ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Shidlaghatta Municipal Commissioner Amrutha: ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ನಟೋರಿಯಸ್‌ ಕ್ರಿಮಿನಲ್‌, 16 ಪ್ರಕರಣಗಳು ಇದೆ, ಶೀಘ್ರವೇ ಬಂಧನ: ಎಸ್ಪಿ ಕುಶಲ್ ಚೌಕ್ಸೆ

ರಾಜೀವ್‌ ಗೌಡ ಶೀಘ್ರವೇ ಬಂಧನ: ಎಸ್ಪಿ ಕುಶಲ್ ಚೌಕ್ಸೆ

ಜನವರಿ 14 ರಂದು ರಾಜೀವ್ ಗೌಡ ವಿರುದ್ದ ಶಿಡ್ಲಘಟ್ಟ ನಗರ ಪೋಲಿಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿ ಎಫ್ಐಆರ್ ಆಗಿದೆ. ಅಂದಿನಿಂದ ಆತನಿಗಾಗಿ ಯಾವುದೇ ರಾಜಕೀಯ ಒತ್ತವಿಲ್ಲದೇ ಹಗಲು ರಾತ್ರಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲಿ ಪೊಲೀಸರ ಕಾರ್ಯಾ ಚರಣೆ ನಡೆಸಿ ಹುಡುಕಾಡು ತ್ತಿದ್ದೇವೆ.

Shidlaghatta News: ಸೂರಿಲ್ಲದ ಬಡವರಿಗೆ ಮನೆ ಒದಗಿಸುವಲ್ಲಿ ಸರ್ಕಾರಗಳು ವಿಫಲ: ಮಾನವ ಹಕ್ಕುಗಳ ಕಮಿಟಿ ಮುಂದಾಳತ್ವ ಸಿ.ಎಂ.ಬೈರೇಗೌಡ ಹೇಳಿಕೆ

ಸೂರಿಲ್ಲದ ಬಡವರಿಗೆ ಮನೆ ಒದಗಿಸುವಲ್ಲಿ ಸರ್ಕಾರಗಳು ವಿಫಲ

ತಾಲ್ಲೂಕಿನ ಚೀಮನಹಳ್ಳಿ ಸಿ ಎಂ ಬೈರೇಗೌಡರ ತೋಟದಲ್ಲಿ ನಡೆದ ಮಾನವ ಹಕ್ಕುಗಳ ಕಮಿಟಿ ವತಿಯಿಂದ ಬಡವರಿಗೆ ಮನೆ ನಿರ್ಮಾಣಕ್ಕಾಗಿ ಸಿಮೆಂಟ್ ಬ್ರಿಕ್ಸ್ ಮಿಷನರಿಗಳು ಪೂಜಾ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಇದುವರೆಗೆ ಯಾವುದೇ ಸಮಾಜ ಸೇವಕರು ಕೈ ಹಾಕದ ಮಹತ್ವದ ಕಾರ್ಯಕ್ಕೆ ಮಾನವ ಹಕ್ಕುಗಳ ಕಮಿಟಿ ಮುಂದಾಗಿದ್ದು, ಜಿಲ್ಲಾದ್ಯಂತ ಹತ್ತು ಸಾವಿರ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ

Tax Collection: ತೆರಿಗೆ ಸಂಗ್ರಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ

ತೆರಿಗೆ ಸಂಗ್ರಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ

ಚಿಕ್ಕಬಳ್ಳಾಪುರ ತಾಲ್ಲೂಕು ತೆರಿಗೆ ಸಂಗ್ರಹದಲ್ಲಿ ಶೇಕಡಾ 97.82% ರಷ್ಟು ಪ್ರಗತಿ ಸಾಧಿಸಿ ಪ್ರಥಮ ಸ್ಥಾನದಲ್ಲಿದ್ದರೆ. ಚಿಂತಾಮಣಿ ತಾಲ್ಲೂಕು ಶೇಕಡಾ 96.72%, ಗೌರಿಬಿದನೂರು ತಾಲ್ಲೂಕು ಶೇಕಡಾ 93.71% ಪ್ರಗತಿಯೊಂದಿಗೆ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ. ಗುಡಿಬಂಡೆ-93.65%, ಶಿಡ್ಲಘಟ್ಟ-93.39%, ಮಂಚೇನಹಳ್ಳಿ-92.88%, ಚೇಳೂರ-92.68% ಮತ್ತು ಬಾಗೇಪಲ್ಲಿ ತಾಲ್ಲೂಕು ಗಳು-92.40 % ತೆರಿಗೆ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಿವೆ.

Chimul Election: ಚಿಮೂಲ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಚಿಮೂಲ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಕಳೆದ ಎರಡು ದಶಕಗಳಿಂದ  ಕಾರ್ಯಕರ್ತೆಯಾಗಿ ಪಕ್ಷದ ಸಂಘಟನೆಗಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಈ ಹಿಂದೆ ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷೆಯಾಗಿದ್ದಾಗ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಪಕ್ಷದ ಕಾರ್ಯಕರ್ತರು ಹಾಗೂ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಒತ್ತಾಯದಿಂದ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ

Chimul Election: ಜಿಲ್ಲಾ ಹಾಲು ಸಹಕಾರ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ 44 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ

ನಿರ್ದೇಶಕ ಸ್ಥಾನಕ್ಕೆ 44 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ

ಒಕ್ಕೂಟದ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಮುಂಬರುವ ಐದು ವರ್ಷಗಳ ಆಡಳಿತ ಸಮಿತಿಗೆ ಆಯ್ಕೆಗೆ ಜ.22 ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆ ದಿನವಾಗಿದ್ದು ಅಪಾರ ಬೆಂಬಲಿಗರೊಂದಿಗೆ ಪೈಪೋಟಿಯಲ್ಲಿ ಗುರುವಾರ ಮೆರವಣಿಗೆ ಬಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಿಯಮಾನುಸಾರ ಶುಕ್ರವಾರ ಉಮೇದುವಾರಿಕೆಯ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ

ವಿಶ್ವವಾಣಿ ಸಮೂಹದ 'ಲೋಕಧ್ವನಿ' ರಾಜ್ಯ ಮಟ್ಟದ ಪತ್ರಿಕೆಯಾಗಲಿ: ಸಿದ್ದರಾಮಯ್ಯ ಆಶಯ

'ಲೋಕಧ್ವನಿ' ರಾಜ್ಯ ಮಟ್ಟದ ಪತ್ರಿಕೆಯಾಗಲಿ: ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ಗುರುವಾರ (ಜನವರಿ 22) ವಿಶ್ವವಾಣಿ ದಿನಪತ್ರಿಕೆ ವತಿಯಿಂದ ಆಯೋಜಿಸಲಾಗಿದ್ದ ಲೋಕಧ್ವನಿ ಹೆಮ್ಮೆಯ ಸಾಧಕ -2026 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ʼʼಪತ್ರಕರ್ತರು ಕಂದಾಚಾರಗಳು, ಮೌಢ್ಯಗಳಿಗೆ ಒತ್ತು ನೀಡದೇ, ಸಮಾಜದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆಗೆ ಹೆಚ್ಚಿನ ಮಹತ್ವ ನೀಡಬೇಕುʼʼ ಎಂದರು.

ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಕೇಸ್‌; ಎಡಿಜಿಪಿ ಹಿತೇಂದ್ರ ನೇತೃತ್ವದಲ್ಲಿ ತನಿಖೆಗೆ ಆದೇಶ

ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಕೇಸ್‌ ತನಿಖೆಗೆ ಡಿಜಿ-ಐಜಿಪಿ ಆದೇಶ

DGP Ramachandra rao Case: ಮಹಿಳೆಯೊಂದಿಗಿನ ರಾಸಲೀಲೆ ವಿಡಿಯೋ ವೈರಲ್ ಆರೋಪದ ಬೆನ್ನಲ್ಲೇ ಡಿಜಿಪಿ ಡಾ. ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಲಾಗಿತ್ತು. ಕಚೇರಿಯಲ್ಲಿ ಮಹಿಳೆ ಜತೆ ಅಶ್ಲೀಲ ವರ್ತನೆಯಲ್ಲಿ ತೊಡಗಿದ್ದ ವಿಡಿಯೋ ಜನವರಿ 19 ರಂದು ವೈರಲ್ ಆಗಿತ್ತು.

Cabinet Meeting: ರಾಜ್ಯ ಸಿವಿಲ್‌ ಸೇವೆ ಹುದ್ದೆಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ

ಸಿವಿಲ್‌ ಸೇವೆ ಹುದ್ದೆಗೆ 5 ವರ್ಷ ವಯೋಮಿತಿ ಸಡಿಲಿಸಲು ಸಂಪುಟ ಒಪ್ಪಿಗೆ

ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡುವ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ಅಧಿಸೂಚನೆಗಳಿಗೆ ಈ ನಿಯಮ ಅನ್ವಯವಾಗಲಿದೆ.

Karnataka's Tableau: ʼಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆʼ; ದೆಹಲಿ ಗಣರಾಜ್ಯೋತ್ಸವ ಪರೇಡ್‌ಗೆ ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆ

ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುವ ರಾಜ್ಯದ ಸ್ತಬ್ಧಚಿತ್ರ ಆಯ್ಕೆ

Republic Day 2026 Parade: ಕೃಷಿಯಿಂದ ಕೈಗಾರಿಕೆಯವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರವನ್ನು ಈ ಬಾರಿಯ ದೆಹಲಿ ಗಣರಾಜ್ಯೋತ್ಸವದ ಭಾರತ ಪರ್ವ ಪಥಸಂಚಲನದಲ್ಲಿ ಕರ್ನಾಟಕವು ಪ್ರದರ್ಶಿಸುತ್ತಿದೆ.

ಸರ್ಕಾರಕ್ಕೆ ನಿಧಿ ಹಸ್ತಾಂತರಿಸಿದ್ದ ಲಕ್ಕುಂಡಿಯ ಪ್ರಜ್ವಲ್‌ ರಿತ್ತಿ ಕುಟುಂಬಕ್ಕೆ ಸೈಟ್‌ ಘೋಷಣೆ

ಸರ್ಕಾರಕ್ಕೆ ನಿಧಿ ಒಪ್ಪಿಸಿದ್ದ ಲಕ್ಕುಂಡಿಯ ರಿತ್ತಿ ಕುಟುಂಬಕ್ಕೆ ಸೈಟ್‌

ಮನೆಗೆ ಪಾಯ ಅಗೆಯುವಾಗ ಸಿಕ್ಕಿದ್ದ ನಿಧಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತಿಸಿದ್ದ ರಿತ್ತಿ ‌ಕುಟುಂಬಕ್ಕೆ 30*40 ಸೈಟ್ ನೀಡುವ ನಿರ್ಣಯವನ್ನು ಗ್ರಾಮ ಪಂಚಾಯಿತಿ ಪಾಸ್ ಮಾಡಿದೆ. ಮಾನವೀಯ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಗ್ರಾಮ ಪಂಚಾಯಿತಿ ಸೈಟ್‌ ನೀಡುವ ನಿರ್ಧಾರ ತೆಗೆದುಕೊಂಡಿದೆ.

Karnataka Govt Vs Governor: ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಿರ್ಧಾರ: ಸಿಎಂ

ರಾಜ್ಯಪಾಲರ ವಿರುದ್ಧ ಸುಪ್ರೀಂ ಮೊರೆ ಹೋಗಲು ನಿರ್ಧಾರ: ಸಿಎಂ

ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣ ಓದದೆ, ತಾವೇ ಸಿದ್ಧಪಡಿಸಿದ ಭಾಷಣ ಓದುವ ಮೂಲಕ ಸಂವಿಧಾನಾತ್ಮಕ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರ ನಡೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Blackmail Case: ರಾಜ್ಯದ ಖ್ಯಾತ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್; 1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ ಮಹಿಳೆ ಅರೆಸ್ಟ್

ರಾಜ್ಯದ ಖ್ಯಾತ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್; ಮಹಿಳೆ ಅರೆಸ್ಟ್

ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದಾಗ ಅವರಿಂದ 4.5 ಲಕ್ಷ ರೂ. ಪಡೆದುಕೊಂಡಿದ್ದ ಮಹಿಳೆ, ಮತ್ತೆ 1 ಕೋಟಿ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದಳು. ಹಣ ಕೊಡದಿದ್ದರೆ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಹೀಗಾಗಿ ಆರೋಪಿ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆ ಎಐ ಎಂಜಿನಿಯರ್: ಲಿಂಕ್ಡ್‌ ಇನ್ 'ಜಾಬ್ಸ್ ಆನ್ ದಿ ರೈಸ್ 2026' ವರದಿ ಬಿಡುಗಡೆ

ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆ ಎಐ ಎಂಜಿನಿಯರ್

ಶೇಕಡ 72ರಷ್ಟು ಜನರು 2026ರಲ್ಲಿ ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಆದರೆ ತಂತ್ರಜ್ಞಾನದ ವೇಗದ ಬದಲಾವಣೆಗೆ ತಕ್ಕಂತೆ ಬೇಕಾದ ಕೌಶಲ್ಯಗಳ ಕೊರತೆ (38%) ಮತ್ತು ಇಂದಿನ ಹೆಚ್ಚುತ್ತಿರುವ ಪೈಪೋಟಿಯ ನಡುವೆ ತಾವು ಹೇಗೆ ಎದ್ದು ಕಾಣಬಹುದು (37%) ಎಂಬುದರ ಬಗ್ಗೆ ಮೂರನೇ ಒಂದ ಕ್ಕಿಂತ ಹೆಚ್ಚು ಮಂದಿ ತಾವು ಸಿದ್ಧರಾಗಿಲ್ಲ ಎಂಬ ಭಾವನೆ ಹೊಂದಿದ್ದಾರೆ

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: B2B ಗ್ರಾಹಕರಿಗೆ ಭರ್ಜರಿ ಡೀಲ್‌ಗಳು ಮತ್ತು ಬಲ್ಕ್ ಖರೀದಿ ಪ್ರಯೋಜನಗಳನ್ನು ತಂದ ಅಮೆಜಾನ್ ಬಿಸಿನೆಸ್

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ರ ಸಮಯದಲ್ಲಿ ಭಾರತೀಯ ವ್ಯವಹಾರಗಳು ವಿವಿಧ ವರ್ಗಗಳಲ್ಲಿ ಗಣನೀಯ ಉಳಿತಾಯವನ್ನು ಮಾಡಲು ಅಮೆಜಾನ್ ಬಿಸಿನೆಸ್ ವೇದಿಕೆ ಕಲ್ಪಿಸುತ್ತಿದೆ. ವ್ಯಾಪಾರಸ್ಥರು ಮತ್ತು ಕಾರ್ಪೊರೇಟ್ ಗ್ರಾಹಕರು ಲ್ಯಾಪ್‌ಟಾಪ್‌ ಗಳು, ಮಾನಿಟರ್‌ಗಳು, ಆಫೀಸ್ ಫರ್ನಿಚರ್, ಕೈಗಾರಿಕಾ ಉಪಕರಣಗಳು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ಮೇಲೆ ಅದ್ಭುತ ಡೀಲ್‌ ಗಳನ್ನು ಪಡೆಯಬಹುದು

ತೊಗರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ; ಕಲಬುರಗಿಯಲ್ಲಿ ರೈತರ ಪ್ರತಿಭಟನೆ

ತೊಗರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

Kalaburagi News: ಡಾ. ಸ್ವಾಮಿನಾಥನ್ ಆಯೋಗದ ವರದಿ ಅನ್ವಯ C2 ವೆಚ್ಚಕ್ಕೆ ಶೇ.50 ಲಾಭ ಸೇರಿಸಿ ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಜಾರಿಗೆ ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೊರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದೆ.

ಮತ್ತೊಂದು ಕೆಟ್ಟ ದಾಖಲೆ ಬರೆದ ಬೆಂಗಳೂರು; ವಿಶ್ವದಲ್ಲೇ 2ನೇ ಅತಿ ಕೆಟ್ಟ ಟ್ರಾಫಿಕ್‌: ವರ್ಷಕ್ಕೆ 7 ದಿನ ರಸ್ತೆಯಲ್ಲೇ ಕಳೆಯುತ್ತಿದ್ದಾರೆ ಜನ

ಟ್ರಾಫಿಕ್ ಜಾಮ್‌ನಲ್ಲಿ ಬೆಂಗಳೂರಿಗೆ ದೇಶದಲ್ಲೇ ಅಗ್ರಸ್ಥಾನ

ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿ ಪ್ರಕಾರ, ಬೆಂಗಳೂರು ವಿಶ್ವದ ಎರಡನೇ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರವಾಗಿ ಗುರುತಿಸಿಕೊಂಡಿದೆ. ನಗರದ ಸರಾಸರಿ ಟ್ರಾಫಿಕ್ ದಟ್ಟಣೆ ಶೇ. 74.4ರಷ್ಟಿದ್ದು ಕಳೆದ ವರ್ಷಕ್ಕಿಂತ ಶೇ. 1.7ರಷ್ಟು ಹೆಚ್ಚಳವಾಗಿದೆ. ಮೆಕ್ಸಿಕೋ ಸಿಟಿ ಮೊದಲ ಸ್ಥಾನದಲ್ಲಿದ್ದರೆ, ಐರ್ಲೆಂಡ್‌ನ ಡಬ್ಲಿನ್ ಮೂರನೇ ಸ್ಥಾನ ಪಡೆದಿದೆ.

ಲಗೇಜ್ ಪರಿಶೀಲಿಸುವ ನೆಪದಲ್ಲಿ ಕೊರಿಯನ್ ಯುವತಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲೈಂಗಿಕ ಕಿರುಕುಳ; ಸಿಬ್ಬಂದಿ ಅರೆಸ್ಟ್

ಲಗೇಜ್ ಪರಿಶೀಲಿಸುವ ನೆಪದಲ್ಲಿ ಕೊರಿಯನ್ ಯುವತಿಗೆ ಲೈಂಗಿಕ ಕಿರುಕುಳ

physical assault: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಪರಿಶೀಲಿಸುವ ನೆಪದಲ್ಲಿ ಕೊರಿಯನ್ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಘಟನೆ ಬೆಳಕಿಗೆ ಬಂದಿದೆ. ವಲಸೆ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆರೋಪಿಯನ್ನು ಭದ್ರತಾ ಸಿಬ್ಬಂದಿಯೊಬ್ಬರು ಟಿಕೆಟ್ ಮತ್ತು ಲಗೇಜುಗಳನ್ನು ಪರಿಶೀಲಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಸದನದಲ್ಲಿ ಭಾರೀ ಹೈಡ್ರಾಮಾ; ಸರ್ಕಾರ ನೀಡಿದ ಭಾಷಣ ಓದದೆ ತೆರಳಿದ ಗವರ್ನರ್‌ ಗೆಹ್ಲೋಟ್

ಸರ್ಕಾರ ನೀಡಿದ ಭಾಷಣ ಓದದೆ ತೆರಳಿದ ಗವರ್ನರ್‌

Governor Gehlot: ಇಂದಿನಿಂದ ಆರಂಭವಾಗ್ತಿರುವ ರಾಜ್ಯ ವಿಧಾನಸಭೆ–ವಿಧಾನಪರಿಷತ್ ಜಂಟಿ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಜರಾಗಿದ್ದರು. ಆದರೆ ಸರ್ಕಾರದ ಭಾಷಣಕ್ಕೆ ರಾಜ್ಯಪಾಲರು ವಿರೋಧ ವ್ಯಕ್ತ ಪಡಿಸಿದ್ದು, ಕೇವಲ ಎರಡೇ ಸಾಲಿನಲ್ಲಿ ಭಾಷಣ ಮುಗಿಸಿ ಅಧಿವೇಶನದಿಂದ ಹೊರ ನಡೆದಿದ್ದಾರೆ.

ಅಲೆಂಬಿಕ್ ನಗರದಲ್ಲಿ 2.4 ಮಿಲಿಯನ್ ಚದರ ಅಡಿ ಕಚೇರಿ ಸ್ಥಳವನ್ನು ಗುತ್ತಿಗೆಗೆ ಪಡೆದ ಜಾಗತಿಕ ತಂತ್ರಜ್ಞಾನ ದೈತ್ಯ

ಕ್ಲೌಡ್ ಫಾರೆಸ್ಟ್” ನ ಆರಂಭವು ಪ್ರಕೃತಿ-ಮೊದಲ ಜೀವನವನ್ನು ಪರಿಚಯಿಸುತ್ತದೆ

ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿ ಅಲೆಂಬಿಕ್ ಸಿಟಿಯನ್ನು ಸ್ವಾಗತಿಸಲು ನಾವು ಹೆಮ್ಮೆ ಪಡುತ್ತೇವೆ" ಎಂದು ಶ್ರೆನೋ ಲಿಮಿಟೆಡ್‌ನ ನಿರ್ದೇಶಕ ಉದಿತ್ ಅಮೀನ್ ಹೇಳಿದರು. ಈ ನಿರ್ಧಾರವು ಮುಂದಿನ ಪೀಳಿಗೆಯ ತಂತ್ರಜ್ಞಾನ ಕ್ಯಾಂಪಸ್‌ಗಳ ಕಡೆಗೆ ವಿಶಾಲವಾದ ಬದಲಾವಣೆ ಯನ್ನು ಪ್ರತಿಬಿಂಬಿಸುತ್ತದೆ, ಅವು ಡಿಜಿಟಲ್ ರೂಪದಲ್ಲಿ ಮುಂದುವರಿದಿರುವುದು ಮಾತ್ರವಲ್ಲದೆ ಸುಸ್ಥಿರತೆ, ಯೋಗಕ್ಷೇಮ ಮತ್ತು ದೀರ್ಘಕಾಲೀನ ಹೊಣೆಗಾರಿಕೆಯಲ್ಲಿ ಆಳವಾಗಿ ಬೇರೂರಿವೆ.

ಉಡುಪಿ ಕೇಸರಿ ಧ್ವಜ ವಿವಾದ: ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದ ಜಿಲ್ಲಾಧಿಕಾರಿ, ಕ್ರಮ ಜರುಗಿಸಲು ಕಾಂಗ್ರೆಸ್‌ ಒತ್ತಾಯ

ಉಡುಪಿ ಕೇಸರಿ ಧ್ವಜ ವಿವಾದ: ಜಿಲ್ಲಾಧಿಕಾರಿ ಹೇಳಿದ್ದೇನು?

ಕೃಷ್ಣಮಠದ ಪರ್ಯಾಯದ ಮೆರವಣಿಗೆ ವೇಳೆ ಕೇಸರಿ ಧ್ವಜ ಪ್ರದರ್ಶಿಸಿದ ವಿಚಾರ ಇದೀಗ ವಿವಾದಕ್ಕೀಡಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಅವರು ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ ಮತ್ತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶೇ.90 ರಷ್ಟು ಕ್ರಿಪ್ಟೋ ಹೂಡಿಕೆದಾರರಿಗೆ ತೆರಿಗೆಯ ಬಗ್ಗೆ ಅರಿವಿದೆ, ಶೇ. 66 ರಷ್ಟು ಮಂದಿ ಇದು ಅನ್ಯಾಯವೆಂದು ಭಾವಿಸಿದ್ದಾರೆ: ಕಾಯಿನ್‌ಸ್ವಿಚ್ ಸಮೀಕ್ಷೆ

ಶೇ.90 ರಷ್ಟು ಹೂಡಿಕೆದಾರರಿಗೆ ತೆರಿಗೆಯ ಅರಿವಿದೆ, ಆದರೆ...?

ಭಾರತದ ಪ್ರಸ್ತುತ ಕ್ರಿಪ್ಟೋ ತೆರಿಗೆ ಚೌಕಟ್ಟಿನ ಬಗ್ಗೆ ಹೂಡಿಕೆದಾರರಲ್ಲಿ ಹೆಚ್ಚಿನ ಮಟ್ಟದ ಅರಿವು ಇರುವು ದನ್ನು ಈ ಸಮೀಕ್ಷೆ ಸೂಚಿಸುತ್ತದೆ. ಲಾಭದ ಮೇಲೆ ಶೇ. 30 ರಷ್ಟು ತೆರಿಗೆ, ನಷ್ಟವನ್ನು ಸರಿದೂಗಿಸಲು ಅಥವಾ ಮುಂದಕ್ಕೆ ಕೊಂಡೊಯ್ಯಲು ಅವಕಾಶವಿಲ್ಲದಿರುವುದು ಮತ್ತು ವಹಿವಾಟುಗಳ ಮೇಲೆ ಶೇ. 1 ರಷ್ಟು ಟಿಡಿಎಸ್ (TDS) ಸೇರಿದಂತೆ ಪ್ರಮುಖ ನಿಬಂಧನೆಗಳ ಬಗ್ಗೆ ಸುಮಾರು ಶೇ. 90 ರಷ್ಟು ಜನರು ತಮಗೆ ತಿಳಿದಿದೆ

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ  8ನೇ ಶಾಖೆ ಉದ್ಘಾಟನೆ ನಾಳೆ; ಹಲವು ಗಣ್ಯರು ಭಾಗಿ

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 8ನೇ ಶಾಖೆ ಉದ್ಘಾಟನೆ ನಾಳೆ

ನಗರದ ಹೆಸರಾಂತ ಹಾಗೂ ವಿಶ್ವಾಸಾರ್ಹ ಚಿನ್ನಾಭರಣ ಸಂಸ್ಥೆಯಾದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ತನ್ನ 8ನೇ ಶಾಖೆಯನ್ನು ಕನಕಪುರ ರಸ್ತೆ, ರಘುವನಹಳ್ಳಿ ಪ್ರದೇಶದಲ್ಲಿ ಜನವರಿ 23ರಂದು ಬೆಳಿಗ್ಗೆ 11 ಗಂಟೆಗೆ ಭವ್ಯವಾಗಿ ಉದ್ಘಾಟನೆಯಾಗಲಿದೆ. ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡರು & ಶ್ರೀಮತಿ ಚೆನ್ನಮ್ಮ ಶ್ರೀ ಹೆಚ್.ಡಿ. ದೇವೇಗೌಡರುಆಶೀರ್ವಾದದಿಂದ ಹಾಗೂ ದಿವ್ಯ ಸಾನಿಧ್ಯ ಅವಧೂತ ವಿನಯ್ ಗುರೂಜಿರವರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಲಿದೆ.

ಖಾಸಗಿ ಸ್ಲೀಪರ್ ಬಸ್‌ಗಳಲ್ಲಿ ಈ 8 ನಿಯಮಗಳ ಪಾಲನೆ ಕಡ್ಡಾಯ; ಸಾರಿಗೆ ಸಚಿವರಿಂದ ಖಡಕ್‌ ಸೂಚನೆ

ಖಾಸಗಿ ಸ್ಲೀಪರ್ ಬಸ್‌ಗಳಲ್ಲಿ ಈ 8 ನಿಯಮಗಳ ಪಾಲನೆ ಕಡ್ಡಾಯ

ಚಿತ್ರದುರ್ಗ ಖಾಸಗಿ ಬಸ್ ಅಗ್ನಿದುರಂತದ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಹತ್ವದ ಸಭೆ ನಡೆಸಿದ್ದಾರೆ. ರಾಜ್ಯದ ಖಾಸಗಿ ಬಸ್ ಮಾಲೀಕರು,ಬಸ್ ಕೋಚ್ ನಿರ್ಮಾಣ ಕಂಪನಿಗಳ ಮಾಲೀಕರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ.

ಒತ್ತುವರಿ ತೆರವುಗೊಳಿಸಲು ಅಡ್ಡಿಪಡಿಸಿದ ಹಿನ್ನೆಲೆ ವಾಪಸ್ ಆದ ಅಧಿಕಾರಿಗಳು

ದಾರಿ ಬಿಡಿಸುವ ವಿಚಾರ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ

ಕೆಲ ರೈತರ ಜಮೀನುಗಳಲ್ಲಿ ಒತ್ತುವರಿ ತೆರವುಗೊಳಿಸಿಕೊಂಡು ಬಂದು ನಾರಾಯಣಸ್ವಾಮಿ ಎಂಬುವರ ಜಮೀನಿನಲ್ಲಿ ಒತ್ತುವರಿ ತೆರವುಗೊಳಿಸಲು ಬಂದಾಗ ಸದರಿ ಜಮೀನಿನವರು ಒತ್ತುವರಿಯನ್ನು ತೆರವು ಗೊಳಿಸಲು ಅವಕಾಶ ಕಲ್ಪಿಸಿ ಕೊಡದೆ ಜೆಸಿಬಿ ಮುಂದೆ ಕೂತು ಒತ್ತುವರಿ ತೆರವು ಕಾರ್ಯಕ್ಕೆ ಅಡ್ಡಿಪಡಿಸಿ ದ್ದಲ್ಲದೆ ಗ್ರಾಮದಿಂದ ಒತ್ತುವರಿಯನ್ನು ತೆರವು ಮಾಡಿಕೊಂಡು ಬನ್ನಿ ಹಾಗೂ ಸೂಕ್ತ ರೀತಿಯಲ್ಲಿ ಸರ್ವೆ ಕಾರ್ಯ ನಡೆದಿಲ್ಲ ಎಂದು ಪಟ್ಟು ಹಿಡಿದರು

Loading...