ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Karnataka Budget 2026: ಸಾಲದ ಪ್ರಮಾಣ ಹೆಚ್ಚಳವೆಂಬುದು ಸತ್ಯಕ್ಕೆ ದೂರವಾದ ಮಾತು: ಸಿಎಂ ಸಿದ್ದರಾಮಯ್ಯ

ಸಾಲದ ಪ್ರಮಾಣ ಹೆಚ್ಚಳವೆಂಬುದು ಸತ್ಯಕ್ಕೆ ದೂರವಾದ ಮಾತು: ಸಿಎಂ ಸಿದ್ದರಾಮಯ್ಯ

CM Siddaramaiah: ಬಿಜೆಪಿಯ ಪ್ರಧಾನಿ ಮೋದಿಯವರು ಸಾಲ ಮಾಡಿದ್ದಾರೆ. ಸಾಲ ಮಾಡದೇ ಅಭಿವೃದ್ಧಿ ಸಾಧ್ಯವಿಲ್ಲ. ಆರ್ಥಿಕ ಹೊಣೆಗಾರಿಕೆ ಕಾಯ್ದೆ ತಿಳಿಸಿರುವ ಮಾನದಂಡಗಳ ಮಿತಿಯಲ್ಲಿ ರಾಜ್ಯದ ಸಾಲದ ಪ್ರಮಾಣ ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

PES University: ಪಿಇಎಸ್‌ ವಿಶ್ವವಿದ್ಯಾಲಯದ ಬೆಸ್ಟ್‌ನಲ್ಲಿ ಉದ್ಯಮ ಸಿದ್ಧತೆಗಾಗಿ ಕಾರ್ಯಕ್ರಮ

ಪಿಇಎಸ್‌ ವಿವಿಯ ಬೆಸ್ಟ್‌ನಲ್ಲಿ ಉದ್ಯಮ ಸಿದ್ಧತೆಗಾಗಿ ಕಾರ್ಯಕ್ರಮ

PES University: ಪಿಇಎಸ್‌ ವಿಶ್ವವಿದ್ಯಾಲಯದ ಬೆಸ್ಟ್‌-ಬಜಾಜ್‌ ಎಂಜಿನಿಯರಿಂಗ್‌ ಕೌಶಲ್ಯ ತರಬೇತಿ ಕೇಂದ್ರದ ಮೂಲಕ ಬೋರ್ಡ್‌ ಫಾರ್‌ ಐಟಿ ಎಜ್ಯುಕೇಷನ್‌ ಸ್ಟ್ಯಾಂಡರ್ಡ್ಸ್‌ (BITES) ಸಹಯೋಗದಲ್ಲಿ ರೊಬೊಟಿಕ್ಸ್‌ ಆಟೋಮೇಷನ್‌ ಮತ್ತು ಇಂಡಸ್ಟ್ರಿ 4.0- ಚಾಲಿತ ಸ್ಮಾರ್ಟ್‌ ಮ್ಯಾನುಫ್ಯಾಕ್ಚರಿಂಗ್‌ ಮೇಲೆ ಕೇಂದ್ರಿಕರಿಸಿದ ಮುಂದುವರಿದ ಶಿಕ್ಷಕರ ಅಭಿವೃದ್ಧಿ ಕಾರ್ಯಕ್ರಮ ಜರುಗಿತು.

ಬೆಂಗಳೂರನ್ನು ಗ್ರೇಟರ್‌ ಮಾಡಲು ಬದ್ಧ

ಬೆಂಗಳೂರನ್ನು ಗ್ರೇಟರ್‌ ಮಾಡಲು ಬದ್ಧ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಭಿವೃದ್ಧಿಗೆ ಏಳು ಸಾವಿರ ಕೋಟಿ ಅನುದಾನದೊಂದಿಗೆ, ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡಲು ಸಾವಿರಾರು ಕೋಟಿ ವ್ಯಯಿಸಲು ಸಿದ್ಧ. ಬೆಂಗಳೂರು ಒಂದು ನಗರವಷ್ಟೆ ಅಲ್ಲ. ಇದು ಅಸಂಖ್ಯಾತ ಕನಸುಗಳ ನೆಲೆಬೀಡು.

ಸಿಎಂ ಬದಲಾವಣೆ ವಿಚಾರ; ಬಜೆಟ್‌ ಬೆನ್ನಲ್ಲೇ ಶಾಕಿಂಗ್‌ ಹೇಳಿಕೆ ನೀಡಿದ ಸಿದ್ದರಾಮಯ್ಯ!

ಸಿಎಂ ಬದಲಾವಣೆ ವಿಚಾರ ಶಾಕಿಂಗ್‌ ಹೇಳಿಕೆ ನೀಡಿದ ಸಿದ್ದರಾಮಯ್ಯ!

Karnataka CM row: ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದ ವೇಳೆ ಮಾಧ್ಯಮಗಳ ಜತೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಇನ್ನೆರಡು ಬಜೆಟ್‌ ನೀವೇ ಮಂಡಿಸುತ್ತೀರಾ ಎಂಬ ಪ್ರಶ್ನೆಗೆ ಅವರು ನೀಡಿರುವ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಗ್ರಾಮ ಪಂಚಾಯಿತಿಗೆ ‘ಮಹಾತ್ಮ ಗಾಂಧಿ’ ಹೆಸರು

ಗ್ರಾಮ ಪಂಚಾಯಿತಿಗೆ ‘ಮಹಾತ್ಮ ಗಾಂಧಿ’ ಹೆಸರು

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನರೇಗಾ ಯೋಜನೆಯಿಂದ ಗಾಂಧೀಜಿ ಹೆಸರು ಕೈಬಿಟ್ಟ ನಂತರ, ರಾಜ್ಯ ಕಾಂಗ್ರೆಸ್ ಸರಕಾರ ಸಾಧ್ಯವಾದಲ್ಲೆಲ್ಲ ಗಾಂಧೀಜಿ ಹೆಸರಿನ ಯೋಜನೆ ಗಳನ್ನು ಶುರು ಮಾಡುತ್ತಿದೆ. ಗಾಂಧೀಜಿ ಆದರ್ಶಗಳಿಗೆ ಗೌರವ ಸಲ್ಲಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ಎಂದು ನಾಮಕರಣ ಮಾಡಲು ಸರಕಾರ ತೀರ್ಮಾನಿಸಿದೆ.

ಉತ್ತರ ಕರ್ನಾಟಕಕ್ಕೆ ಸಾವಿರ ಎಕರೆ ಕೈಗಾರಿಕಾ ಪಾರ್ಕ್

ಉತ್ತರ ಕರ್ನಾಟಕಕ್ಕೆ ಸಾವಿರ ಎಕರೆ ಕೈಗಾರಿಕಾ ಪಾರ್ಕ್

ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಬೆಳಗಾಗಿ ಜಿಲ್ಲೆಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ‘ಕೈಗಾರಿಕಾ ಪಾರ್ಕ್’ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು 2026-27ನೇ ಹಣಕಾಸು ವರ್ಷದ ಬಜೆಟ್ ಪ್ರಸ್ತಾವನೆಯಲ್ಲಿ ಘೋಷಿಸಿದ್ದಾರೆ.

Interest Free loan: 83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲI

83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ

ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸಹಕಾರ ಇಲಾಖೆಯ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಣೆ ಯ ಗುರಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಜತೆಗೆ, ಕೃಷಿ ಮಾರುಕಟ್ಟೆಗಳ ಸಂಪೂರ್ಣ ಗಣಕೀಕರಣ ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಕಾರ ಬ್ಯಾಂಕ್‌ಗಳ ಜಾಲವನ್ನು ವಿಸ್ತರಿಸುವ ಕುರಿತಾದ ಮಹತ್ವದ ಘೋಷಣೆಗಳನ್ನು ಸರಕಾರ ಮಾಡಿದೆ.

Gruha Lakshmi Scheme: ಗೃಹ ಲಕ್ಷ್ಮೀ ಯೋಜನೆಗೆ ಭರ್ಜರಿ ಅನುದಾನ

Gruha Lakshmi Scheme: ಗೃಹ ಲಕ್ಷ್ಮೀ ಯೋಜನೆಗೆ ಭರ್ಜರಿ ಅನುದಾನ

ಗೃಹಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೂ ಎಲ್ಲಾ ಅರ್ಹ ಫಲಾನುಭವಿಗಳಿಗೆ ಒಟ್ಟು 62,345 ಕೋಟಿ ರು.ವೆಚ್ಚ ಭರಿಸಲಾಗಿದೆ. ಈ ಯೋಜನೆಯಡಿ 1.24 ಕೋಟಿ ಫಲಾನುಭವಿಗಳಿಗೆ ಯಶಸ್ವಿ ಯಾಗಿ ಧನಸಹಾಯ ಪಾವತಿಸಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಯಡಿ 28,608 ಕೋಟಿ ರು.ಗಳನ್ನು ಮೀಸಲಿರಿಸಿದೆ.

ನಾಯಿ ಕೊಂದು ಬಸ್‌ ತಂಗುದಾಣದಲ್ಲಿ ನೇತು ಹಾಕಿದ ಕಿಡಿಗೇಡಿಗಳು!

ನಾಯಿ ಕೊಂದು ಬಸ್‌ ತಂಗುದಾಣದಲ್ಲಿ ನೇತು ಹಾಕಿದ ಕಿಡಿಗೇಡಿಗಳು!

Tiptur News: ತಿಪಟೂರಿನಲ್ಲಿ ಘಟನೆ ನಡೆದಿದೆ. ನಾಯಿಯನ್ನು ಕೊಂದು ತಂಗುದಾಣದಲ್ಲಿ ನೇತು ಹಾಕಿದ್ದು, 4- 5 ದಿನಗಳ ಹಿಂದೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೃತ್ಯ ಹೆಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

POCSO case: ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಜೀವನಪೂರ್ತಿ ಜೈಲು ಶಿಕ್ಷೆ

ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಜೀವನಪೂರ್ತಿ ಜೈಲು ಶಿಕ್ಷೆ

ಹೆಂಡತಿ ಮೇಲಿನ ವೈಮನಸ್ಸಿನಿಂದಾಗಿ ತನ್ನ ಐದು ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ವಿಜಯಪುರದ ವಿಶೇಷ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ಮೂಲತಃ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ನಿವಾಸಿ ಆರೋಪಿ ಸೋಮನಿಂಗ ಕಳಸದವರ ಶಿಕ್ಷೆಗೆ ಗುರಿಯಾಗಿದ್ದಾನೆ.

ಭಾರತದಲ್ಲಿ ವೇಗ ಪಡೆದುಕೊಂಡ ’ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಪ್ರೀಮಿಯಂ ನೆಟ್‌ವರ್ಕ್’

ಕೊಚ್ಚಿ, ಬೆಂಗಳೂರಿನಲ್ಲಿ ಪೂರ್ಣ-ಶ್ರೇಣಿಯ ಡೀಲರ್‌ಶಿಪ್‌ ಪ್ರಾರಂಭ

ಭಾರತದ ಈ ಹೊಸ ಡೀಲರ್‌ಶಿಪ್‌ಗಳಲ್ಲಿ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಸಮಗ್ರ ಶ್ರೇಣಿ ದೊರೆಯುತ್ತದೆ. ಇದರಲ್ಲಿ ಜಾಗತಿಕ ಮೂಲದ ಸಿಬಿಯು (ಸಂಪೂರ್ಣವಾಗಿ ನಿರ್ಮಿಸ ಲಾದ ಘಟಕ) ಮಾದರಿಗಳು, ಹಾಗೆಯೇ ಹೀರೋ ಮೋಟೋಕಾರ್ಪ್-ತಯಾರಿಸಿದ ಹಾರ್ಲೆ-ಡೇವಿಡ್ಸನ್ X440, X440T ಮತ್ತು ಅವುಗಳ ರೂಪಾಂತರಗಳೂ ಸೇರುತ್ತವೆ

Mahavir Jayanti 2026: ಭಗವಾನ್ ಶ್ರೀ ಮಹಾವೀರ ಜಯಂತಿ ಸಾರ್ವತ್ರಿಕ ರಜಾದಿನ ಬದಲು

ಭಗವಾನ್ ಶ್ರೀ ಮಹಾವೀರ ಜಯಂತಿ ಸಾರ್ವತ್ರಿಕ ರಜಾದಿನ ಬದಲು

ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆಗೆ ನಿಗದಿಪಡಿಸಿರುವ ಸಾರ್ವತ್ರಿಕ ರಜಾ ದಿನವನ್ನು 31.03.2026 ರ ಬದಲಾಗಿ 30.03.2026 ಎಂದು ಮಾರ್ಪಡಿಸಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಜೈನ ಜ್ಯೋತಿಷಿಗಳು ಹಾಗೂ ಧಾರ್ಮಿಕ ಪಂಡಿತರ ಅಭಿಪ್ರಾಯ ಪಡೆಯಲಾಗಿದೆ.

UPSC: ಯುಪಿಎಸ್ಸಿ : ಯಾದಗಿರಿ ಗರಿಮೆ ಹೆಚ್ಚಿಸಿದ ಸಾಧಕರು

UPSC: ಯುಪಿಎಸ್ಸಿ : ಯಾದಗಿರಿ ಗರಿಮೆ ಹೆಚ್ಚಿಸಿದ ಸಾಧಕರು

ಯುಪಿಎಸ್ಸಿ (ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮೀಶನ್‌) ನ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷಾ (ಸಿವಿಲ್‌ ಸರ್ವೀಸ್‌) ಪರೀಕ್ಷೆಯ ಅಂತಿಮ ಫಲಿತಾಂಶ ಯಾದಗಿರಿ ಜಿಲ್ಲೆಯ ಗೌರವ ಹೆಚ್ಚಳಕ್ಕೆ ಕಾರಣವಾಗಿದೆ. ಯಾದಗಿರಿ ಜಿಲ್ಲೆಯ ನಾಲ್ವರು ತೇರ್ಗಡೆಯಾಗಿ, ಹೆಮ್ಮೆಗೆ ಪಾತ್ರರಾಗಿದ್ದಾರೆ.

ಮೋದಿ ಮಿತಿಮೀರಿ ಸಾಲ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

ಮೋದಿ ಮಿತಿಮೀರಿ ಸಾಲ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

ನಾವು ಅಧಿಕಾರಕ್ಕೆ ಬಂದಾಗ ಸಾಲ 5.54 ಲಕ್ಷ ಕೋಟಿ ರು. ಸಾಲ ಇತ್ತು. ಈಗ ಸಾಲ 8.14 ಲಕ್ಷ ಕೋಟಿ ರು. ಆಗುತ್ತದೆ. ಫಿಸ್ಕಲ್ ರೆಸ್ಪಾನ್ಸಿಬಲ್ ಆಕ್ಟ್ ಪ್ರಕಾರ ವಿತ್ತೀಯ ಕೊರತೆ ಜಿಡಿಪಿಯ ಶೇ. 3ರ ಒಳಗೆ ಇರಬೇಕು. ಸಾಲವು ಶೇ.25ರ ಒಳಗೆ ಇರಬೇಕು. ಕರ್ನಾಟಕದ ಜಿಡಿಪಿ ಮುಂದಿನ ವರ್ಷ 33 ಲಕ್ಷ ಕೋಟಿ ರು. ಆಗುತ್ತದೆ.

Karnataka High court: ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಶ್ರೀಲಂಕಾ ಸುಪ್ರೀಂ ಕೋರ್ಟ್‌ ಜಡ್ಜ್!‌

ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಶ್ರೀಲಂಕಾ ಸುಪ್ರೀಂ ಕೋರ್ಟ್‌ ಜಡ್ಜ್!‌

ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಕಾರಣ ಅಲ್ಲಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಉದ್ಭವಿಸಬಹುದು ಎಂದು ಅವರು ತಿಳಿಸಿದ್ದಾರೆ. ತನ್ನ ಅಹವಾಲಿಗೆ ತಾನೇ ತೀರ್ಪು ನೀಡಬಾರದೆಂಬ ತತ್ವದ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ.

Havyaka Language Academy: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ

ರಾಜ್ಯದ ಸಾಂಸ್ಕೃತಿಕ ಅಂಗವಾದ ಹವ್ಯಕ ಭಾಷೆ ಬೆಳವಣಿಗೆಗೆ ‘ಹವ್ಯಕ ಭಾಷಾ ಅಕಾಡೆಮಿ’ ಸ್ಥಾಪನೆ ಘೋಷಣೆ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹೊರ ಹೊಮ್ಮಿರುವುದು ವಿಶೇಷ. ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆ, ಕನ್ನಡದ ಸಾಮಾಜಿಕ ಉಪಭಾಷೆ ಯಾಗಿದೆ.

Murder Case: ಮಗನನ್ನು ಕೊಚ್ಚಿ ಕೊಂದು ಚೀಲದಲ್ಲಿ ತುಂಬಿದ ಕ್ರೂರಿ ತಂದೆ, 15 ದಿನ ಬಳಿಕ ಪತ್ತೆ!

ಮಗನನ್ನು ಕೊಚ್ಚಿ ಕೊಂದು ಚೀಲದಲ್ಲಿ ತುಂಬಿದ ತಂದೆ, 15 ದಿನ ಬಳಿಕ ಪತ್ತೆ!

ಹೆಂಡತಿಯ ಅನೈತಿಕ ಸಂಬಂಧಕ್ಕೆ ಮಗ ಕುಮ್ಮಕ್ಕು ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಆರೋಪಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಸುಮಾರು 15 ದಿನಗಳ ಹಿಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಎಸೆದಿದ್ದ.

Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ

Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ

ಗಂಟೆಗೆ ನಗರದ ಶಿವಾಜಿ ವೃತ್ತದಿಂದ ಮಹಾವೀರ ವೃತ್ತ ಅಂಬೇಡ್ಕರ ಬಸವೇಶ್ವರ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಸಿಂದಗಿ ರಸ್ತೆಯಲ್ಲಿರುವ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ ಮಗ್ಗಲಿನ ಸದಾಶಿವನಗರದಖಾಲಿ ಇರುವ ಜಾಗದಲ್ಲಿ ಬೃಹತ್ ಹಿಂದು ಶೋಭಾ ಯಾತ್ರೆ ಜರುಗಿತು.

ಮಾರಾಟಗಾರರಿಗೆ ಅಮೆಜಾನ್ ಉಡುಗೊರೆ: ಅಮೆಜಾನ್ ನಿಂದ 12.5 ಕೋಟಿ ಉತ್ಪನ್ನಗಳಿಗೆ ಶೂನ್ಯ ರೆಫರಲ್ ಶುಲ್ಕದಿಂದ ಶೇ.70ರಷ್ಟು ಉಳಿತಾಯ

ಮಾರಾಟಗಾರರಿಗೆ ಅಮೆಜಾನ್ ಉಡುಗೊರೆ

ಅಮೆಜಾನ್ ₹300ಕ್ಕಿಂತ ಕಡಿಮೆ ಬೆಲೆ ಹೊಂದಿದ 20%ಕ್ಕೂ ಹೆಚ್ಚು ಉತ್ಪನ್ನ ಗಳಿಗೆ ಈಸಿ ಶಿಪ್ ಶುಲ್ಕ ಕಡಿತಗೊಳಿಸಿದೆ. ಈಸಿ ಶಿಪ್ ಮಾರಾಟಗಾರರಿಗೆ ಅವರದೇ ಸ್ಥಳದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡುತ್ತದೆ, ಅಮೆಜಾನ್ ಪಿಕಪ್ ಮತ್ತು ಡೆಲಿವರಿ ನಿರ್ವಹಿಸುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಮಾಡಿ ಮಾರಾಟ ಪ್ರಾರಂಭಿಸಲು ಅಥವಾ ವಿಸ್ತರಿಸಲು ಆದ್ಯತೆಯ ಆಯ್ಕೆಯಾಗಿಸುತ್ತದೆ

Bagalakote news: ಜೀವ ನೀಡಿದ ರೋಡ್‌ ಹಂಪ್‌! ರಸ್ತೆ ಉಬ್ಬಿನ ಮೇಲೆ ವಾಹನ ಚಲಿಸಿದಾಗ ಎದ್ದು ಕುಳಿತ ಮೃತ ವ್ಯಕ್ತಿ!

ರಸ್ತೆ ಉಬ್ಬಿನ ಮೇಲೆ ಶವವಾಹನ ಚಲಿಸಿದಾಗ ಎದ್ದು ಕುಳಿತ ಮೃತ ವ್ಯಕ್ತಿ!

ಕುಟುಂಬಸ್ಥರು ಅಂತ್ಯಸಂಸ್ಕಾರದ ಸಿದ್ಧತೆಯೊಂದಿಗೆ ಮೃತದೇಹವನ್ನು ವಾಹನದ ಮೂಲಕ ಸ್ವಗ್ರಾಮಕ್ಕೆ ತೆಗೆದುಕೊಂಡು ಬರುತ್ತಿದ್ದರು. ವಾಹನವು ಲೋಕಾಪುರ ಸಮೀಪ ಬರುತ್ತಿದ್ದಂತೆ ರಸ್ತೆ ಉಬ್ಬು (ರೋಡ್ ಹಂಪ್ಸ್) ಹತ್ತಿ ಇಳಿಯಿತು. ವಾಹನ ಜೋರಾಗಿ ಅಲುಗಾಡಿದ ರಭಸಕ್ಕೆ, ಮೃತಪಟ್ಟಿದ್ದರು ಎನ್ನಲಾಗಿದ್ದ ಮುಬಾರಕ್ ಅವರು ಏಕಾಏಕಿ ಉಸಿರಾಡಲು ಆರಂಭಿಸಿದ್ದಾರೆ.

Bagalakote news: ಮಸೀದಿ ಗೋಡೆಯಲ್ಲಿ ʼಜೈ ಶ್ರೀರಾಮ್‌ʼ ಎಂದು ಮಗನಿಂದ ಬರೆಸಿದ ವ್ಯಕ್ತಿ, ಬಾಗಲಕೋಟೆ ಮತ್ತೆ ಪ್ರಕ್ಷುಬ್ಧ

ಮಸೀದಿ ಮೇಲೆ ಮಗನಿಂದ ʼಜೈ ಶ್ರೀರಾಮ್‌ʼ ಬರೆಸಿದ ವ್ಯಕ್ತಿ, ಬಾಗಲಕೋಟೆ ಬಿಗು

ಬಾಗಲಕೋಟೆಯ ಸೆಕ್ಟರ್ 44ರ ಮಸೀದಿ ಕಾಂಪೌಂಡ್‌ ಮೇಲೆ ಬರಹ ಬರೆದು ಬಳಿಕ ಆಟೋದಲ್ಲಿ ತೆರಳುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣ ಸಂಬಂಧ ನವನಗರ ಠಾಣೆ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

Gnanesh passes away: ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕ, ಸಂಕಲನಕಾರ ನರಹಳ್ಳಿ ಜ್ಞಾನೇಶ್ ನಿಧನ

ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕ, ಸಂಕಲನಕಾರ ನರಹಳ್ಳಿ ಜ್ಞಾನೇಶ್ ನಿಧನ

ಕಳೆದ ಎರಡು ದಶಕಗಳಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದ ಜ್ಞಾನೇಶ್ ಅವರು, ಹಿರಿಯ ಸಂಕಲನಕಾರ ಸುರೇಶ್ ಅರಸ್ ಅವರ ಗರಡಿಯಲ್ಲಿ ಪಳಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಹಲವಾರು ಧಾರಾವಾಹಿಗಳು, ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಹಾಗೂ ಸಿನಿಮಾಗಳಿಗೆ ಸಂಕಲನಕಾರರಾಗಿ ಸೇವೆ ಸಲ್ಲಿಸಿದ್ದರು.

LPG Cylinder Price: ಗ್ರಾಹಕರಿಗೆ ಬಿಗ್ ಶಾಕ್ : ಇಂದಿನಿಂದಲೇ ಮನೆಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ 60 ರೂ., ವಾಣಿಜ್ಯ ಸಿಲಿಂಡರ್ 115 ರೂ. ಹೆಚ್ಚಳ

ಶಾಕ್ : ಮನೆಬಳಕೆ ಎಲ್‌ಪಿಜಿ 60 ರೂ., ವಾಣಿಜ್ಯ ಸಿಲಿಂಡರ್ 115 ರೂ. ಹೆಚ್ಚಳ

ಗೃಹಬಳಕೆಯ 14.2 ಕೆಜಿ ಸಿಲಿಂಡರ್ ಮೇಲೆ 60 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಮೇಲೆ 115 ರೂ. ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಗೃಹಿಣಿಯರು ಹಾಗೂ ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಏಪ್ರಿಲ್ 2025ರ ನಂತರ ದೇಶೀಯ ಎಲ್‌ಪಿಜಿ ಬೆಲೆಯಲ್ಲಿ ಆಗಿರುವ ಮೊದಲ ಏರಿಕೆ ಇದಾಗಿದೆ.

Karnataka Budget 2026: ಶಾಶ್ವತ ನೀರಾವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಘೋಷಣೆ ಬಗ್ಗೆ ಚಕಾರ ಎತ್ತದಿರುವುದು 17ನೇ ಬಜೆಟ್ ವಿಶೇಷ

ಜಿಲ್ಲೆಯ ಬಹುದಿನಗಳ ಬೇಡಿಕೆಗಳಿಗೆ ಕಿವುಡಾದ ಬಜೆಟ್

ಬಯಲು ಸೀಮೆ ಜಿಲ್ಲೆಯಷ್ಟೇ ಅಲ್ಲದೆ, ಬರಡು ಜಿಲ್ಲೆ ಎಂಬ ಹಣೆಪಟ್ಟಿ ಕಳಚಲು ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವ ಜನಪರ ಸರಕಾರವೂ ನಿರ್ದಿಷ್ಟ ಯೋಜನೆ ಯನ್ನು ಘೋಷಿಸಿ ಕಾರ್ಯಗತ  ಮಾಡದಿರುವುದು 17 ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿದ್ಧರಾಮಯ್ಯ ಅವರ ಸರಕಾರವೂ ಸೇರಿ ಈ ವರೆಗೆ ಅಧಿಕಾರ ನಡೆಸಿರುವ ಎಲ್ಲಾ ಸರಕಾರಗಳು ಜಿಲ್ಲೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣಿಸುವಂತಾಗಿರುವ ಕೊರತೆಯೆಂದರೆ ತಪ್ಪಾಗಲಾರದು

Loading...