ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PES PU College: ಕಠಿಣ ಪರಿಶ್ರಮ, ಒಳ್ಳೆಯ ಹವ್ಯಾಸಗಳಿಂದ ಯಶಸ್ಸು ಸಾಧ್ಯ: ಪ್ರೊ. ಜವಾಹ‌ರ್ ದೊರೆಸ್ವಾಮಿ

PES PU College: ಪಿಇಎಸ್ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ವರ್ಷದ ಪ್ರಥಮ ಪಿ.ಯು.ಸಿ ತರಗತಿಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹ‌ರ್ ದೊರೆಸ್ವಾಮಿ ಅವರು ಮಾತನಾಡಿದ್ದಾರೆ.

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಪ್ರೊ. ಜವಾಹ‌ರ್ ದೊರೆಸ್ವಾಮಿ

Profile Prabhakara R Jun 1, 2025 5:42 PM

ಬೆಂಗಳೂರು: ಪಿಇಎಸ್ ಪದವಿ ಪೂರ್ವ ಕಾಲೇಜಿನ (PES PU College) ಪ್ರಸಕ್ತ ವರ್ಷದ ಪ್ರಥಮ ಪಿ.ಯು.ಸಿ ತರಗತಿಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ನಗರದ ಪಿಇಎಸ್ ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹ‌ರ್ ದೊರೆಸ್ವಾಮಿ ಅವರು, ವಿದ್ಯಾರ್ಥಿಗಳು ತರಗತಿಯೊಳಗೆ ಕಳೆಯುವ ಸಮಯದೊಂದಿಗೆ ತರಗತಿಯ ಹೊರಗೆ ಕಳೆಯುವ ಸಮಯದಲಿ ಕೂಡ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ತಮ್ಮ ಗುರಿಯನ್ನು ತಲುಪಬಹುದು. ಕಠಿಣ ಪರಿಶ್ರಮ, ಒಳ್ಳೆಯ ಹವ್ಯಾಸಗಳು, ಉತ್ತಮ ತಂತ್ರಜ್ಞಾನದ ಬಳಕೆ ಮತ್ತು ಅತ್ಯುತ್ತಮ ಮೆಂಟರ್‌ಗಳಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಿಲು ಸಾಧ್ಯ ಎಂದು ತಿಳಿಸಿದರು.

PES PU College (2)

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಜಿ. ಸೂರ್ಯಪ್ರಸಾದ್ ಅವರು ಮಾತನಾಡಿ, ಸರಿಯಾದ ಮಾರ್ಗದರ್ಶಕರ ಸಹಾಯ ಮತ್ತು ನಿಮ್ಮ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಬೇಕು. ಬದುಕಿನ ಯಶಸ್ಸು ಅಡಗಿರುವುದು ನಾವು ಅಳವಡಿಸಿಕೊಂಡಿರುವ ಶಿಸ್ತಿನಿಂದ ಹೊರತು, ಸಾಮಾಜಿಕ ಜಾಲತಾಣಗಳಲ್ಲಿನ ನಾವು ಗಳಿಸುವ ಪ್ರಸಿದ್ಧಿಯಿಂದಲ್ಲ. ಪ್ರಸ್ತುತ ಜಗತ್ತಿನಲ್ಲಿ ತಂತ್ರಜ್ಞಾನದ ಬಳಕೆಯು ಉನ್ನತಿಗೆ ಕಾರಣವಾಗುತ್ತದೆ, ಆದರೆ ಅತಿಯಾದ ಅವಲಂಬನೆ ನಮ್ಮನ್ನು ಸೋಮಾರಿಗಳನ್ನಾಗಿ ಮಾಡುತ್ತದೆ. ಹೀಗೆ ಅಭಿವೃದ್ಧಿಗಾಗಿ ತಂತ್ರಜ್ಞಾನದ ಜಾಗೃತ ಬಳಕೆಯ ಬಗ್ಗೆ ತಿಳಿಸಿದರು.

PES PU College (1)

ಈ ಸಮಾರಂಭದಲ್ಲಿ 2024- 25ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಒಟ್ಟು 73 ವಿದ್ಯಾರ್ಥಿಗಳಿಗೆ ಅವರು ಪಾವತಿಸಿದ ಶೇಕಡ 25ರಷ್ಟು ಶುಲ್ಕವನ್ನು ವಿದ್ಯಾರ್ಥಿವೇತನವನ್ನಾಗಿ ನೀಡಲಾಯಿತು. ಈ ಸಮಾರಂಭದಲ್ಲಿ ಎಚ್.ಎನ್. ಕ್ಯಾಂಪಸ್‌ನ ನಿರ್ದೇಶಕ ಪ್ರೊ.ಎಂ.ವಿ.ಸತ್ಯನಾರಾಯಣರವರು, ಕಾಲೇಜು ಪ್ರಾಂಶುಪಾಲ ಡಾ.ಸಿ.ನಾರಾಯಣ ರೆಡ್ಡಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಲೇಜಿನ ಎಲಾ, ಬೋಧಕ, ಬೋಧಕೇತರರ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | CM Siddaramaiah: ಸುಳ್ಳು ಸುದ್ದಿ, ದ್ವೇಷ ಭಾಷಣದ ವಿರುದ್ಧ ಕಾನೂನು ಕ್ರಮ ಜರುಗಿಸಿ: ಸಿಎಂ ಸೂಚನೆ