ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkaballapur News:  ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ: ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಸೂಚನೆ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ನೆಡೆಯುವ ಈ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸಮಸ್ತ ನಾಗರಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಲು ಈ ವೇಳೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಕಟ್ಟು ನಿಟ್ಟಿನ ಸೂಚನೆ ನೀಡಿದರು.

Chikkaballapur News: ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ : ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಎಲ್ಲಾ ಜಿಲ್ಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ

ರಾಜ್ಯಾದ್ಯಂತ ಏಕ ಕಾಲದಲ್ಲಿ ಸೆಪ್ಟೆಂಬರ್ ೧೫ ರಿಂದ ಸಮೀಕ್ಷೆ ಪ್ರಾರಂಭಿಸುತ್ತಿದ್ದು, (ಸರ್ಕಾರಿ ರಜೆ ಯನ್ನು ಹೊರತು ಪಡಿಸಿ) ೪೫ ದಿನಗಳ ಕಾಲ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದವರೇ ಸಮೀಕ್ಷೆ ಕಾರ್ಯ ಮಾಡುತ್ತಿರುವುದು ಈ ಸಮೀಕ್ಷೆಯ ವಿಶೇಷತೆ ಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಮುದಾಯ ಆಧಾರಿತ ನಿಸರ್ಗ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯದವರನ್ನೇ ಸಮೀಕ್ಷೆದಾರರನ್ನಾಗಿ ಆಯ್ಕೆ ಮಾಡಲಾಗಿದೆ.

Chikkaballapur News: ಅರ್ಥಪೂರ್ಣವಾಗಿ ವಿಶ್ವಕರ್ಮ ಜಯಂತಿಯ ಆಚರಿಸಲು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಕರೆ

ಅರ್ಥಪೂರ್ಣವಾಗಿ ವಿಶ್ವಕರ್ಮ ಜಯಂತಿಯ ಆಚರಿಸಲು ಕರೆ

ಶ್ರೀ ವಿಶ್ವಕರ್ಮ ಜಯಂತಿ ಯನ್ನು ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಅನುಸರಿಸಿ ಕೊಂಡು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಕಾರ್ಯಕ್ರಮದ  ವೇದಿಕೆ ಸಿದ್ಧತೆ, ಆಹ್ವಾನ ಪತ್ರಿಕೆಗಳ ಮುದ್ರಣ, ವಿತರಣೆ, ಭಾಷಣ, ಎಸ್. ಎಸ್. ಎಲ್. ಸಿ  ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲು ತೀರ್ಮಾನಿಸ ಲಾಗಿದೆ

Kabaddi: ಕಬಡ್ಡಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಕಬಡ್ಡಿ ಜಿಲ್ಲಾಮಟ್ಟಕ್ಕೆ ಆಯ್ಕೆ

ನಗರದ ನೇತಾಜಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆ ಯಲ್ಲಿ, ಕಬಡ್ಡಿ ವಿಭಾಗ ದಲ್ಲಿ, ನಗರದ ಶ್ರೀ ವಿವೇಕಾನಂದ ಶಾಲೆಯ, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಹಂತಕ್ಕೆ ಆಯ್ಕೆಯಾಗಿದ್ದಾರೆ

Hassan Tragedy: ಹಾಸನ ದುರಂತಕ್ಕೆ ಸಿಎಂ ಸಂತಾಪ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ

ಹಾಸನ ದುರಂತ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

CM Siddaramaiah: ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ಶುಕ್ರವಾರ ರಾತ್ರಿ ನಡೆದ ಭೀಕರ ದುರಂತದಲ್ಲಿ 8 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಣೇಶ ಮೆರವಣಿಗೆ ಮೇಲೆ ಕ್ಯಾಂಟರ್‌ ನುಗ್ಗಿ ದುರಂತ ಸಂಭವಿಸಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿ, ಪರಿಹಾರ ಘೋಷಿಸಿದ್ದಾರೆ.

Gauribidanur News: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ವಿರ್ಬಾಕ್ ಅನಿಮಲ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಕಾರ್ಪೋ ರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸುಮಾರು 2 ಲಕ್ಷ 40 ಸಾವಿರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೋಚಿಮಲ್ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕ ಜೆ ಕಾಂತರಾಜು ಉದ್ಘಾಟಿಸಿದರು.

Pralhad Joshi: ಪ್ರಧಾನಿ ಮೋದಿ ತಾಯಿಯ ಬಗ್ಗೆ ಎಐ ವಿಡಿಯೋ ಹರಿಬಿಟ್ಟು ಕಾಂಗ್ರೆಸ್ ನೀಚ ರಾಜಕಾರಣ: ಜೋಶಿ ಆಕ್ರೋಶ

ಮೋದಿ ತಾಯಿಯ ಬಗ್ಗೆ ಎಐ ವಿಡಿಯೋ ಹರಿಬಿಟ್ಟು ಕಾಂಗ್ರೆಸ್ ನೀಚ ರಾಜಕಾರಣ

Pralhad Joshi: ಪ್ರಧಾನಿ ಮೋದಿ ಅವರ ದಿವಂಗತ ತಾಯಿ ಹೆಸರನ್ನು ರಾಜಕಾರಣಕ್ಕೆ ಎಳೆದು ತರುವ ಮೂಲಕ ಅವಮಾನ ಮಾಡುತ್ತಿದೆ. ಮಾತ್ರವಲ್ಲ ಪುನರಾವರ್ತಿತ ಅಪರಾಧವೆಸಗುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ರಾಹುಲ್ ಗಾಂಧಿ ವಿಫಲ ನಾಯಕತ್ವದಲ್ಲಿ, ಕಾಂಗ್ರೆಸ್ ದ್ವೇಷ ಮತ್ತು ತುಚ್ಛ ರಾಜಕಾರಣ ಮಾಡಲು ಹೊರಟಿದೆ. ಅಧಿಕಾರದ ದುರಾಸೆಗಾಗಿ ಈ ಮಟ್ಟದ ಕೀಳು ನಡೆ ಕಾಂಗ್ರೆಸ್ ನಾಯಕರಿಗೆ ಶೋಭೆ ತರುವಂತದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರೀನಾ ಕಾರಿಡಾರ್ ಆಗಿ ಬದಲಾದ ಬೆಂಗಳೂರು ಮೆಟ್ರೋ; ಶೇಷಾದ್ರಿಪುರಂ ಅಪೋಲೋ ಹಾಸ್ಪಿಟಲ್ ಗೆ ಸೂಕ್ತ ಸಮಯದಲ್ಲಿ ತಲುಪಿದ ಹೃದಯ

ಸೂಕ್ತ ಸಮಯದಲ್ಲಿ ಹೃದಯ ತಲುಪಿಸಲು ನೆರವಾದ ಮೆಟ್ರೋ

ಬಿಎಂಆರ್‌ಸಿಎಲ್, ನಗರ ಪೊಲೀಸರು ಮತ್ತು ಆಸ್ಪತ್ರೆಯ ಹೃದಯ ಕಸಿ ತಂಡದ ನಡುವಿನ ಸಮನ್ವ ಯತೆಯಿಂದಾಗಿ ದಾನಿಯ ಹೃದಯವನ್ನು 18 ನಿಮಿಷಗಳಲ್ಲಿ ತಲುಪಿಸಲಾಗಿದ್ದು, ದಾಖಲೆ ಸಮಯ ದಲ್ಲಿ ಹೃದಯವನ್ನು ತಲುಪಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ “ಗೋಲ್ಡನ್ ವಿಂಡೋ” ಎಂದು ಕರೆಯಲ್ಪಡುವ ಸಮಯದೊಳಗೆ ಹೃದಯವನ್ನು ರವಾನಿಸಲಾಯಿತು. ಈ ಅಪೂರ್ವ ಪ್ರಯತ್ನವು ಅಸ್ಸಾಂನ 33 ವರ್ಷದ ವೈದ್ಯರಿಗೆ ಹೊಸ ಜೀವನವನ್ನು ನೀಡಿದೆ.

ಅರ್ಧಕ್ಕಿಂತ ಹೆಚ್ಚು ಹದಿಹರೆಯದ ಹೆಣ್ಣು ಮಕ್ಕಳಿಗೆ STEM ಬಗ್ಗೆ ಅರಿವಿಲ್ಲ: ಸಿಆರ್‌ವೈ ಅಧ್ಯಯನ

ಅರ್ಧಕ್ಕಿಂತ ಹೆಚ್ಚು ಹದಿಹರೆಯದ ಹೆಣ್ಣು ಮಕ್ಕಳಿಗೆ STEM ಬಗ್ಗೆ ಅರಿವಿಲ್ಲ

ಸಿಆರ್‌ವೈ ನಡೆಸಿದ ಗರ್ಲ್ಸ್ ಇನ್ STEM ಅಧ್ಯಯನವು ಮಹತ್ವಾಕಾಂಕ್ಷೆಯಲ್ಲಿ ಹೆಣ್ಣು ಮಕ್ಕಳು ಹುಡುಗ ರಿಗಿಂತ ಕಡಿಮೆ ಇಲ್ಲ ಎಂಬುದನ್ನು ದೃಢಪಡಿಸುತ್ತದೆ, STEMನಲ್ಲಿ ಅವರು ತುಂಬಾ ಉತ್ಸಾಹಿಗಳಾಗಿ ದ್ದಾರೆ. ಆದರೂ, ಅವರು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಡೆತಡೆಗಳಿಂದ ನಿರ್ಬಂಧಿಸ ಲ್ಪಟ್ಟಿದ್ದಾರೆ.

Irrigation Projects: ರಾಜ್ಯದ ನೀರಾವರಿ ಯೋಜನೆಗಳು, ಅನುದಾನಗಳ ಬಗ್ಗೆ ಬಿಜೆಪಿ ಸಂಸದರು ಬಾಯಿ ಬಿಡಬೇಕು: ಡಿಕೆಶಿ ಆಗ್ರಹ

ನೀರಾವರಿ ಯೋಜನೆಗಳು, ಅನುದಾನಗಳ ಬಗ್ಗೆ ಬಿಜೆಪಿ ಸಂಸದರು ಬಾಯಿ ಬಿಡಬೇಕು

Irrigation Projects: ಲಕ್ಕವಳ್ಳಿಯ ಭದ್ರಾ ಅಣೆಕಟ್ಟು ಬಾಗಿನ ಅರ್ಪಣೆ ಬಳಿಕ ಐಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿದ್ದು, "ಬಿಜೆಪಿ ಸಂಸದರು ಎದುರುಗೊಂಡರೆ ಜನರು ಪ್ರಶ್ನೆ ಮಾಡಬೇಕು. ನಮ್ಮ‌ ಪಾಲಿನ ಹಣ ಕೊಡಿಸಿ ಎಂದು ಕೇಳಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೇಳಲು ರಾಜ್ಯದ ಬಿಜೆಪಿ ಸಂಸದರು ಬಾಯನ್ನೇ ಬಿಚ್ಚುತ್ತಿಲ್ಲ ಎಂದು ಕಿಡಿಕಾರಿದರು.

MLA K H PuttaswamyGowda: ವಿದ್ಯಾರ್ಥಿಗಳು ವಿದ್ಯೆಯ ಜೊತೆ ಸಂಸ್ಕಾರವನ್ನೂ ಕಲಿಯಬೇಕು

ವಿದ್ಯಾರ್ಥಿಗಳು ವಿದ್ಯೆಯ ಜೊತೆ ಸಂಸ್ಕಾರವನ್ನೂ ಕಲಿಯಬೇಕು

ವಿದ್ಯಾರ್ಥಿಗಳ ಜೀವನ ಅಮೂಲ್ಯವಾದುದ್ದು, ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠವನ್ನು ಶ್ರದ್ಧೆಯಿಂದ ಕಲಿಯ ಬೇಕು, ಸಮಯವನ್ನು ವ್ಯಯ ಮಾಡದೆ, ಮೊಬೈಲ್ ಗೀಳಿಗೆ ಬೀಳದೆ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯವನ್ನು ಕಳೆಯುವ ಬದಲು ವಿದ್ಯಾರ್ಜನೆಯಲ್ಲಿ ಬಳಸಿದಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ

Pourakarmikas Demands: ಪೌರ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಿಎಂ ಭರವಸೆ

ಪೌರ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಿಎಂ ಭರವಸೆ

CM Siddaramaiah: ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ವಿವಿಧ ಪೌರ ಕಾರ್ಮಿಕ ಸಂಘಟನೆಗಳ ಬೇಡಿಕೆ ಕುರಿತು ಸಿಎಂ ಸಭೆ ನಡೆಸಿ ಮಾತನಾಡಿದರು. ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Adichunchanagiri Shri: ಉತ್ತಮ ಶಿಕ್ಷಣ ನೀಡುವ ಶಿಕ್ಷಕರಿಂದ ಮಾತ್ರವೇ ದೇಶದ ಕೀರ್ತಿ ಬೆಳಗಲಿದೆ : ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾಸ್ವಾಮೀಜಿ

ಉತ್ತಮ ಶಿಕ್ಷಣ ನೀಡುವ ಶಿಕ್ಷಕರಿಂದ ಮಾತ್ರವೇ ದೇಶದ ಕೀರ್ತಿ ಬೆಳಗಲಿದೆ

ವಿಜ್ಞಾನ ಎಷ್ಟೇ ಬೆಳವಣಿಗೆಯಾದರೂ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯ ಗಳನ್ನು ಮರೆಯಬಾರದು.ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಾ ವೃತ್ತಿರಂಗದವರನ್ನು ಸೃಷ್ಟಿಸುವ ಶಕ್ತಿ ಶಿಕ್ಷಕ ವೃಂದಕ್ಕೆ ಇದೆ ಆದ್ದರಿಂದ ನಿಮ್ಮ ವೃತ್ತಿರಂಗವನ್ನು ಪ್ರೀತಿಸಿ, ಗೌರವಿಸುವ ಮೂಲಕ ಕಾರ್ಯನಿರ್ವಹಿಸಿ ದೇಶಕ್ಕೆ ಸತ್ಪ್ರಜೆಗಳನ್ನು ರೂಪಿಸಿ.

Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್‌ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ

ಎಚ್ಎಲ್ಎಲ್‌ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ

ಎಚ್ಎಲ್ಎಲ್ನ ವಜ್ರ ಮಹೋತ್ಸವ ವಿಸ್ತರಣೆ ಮತ್ತು ವೈವಿಧ್ಯೀಕರಣ ಪ್ರಯತ್ನಗಳ ಭಾಗವಾಗಿ ಈ ಸಹಯೋಗ ಕೈಗೊಳ್ಳಲಾಗಿದೆ. ದೇಶವ್ಯಾಪಿ ಆರೋಗ್ಯ ಸೇವಾ ಜಾಲವನ್ನು ಹೊಂದಿರುವ ಎಚ್ಎಲ್ಎಲ್ ತನ್ನ ತಲುಪುವಿಕೆಯನ್ನು ಬಳಸಿಕೊಳ್ಳಲಿದ್ದು, ನಿಮ್ಹಾನ್ಸ್ ತನ್ನ ಸಂಶೋಧನೆ, ತರಬೇತಿ ಮತ್ತು ಚಿಕಿತ್ಸಾ ಸೇವೆಗಳ ಪರಿಣತಿಯನ್ನು ಹಂಚಿಕೊಳ್ಳಲಿದೆ.

PSB Parivar: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ವತಿಯಿಂದ “PSB ಪರಿವಾರ” ಪ್ರಾರಂಭ!

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ವತಿಯಿಂದ “PSB ಪರಿವಾರ” ಪ್ರಾರಂಭ!

ಖಾತೆಗಳನ್ನು ಲಿಂಕ್ ಮಾಡುವ ಮೂಲಕ, ಕುಟುಂಬಗಳು ಹೆಚ್ಚಿನ ನಮ್ಯತೆ ಮತ್ತು ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳನ್ನು ನಿರ್ವಹಿಸುವ ಸುಲಭತೆಯೊಂದಿಗೆ ತಡೆರಹಿತ ಬ್ಯಾಂಕಿಂಗ್ ಸೇವೆಗಳನ್ನು ಆನಂದಿಸ ಬಹುದು. ಇದರ ಜೊತೆಗೆ, ಈ ಯೋಜನೆಯು NEFT, RTGS ಮತ್ತು SMS ಎಚ್ಚರಿಕೆಗಳ ಮೇಲಿನ ಶುಲ್ಕ ಗಳನ್ನು ಮನ್ನಾ ಮಾಡುತ್ತದೆ, ಇದು ವೆಚ್ಚ-ಪರಿಣಾಮಕಾರಿ ಮತ್ತು ತಡೆರಹಿತ ವಹಿವಾಟುಗಳನ್ನು ಖಚಿತಪಡಿಸುತ್ತದೆ.

ವೆಂಕಟ್ ಸೆಂಟರ್ ಫಾರ್ ಅಸೈಟಿಕ್ ಹೆಲ್ತ್ ನಿಂದ ದೇಶದಲ್ಲೇ ಮೊದಲ ಬಾರಿಗೆ ತಲೆ ನೋವಿಗೆ ನೂತನ ಶಸ್ತ್ರ ಚಿಕಿತ್ಸಾ ವಿಧಾನ ಪ್ರಾರಂಭ

ಮೊದಲ ಬಾರಿಗೆ ತಲೆ ನೋವಿಗೆ ನೂತನ ಶಸ್ತ್ರ ಚಿಕಿತ್ಸಾ ವಿಧಾನ ಪ್ರಾರಂಭ

ಅಂತರರಾಷ್ಟ್ರೀಯ ಮೈಗ್ರೇನ್ ಆಕ್ಷನ್ ದಿನಾಚರಣೆ (ಸೆಪ್ಟೆಂಬರ್ 12, 2025) ಪ್ರಯುಕ್ತ ತಲೆ ನೋವು ಸಮಸ್ಯೆಗೆ ಪರಿಣಾಮಕಾರಿ ಉಪಶಮನ ನೀಡಲು ಅಭಿಯಾನವನ್ನು ಹೊಮ್ಮಿಕೊಳ್ಳಲಾಗಿದೆ. ಬನಶಂಕರಿ ಯ ಡಾ. ಪುನೀತ್ ರಾಜ್ ಕುಮಾರ್ ರಸ್ತೆಯ ಎನ್ ಸಿಇಆರ್‌ಟಿ ಪಕ್ಕದಲ್ಲಿ ನಮ್ಮ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ತಲೆ ನೋವಿಗೆ ಪರಿಣಾಮಕಾರಿ ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ

ಜೀವ ಜಲ ರಕ್ಷಣೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಜೀವ ಜಲ ರಕ್ಷಣೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು

ಸಂರಕ್ಷಣೆ ಮತ್ತು ಜಲಮೂಲಗಳ ಪುನಶ್ಚೇ ತನ ಕುರಿತು ರಾಷ್ಟ್ರಮಟ್ಟದ ಸ್ವಯಂ ಸೇವಾ ಮಹಿಳಾ ಸಂಘಟನೆ “ಸಂಪೂರ್ಣ” ಮತ್ತು ತೇರಾಪಂತ್ ಮಹಿಳಾ ಮಂಡಲ, ವಿಜಯನಗರ ಸಂಘಟನೆ ಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನೆಲ, ಜಲ ಸಂರಕ್ಷಣೆಗೆ ವಿಶೇಷವಾಗಿ ಯುವ ಸಮೂಹ ಮುಂದಾಗಬೇಕು

Hassan Tragedy: ಹಾಸನದಲ್ಲಿ ಭೀಕರ ದುರಂತ; ಗಣೇಶ ಮೆರವಣಿಗೆ ಮೇಲೆ ಕ್ಯಾಂಟರ್‌ ನುಗ್ಗಿ 8 ಮಂದಿ ಸಾವು, 20 ಮಂದಿಗೆ ಗಾಯ

ಹಾಸನದಲ್ಲಿ ಗಣೇಶ ಮೆರವಣಿಗೆ ಮೇಲೆ ಕ್ಯಾಂಟರ್‌ ನುಗ್ಗಿ 8 ಮಂದಿ ಸಾವು

Hassan Accident: ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿ ಬಳಿ ಶುಕ್ರವಾರ ರಾತ್ರಿ ಈ ದುರಂತ ನಡೆದಿದೆ. ಗಣೇಶ ಮೆರವಣಿಗೆ ಮೇಲೆ ಕ್ಯಾಂಟರ್‌ ನುಗ್ಗಿ 8 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Dharmasthala case: ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಜಾಮೀನು ಅರ್ಜಿ ಆದೇಶ‌ ಸೆ.16ಕ್ಕೆ ಕಾಯ್ದಿರಿಸಿದ ಕೋರ್ಟ್

ಚಿನ್ನಯ್ಯ ಜಾಮೀನು ಅರ್ಜಿ ಆದೇಶ‌ ಕಾಯ್ದಿರಿಸಿದ ಕೋರ್ಟ್

Maskman Chinnayya bail: ಬೆಳ್ತಂಗಡಿ ಕೋರ್ಟ್‌ನಲ್ಲಿ ಚಿನ್ನಯ್ಯ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಗೆ ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ‌ ನ್ಯಾಯಾಧೀಶರು, ಜಾಮೀನು ಆದೇಶ ಕಾಯ್ದಿರಿಸಿದ್ದಾರೆ.

MLA C B Suresh Babu: ಜನರ ಅಧಿಕಾರ ಜನರ ಕೈಗೆ: ಶಾಸಕ ಸಿ.ಬಿ. ಸುರೇಶ್ ಬಾಬು

ಜನರ ಅಧಿಕಾರ ಜನರ ಕೈಗೆ: ಶಾಸಕ ಸಿ.ಬಿ. ಸುರೇಶ್ ಬಾಬು

​"ನಾವಾಗಲಿ ಅಥವಾ ಇಲಾಖೆಯ ಅಧಿಕಾರಿಗಳಾಗಲಿ, ನಮ್ಮ ಕರ್ತವ್ಯವನ್ನು ಸೇವೆಯ ಮನೋಭಾವ ದಿಂದ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಕಳೆದ 79 ವಾರಗಳಿಂದ ತಿ.ನಂ.ಶ್ರೀ ಭವನದಲ್ಲಿ ವಾರಕ್ಕೊಮ್ಮೆ ಜನಸ್ಪಂದನ ಸಭೆ ನಡೆಸುತ್ತಿದ್ದೇವೆ. ಇದರಿಂದಾಗಿ ಮಾಸಿಕ ವೇತನಗಳ ಅರ್ಜಿಗಳ ಸಂಖ್ಯೆ ತಾಲೂಕಿನಲ್ಲಿ ಕಡಿಮೆಯಾಗಿದೆ. ಇದಲ್ಲದೆ, ಬುಕ್ಕಾಪಟ್ಟಣ ಹೋಬಳಿಯ ಜನರಿಗಾಗಿ ಶಿರಾದಲ್ಲಿ ಸಭೆಗಳನ್ನು ಆಯೋಜಿಸಿದ್ದೇವೆ.

Bomb threat: ಹಾನಗಲ್ ಕುಮಾರೇಶ್ವರ ಮಠಕ್ಕೆ ಬಾಂಬ್‌ ಬೆದರಿಕೆ; ಬಾಂಬ್‌ ನಿಷ್ಕ್ರಿಯ ದಳ, ಡಾಗ್‌ ಸ್ಕ್ವಾಡ್‌ನಿಂದ ತಪಾಸಣೆ

ಹಾನಗಲ್ ಕುಮಾರೇಶ್ವರ ಮಠಕ್ಕೆ ಬಾಂಬ್‌ ಬೆದರಿಕೆ ಕರೆ

Hangal News: ಹಾನಗಲ್‌ ಪಟ್ಟಣದ ಕುಮಾರೇಶ್ವರ ಮಠ ಸೇರಿ ಕಾರು, ಬಸ್, ಶಾಲೆಗಳು ಸೇರಿ ವಿವಿಧೆಡೆ ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಸ್‌ಪಿ ಯಶೋಧಾ ವಂಟಗೋಡಿ ಪ್ರತಿಕ್ರಿಯೆ ನೀಡಿದ್ದು, ಹಾನಗಲ್‌ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಕರೆ ಮಾಡಿರುವ ನಂಬರ್ ಟ್ರೇಸ್ ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಡೊಮ್ಲೂರ್, ಬೆಂಗಳೂರಿನಲ್ಲಿ ಹೊಸ ಎಕ್ಸ್‌ಪೀರಿಯನ್ಸ್ ಹಬ್ ಆರಂಭಿಸಿದ MATTER – ಕರ್ನಾಟಕದ ಹಸಿರು ಭವಿಷ್ಯಕ್ಕೆ ಶಕ್ತಿ

ಡೊಮ್ಲೂರ್, ಬೆಂಗಳೂರಿನಲ್ಲಿ ಹೊಸ ಎಕ್ಸ್‌ಪೀರಿಯನ್ಸ್ ಹಬ್ ಆರಂಭಿಸಿದ MATTER

“ಬೆಂಗಳೂರು ಭಾರತದ ಆವಿಷ್ಕಾರ ರಾಜಧಾನಿ. ಡೊಮ್ಲೂರ್ ನಗರದಲ್ಲಿನ ತಂತ್ರಜ್ಞಾನ ಹಾಗೂ ವಸತಿ ಕೇಂದ್ರಗಳ ನಡುವಿನ ಚೇತನ ಸಮುದಾಯವಾಗಿದೆ. ಇಲ್ಲಿಯ ಹೊಸ ಎಕ್ಸ್‌ಪೀರಿಯನ್ಸ್ ಹಬ್ ಮೂಲಕ ಜನರು ವಿಶ್ವಮಟ್ಟದ ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ನೇರವಾಗಿ ಅನುಭವಿಸುವ ಅವಕಾಶ ಪಡೆಯುತ್ತಾರೆ

Karnataka Rains: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭರ್ಜರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭರ್ಜರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

Rain News: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 20°C ಇರುವ ಸಾಧ್ಯತೆ ಇದೆ.

31‌ DAYS Movie: ನಿರಂಜನ್ ಶೆಟ್ಟಿ ಅಭಿನಯದ ʼ31‌ DAYSʼ ಚಿತ್ರತಂಡದಿಂದ ಸಕ್ಸಸ್ ಮೀಟ್‌

ನಿರಂಜನ್ ಶೆಟ್ಟಿ ಅಭಿನಯದ ʼ31‌ DAYSʼ ಚಿತ್ರತಂಡದಿಂದ ಸಕ್ಸಸ್ ಮೀಟ್‌

31‌ DAYS Movie: ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ, ರಾಜ ರವಿಕುಮಾರ್ ನಿರ್ದೇಶಿಸಿರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ ʼ31 DAYSʼ ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡದಿಂದ ಸಕ್ಸಸ್ ಮೀಟ್‌ ಆಯೋಜಿಸಲಾಗಿತ್ತು.

Loading...