ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆಲ್ಲಲು ಭಾರತ ತಂಡಕ್ಕೆ ಅವಕಾಶವಿದೆ ಎಂದ ಮೈಕಲ್ ಕ್ಲಾರ್ಕ್!
IND vs ENG Test series: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜೂನ್ 20ರಂದು ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿವೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಭಮನ್ ಗಿಲ್ ನಾಯಕತ್ವದ ತಂಡ ಈ ಬಾರಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ.

ಇಂಗ್ಲೆಂಡ್ ಟೆಸ್ಟ್ ಸರಣಿ ಗೆಲ್ಲುವಷ್ಟು ಸಾಮರ್ಥ್ಯ ಭಾರತ ತಂಡಕ್ಕಿದೆ ಎಂದ ಮೈಕಲ್ ಕ್ಲಾರ್ಕ್

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳು (IND vs ENG) ಜೂನ್ 20ರಂದು ಐದು ಪಂದ್ಯುಗಳ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿವೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶುಭಮನ್ ಗಿಲ್ (Shubman Gill) ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್ನಲ್ಲಿ ಕಠಿಣ ಸವಾಲು ಎದುರಿಸಲಿದೆ. ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಕೆಎಲ್ ರಾಹುಲ್ ಬಿಟ್ಟರೆ ಇನ್ನುಳಿದ ಎಲ್ಲಾ ಆಟಗಾರರು ಯುವಕರು ಹಾಗೂ ಇಂಗ್ಲೆಂಡ್ನಲ್ಲಿ ಆಡಿದ ಅನುಭವ ಇಲ್ಲ. ಈ ಕಾರಣದಿಂದಲೇ ಭಾರತ ತಂಡಕ್ಕೆ ಈ ಸರಣಿಯಲ್ಲಿ ಕಠಿಣ ಸವಾಲು ಎದುರಾಗಲಿದೆ. ಆದರೂ ಈ ಟೆಸ್ಟ್ ಸರಣಿಯನ್ನು ಗೆಲ್ಲಲು ಭಾರತ ತಂಡಕ್ಕೆ ಸಾಮರ್ಥ್ಯವಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ (Michael Clarke) ಭವಿಷ್ಯ ನುಡಿದಿದ್ದಾರೆ.
ಜೂನ್ 20 ರಂದು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲನೇ ಟೆಸ್ಟ್ ಪಂದ್ಯ ಲೀಡ್ಸ್ನ ಹೆಡಿಗ್ಲೆಯಲ್ಲಿ ನಡೆಯಲಿದೆ. ರೆವ್ಸ್ಪೋರ್ಟ್ಸ್ ಜೊತೆ ಮಾತನಾಡಿದ ಮೈಕಲ್ ಕ್ಲಾರ್ಕ್, "ಹೌದು, ನಾನು ಅವರಿಗೆ ಒಂದು ಅವಕಾಶ ನೀಡುತ್ತೇನೆ. ಆದರೆ ಅದು ಇಂಗ್ಲೆಂಡ್ಗೆ ವಿಮಾನದಲ್ಲಿ ಹೋಗಬೇಕೆಂದು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಅನನುಭವಿ ತಂಡವಾಗಿದೆ. ರೋಹಿತ್ ಶರ್ಮಾ ಇಲ್ಲದೆ, ವಿರಾಟ್ ಕೊಹ್ಲಿ ಇಲ್ಲದೆ ಇರುವುದು ದೊಡ್ಡ ವಿಷಯ. ಆಟಗಾರರು ಬರುತ್ತಾರೆ, ಆಟಗಾರರು ಹೋಗುತ್ತಾರೆ, ನಿವೃತ್ತರಾಗುತ್ತಾರೆ ಮತ್ತು ಆಟ ಮುಂದುವರಿಯುತ್ತದೆ. ಆದ್ದರಿಂದ, ಹೊಸ ನಾಯಕ ಭಾರತಕ್ಕೆ ಕೆಟ್ಟ ವಿಷಯ ಎಂದು ಅರ್ಥವಲ್ಲ. ನಾನು ಇದನ್ನು ಹೇಳುತ್ತಿಲ್ಲ. ಒಬ್ಬರು ನಿವೃತ್ತಿ ಪಡೆದರೆ, ಅವರ ಸ್ಥಾನವನ್ನು ಬೇರೊಬ್ಬ ಆಟಗಾರ ತುಂಬುತ್ತಾರೆ," ಎಂದು ಹೇಳಿದ್ದಾರೆ.
IND vs ENG: ಮೊದಲ ಟೆಸ್ಟ್ ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ಗೆ ಕೋಚಿಂಗ್ ಜವಾಬ್ದಾರಿ?
ಭಾರತ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ
"ನನ್ನ ಪಾಲಿಗೆ ದೊಡ್ಡ ವಿಷಯ ಏನೆಂದರೆ, ಭಾರತ ತಂಡದ ಬೌಲಿಂಗ್ ದಾಳಿ. ಜಸ್ಪ್ರೀತ್ ಬುಮ್ರಾ ಮೂರು ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆಂದು ನಮೆಲ್ಲರಿಗೂ ಅರಿವಿದೆ. ಯಾವ ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ? ಇವರು ಆರಂಭಿಕ ಮೂರು ಪಂದ್ಯಗಳನ್ನು ಆಡಲಿದ್ದಾರಾ? ನೀವು ಆರಂಭಿಕ ಮೂರು ಪಂದ್ಯಗಳನ್ನು ಗೆದ್ದರೆ ಕೊನೆಯ ಎರಡು ಪಂದ್ಯಗಳು ದೊಡ್ಡ ವಿಷಯವಾಗುವುದಿಲ್ಲ. ಇದು ನಡೆಯಲಿದೆ ಎಂದು ನಾನು ನಂಬುವುದಿಲ್ಲ. ಅವರನ್ನು ಸನ್ನಿವೇಶಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು," ಎಂದು ಆಸೀಸ್ ಮಾಜಿ ನಾಯಕ ತಿಳಿಸಿದ್ದಾರೆ.
"ಮತ್ತೊಂದು ಕಡೆ ಭಾರತ ತಂಡದಲ್ಲಿ ಮೊಹಮ್ಮದ್ ಶಮಿ ಕೂಡ ಇಲ್ಲ. ಆಸ್ಟ್ರೇಲಿಯಾ ಸರಣಿಯಲ್ಲಿ ಇವರು ಆಡಿರಲಿಲ್ಲ ಹಾಗೂ ಇದು ಭಾರತಕ್ಕೆ ದೊಡ್ಡ ಹಿನ್ನಡೆಯನ್ನು ತಂದೊಡ್ಡಿತ್ತು. ಅವರು ಆಗ ಸಂಪೂರ್ಣ ಫಿಟ್ ಆಗಿದ್ದರೆ, ಬುಮ್ರಾ ಹಾಗೂ ಶಮಿ ಇಬ್ಬರೂ ಜೊತೆಯಲ್ಲಿ ಆಡಿದ್ದರೆ, ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಆದರೆ, ಭಾರತ ತಂಡದಲ್ಲಿ ಅಪಾರ ಪ್ರತಿಭೆಗಳಿದ್ದಾರೆ. ಪ್ರತಿಭೆಯ ಆಧಾರದ ಮೇಲೆ ಹೇಳುವುದಾದರೆ, ಭಾರತ ತಂಡ ಉತ್ತಮ ಕೈಗಳಲ್ಲಿದೆ. ಅದರಂತೆ ಈ ಸರಣಿಯಲ್ಲಿ ಕೆಲ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಎದುರು ನೋಡುತ್ತಿದ್ದಾರೆ. ಇಂಗ್ಲೆಂಡ್ನಲ್ಲಿ ಐದು ಟೆಸ್ಟ್ ಪಂದ್ಯಗಳು ಇರುವುದು ಸಾಕು. ಇಲ್ಲಿನ ಕ್ರಿಕೆಟ್ ಕಠಿಣವಾಗಿರಲಿದೆ. ಇದರ ಬಗ್ಗೆ ಅವರು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ," ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.
IND vs ENG: ಕೆಎಲ್ ರಾಹುಲ್ ಬೇಡ, ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಲಿ ಎಂದ ಬ್ರಾಡ್ ಹಾಗ್!
ಭಾರತ ತಂಡದಲ್ಲಿ ಹೊಸ ಪ್ರತಿಭೆಗಳು
ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್ ಹಾಗೂ ಯಶಸ್ವಿ ಜೈಸ್ವಾಲ್ ಇದ್ದಾರೆ. ಇದರಲ್ಲಿ ಕೆಲ ಆಟಗಾರರು ಭಾರತದ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಪ್ರಸಿಧ್ ಕೃಷ್ಣ, ಆಕಾಶ ದೀಪ್ ಹಾಗೂ ಅರ್ಷದೀಪ್ ಸಿಂಗ್ ಅವರು ವೇಗದ ಬೌಲಿಂಗ್ ಮೂಲಕ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಎದುರು ಪರೀಕ್ಷೆಗೆ ಒಳಗಾಗಲಿದ್ದಾರೆ. ಇವರ ಜೊತೆಗೆ ಜಸ್ಪ್ರೀತ್ ಬುಮ್ರಾ ಕೂಡ ಇರಲಿದ್ದಾರೆ. ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಇದ್ದಾರೆ.
ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕೆ ಅವಕಾಶವಿದೆ
"ಇದು ತುಂಬಾ ಒಳ್ಳೆಯ ಬೌಲಿಂಗ್ ದಾಳಿ. ಭಾರತ ತಂಡದಲ್ಲಿ ಸರಣಿ ಗೆಲ್ಲಲು ಸಾಕಷ್ಟು ಪ್ರತಿಭೆ ಇದೆ ಎಂದು ನಾನು ಭಾವಿಸುತ್ತೇನೆ. ಅದು ಕೇವಲ ಅನುಭವ. ಭಾರತದಲ್ಲಿ ಆಡುವುದು ಮತ್ತು ಇಂಗ್ಲೆಂಡ್ನಲ್ಲಿ ಟೆಸ್ಟ್ ಪಂದ್ಯವನ್ನು ಆಡುವುದು ಎರಡು ಕಠಿಣ ಕೆಲಸಗಳು ಎಂದು ನಾನು ಅಂದೇ ಕಂಡುಕೊಂಡೆ. ಇವು ಎರಡು ದೊಡ್ಡ ಸರಣಿಗಳು, ಆದರೆ ಗೆಲ್ಲಲು ಈ ಎರಡು ಸ್ಥಳಗಳು ಕಠಿಣವಾಗಿವೆ. ನಿಮಗೆ ಆತ್ಮವಿಶ್ವಾಸದ ಅಗತ್ಯವಿರುವ ಸ್ಥಳಗಳಲ್ಲಿ ಇಂಗ್ಲೆಂಡ್ ಕೂಡ ಒಂದಾಗಿದೆ. ಇಲ್ಲಿ ಆಡಬೇಕೆಂದರೆ ನಿಮಗೆ ಆತ್ಮವಿಶ್ವಾಸ ಬೇಕು, ನೀವು ಕಠಿಣ ಸನ್ನಿವೇಶದಲ್ಲಿ ಉತ್ತಮವಾಗಿ ಆಡಬೇಕೆಂದರೆ ನಿಮಗೆ ಆತ್ಮ ವಿಶ್ವಾಸದ ಅಗತ್ಯವಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಹಲವು ಆಟಗಾರರು ಮೊದಲ ಬಾರಿ ಆಡಲಿದ್ದಾರೆ. ಇದರರ್ಥ ನೀವು ಇಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದರ್ಥವಲ್ಲ. ಇದರ ಸಕಾರಾತ್ಮಕ ಅಂಶವೇನೆಂದರೆ ನೀವು ಯಾವುದೇ ಆತಂಕವಿಲ್ಲದೆ ಆಡುವುದಾಗಿದೆ," ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.