ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka temples: ದೇವಾಲಯಗಳಲ್ಲಿ ಅನಾಹುತ ತಪ್ಪಿಸಲು ಕಾರ್ಯಪಡೆ ರಚನೆ: ಆಯೋಗ ಶಿಫಾರಸು

ದೇವಸ್ಥಾನದಲ್ಲಿ ಉಂಟಾಗಬಹುದಾದ ತುರ್ತು ಪರಿಸ್ಥಿತಿಗಳಾದ ಅಗ್ನಿ ಅವಘಡಗಳು, ವೈದ್ಯಕೀಯ ಬಿಕ್ಕಟ್ಟುಗಳು, ಕಾಲ್ತುಳಿತದಂತಹ ಅನೇಕ ಅವಘಡಗಳನ್ನು ತಪ್ಪಿಸುವ ಹೊಣೆ ಹೊರುವ ಕಾರ್ಯಪಡೆ ದೇವಾಲಯದ ದಕ್ಷ ನಿರ್ವಹಣೆಗೆ ಉತ್ತೇಜನ ನೀಡಲಿದೆ. ಟಿಕೆಟ್ ಕೌಂಟರ್‌ಗಳು, ಭಕ್ತಾದಿಗಳ ಸರದಿ ಸಾಲುಗಳು ಮತ್ತು ಪ್ರಸಾದ ವಿತರಣೆಗೆ ವ್ಯವಸ್ಥಿತ ಸರದಿಗಳ ನಿರ್ವಹಣೆಯನ್ನೂ ಖಾತರಿಪಡಿಸಲಿದೆ.

ದೇವಾಲಯಗಳಲ್ಲಿ ಅನಾಹುತ ತಪ್ಪಿಸಲು ಕಾರ್ಯಪಡೆ ರಚನೆ: ಆಯೋಗ ಶಿಫಾರಸು

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 23, 2025 3:27 PM

ಬೆಂಗಳೂರು: ಕಾಲ್ತುಳಿತ, ಬೆಂಕಿಯಂತಹ ತ್ವರಿತ ಸಮಸ್ಯೆಗಳನ್ನು ನಿಯಂತ್ರಿಸುವ ಕುರಿತು ತರಬೇತಿ ನೀಡುವ ಸಲುವಾಗಿ ದೇವಾಲಯಗಳಲ್ಲಿ (Karnataka temples) ಕಾರ್ಯಪಡೆ (Task force) ರಚಿಸುವ ಬಗ್ಗೆ ಶಾಸಕ ಆರ್‌ ವಿ ದೇಶಪಾಂಡೆ (RV Deshpande) ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ – 2 ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ತನ್ನ ಎಂಟನೇ ಶಿಫಾರಸು ವರದಿಯನ್ನು ಒಪ್ಪಿಸಿದೆ. ದೇವಸ್ಥಾನದಲ್ಲಿ ಉಂಟಾಗುವ ತುರ್ತು ಪರಿಸ್ಥಿತಿಗಳಾದಂತಹ ಅಗ್ನಿ ಅವಘಡಗಳು, ವೈದ್ಯಕೀಯ ಬಿಕ್ಕಟ್ಟುಗಳು, ಕಾಲ್ತುಳಿತದಂತಹ ಅನೇಕ ಅವಘಡಗಳನ್ನು ತಪ್ಪಿಸುವ ಹೊಣೆ ಹೊರುವ ಕಾರ್ಯಪಡೆ ದೇವಾಲಯದ ದಕ್ಷ ನಿರ್ವಹಣೆಗೆ ಉತ್ತೇಜನ ನೀಡಲಿದೆ. ಟಿಕೆಟ್ ಕೌಂಟರ್‌ಗಳು, ಭಕ್ತಾದಿಗಳ ಸರದಿ ಸಾಲುಗಳು ಮತ್ತು ಪ್ರಸಾದ ವಿತರಣೆಗೆ ವ್ಯವಸ್ಥಿತ ಸರದಿಗಳನ್ನು ನಿರ್ವಹಿಸುವುದನ್ನು ಖಾತರಿಪಡಿಸಲಿದೆ ಎಂದು ಆಯೋಗ ತಿಳಿಸಿದೆ.

ದೇವಸ್ಥಾನದ ಪ್ರವೇಶ ಕೇಂದ್ರಗಳಲ್ಲಿ ಉಂಟಾಗುವ ಜನದಟ್ಟಣೆಯನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸುವುದು, ಪ್ರೋಟೋಕಾಲ್‌ನಂತಹ ನೂತನ ಕ್ರಮವನ್ನು ಜಾರಿಗೆ ತರಲಿದೆ. ತುರ್ತು ಪ್ರತಿಕ್ರಿಯೆ ಯೋಜನೆಯನ್ನು ರಚಿಸಲು ಇದು ಸ್ಥಳೀಯ ಅಧಿಕಾರಿಗಳು, ವೈದ್ಯಕೀಯ ಸೇವೆಗಳು ಮತ್ತು ಅಗ್ನಿಶಾಮಕ ಸುರಕ್ಷತಾ ಸಿಬ್ಬಂದಿಯೊಂದಿಗೆ ಒಟ್ಟಾಗಿ ಕೆಲಸ ಮಾಡಲಿದೆ. ದೇವಸ್ಥಾನದ ಪ್ರಮುಖ ಕಾರ್ಯಕ್ರಮಗಳಲ್ಲಿ ಏನಾದರೂ ಅವಘಡಗಳು ಸಂಭವಿಸಿ ಭಕ್ತಾದಿಗಳಿಗೆ ತೊಂದರೆಯಾದರೆ ಬಗೆಹರಿಸಲು ತಾತ್ಕಾಲಿಕ ವೈದ್ಯಕೀಯ ಬೂತ್‌ಗಳನ್ನು ಸ್ಥಾಪಿಸುವುದು, ದೇವಾಲಯದ ಒಳಗೆ ಮತ್ತು ಸುತ್ತಮುತ್ತ ಭದ್ರತಾ ಉಪಸ್ಥಿತಿಯನ್ನು ಹೆಚ್ಚಿಸಲು ಶಿಫಾರಸು ಮಾಡಿದೆ.

ಭಕ್ತಾದಿಗಳ ಸರದಿ ವ್ಯವಸ್ಥೆ, ಪ್ರವೇಶ ಮತ್ತು ನಿರ್ಗಮನ ಸ್ಥಳ, ಸುರಕ್ಷತಾ ಪ್ರೋಟೋಕಾಲ್‌ಗಳು ಮತ್ತು ದೇವಾಲಯದ ಸಮಯ ಅಥವಾ ಕಾರ್ಯವಿಧಾನಗಳಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ಭಕ್ತರಿಗೆ ತಿಳಿಸಲು ಕಾರ್ಯಪಡೆ ಸ್ಪಷ್ಟ ಸೂಚನಾ ಫಲಕಗಳು, ಧ್ವನಿವರ್ಧಕಗಳು ಮತ್ತು ಇತರ ಸಂವಹನ ಸಾಧನಗಳನ್ನು ಬಳಸಲಿದೆ. ಇವೆಲ್ಲವಕ್ಕೆ ಪೂರಕವಾಗಿ , ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ನಿಯಮಗಳಿಗೆ ಸೂಕ್ತ ನಿಬಂಧನೆಗಳನ್ನು ತಿದ್ದುಪಡಿ ಮಾಡಬಹುದು ಎಂದು ಆಯೋಗ ಶಿಫಾರಸು ಮಾಡಿದೆ.

ಇದನ್ನೂ ಓದಿ: ಶಾಕಿಂಗ್‌: ತಿರುಮಲ ದೇವಸ್ಥಾನದ ಬಳಿ ಮುಸ್ಲಿಂ ವ್ಯಕ್ತಿಯಿಂದ ನಮಾಜ್‌; ವಿವಾದ ಸೃಷ್ಟಿಸಿದ ವೈರಲ್‌ ವಿಡಿಯೊ ಇಲ್ಲಿದೆ