ಜೀವಜಲ ವೇದಿಕೆ ಸದಸ್ಯರಿಂದ ಆಯೋಜಿಸಿದ್ದ ಬೃಹತ್ ಪಾದಯಾತ್ರೆಗೆ ಅದ್ಧೂರಿ ಬೆಂಬಲ
ರೇಷ್ಮೆ, ಹಾಲು ಹಣ್ಣು, ಹೂವು, ತರಕಾರಿ ದವಸ ಧಾನ್ಯಗಳನ್ನು ಬೆಂಗಳೂರು ಸೇರಿದಂತೆ ನೆರೆ ಹೊರೆ ರಾಜ್ಯ ದೇಶಗಳಿಗೆ ಸರಬರಾಜು ಮಾಡುವ ಮಹತ್ತರ ಕಾರ್ಯವನ್ನು ನೂರಾರು ವರ್ಷಗಳಿಂದ ಮಾಡಿ ಕೊಂಡು ಬಂದಿರುವ ಜಿಲ್ಲೆಯ ಜನತೆಗೆ, ಬಳುವಳಿಯಾಗಿ ಹೆಚ್.ಎನ್.ವ್ಯಾಲಿ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಹರಿಸುತ್ತಿರುವುದು ಸರಿಯಲ್ಲ