ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಪೂಜಾ-ಕಿಶನ್ ಎಂಗೇಜ್ಮೆಂಟ್​ಗೆ ಮತ್ತೊಂದು ಸಂಕಷ್ಟ: ಹೊಸ ಪಾತ್ರಧಾರಿ ಎಂಟ್ರಿ

ಪೂಜಾ-ಕಿಶನ್ ಎಂಗೇಜ್ಮೆಂಟ್ ತಡೆಯಲು ಕನ್ನಿಕಾ-ಆದೀ ಮಾಡಿದ ಮಾಸ್ಟರ್ ಪ್ಲ್ಯಾನ್ ರಾಮ್ದಾಸ್ಗೆ ಗೊತ್ತಾಗಿ ಫ್ಲಾಫ್ ಆಗಿದೆ. ಬಳಿಕ ಎಂಗೇಜ್ಮೆಂಟ್ ದಿನ ಇನ್ನೇನು ಉಂಗುರ ಬದಲಾಯಿಸಬೇಕು ಎನ್ನುವಷ್ಟರಲ್ಲಿ ಮತ್ತೊಂದು ಹೊಸ ಪಾತ್ರ ಎಂಟ್ರಿ ಆಗಿದ್ದು, ಈ ಎಂಗೇಜ್ಮೆಂಟ್ ನಡೆಯಲ್ಲ ಎಂದು ಹೇಳಿದ್ದಾರೆ.

ಪೂಜಾ-ಕಿಶನ್ ಎಂಗೇಜ್ಮೆಂಟ್​ಗೆ ಮತ್ತೊಂದು ಸಂಕಷ್ಟ

Bhagya Lakshmi Serial

Profile Vinay Bhat Jun 17, 2025 12:04 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಎಂಗೇಜ್ಮೆಂಟ್ ಸಂಭ್ರಮ ಜೋರಾಗಿ ನಡೆಯುತ್ತಿದೆ. ಆದರೆ, ಆದೀಶ್ವರ್ ಮತ್ತು ಕನ್ನಿಕಾ ಈ ಎಂಗೇಜ್ಮೆಂಟ್ ಯಾವುದೇ ಕಾರಣಕ್ಕೂ ಆಗಬಾರದು ಎಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಮ್​ದಾಸ್ ಕಾಮತ್ ಈ ನಿಶ್ಚಿತಾರ್ಥ- ಮದುವೆ ಎಲ್ಲ ನಡೆದೇ ನಡೆಯುತ್ತದೆ ಎಂದು ಭಾಗ್ಯ ಫ್ಯಾಮಿಲಿಗೆ ಹೇಳಿದ್ದಾರೆ. ಪೂಜಾ-ಕಿಶನ್ ಎಂಗೇಜ್ಮೆಂಟ್ ತಡೆಯಲು ಕನ್ನಿಕಾ-ಆದೀ ಮಾಡಿದ ಮಾಸ್ಟರ್ ಪ್ಲ್ಯಾನ್ ರಾಮ್​ದಾಸ್​ಗೆ ಗೊತ್ತಾಗಿ ಫ್ಲಾಫ್ ಆಗಿದೆ. ಬಳಿಕ ಎಂಗೇಜ್ಮೆಂಟ್ ದಿನ ಇನ್ನೇನು ಉಂಗುರ ಬದಲಾಯಿಸಬೇಕು ಎನ್ನುವಷ್ಟರಲ್ಲಿ ಮತ್ತೊಂದು ಹೊಸ ಪಾತ್ರ ಎಂಟ್ರಿ ಆಗಿದ್ದು, ಈ ಎಂಗೇಜ್ಮೆಂಟ್ ನಡೆಯಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಪೂಜಾಗೆ ಎಂಗೇಜ್ಮೆಂಟ್​ಗೆ ಉಡಲು ಸೀರೆ ಕೊಡಲು ರಾಮ್​ದಾಸ್ ಅವರು ಆದೀ ಮತ್ತು ಕನ್ನಿಕಾಳನ್ನು ಭಾಗ್ಯ ಮನೆಗೆ ಕಳುಹಿಸಿದ್ದರು. ಈ ಸಂದರ್ಭ ಕನ್ನಿಕಾ, ಈ ಎಂಗೇಜ್ಮೆಂಟ್ ಅದ್ಧೂರಿಯಾಗಿ- ಗ್ರ್ಯಾಂಡ್ ಆಗಿ ನಡಿಬೇಕು.. 3-4 ಲಕ್ಷದ ಹೂವಿನ ಅಲಂಕರಾ ಮಾಡಬೇಕು.. 5 ಸ್ಟಾರ್ ಹೋಟೆಲ್​ನ ಫುಡ್ ಬೇಕು.. ಚೈನೀಸ್, ನಾರ್ಥ್ ಹೀಗೆ ಎಲ್ಲ ವೆರೈಟಿ ಫುಡ್ ಇರಬೇಕು, ದೊಡ್ಡ ಹಾಲ್-ಎಸಿ ಎಲ್ಲ ಇರಬೇಕು.. ನಮ್ಮದು ರಿಚ್ ಫ್ಯಾಮಿಲಿ.. ನಮ್ಮ ಮರಿಯಾದೆ ಕಳೆಯೋ ರೀತಿ ಮಾಡಬೇಡಿ ಎಂದು ಹೇಳಿದ್ದಾಳೆ. ಇದನ್ನೆಲ್ಲ ಕೇಳಿ ಭಾಗ್ಯ ಮನೆಯವರಿಗೆ ಆಘಾತ ಆಗುತ್ತದೆ. ಅಷ್ಟೊಂದು ದುಡ್ಡು ಎಲ್ಲಿಂದ ತರೋದು ಎಂಬ ಭಯ ಶುರುವಾಗುತ್ತದೆ.

ಇದನ್ನೆಲ್ಲ ಕೇಳಿ ಭಾಗ್ಯ ಅಪ್ಪ ಹಾಗೂ ಪೂಜಾ ಈ ಎಂಗೇಜ್ಮೆಂಟ್ ಆಗೋದು ಕಷ್ಟ.. ನಮ್ಮಲ್ಲಿ ಅಷ್ಟೊಂದು ಹಣವಿಲ್ಲ ಎಂದು ರಾಮ್​ದಾಸ್ ಮನೆಗೆ ಹೋಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕನ್ನಿಕಾ ಇಷ್ಟೆಲ್ಲ ಹಣ ಖರ್ಚು ಮಾಡಿ ಎಂದು ಹೇಳಿದ್ದಾರೆ.. ಅದೆಲ್ಲ ನಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನ ಕೇಳಿ ರಾಮ್​ದಾಸ್​ಗೆ ಕನ್ನಿಕಾ-ಆದೀ ಮೇಲೆ ಕೋಪ ಬರುತ್ತದೆ. ಭಾಗ್ಯ ತಂದೆ ಬಳಿ ರಾಮ್​ದಾಸ್ ಕೈ ಮುಗಿದು ಕ್ಷಮೆ ಕೇಳುತ್ತಾರೆ. ಇಂತ ಕೆಲಸ ಮಾಡ್ತಾರೆ ಅಂತ ಗೊತ್ತಿದ್ರೆ ನಾನು ಇವರನ್ನ ನಿಮ್ಮಲ್ಲಿಗೆ ಕಳಿಸ್ತನೆ ಇರಲಿಲ್ಲ. ನನಗೆ ಎಂಗೇಜ್ಮೆಂಟ್ ಗ್ರ್ಯಾಂಡ್ ಆಗಿ ಆಗಬೇಕು ಅತ ಯಾವ ನಿರೀಕ್ಷೆಯೂ ಇಲ್ಲ.. ಎಷ್ಟು ಸರಳವಾಗಿ ಆಗುತ್ತೊ ಅಷ್ಟು ಸರಳವಾಗಿ ಮಾಡಿ.. ನನ್ನ ಹತ್ರ ಇರೋದು ದುಡ್ಡು-ಕಾಸು ಅಷ್ಟೆ, ನಿಮ್ಮ ಮನೆಯಲ್ಲಿ ಭಾಗ್ಯಾ-ಪೂಜಾ ರಂತಹ ಬಂಗಾರದ ಮಕ್ಕಳಿದ್ದಾರೆ.. ನನಗೆ ಇನ್ನೊಬ್ಬರಿ ಹಿಂಸೆ ಕೊಡುವಂತಹ ಮಕ್ಕಳಿದ್ದಾರೆ ಎಂದು ಹೇಳಿದ್ದಾರೆ.



ಇದಾದ ಬಳಿಕ ಭಾಗ್ಯ ಮನೆಯಲ್ಲಿ ಎಂಗೇಜ್ಮೆಂಟ್ ಕಲರವ ಶುರುವಾಗಿದೆ. ಪೂಜಾ ಎಂಗೇಜ್ಮೆಂಟ್ ದಿನ ಗ್ರ್ಯಾಂಡ್ ಆಗಿ ರೆಡಿಯಾಗಿದ್ದಾಳೆ. ಕಿಶನ್ ಕೂಡ ಮುದ್ದಾಗಿ ಕಾಣಿಸುತ್ತಿದ್ದಾರೆ. ಆದರೆ, ಅತ್ತ ಆದೀ ಮತ್ತು ಕನ್ನಿಕಾ ಈ ಎಂಗೇಜ್ಮೆಂಟ್ ನಿಲ್ಲಿಸಲು ಏನಾದರು ಮಾಡಬೇಕು ಎಂದು ತಮ್ಮ ಪ್ಲ್ಯಾನ್ ಅನ್ನು ಮುಂದೆವರೆಸಿದ್ದಾರೆ. ಪೂಜಾ ಕಿಶನ್ ಹಾರ ಬದಲಾಯಿಸಿ ಇನ್ನೇನು ಉಂಗುರ ಹಾಕಬೇಕು ಎನ್ನುವಷ್ಟರಲ್ಲಿ ಹೊಸ ಪಾತ್ರಧಾರಿ ಎಂಟ್ರಿ ಆಗಿದೆ. ಇವರನ್ನು ಕನ್ನಿಕಾ ಅತ್ತೆ ಎಂದು ಕರೆದಿದ್ದು, ಆದೀ-ಪೂಜಾ ಮದುವೆ ಆದ್ರೆ ನಮ್ಮ ಫ್ಯಾಮಿಲಿ ಡಿವೈಡ್ ಆಗುತ್ತೆ ಎಂದು ಆದೀ ಇವರ ಬಳಿ ಹೇಳಿದ್ದಾನೆ.

ಸದ್ಯ ಈ ಹೊಸ ಪಾತ್ರಧಾರಿ ಯಾರು?, ಪೂಜಾ-ಕಿಶನ್ ಎಂಗೇಜ್ಮೆಂಟ್ ನಿಲ್ಲುತ್ತ?, ರಾಮ್​ದಾಸ್ ಹಾಗೂ ಭಾಗ್ಯ ಈಗ ಏನು ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದ್ದು, ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Karna Serial: ಕರ್ಣ ಧಾರಾವಾಹಿಗೆ ಸ್ಟೇ ಆರ್ಡರ್: ಭವ್ಯಾ ಗೌಡಾಗೆ ಎದುರಾಯ್ತು ಸಂಕಷ್ಟ