆಗಳಿಂದ ಕೂಡಿರುವ ಹಲವಾರು ಕೀರ್ತನೆ, ಶತಕಗಳನ್ನು ಬರೆದು ಜನಮಾನಸ ದಲ್ಲಿ ನೆಲೆ ನಿಂತಿದ್ದಾರೆ. ಅವರು ರಚಿಸಿರುವ ಕೀರ್ತನೆಗಳನ್ನು ಭಜನೆಯ ರೂಪದಲ್ಲಿ ಹಾಡುತ್ತಾ ಜನಸಮೂಹಕ್ಕೆ ತಲುಪಿಸುವ ಕೆಲಸವನ್ನು ಸಹಸ್ರಾರು ಭಜನಾ ತಂಡಗಳು ಸಕ್ರಿಯವಾಗಿ ಮಾಡುತ್ತಿದ್ದಾರೆ.