ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ನಾವು ಇಲ್ಲದಿದ್ದರೆ ಬೆಂಗಳೂರು ಬಿಗ್‌ ಝೋರೋ; ಗ್ರೇಟ್ ಕೇರಳ ಎಕ್ಸ್‌ ಪೋಸ್ಟ್‌ಗೆ ರೊಚ್ಚಿಗೆದ್ದ ಕನ್ನಡಿಗರು

ಬೆಂಗಳೂರು ಕೆಣಕಿದ ಮಲಯಾಳಿಗಳ ಬೆವರಿಳಿಸಿದ ಕನ್ನಡಿಗರು

ಗ್ರೇಟ್‌ ಕೇರಳ ಎನ್ನುವ ಎಕ್ಸ್‌ ಪೇಜ್‌ನಲ್ಲಿ ಬೆಂಗಳೂರಿನ ಬಗ್ಗೆ ಆಕ್ಷೇಪಾರ್ಹ ಬರಹ ಕಂಡು ಬಂದಿದ್ದು ಕನ್ನಡಿಗರು ರಿಚ್ಚಗೆದ್ದಿದ್ದಾರೆ. ʼʼಬೆಂಗಳೂರಿನಲ್ಲಿರುವ ಇತರ ರಾಜ್ಯದವರನ್ನು ಕಳಿಸಿಕೊಟ್ಟರೆ ಬೆಂಗಳೂರು ದೊಡ್ಡ ಝೀರೋ ಆಗಲಿದೆ. ಗಮನಿಸಿ ಬೆಂಗಳೂರಿನಲ್ಲಿ ಶೇಕಡಾ 30ರಷ್ಟು ಮಾತ್ರ ಕನ್ನಡಿಗರಿದ್ದಾರೆʼʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದ್ದು, ಕನ್ನಡಿಗರು ಬೆಂಡೆತ್ತಿದ್ದಾರೆ.

Lakkundi gold treasure: ಲಕ್ಕುಂಡಿಯಲ್ಲಿ ನಿಧಿ ಪತ್ತೆ, ನಿಧಿ ಸಿಕ್ಕ ಮನೆಯವರಿಗೆ ಬೀದಿಪಾಲಾಗುವ ಭೀತಿ! ಪ್ರಾಮಾಣಿಕತೆಯೇ ಮುಳುವಾಯ್ತಾ?

ಲಕ್ಕುಂಡಿಯಲ್ಲಿ ನಿಧಿ ಪತ್ತೆ, ನಿಧಿ ಸಿಕ್ಕ ಮನೆಯವರಿಗೆ ಬೀದಿಪಾಲಾಗುವ ಭೀತಿ!

ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ ಪತ್ತೆಯಾಗಿತ್ತು. ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರೂ, ಈಗ ಆ ಕುಟುಂಬಕ್ಕೆ ಭಯ ಮತ್ತು ಆತಂಕ ಶುರುವಾಗಿದೆ. ನಿಧಿ ಸಿಕ್ಕಿದ ಸ್ಥಳವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿರುವ ಕಾರಣ, ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಂತಿದೆ. ಹೀಗಾಗಿ, ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದೆ.

Kodi Mutt Swamiji: ಸಿಎಂ ಕುರ್ಚಿ, ಇಬ್ಬರು ಮಹಾ ವ್ಯಕ್ತಿಗಳ ಸಾವು ಬಗ್ಗೆ ಕೋಡಿ ಮಠ ಸ್ವಾಮೀಜಿ ಕುತೂಹಲಕಾರಿ ಭವಿಷ್ಯವಾಣಿ

ಸಿಎಂ ಕುರ್ಚಿ, ಇಬ್ಬರು ಮಹನೀಯರ ಸಾವು: ಕೋಡಿ ಶ್ರೀ ಭವಿಷ್ಯವಾಣಿ ಹೀಗಿದೆ!

ಹೊಸ ವರ್ಷದ ಆರಂಭದಲ್ಲೇ ರಾಜ್ಯ ರಾಜಕೀಯದ ಬಗ್ಗೆ ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಬೀದರ್​ನಲ್ಲಿ ಮಾತಾಡಿದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಸದ್ಯದ ರಾಜ್ಯ ರಾಜಕೀಯದ ಪರಿಸ್ಥಿತಿ ನೋಡಿದರೆ ಬದಲಾವಣೆ ಕಷ್ಟ. ಈ ಬಾರಿ ಕೂಡ ಸಿಎಂ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸ್ತಾರೆ ಎಂದಿದ್ದಾರೆ.

ಭಾರತದಲ್ಲಿ 84% ವೃತ್ತಿಪರರು 2026ರಲ್ಲಿ ಉದ್ಯೋಗ ಹುಡುಕಾಟಕ್ಕೆ ಸಿದ್ಧರಾಗಿಲ್ಲ ಎಂದು ಭಾವಿಸುತ್ತಾರೆ: ಲಿಂಕ್ಡ್‌ ಇನ್

84% ವೃತ್ತಿಪರರು 2026ರಲ್ಲಿ ಉದ್ಯೋಗ ಹುಡುಕಾಟಕ್ಕೆ ಸಿದ್ಧರಾಗಿಲ್ಲ

ಭಾರತದಲ್ಲಿ 84%¹ ವೃತ್ತಿಪರರು ತಾವು ಹೊಸ ಉದ್ಯೋಗ ಹುಡುಕಲು ಸಿದ್ಧರಿಲ್ಲ ಎಂದು ಭಾವಿಸು ತ್ತಾರೆ. ಆದರೂ 72%² ಮಂದಿ 2026ರಲ್ಲಿ ಹೊಸ ಹುದ್ದೆಗಾಗಿ ಹುಡುಕಾಟ ನಡೆಸಿರುವುದಾಗಿ ಹೇಳು ತ್ತಾರೆ ಎಂದು ಲಿಂಕ್ಡ್ ಇನ್ ತನ್ನ ನೂತನ ವರದಿಯಲ್ಲಿ ತಿಳಿಸಿದೆ. ಈ ಬದಲಾವಣೆಯು ನೇಮಕಾತಿ ಪ್ರಕ್ರಿಯೆ ಯಲ್ಲಿ ಎಐ ಬಳಕೆ ಹೆಚ್ಚಳ, ಇಂದಿನ ಉದ್ಯೋಗಗಳಿಗೆ ಬೇಕಾದ ಕೌಶಲ್ಯಗಳಲ್ಲಿ ಆಗಿರುವ ಬದಲಾವಣೆ ಮತ್ತು ಹೆಚ್ಚು ಸ್ಪರ್ಧಾತ್ಮಕವಾದ, ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳುವ ಉದ್ಯೋಗ ಮಾರುಕಟ್ಟೆಯ ಕಾರಣಗಳಿಂದ ಆಗಿದೆ.

Samsung: ತಮಿಳುನಾಡಿನಲ್ಲಿ 'ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್' ಆರಂಭಕ್ಕೆ ಮದ್ರಾಸ್ ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡ ಸ್ಯಾಮ್‌ಸಂಗ್

ಮದ್ರಾಸ್ ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡ ಸ್ಯಾಮ್‌ಸಂಗ್

ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆದ ಸ್ಯಾಮ್‌ಸಂಗ್, ತಮಿಳುನಾಡಿನ ಯುವ ಜನತೆಗೆ ಭವಿಷ್ಯದ ತಂತ್ರಜ್ಞಾನ ಕೌಶಲ್ಯಗಳನ್ನು ತರಬೇತಿ ನೀಡುವ ಉದ್ದೇಶದಿಂದ ಮದ್ರಾಸ್ ವಿಶ್ವ ವಿದ್ಯಾಲಯದೊಂದಿಗೆ ಕೈಜೋಡಿಸಿದ್ದು, ಈ ಮೂಲಕ ತಮಿಳು ನಾಡಿನಲ್ಲಿ ತನ್ನ ಪ್ರಮುಖ ತಾಂತ್ರಿಕ ಶಿಕ್ಷಣ ಯೋಜನೆಯಾದ 'ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್' ಅನ್ನು ಜಾರಿಗೆ ತರುವುದಾಗಿ ಕಂಪನಿ ಘೋಷಿಸಿದೆ.

CM Siddaramaiah: ದ್ವೇಷ ಭಾಷಣ ವಿಧೇಯಕ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ವಿಧೇಯಕ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ, ಮರಳಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು 19 ವಿಧೇಯಕಗಳಿಗೆ ಅಂಕಿತ ಹಾಕಿದ್ದರು. ಆದರೆ ದ್ವೇಷ ಭಾಷಣ ವಿಧೇಯಕಕ್ಕೆ ಯಾವುದೇ ವಿವರಣೆ ನೀಡದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

Body Found: ಬಿಜೆಪಿ‌ ಮಾಜಿ ಕಾರ್ಪೊರೇಟರ್ ಶವ ಕಾರಿನೊಳಗೆ ಸುಟ್ಟು ಕರಕಲಾಗಿ ಪತ್ತೆ, ಶಂಕೆಗಳ ಸುಳಿ

ಮಾಜಿ ಕಾರ್ಪೊರೇಟರ್ ಶವ ಕಾರಿನೊಳಗೆ ಸುಟ್ಟು ಕರಕಲಾಗಿ ಪತ್ತೆ, ಶಂಕೆಗಳ ಸುಳಿ

ದಾವಣಗೆರೆ ಹೊರವಲಯ ಹದಡಿ ರಸ್ತೆಯ ಬಳಿಯ ತೋಟದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಾಜಿ ಕಾರ್ಪೊರೇಟರ್ ಮೃತ ದೇಹ ಸಿಕ್ಕಿದೆ. ಕಾರಿನಲ್ಲಿ ಕುಳಿತು ಮಾಜಿ ಕಾರ್ಪೊರೇಟರ್​ ಸಂಕೋಳ್ ಚಂದ್ರಶೇಖರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ನಡುವೆ ಅವರ ಮಗನಾದ ಮಗ ಹಾಗೂ ಮಗಳು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬಸವನವಾಗೇವಾಡಿ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ !

ಬಸವನವಾಗೇವಾಡಿ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ !

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಜಾವೀಧ್, ಊಟ ತಯಾರಿದೆ ಎಂದು ಖಾನಾವಳಿ ಮುಂಭಾಗದಲ್ಲಿ ನಿಲ್ಲಿಸುವ ಬೋರ್ಡ ಮಾದರಿಯಲ್ಲಿ ಪುರಸಭೆ ಯಿಂದ ಸಾವಿನ ಗುಂಡಿಗೆ ಸ್ವಾಗತ, ನಿಧಾನವಾಗಿ ಚಲಿಸಿ ಎಂಬ ಬರಹದೊಂದಿಗೆ ಬೋರ್ಡ್ ನಿಲ್ಲಿಸಿ ಆಕ್ರೋಶ ಹೊರ ಹಾಕಿದ್ದಾನೆ. ನಂತರ ಮಧ್ಯಾಹ್ನದ ಹೊತ್ತಿಗೆ ಪುರಸಭೆ ಅಧಿಕಾರಿಗಳು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಪ್ರಯತ್ನ ಮಾಡಿದ್ದಾರೆ.

ನದಿ ಉಳಿವಿಗಾಗಿ ಸಮಾವೇಶ ಇಂದು

ನದಿ ಉಳಿವಿಗಾಗಿ ಸಮಾವೇಶ ಇಂದು

ಪಶ್ಚಿಮ ಘಟ್ಟಗಳು ಜಗತ್ತಿನ ಎಂಟು ಅತೀ ಸೂಕ್ಷ್ಮ ಪರಿಸರ ತಾಣಗಳಲ್ಲಿ ಒಂದು. ಇಲ್ಲಿನ ನದಿಗಳನ್ನು ತಡೆಯುವುದು ಎಂದರೆ ನಮ-- ಕೈಯಾರೆ ನಾವು ವಿನಾಶವನ್ನು ಆಮಂತ್ರಿಸಿದಂತೆ. ಅಭಿವೃದ್ಧಿಯು ಪರಿಸರ ಪೂರಕವಾಗಿರಬೇಕೇ ಹೊರತು ಪರಿಸರ ಮಾರಕವಾಗಬಾರದು.‘ ಎಂದು ಪರಿ ಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Namma Metro Pink Line: ನಮ್ಮ ಮೆಟ್ರೋ ಪಿಂಕ್‌ ಲೈನ್‌ನಲ್ಲಿ ಇಂದಿನಿಂದ ಪರೀಕ್ಷಾರ್ಥ ಸಂಚಾರ

ನಮ್ಮ ಮೆಟ್ರೋ ಪಿಂಕ್‌ ಲೈನ್‌ನಲ್ಲಿ ಇಂದಿನಿಂದ ಪರೀಕ್ಷಾರ್ಥ ಸಂಚಾರ

ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗದ ನಿರ್ಮಾಣ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಈ ಮಾರ್ಗದಲ್ಲಿ ಇದೀಗ ಪರೀಕ್ಷಾರ್ಥ ಸಂಚಾರ ಶುರುವಾಗಿದೆ. ಈ ಮಾರ್ಗದಲ್ಲಿ ಒಟ್ಟು 5 ನಿಲ್ದಾಣಗಳು ಇವೆ. ಪರೀಕ್ಷಾರ್ಥ ಸಂಚಾರ ಮುಗಿದ ಬಳಿಕ ಸುರಕ್ಷತಾ ಪ್ರಮಾಣಪತ್ರ ಲಭಿಸಿದ ಕೂಡಲೇ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ

Road Accident: ಓವರ್‌ಟೇಕ್‌ ಮಾಡುವಾಗ ಲಾರಿಗೆ ಕಾರು ಡಿಕ್ಕಿ, ಇಬ್ಬರು ಸಾವು

ಓವರ್‌ಟೇಕ್‌ ಮಾಡುವಾಗ ಲಾರಿಗೆ ಕಾರು ಡಿಕ್ಕಿ, ಇಬ್ಬರು ಸಾವು

ಇತ್ತೀಚೆಗೆ ಹಿರಿಯೂರು ಬಳಿಯೇ ಹೆದ್ದಾರಿಯಲ್ಲಿ ಕಂಟೈನರ್‌ ಡಿಕ್ಕಿಯಾಗಿ ಖಾಸಗಿ ಸ್ಲೀಪರ್‌ ಬಸ್‌ ಹೊತ್ತಿ ಉರಿದು ಐದು ಮಂದಿ ಸಜೀವ ದಹನಗೊಂಡಿದ್ದರು. ಈ ಘಟನೆಯ ಕಹಿನೆನಪು ಮಾಸುವ ಮುನ್ನವೇ ಇಲ್ಲಿ ಮತ್ತಷ್ಟು ಅಪಘಾತಗಳು ಸಂಭವಿಸಿವೆ. ಈ ಭಾಗದಲ್ಲಿ ಮುಂಜಾನೆ ಸಾಕಷ್ಟು ಮಂಜು ಕವಿದ ವಾತಾವರಣವಿದ್ದು, ತಡರಾತ್ರಿ ಡ್ರೈವ್‌ ಮಾಡುವ ವಾಹನ ಚಾಲಕರು ಹೆಚ್ಚು ಎಚ್ಚರ ವಹಿಸಲು ಸೂಚಿಸಿದೆ.

Bheemanna Khandre: ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ಆರೋಗ್ಯ ಏರುಪೇರು, ಆಸ್ಪತ್ರೆಗೆ ದಾಖಲು

ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ಆರೋಗ್ಯ ಏರುಪೇರು, ಆಸ್ಪತ್ರೆಗೆ ದಾಖಲು

ಕಳೆದ ಒಂದು ವಾರದಿಂದ ನಮ್ಮ ತಂದೆಯವರಾದ ಮಾಜಿ ಸಚಿವರು, ಲೋಕನಾಯಕ ಪೂಜ್ಯ ಡಾ. ಭೀಮಣ್ಣ ಖಂಡ್ರೆ ಅವರು ವಯೋಸಹಜ ಅನಾರೋಗ್ಯದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಇಂದು ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡು ಬಂದಿದ್ದು, ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

Karnataka Weather: ಬೆಂಗಳೂರಿನಲ್ಲಿ ಚಳಿಯ ಕೊರೆತ, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರಿನಲ್ಲಿ ಚಳಿಯ ಕೊರೆತ, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜಧಾನಿಯಲ್ಲಿ ಮೈಕೊರೆಯುವ ಚಳಿಯ ಅಬ್ಬರ ಮುಂದುವರಿದಿದೆ. ಬೆಂಗಳೂರಿನಲ್ಲಿ ಚಳಿಯೊಂದಿಗೆ ತುಂತುರು ಮಳೆಯೂ ಸುರಿಯುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ತೀವ್ರ ಶೀತ ವಾತಾವರಣ ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿಗೆ ಇಳಿಕೆಯಾಗಿದೆ.

Road Accident: ಹಿರಿಯೂರು ಬಳಿ ಇನ್ನೊಂದು ಭೀಕರ ಅಪಘಾತ, ನಾಲ್ವರು ಸಾವು

ಹಿರಿಯೂರು ಬಳಿ ಇನ್ನೊಂದು ಭೀಕರ ಅಪಘಾತ, ನಾಲ್ವರು ಸಾವು

ಕಾರು ಮೈಸೂರು ಕಡೆಯಿಂದ ಹಿರಿಯೂರಿನತ್ತ ಬರುತ್ತಿತ್ತು. ಲಾರಿ ಮೈಸೂರು ಕಡೆಗೆ ತೆರಳುತ್ತಿತ್ತು. ಯುವಕರ ತಂಡ ಹಳ್ಳಿಯೊಂದರಲ್ಲಿ ಊಟ ಮುಗಿಸಿಕೊಂಡು ಸ್ವಿಫ್ಟ್‌ ಡಿಸೈರ್‌ ಕಾರಿನಲ್ಲಿ ಪಟ್ಟಣದ ಕಡೆಗೆ ಬರುವಾಗ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಹಿರಿಯೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangaluru Lit Fest: ಸಿನಿಮಾಗೆ ಕಥೆಯೇ ಚೌಕಟ್ಟು: ನಟಿ ರಂಜನಿ ರಾಘವನ್

ಸಿನಿಮಾಗೆ ಕಥೆಯೇ ಚೌಕಟ್ಟು: ನಟಿ ರಂಜನಿ ರಾಘವನ್

ನಮ್ಮತನ ಎನ್ನುವುದು ಬಹಳ ಸ್ವಾರ್ಥದ ಯೋಚನೆ ಆಗುತ್ತದೆ. ಮೌಲ್ಯಗಳು ಮಾತ್ರವಿದ್ದರೆ ಸಾಕು, ಇದು ನಂದು ಎನ್ನುವ ಭಾವನೆ ಬೇಡ. ಅದು ಬಿಟ್ಟು ಇನ್ನೇನೋ ಪ್ರಯತ್ನ ಮಾಡುತ್ತಿದ್ದಾಗ ಮಾತ್ರ ಬೆಳೆಯಲು ಸಾಧ್ಯ ಎಂದು ನಟಿ, ಬರಹಗಾರ್ತಿ ಹಾಗೂ ನಿರ್ದೇಶಕಿ ರಂಜನಿ ರಾಘವನ್ ತಿಳಿಸಿದ್ದಾರೆ.

ಎಸ್‌.ಎಲ್‌. ಭೈರಪ್ಪನವರನ್ನು ಗುರಿ ಮಾಡಿ ಕೆಲವರು ಸಾಕಷ್ಟು ತೊಂದರೆ ಕೊಟ್ಟರು: ಸಂದೀಪ್ ಬಾಲಕೃಷ್ಣ

ಎಸ್‌.ಎಲ್‌. ಭೈರಪ್ಪಗೆ ಕೆಲವರು ಸಾಕಷ್ಟು ತೊಂದರೆ ಕೊಟ್ಟರು

Mangaluru Lit Fest: ಭೈರಪ್ಪನವರು ಎಲ್ಲವನ್ನೂ ಓದುಗರ ಗ್ರಹಿಕೆಗೆ ಬಿಡುತ್ತಿದ್ದರು. ಭೈರಪ್ಪನವರು ಯಾವುದನ್ನೂ ನೇರವಾಗಿ ಹೇಳುತ್ತಿರಲಿಲ್ಲ. ಪಾತ್ರಗಳ ಮೂಲಕ ಒಂದಿಷ್ಟು ವಿಷಯಗಳನ್ನು ಹೇಳುತ್ತಿದ್ದರು. ಏನು ಅರ್ಥ ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಓದುಗರಿಗೆ ಬಿಡುತ್ತಿದ್ದರು ಎಂದು ಸಂದೀಪ್ ಬಾಲಕೃಷ್ಣ ತಿಳಿಸಿದ್ದಾರೆ.

Bailahongala News: ದೊರೆತ ಕಾಲಾವಕಾಶದಲ್ಲಿ ಅನುದಾನಗಳ ಸದ್ಬಳಕೆ ಮಾಡಿದ್ದೇನೆ: ಈರಣ್ಣ ಕಡಾಡಿ

ದೊರೆತ ಕಾಲಾವಕಾಶದಲ್ಲಿ ಅನುದಾನಗಳ ಸದ್ಬಳಕೆ ಮಾಡಿದ್ದೇನೆ

ರಾಜ್ಯಸಭಾ ಸದಸ್ಯರಿಗೆ ಅನುದಾನಗಳು ಬಹಳ ಕಡಿಮೆ ಆದರೂ ನೀಡಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿ ಜನರಿಗೆ ನೆರವಾಗುವ ಕೆಲಸವನ್ನು ಮಾಡುತ್ತಿದ್ದೇನೆ, ಈ ಸಮುದಾಯ ಭವನಗಳ ಸದ್ಬಳಕೆ ಸರಿಯಾಗಿ ಆಗಲಿ, ನರೇಂದ್ರ ಮೋದಿಜಿ ಅವರ ವಿಕಸಿತ ಭಾರತದ ಕನಸನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸಗಳನ್ನು ಮಾಡೋಣ, ಭಾರತ ವಿಶ್ವಗುರು ಸ್ಥಾನದಲ್ಲಿ ವಿಜೃಂಭಿಸುವ ವೇಳೆಯನ್ನು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ

MP Dr.K.Sudhakar: ಜ.15ಕ್ಕೆ ಫಿಟ್ ಇಂಡಿಯಾ ಭಾಗವಾಗಿ ನಂದಿಗಿರಿ ಪ್ರದಕ್ಷಿಣೆ , 3 ಸಾವಿರ ಮಂದಿ ಭಾಗಿ : ಸಂಸದ ಡಾ.ಕೆ. ಸುಧಾಕರ್ ಹೇಳಿಕೆ

ಜ.15ಕ್ಕೆ ಫಿಟ್ ಇಂಡಿಯಾ ಭಾಗವಾಗಿ ನಂದಿಗಿರಿ ಪ್ರದಕ್ಷಿಣೆ

ಪ್ರಧಾನಿಗಳ ಆಶಯದಂತೆ ಸದೃಢ ಭಾರತವನ್ನು ಕಟ್ಟುವ ಉದ್ದೇಶ ನನಗಿದ್ದು ವಾಕಾಥಾನ್, ಮ್ಯಾರಥಾನ್, ನಡಿಗೆ, ಟ್ರೆಕ್ಕಿಂಗ್, ಕ್ರೀಡಾ ಮಹೋತ್ಸವ ಇತ್ಯಾದಿಗಳನ್ನು ಹಳ್ಳಿಯಿಂದ ಜಿಲ್ಲಾ ಹಂತದವರೆಗೆ ಆಯೋಜಿಸಿ ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕ್ಷೇತ್ರದಿಂದಲೇ ಮುನ್ನುಡಿ ಬರೆಯುವ ಉದ್ದೇಶವಿದೆ.ಮಹಿಳೆಯರಿಗೆ ಕೂಡ ಕ್ರೀಡೆಗಳನ್ನು ಆಯೋಜಿಸುವ ಕೆಲಸ ಮಾಡಲಾಗುವುದು

Karwar News: ಪ್ರೀತಿಸುವಂತೆ ಜೆಡಿಎಸ್‌ ನಾಯಕಿಯ ಪುತ್ರನ ಕಿರುಕುಳ; ಯುವತಿ ಆತ್ಮಹತ್ಯೆ

ಪ್ರೀತಿಸುವಂತೆ ಜೆಡಿಎಸ್‌ ನಾಯಕಿಯ ಪುತ್ರನ ಕಿರುಕುಳ; ಯುವತಿ ಆತ್ಮಹತ್ಯೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೆಡಿಎಸ್‌ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳದಿಂದಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.

ವಿಬಿ-ಜಿ ರಾಮ್ ಜಿ ವಿರುದ್ದ ಸಚಿವ ಡಾ.ಎಂ.ಸಿ.ಸುಧಾಕರ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತಾ ವಾಗ್ದಾಳಿ

ವಿಬಿ-ಜಿ ರಾಮ್ ಜಿ ವಿರುದ್ದ ಸಚಿವ ಡಾ.ಎಂ.ಸಿ.ಸುಧಾಕರ್ ವಾಗ್ದಾಳಿ

ಪ್ರಧಾನಿ ಮೋದಿ ಸರ್ಕಾರ ಆರ್‌ಎಸ್‌ಎಸ್‌ನ ಅಣತಿಯಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆಯುವ ಗ್ರಾಮಪಂಚಾಯಿತಿಗಳ ಸ್ವಾಯತ್ತತೆಗೆ ಸಿಡಿಲು ಬಡಿಯುವಂತೆ ಮಾಡಿದೆ.ಎಲ್ಲಕ್ಕೂ ಹಿಂದಿ ಪದ ಬಳಕೆ ಮೋದಿ ಸರಕಾರದ ಹೆಗ್ಗಳಿಗೆ. ವಿಬಿ-ಜಿ ರಾಮ್‌ಜಿ(VB-G Ramji) ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವಾಗ, ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ

VB Ji Ram Ji Yojana: ಭ್ರಷ್ಟಾಚಾರ ಅಂತ್ಯ ಮಾಡಿದ ವಿಬಿ ಜಿ ರಾಮ್ ಜಿ ಯೋಜನೆ, ಪಾರದರ್ಶಕತೆ ಹೆಚ್ಚಳ: ಸಂಸದ ಡಾ.ಕೆ.ಸುಧಾಕರ್

ಭ್ರಷ್ಟಾಚಾರ ಅಂತ್ಯ ಮಾಡಿದ ವಿಬಿ ಜಿ ರಾಮ್ ಜಿ ಯೋಜನೆ, ಪಾರದರ್ಶಕತೆ ಹೆಚ್ಚಳ

ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ನೇತೃತ್ವದ ಎನ್‌ಡಿಎ ಸರ್ಕಾರ(NDA government) ಮನರೇಗಾ ಯೋಜನೆಯನ್ನು ಸುಧಾರಣೆ ಮಾಡಿ ವಿಬಿ ಜಿ ರಾಮ್ ಜಿ ಯೋಜನೆ ತಂದಿದೆ. ಇದು 2047 ರ 'ವಿಕಸಿತ ಭಾರತ'ದ ಗುರಿಯನ್ನು ತಲುಪಲು ಪೂರಕವಾಗಿದೆ. 2005 ರ ಮೂಲ ಕಾಯಿದೆಯನ್ನು ಈಗಿನ ಕಾಲಕ್ಕೆ ತಕ್ಕಂತೆ ಸುಧಾರಣೆ ಮಾಡುವುದು ಅನಿವಾರ್ಯವಾಗಿತ್ತು. ಯುಪಿಎ ಆಡಳಿತದ ಅವಧಿಯಲ್ಲಿ ಈ ಯೋಜನೆ ಯಡಿ ಭ್ರಷ್ಟಾಚಾರ ಹಾಗೂ ರಾಜಕೀಯ ಹಸ್ತಕ್ಷೇಪ ನಡೆಯುತ್ತಿತ್ತು

ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇರಳ, ಗೋವಾದಂತೆ ಸಿಆರ್‌ಜಡ್ ಕಾನೂನು ಸರಳೀಕರಣ: ಡಿ.ಕೆ.ಶಿವಕುಮಾರ್‌

ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್‌ಜಡ್ ಕಾನೂನು ಸರಳೀಕರಣ: ಡಿಕೆಶಿ

ಮಂಗಳೂರಿನಲ್ಲಿ ನಡೆದ 'ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026' ರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ಕರಾವಳಿಯು ಆರೋಗ್ಯ ಕ್ಷೇತ್ರ, ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಪ್ರದೇಶವಾಗಿದೆ. ಉದ್ಯಮಿಗಳು ಸೇರಿ ಅನೇಕರ ಸಲಹೆ ಸೂಚನೆಗಳನ್ನು ‌ಸಹ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಮಲಯಾಳಂ ಭಾಷೆ ಮಸೂದೆ; ರಾಷ್ಟ್ರಪತಿ ಭೇಟಿಗೆ ಕಾಸರಗೋಡು ಕನ್ನಡಿಗರ ನಿಯೋಗ ಕೊಂಡೊಯ್ಯಲು ಸಿಎಂಗೆ ಮನವಿ

ರಾಷ್ಟ್ರಪತಿ ಭೇಟಿಗೆ ಕಾಸರಗೋಡು ನಿಯೋಗ ಕೊಂಡೊಯ್ಯಲು ಸಿಎಂಗೆ ಮನವಿ

Malayalam Language Bill: ಕೇರಳದ ಮಲಯಾಳಂ ಭಾಷೆ ಮಸೂದೆಯಿಂದ ಕಾಸರಗೋಡನ್ನು ಹೊರಗಿಡುವಂತೆ ಆ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಒತ್ತಾಯಿಸಬೇಕು ಹಾಗೂ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ಕಾಸರಗೋಡಿನ ನಿಯೋಗ ಕೊಂಡೊಯ್ಯುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.

MLA Ashoka Pattana: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸಹಾಯಧನ ಚೆಕ್ ವಿತರಣೆ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸಹಾಯಧನ ಚೆಕ್ ವಿತರಣೆ

ರಾಜ್ಯಾದ್ಯಂತ ಹಲವು ಅಪಘಾತ ಪ್ರಕರಣಗಳು ಇದ್ದು, ನಮ್ಮ ರಾಮದುರ್ಗ ತಾಲೂಕಿನ ಪರಿಶಿಷ್ಠ ಕುಟುಂಬಗಳ ಮೃತರ ಸಂಬಂಧಿಕ ರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿಶೇಷ ಪ್ರಕಣವೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ, ಪರಿಹಾರ ಹಣ ಮಂಜೂರು ಮಾಡಿಸಿದ್ದೇನೆ. ಪರಿಹಾರ ಪಡೆದ ಕುಟುಂಬಸ್ಥರು ಸರಕಾರದಿಂದ ದೊರೆತ ಪರಿಹಾರದ ಹಣವನ್ನು ದುರುಪಯೋಗ ಮಾಡಿಕೊಳ್ಳಬಾರದು. ಮಕ್ಕಳ ಶಿಕ್ಷಣದ ಜೊತೆಗೆ ಕುಟುಂಬದ ಅಭಿವೃದ್ಧಿಗೆ ವೆಚ್ಚ ಮಾಡಬೇಕು

Loading...