ಬೆಂಗಳೂರು ಕೆಣಕಿದ ಮಲಯಾಳಿಗಳ ಬೆವರಿಳಿಸಿದ ಕನ್ನಡಿಗರು
ಗ್ರೇಟ್ ಕೇರಳ ಎನ್ನುವ ಎಕ್ಸ್ ಪೇಜ್ನಲ್ಲಿ ಬೆಂಗಳೂರಿನ ಬಗ್ಗೆ ಆಕ್ಷೇಪಾರ್ಹ ಬರಹ ಕಂಡು ಬಂದಿದ್ದು ಕನ್ನಡಿಗರು ರಿಚ್ಚಗೆದ್ದಿದ್ದಾರೆ. ʼʼಬೆಂಗಳೂರಿನಲ್ಲಿರುವ ಇತರ ರಾಜ್ಯದವರನ್ನು ಕಳಿಸಿಕೊಟ್ಟರೆ ಬೆಂಗಳೂರು ದೊಡ್ಡ ಝೀರೋ ಆಗಲಿದೆ. ಗಮನಿಸಿ ಬೆಂಗಳೂರಿನಲ್ಲಿ ಶೇಕಡಾ 30ರಷ್ಟು ಮಾತ್ರ ಕನ್ನಡಿಗರಿದ್ದಾರೆʼʼ ಎಂದು ಪೋಸ್ಟ್ನಲ್ಲಿ ಬರೆಯಲಾಗಿದ್ದು, ಕನ್ನಡಿಗರು ಬೆಂಡೆತ್ತಿದ್ದಾರೆ.