ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

Assam Elections 2026: ಅಸ್ಸಾಂನಲ್ಲಿ ಹಿಟ್ಲರ್ ಆಡಳಿತಕ್ಕೆ ಕೊನೆ ಹಾಡಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

ಅಸ್ಸಾಂನಲ್ಲಿ ಹಿಟ್ಲರ್ ಆಡಳಿತಕ್ಕೆ ಕೊನೆ ಹಾಡಬೇಕು: ಡಿ.ಕೆ. ಶಿವಕುಮಾರ್

ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಪಕ್ಷದ ಹಿರಿಯ ವೀಕ್ಷಕರ ಜವಾಬ್ದಾರಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಗುವಾಹಟಿಗೆ ಭೇಟಿ ನೀಡಿದ ವೇಳೆ ಅಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಟೀಕೆಗಳ ಸುರಿಮಳೆಗೈದಿದ್ದಾರೆ.

ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಉಪನ್ಯಾಸಕ ಸಾವು; ಅಡಿಕೆ ತೋಟದಲ್ಲಿ ಶವಕ್ಕೆ ಬೆಂಕಿ!

ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಉಪನ್ಯಾಸಕ ಸಾವು; ಶವಕ್ಕೆ ಬೆಂಕಿ!

Shivamogga lecturer Death Case: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

CM Siddaramaiah: ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ Video

ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಮೈಸೂರಿನ ಮೈಲಾರಿ ಹೋಟೆಲ್‌, ಮೃದುವಾದ ದೋಸೆ ಹಾಗೂ ಮಲ್ಲಿಗೆ ಇಡ್ಲಿಗೆ ಸಾಕಷ್ಟು ಫೇಮಸ್‌. ಸಿಎಂ ಅವರು ಪ್ರತಿ ಬಾರಿ ಮೈಸೂರಿಗೆ ಬಂದಾಗ ಸಿಎಂ ಬೆಣ್ಣೆ ದೋಸೆ, ಕಾಯಿ ಚಟ್ನಿ, ಆಲೂಗಡ್ಡೆ ಈರುಳ್ಳಿ ಪಲ್ಯ, ಇಡ್ಲಿ-ಚಟ್ನಿ ಸವಿಯುತ್ತಾರೆ.

ನ್ಯಾಯವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು: ಸಿಎಂ ಕಿವಿ ಮಾತು

ನ್ಯಾಯವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು: ಸಿಎಂ

ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಪೊಲೀಸರು ಮಾನವೀಯತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ಜೊತೆಗೆ ಸ್ನೇಹದಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

MP Kageri: ಶಿಕ್ಷಣ ಇಲಾಖೆಯ ಪ್ರಯೋಗ ವಿದ್ಯಾರ್ಥಿಗಳ ಭವಿಷ್ಯದ ಜೊತೆಗಿನ ಚೆಲ್ಲಾಟ: ಸಂಸದ ಕಾಗೇರಿ ಆಕ್ರೋಶ

ಶಿಕ್ಷಣ ಇಲಾಖೆಯ ಪ್ರಯೋಗ ವಿದ್ಯಾರ್ಥಿಗಳ ಭವಿಷ್ಯದ ಜೊತೆಗಿನ ಚೆಲ್ಲಾಟ

​ದಶಕಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದ ತ್ರಿಭಾಷಾ ಸೂತ್ರಕ್ಕೆ ಸಚಿವರು ಕೊಡಲಿ ಪೆಟ್ಟು ನೀಡಿದ್ದಾರೆ. ತೃತೀಯ ಭಾಷೆಯ ಅಂಕಗಳನ್ನು ಕೈಬಿಟ್ಟು, ಕೇವಲ ಗ್ರೇಡ್‌ ಪದ್ಧತಿಗೆ ಸೀಮಿತಗೊಳಿಸಿರುವುದು ಮತ್ತು ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಇಳಿಸಿ ರುವುದು ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದ್ದಾರೆ.

Dinesh Gundu Rao: ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞಾನ ವಲಯದಲ್ಲಿ ಸೂಕ್ತ ನಿಯಂತ್ರಣ ಕ್ರಮಗಳ ಜಾರಿಗೆ ಕ್ರಮ: ಸಚಿವ ದಿನೇಶ್ ಗುಂಡೂರಾವ್

ರಾಷ್ಟ್ರಮಟ್ಟದ 7ನೇ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಸಮ್ಮೇಳನ

ಆರೋಗ್ಯ ವ್ಯವಸ್ಥೆ ಯಲ್ಲಿ ಲ್ಯಾಬ್ ಟೆಕ್ನೀಷಿಯನ್ಸ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಚಿಕಿತ್ಸೆ ಯಲ್ಲಿ ತಂತ್ರಜ್ಞರು ನಿಖರತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಯೋಗಾಲಯ ತಂತ್ರಜ್ಞರ ಶ್ರೇಯೋ ಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ವಲಯದಲ್ಲಿ ಸೂಕ್ತ ನಿಯಂತ್ರಣ ಕ್ರಮಗಳು ಮುಖ್ಯ ವಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ

Yadgir News: ಸುರಪುರದಲ್ಲಿ ಘೋರ ಘಟನೆ; ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳ ಸಾವು

ಸುರಪುರದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳ ಸಾವು

Four children drown in farm pond: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಶಾಲೆಗೆ ರಜೆ ಇದ್ದ ಕಾರಣ ಕೃಷಿಹೊಂಡದಲ್ಲಿ ಮಕ್ಕಳು ಈಜಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ಸ್ಥಳದಲ್ಲಿ ಮಕ್ಕಳ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

MP Kageri Humanity: ಶಿರಸಿಯ 'ಅಮೇಜಿಂಗ್ ಪೆಟ್ ಪ್ಲಾನೆಟ್' ಕಾರ್ಯಕ್ಕೆ ಸಂಸದ ಕಾಗೇರಿ ಮೆಚ್ಚುಗೆ: ಗಿಳಿಮರಿ ರಕ್ಷಿಸಿ ಮಾನವೀಯತೆ ಮೆರೆದ ಸಂಸದ

ಗಿಳಿಮರಿ ರಕ್ಷಿಸಿ ಮಾನವೀಯತೆ ಮೆರೆದ ಸಂಸದ

ಭಾನುವಾರ ಸಂಸದರು ತಮ್ಮ ಊರಿನಿಂದ ಬರುತ್ತಿದ್ದ ಸಂದರ್ಭದಲ್ಲಿ, ರಸ್ತೆ ಬದಿಯ ಮರದ ಮೇಲಿನಿಂದ ಬಿದ್ದಿದ್ದ ಅಸ್ವಸ್ಥಗೊಂಡ ಪುಟ್ಟ ಗಿಳಿಮರಿಯನ್ನು ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಆ ಗಿಳಿಮರಿಯನ್ನು ಸ್ವತಃ ತಾವೇ ಅಮೇಜಿಂಗ್ ಪೆಟ್ ಪ್ಲಾನೆಟ್ ಸಂಸ್ಥೆಗೆ ತಲುಪಿಸುವ ಮೂಲಕ ಒಂದು ಜೀವವನ್ನು ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ವಿದ್ಯಾರ್ಥಿಗಳ ಆರೋಗ್ಯವೇ ಪ್ರಮುಖ: ಆರೋಗ್ಯಕರ ಪರಿಸರದಿಂದ ಉತ್ತಮ ಅಧ್ಯಯನ ಸಾಧ್ಯ: ಡಿ.ಆರ್. ವಿಜಯಸಾರಥಿ

ಆರೋಗ್ಯಕರ ಪರಿಸರದಿಂದ ಉತ್ತಮ ಅಧ್ಯಯನ ಸಾಧ್ಯ

ಇಂದಿನ ಜೀವನಶೈಲಿಯಲ್ಲಿ ಕಲುಷಿತ ನೀರು, ಪರಿಸರ ಮಾಲಿನ್ಯ ಹಾಗೂ ರಾಸಾಯನಿಕ ಆಹಾರ ಪದ್ಧತಿಗಳ ಪರಿಣಾಮವಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಿಯಮಿತ ಆರೋಗ್ಯ ತಪಾಸಣೆ, ಸಮತೋಲನ ಆಹಾರ ಪದ್ಧತಿ, ಯೋಗ ಮತ್ತು ಧ್ಯಾನ ಅಳವಡಿಸಿಕೊಳ್ಳು ವುದು ಅನಿವಾರ್ಯ. ವಿಶೇಷವಾಗಿ ವಿದ್ಯಾರ್ಥಿಗಳ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಉತ್ತಮ ಆರೋಗ್ಯ ಮತ್ತು ಸ್ವಚ್ಛ ಪರಿಸರ ಇದ್ದಾಗ ಮಾತ್ರ ಅವರು ಉತ್ತಮವಾಗಿ ಅಧ್ಯಯನ ಮಾಡಬಹುದು

"ಈ ಸಲ ಕಪ್‌ ನಮ್ದೇ" ; ಜೈಲಿನೊಳಗಿಂದಲೇ ವಿಡಿಯೋ ಹರಿಬಿಟ್ಟ ವಿಚಾರಣಾಧೀನ ಕೈದಿಗಳು!

ಜೈಲಿನೊಳಗಿಂದಲೇ ವಿಡಿಯೋ ಹರಿಬಿಟ್ಟ ವಿಚಾರಣಾಧೀನ ಕೈದಿಗಳು!

ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ಮೊಬೈಲ್‌ ಸಿಗುವ ಸೌಲಭ್ಯಕ್ಕೆ ಇನ್ನೂ ಬ್ರೇಕ್‌ ಬಿದ್ದಿಲ್ಲ. ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ ಫ್ಲಿಕ್ಸ್‌ ನಂತಹ ಐಷಾರಾಮಿ ಸೌಲಭ್ಯಗಳಿವೆ ಎಂದು ಬಿಂಬಿಸುವಂತಹ ವಿಡಿಯೋವನ್ನ ಕೈದಿಗಳೇ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.

Land Record Digitization: ಭೂ ದಾಖಲೆ ಡಿಜಿಟಲೀಕರಣ: ರಾಜ್ಯಕ್ಕೆ ಕಲಬುರಗಿ ಮಾದರಿ

ಭೂ ದಾಖಲೆ ಡಿಜಿಟಲೀಕರಣ: ರಾಜ್ಯಕ್ಕೆ ಕಲಬುರಗಿ ಮಾದರಿ

ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸೇರಿ ಒಟ್ಟು 1,38,81,963 ಪುಟಗಳನ್ನು ಡಿಜಿಟಲೀ ಕರಿಸುವ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆ ಗಿಂತಲೂ ಹೆಚ್ಚಿನ ಅಂದರೆ 1,39,41,869 ಪುಟಗಳನ್ನು ಸ್ಕ್ಯಾನ್ ಮಾಡಿ ಸಾಫ್ಟ್‌ʼವೇರ್‌ಗೆ ಅಪ್‌ಲೋಡ್ ಮಾಡಲಾಗಿದೆ. ಈ ಮೂಲಕ ಶೇ.100.40 ರಷ್ಟು ಪ್ರಗತಿ ಸಾಧಿಸಲಾಗಿದೆ.

Bangalore News: ನೋಂದಾಯಿತವಲ್ಲದ ಮದರಸಾಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 10 ಲಕ್ಷ ರೂ ಅನುದಾನ : ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆ

ನೋಂದಾಯಿತವಲ್ಲದ ಮದರಸಾಗೆ 10 ಲಕ್ಷ ರೂ ಅನುದಾನ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು. ಶಾಲೆ ಮುಚ್ಚುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ನೆಲದ ಕಾನೂನಿಗೆ ಗೌರವ ನೀಡಬೇಕು. ಮುಂದಿನ ಆದೇಶದವರೆಗೆ ಶಾಲಾ ದಾಖಲಾತಿ ನಡೆಸಬಾರದು ಎಂದು ಹೈಕೋರ್ಟ್ ಆದೇಶವನ್ನು ಪರಿಪಾಲಿಸ ಬೇಕು. ಇಲ್ಲಿ ಮಕ್ಕಳ ಶಿಕ್ಷಣ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಶಾಲೆಯ ಮುಂಭಾಗ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನಿಂದ 4 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆ

ಇಂದಿನಿಂದ 4 ದಿನ ಕರ್ನಾಟಕದಲ್ಲಿ ಭಾರೀ ಮಳೆ

ರಾಜ್ಯದ ಹಲವೆಡೆ ಮಾರ್ಚ್‌ 29 ರಿಂದ 4 ದಿನಗಳು ಮಳೆಯಾಗಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜೋರು ಮಳೆಯಾಗಲಿದ್ದು, 14 ಜಿಲ್ಲೆಗಳಿಗೆ ವಿವಿಧ ದಿನಗಳಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ.

Gubbi News: ವಿಜೃಂಭಣೆಯಿಂದ ಜರುಗಿದ ಶ್ರೀ ಬೇಟೆರಾಯಸ್ವಾಮಿ ಬ್ರಹ್ಮರಥೋತ್ಸವ

ವಿಜೃಂಭಣೆಯಿಂದ ಜರುಗಿದ ಶ್ರೀ ಬೇಟೆರಾಯಸ್ವಾಮಿ ಬ್ರಹ್ಮರಥೋತ್ಸವ

ಭಾನುವಾರ ಬೆಳಿಗ್ಗೆ ಅಭಿಷೇಕ, ಪ್ರಾಕಾರೋತ್ಸವ ನಡೆದು, ಸಂಜೆ ಸೀತಾಲಕ್ಷ್ಮಿ ಅಮ್ಮನವ ರಿಗೆ ವಿಶೇಷ ಅಲಂಕಾರ, ರಾತ್ರಿ ಶಯನೋತ್ಸವ ನಡೆಯಲಿದೆ. ಮಾ.30 ರಂದು ಬೆಳಿಗ್ಗೆ ಸುಪ್ರಭಾತ ಸೇವೆ, ಅವಭೃತ ಸ್ನಾನ, ವಸಂತ ಮಾಧವ ಪೂಜೆ ನಡೆಯಲಿದೆ. ಸಂಜೆ ಹನುಮಂತೋತ್ಸವ ಮೆರವಣಿಗೆ ನಡೆದು ನಂತರ ಧ್ವಜಾವರೋಹಣ ಸರ್ಕಾರಿ ಸೇವೆ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

MLA B.N.Ravikumar: ಸಂಸ್ಕೃತಿ ಹಾಗೂ ಧಾರ್ಮಿಕ ಮೌಲ್ಯಗಳ ಪ್ರತೀಕ ಶ್ರೀರಾಮನವಮಿ: ಶಾಸಕ ರವಿಕುಮಾರ್

ಸಂಸ್ಕೃತಿ ಹಾಗೂ ಧಾರ್ಮಿಕ ಮೌಲ್ಯಗಳ ಪ್ರತೀಕ ಶ್ರೀರಾಮನವಮಿ

ನಗರದ ಕೋಟೆ ವೃತ್ತದಲ್ಲಿರುವ ಪುರಾತನ ಹಾಗೂ ಪ್ರಾಣ ಪ್ರಸಿದ್ಧ ಶ್ರೀರಾಮ ದೇವಾಲಯ ದಲ್ಲಿ ಶ್ರೀರಾಮನವಮಿ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸ ಲಾಯಿತು. ಈ ಸಂದರ್ಭದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ದೇವಾಲಯಕ್ಕೆ ಭೇಟಿ ನೀಡಿ ಶ್ರೀರಾಮನ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Kolar News: ಅರಹಳ್ಳಿ ಸೊಸೈಟಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಗೆ ಭರ್ಜರಿ ಗೆಲುವು, ಕಾಂಗ್ರೆಸ್‌ ಶೂನ್ಯ ಸಾಧನೆ

ಅರಹಳ್ಳಿ ಸೊಸೈಟಿ ಚುನಾವಣೆ; ಎನ್‌ಡಿಎ ಮೈತ್ರಿಗೆ ಭರ್ಜರಿ ಗೆಲುವು

Kolar News: ಅರಹಳ್ಳಿ ಸೊಸೈಟಿ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಎಲ್ಲ 12 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಖಾತೆಯನ್ನೂ ತೆರೆಯದೆ ಹೀನಾಯ ಸೋಲನ್ನು ಕಂಡಿದೆ. ಈ ಕುರಿತ ವಿವರ ಇಲ್ಲಿದೆ.

Chikkaballapur News: ಒತ್ತಡರಹಿತ ಜೀವನಕ್ರಮ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳೇ ಆರೋಗ್ಯದ ಜೀವನಾಡಿಗಳು : ಡಿವೈಎಸ್ಪಿ ಪ್ರಕಾಶ್ ಸಲಹೆ

ನಿಯಮಿತ ದೈಹಿಕ ಚಟುವಟಿಕೆಗಳೇ ಆರೋಗ್ಯದ ಜೀವನಾಡಿಗಳು

ಆರೋಗ್ಯವೇ ಮಹಾಭಾಗ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಿಧ್ವಿನ್ ಆಸ್ಪತ್ರೆಯು ವಿಶ್ವ ಕಿಡ್ನಿ ದಿನದ ಹಾಗೂ ವಿಶ್ವ ಪ್ರಯೋಗಾಲಯ ದಿನಾಚರಣೆ ಅಂಗವಾಗಿ ವಿಶಿಷ್ಟ “ರನ್ ಫಾರ್ ಹೆಲ್ತ್” ಮ್ಯಾರಥಾನ್ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆರೋಗ್ಯವೊಂದಿದ್ದರೆ ಉಳಿದೆಲ್ಲವೂ ನಮ್ಮ ಕಾಲ ಬಳಿ ಬರಲಿವೆ ಎಂಬುದು ಅಹಂಕಾರದ ಮಾತಾದರೂ ಸತ್ಯವಾದ ಮಾತಾಗಿದೆ.

Gauribidanur News: ಮನುಷ್ಯನ ಆರೋಗ್ಯಕ್ಕೆ ನಡಿಗೆ ಬಹಳ ಮುಖ್ಯ: ಮಾನಸ ಅಸ್ಪತ್ರೆ ವೈದ್ಯ ಡಾ.ಶಶಿಧರ್ ಸಲಹೆ

ಮನುಷ್ಯನ ಆರೋಗ್ಯಕ್ಕೆ ನಡಿಗೆ ಬಹಳ ಮುಖ್ಯ

ಮುಂಜಾನೆ ನಡಿಗೆ ಇಂದ ಮನುಷ್ಯನಿಗೆ ಹೇರಳವಾದ ಡಿ ವಿಟಮಿನ್ ದೇಹಕ್ಕೆ ಸಿಗುತ್ತದೆ. ಕ್ರೀಡೆ ಗಳಿಂದಲು ಸಹಾ ದೇಹಕ್ಕೆ ಇದು ಲಭ್ಯವಾಗುತ್ತದೆ. ದಿನನಿತ್ಯ ಪೌಷ್ಟಿಕ ಆಹಾರ ಸೇವಿಸುವುದರ ಮುಖಾಂತರ ವಿದ್ಯಾರ್ಥಿಗಳು ಆರೋಗ್ಯಕರವಾದ ದೇಹವನ್ನು ಬೆಳೆಸಿಕೊಳ್ಳಬಹುದು. ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿ ದೆಸೆಯಲ್ಲಿ ಅಳವಡಿಸಿಕೊಳ್ಳಬೇಕು

IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ʼಫ್ರೀ ರೈಡ್‌ʼ ಆಫರ್‌ ನೀಡಿ ಅಭಿಮಾನ ಮೆರೆದ ಬೆಂಗಳೂರಿನ ಆಟೋ ಚಾಲಕ!

ಆರ್‌ಸಿಬಿ ಫ್ಯಾನ್ಸ್‌ಗೆ ʼಫ್ರೀ ರೈಡ್‌ʼ ಆಫರ್‌ ನೀಡಿದ ಆಟೋ ಚಾಲಕ!

RCB vs SRH: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಉದ್ಘಾಟನಾ ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರ್‌ಸಿಬಿ ಅಭಿಮಾನಿಗಳಿಗಾಗಿ ಆಟೋ ಚಾಲಕರೊಬ್ಬರು ಫ್ರೀ ರೈಡ್‌ ಆಫರ್‌ ನೀಡಿದ್ದು, ಈ ಕುರಿತ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಂಭ್ರಮ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ ಎಸ್‌ಡಿಎಂ ಖ್ಯಾತಿ: ಸತೀಶ್ ಕುಮಾರ್

SDM College: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ವಾತಾವರಣ ಕಲ್ಪಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಹೀಗಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿದ್ಯಾಸಂಸ್ಥೆಯ ಸಾಧನೆ ಪ್ರಶಂಸನೀಯ ಎಂದು ನಿಟ್ಟೆಯ ನಿವೃತ್ತ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.

Chikkaballapur News: ಸಮಸಮಾಜದ ಆಶಯಗಳಿಗೆ ಜೀವ ತುಂಬುವ ಮೌಲ್ಯಗಳೇ ಸಾಹಿತಿ ಸರಸಮ್ಮ ಕೃತಿಗಳ ಜೀವಾಳ : ಚಂದ್ರ ಶೇಖರ ನಂಗಲಿ ಅಭಿಮತ

ಸಮಾಜದ ಆಶಯಗಳಿಗೆ ಜೀವ ತುಂಬುವ ಮೌಲ್ಯಗಳೇ ಸರಸಮ್ಮ ಕೃತಿಗಳ ಜೀವಾಳ

ಸಾಹಿತಿ ಸರಸಮ್ಮ ಅವರ "ಮಾನವ ಬಂಧುತ್ವ" ಕಾದಂಬರಿ ಮುದ್ದಣ್ಣನ ರಾಮಾಶ್ವಮೇದ ಕೃತಿಯಲ್ಲಿರುವ ಬರುವ ಮನೋರಮೆಯರ ಸರಸ ಸಲ್ಲಾಪದ ಸಂದರ್ಭವನ್ನು ನೆನಪಿಗೆ ತರುವ ಕೃತಿಯಾಗಿದೆ. ಸಾಮಾನ್ಯದ ಚಿತ್ರಕ್ಕೆ ಸುವರ್ಣದ ಚೌಕಟ್ಟು ಎಂದು ಎಸ್.ವಿ.ರಂಗಣ್ಣ ಕರೆದಂತೆ, ಕಸದ ತೊಟ್ಟಿಯಲ್ಲಿ ಸಿಕ್ಕಿಕುವ ಮಗುವನ್ನು ಯಶೋಧ ತನ್ನದೆಂಬಂತೆೆ ಬೆಳೆಸುತ್ತಾಳೆ. ಸುಬ್ಬ ಲಕ್ಷ್ಮೀ ಮತ್ತು ಮೋಹನ್ ಅದಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ.

Chikkaballapur News: ಕೈಗಾರಿಕೆಗೆ ಭೂಮಿ ಕೊಡಲು ರೈತರು ಸಿದ್ಧ ಸರಕಾರ ಮುಂದಾಗುತ್ತಿಲ್ಲ: ಪ್ರತಿಭಟನಾಕಾರರ ಆಕ್ರೋಶ

ಕೈಗಾರಿಕೆಗೆ ಭೂಮಿ ಕೊಡಲು ರೈತರು ಸಿದ್ಧ ಸರಕಾರ ಮುಂದಾಗುತ್ತಿಲ್ಲ

ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ ಸರಕಾರ 2823 ಎಕೆರೆ ಭೂಮಿಯನ್ನು ಕೆಐಎಡಿಬಿಗೆ ಸ್ವಾದೀನಪಡಿಸಿಕೊಳ್ಳಲು 2024ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿ ಸಿತ್ತು. ಈ ಪೈಕಿ 730 ಎಕರೆ ಖರಾಬು, 539 ಎಕರೆ ಬೀಳು ಭೂಮಿ, 525 ಎಕರೆ ಪಿಎಸ್‌ಎಲ್ ಕಂಪನಿಗೆ ಸೇರಿದ ಭೂಮಿ ಒಟ್ಟು 1794 ಎಕರೆ ಭೂಮಿ ಈಗಾಗಲೇ ಸರಕಾರದ ವಶದಲ್ಲಿದೆ.

ಪ್ರವಾಸಿಗರಿಗೆ ಸೇವೆ ನೀಡಲು 'ಎಸೆನ್ಷಿಯಾ ರೆಸಾರ್ಟ್ ಮತ್ತು ಸ್ಪಾ' ಸಜ್ಜು

ಪ್ರವಾಸಿಗರಿಗೆ ಸೇವೆ ನೀಡಲು 'ಎಸೆನ್ಷಿಯಾ ರೆಸಾರ್ಟ್ ಮತ್ತು ಸ್ಪಾ' ಸಜ್ಜು

ಮಲೆನಾಡಿದ ಸಾಂಪ್ರದಾಯಿಕ ಆತಿಥ್ಯದೊಂದಿಗೆ ಸೇವೆ ನೀಡಲಿದೆ. ಉತ್ತರ ಕನ್ನಡದ ಹಸಿರು ಸಿರಿಯ ನಡುವೆ ನೆಲೆಸಿರುವ ಈ ತಾಣವು ಆರಾಮದಾಯಕ ಮತ್ತು ಸೊಗಸಾದ ವಾಸ್ತವ್ಯಕ್ಕೆ ಹೇಳಿ ಮಾಡಿಸಿದಂತಿದೆ. ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಬಯಸುವವರಿಗಾಗಿ ಇಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ 40 ಐಷಾರಾಮಿ ಕೊಠಡಿಗಳು ಮತ್ತು ಸೂಟ್‌ಗಳಿವೆ.

SSLC exam: ಹಿಂದಿ ಭಾಷೆ ಕಲಿಕೆಗೆ ವಿರೋಧವಿಲ್ಲ, ಆದರೆ ಪರೀಕ್ಷೆ ಕಡ್ಡಾಯ ಆಗಬಾರದು ಎಂದ ಸಿಎಂ

ಹಿಂದಿ ಕಲಿಕೆಗೆ ವಿರೋಧವಿಲ್ಲ, ಆದರೆ ಪರೀಕ್ಷೆ ಕಡ್ಡಾಯ ಆಗಬಾರದು: ಸಿಎಂ

Third Language In SSLC Exam: ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಬಗ್ಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ತೃತೀಯ ಭಾಷೆ ಹಿಂದಿ ವಿಷಯವನ್ನು ಕಡ್ಡಾಯ ಮಾಡಬಾರದು ಎಂದು ತೀರ್ಮಾನಿಸಿದ್ದೇವೆ. ಈ ನಿಯಮ ಈ ವರ್ಷದಿಂದಲೇ ಜಾರಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

Loading...