ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ನಳ ದಮಯಂತಿಯನ್ನು ಸೇರಿಸಿದ ಅಕ್ಷ ಹೃದಯ ವಿದ್ಯೆ

ಇತ್ತ ದಮಯಂತಿಯ ತಂದೆ ರಾಜ ಭೀಮನು ತನ್ನ ಮಗಳ ವಿವಾಹಕ್ಕಾಗಿ ಸ್ವಯಂವರವನ್ನು ಏರ್ಪಡಿಸಿ ದನು. ಈ ಸ್ವಯಂವರದಲ್ಲಿ ರಾಜರು ಸೇರಿದಂತೆ ಅನೇಕ ದೇವರುಗಳು ಭಾಗವಹಿಸಿದ್ದರು. ಆದರೆ, ಎಲ್ಲಾ ರಾಜಕುಮಾರರು ನಳನ ರೂಪದಲ್ಲಿದ್ದರು. ಆದರೂ ದಮಯಂತಿ ತಾನು ಪ್ರೀತಿಸು ತ್ತಿದ್ದ ನಳನನ್ನೇ ಪತಿಯಾಗಿ ಆಯ್ದುಕೊಂಡಳು. ರಾಜಕುಮಾರ ನಳನಿಗೂ ರಾಜಕುಮಾರಿ ದಮಯಂತಿಗೂ ವಿವಾಹ ನಡೆಯಿತು.

ನಳ ದಮಯಂತಿಯನ್ನು ಸೇರಿಸಿದ ಅಕ್ಷ ಹೃದಯ ವಿದ್ಯೆ

ಒಂದೊಳ್ಳೆ ಮಾತು

rgururaj628@gmail.com

ನಳ ಮಹಾರಾಜನ ಹೆಸರನ್ನು ಸಾಮಾನ್ಯವಾಗಿ ನೀವೆಲ್ಲರೂ ಕೇಳಿರುತ್ತೀರಿ. ಈತನು ದ್ವಾಪರ ಯುಗದಲ್ಲಿ ನಿಷಾದ ಸಾಮ್ರಾಜ್ಯದ ರಾಜನಾಗಿದ್ದವನು. ಸನಾತನ ಗ್ರಂಥಗಳಲ್ಲಿ ಅಕ್ಷ ಹೃದಯ ಮಂತ್ರದ ಮೂಲಕ ರಾಜ ನಳ ತನ್ನ ಕಳೆದುಕೊಂಡ ರಾಜ್ಯವನ್ನು ಮರಳಿ ಪಡೆದನೆಂದು ಉಲ್ಲೇಖಿಸ ಲಾಗಿದೆ. ಈ ಅಕ್ಷ ಹೃದಯ ವಿದ್ಯೆಯನ್ನು ಪಡೆಯುವ ಮೂಲಕ ರಾಜ ನಳನು ಮರಳಿ ತನ್ನ ಶಕ್ತಿ ಯನ್ನು ಪಡೆದುಕೊಂಡಿದ್ದನು. ರಾಜ ನಳನು ಬಹಳ ಕರುಣಾಮಯಿಯಾಗಿದ್ದನು. ರಾಜ ನಳ ಅಕ್ಷ ಹೃದಯ ವಿದ್ಯೆಯನ್ನು ಕಲಿಯಲು ಕಾರಣವೇನು? ಈ ಕುರಿತು ಮಾಹಿತಿಯಿದು. ರಾಜ ನಳ ಬಾಲ್ಯ ದಿಂದಲೂ ಸದ್ಗುಣ ಶೀಲ, ಧಾರ್ಮಿಕ, ಕಠಿಣ ಪರಿಶ್ರಮ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿ ಬಹಳ ಪ್ರವೀಣನಾಗಿದ್ದನು. ರಾಜಕುಮಾರನು ಬೆಳೆದನು. ಈ ಸಮಯದಲ್ಲಿ ನಳನು ದಮಯಂತಿ ಯನ್ನು ಭೇಟಿಯಾದನು. ರಾಜಕುಮಾರ ನಳ ಮತ್ತು ದಮಯಂತಿ ಪರಸ್ಪರ ಪ್ರೀತಿಸಲಾರಂಭಿಸಿ ದರು.

ಇತ್ತ ದಮಯಂತಿಯ ತಂದೆ ರಾಜ ಭೀಮನು ತನ್ನ ಮಗಳ ವಿವಾಹಕ್ಕಾಗಿ ಸ್ವಯಂವರವನ್ನು ಏರ್ಪಡಿಸಿದನು. ಈ ಸ್ವಯಂವರದಲ್ಲಿ ರಾಜರು ಸೇರಿದಂತೆ ಅನೇಕ ದೇವರುಗಳು ಭಾಗವಹಿಸಿದ್ದರು. ಆದರೆ, ಎಲ್ಲಾ ರಾಜಕುಮಾರರು ನಳನ ರೂಪದಲ್ಲಿದ್ದರು. ಆದರೂ ದಮಯಂತಿ ತಾನು ಪ್ರೀತಿಸು ತ್ತಿದ್ದ ನಳನನ್ನೇ ಪತಿಯಾಗಿ ಆಯ್ದುಕೊಂಡಳು. ರಾಜಕುಮಾರ ನಳನಿಗೂ ರಾಜಕುಮಾರಿ ದಮಯಂತಿಗೂ ವಿವಾಹ ನಡೆಯಿತು.

ಇದನ್ನೂ ಓದಿ: Roopa Gururaj Column: ಕ್ಷಮೆ ಕೇಳುವುದರಿಂದ ನಾವು ಚಿಕ್ಕವರಾಗುವುದಿಲ್ಲ

ವಿವಾಹದ ನಂತರ ರಾಜ ನಳ ಮತ್ತು ದಮಯಂತಿಯ ವೈವಾಹಿಕ ಜೀವನ ಬಹಳ ಸಂತೋಷದಿಂದ ಕೂಡಿತ್ತು. ಇಂತಹ ಸಮಯದಲ್ಲಿ ನಳ ಮತ್ತು ದಮಯಂತಿಯನ್ನು ಪರೀಕ್ಷಿಸಲು ಕಾಳಿ ಒಂದು ಕಠಿಣ ಪರೀಕ್ಷೆಯನ್ನು ತಂದೊಡ್ಡಿದಳು. ರಾಜ ನಳನು ಜೂಜಾಟವನ್ನು ಇಷ್ಟಪಡುತ್ತಿದ್ದನು. ಒಂದು ದಿನ ರಾಜ ನಳನು ತನ್ನ ಸಹೋದರ ಪುಷ್ಕರನನ್ನು ಜೂಜಾಡಲು ಆಹ್ವಾನಿಸಿದನು.

ಪುಷ್ಕರನು ತನ್ನ ಸಹೋದರನ ಆಹ್ವಾನವನ್ನು ಸ್ವೀಕರಿಸಿದನು. ಆ ಸಮಯದಲ್ಲಿ, ಕಾಳಿಯ ಚಮ ತ್ಕಾರದಿಂದ, ರಾಜ ನಳ ತನ್ನ ರಾಜ್ಯವನ್ನು ಕಳೆದುಕೊಂಡನು. ಇದಾದ ಬಳಿಕ ರಾಜ ನಳನನ್ನು ಗಡಿಪಾರು ಮಾಡಲಾಯಿತು. ಇದರಿಂದಾಗಿ ರಾಜ ನಳ ಮತ್ತು ಆತನ ಪತ್ನಿ ದಮಯಂತಿ ಕಾಡು ಪಾಲಾದರು. ಕಾಡಿನಲ್ಲಿ ವಾಸಿಸುವ ಸಮಯದಲ್ಲಿ ರಾಜ ನಳನು ಅನೇಕ ರೀತಿಯಾದ ಸಮಸ್ಯೆ ಗಳನ್ನು ಎದುರಿಸಿದನು.

ತನ್ನ ಅದೃಷ್ಟವನ್ನು ಮರಳಿ ಪಡೆಯುವುದಕ್ಕಾಗಿ ರಾಜ ನಳನು ಒಂದು ದಿನ ರಾತ್ರಿ ತನ್ನ ಪತ್ನಿ ದಮಯಂತಿಯನ್ನು ಕಾಡಿನಲ್ಲೇ ಬಿಟ್ಟು ಬೇರೆ ದಿಕ್ಕಿನತ್ತ ನಡೆದುಕೊಂಡು ಹೊರಟೆ ಹೋದನು. ದಮಯಂತಿ ಒಬ್ಬಳೇ ಕಾಡಿನಲ್ಲಿ ಬಹಳ ಕಷ್ಟಪಟ್ಟಳು. ಬಳಿಕ ದಮಯಂತಿ ಕಾಡಿಗೆ ಹತ್ತಿರ ದಲ್ಲಿರುವ ಒಂದು ರಾಜಮನೆತನದಲ್ಲಿ ಆಶ್ರಯವನ್ನು ಪಡೆದುಕೊಂಡಳು. ಅಷ್ಟರಲ್ಲಿ ನಳ ರಾಜನಿಗೆ ಕಾರ್ಕೋಟಕ ಸರ್ಪ ಕಚ್ಚುತ್ತದೆ. ಇದರಿಂದ ರಾಜ ನಳ ಕುರೂಪಿಯಾಗುತ್ತಾನೆ. ಇದರ ನಂತರ ರಾಜ ನಳ ಹತ್ತಿರದ ರಾಜನಲ್ಲಿ ಬಾಹುಕನ ಕೆಲಸವನ್ನು ಪಡೆಯುತ್ತಾನೆ.

ಈ ಸಮಯದಲ್ಲಿ, ದಮಯಂತಿಯ ಸ್ವಯಂವರವನ್ನು ಅವಳ ಹೆತ್ತವರು ಮತ್ತೆ ಆಯೋಜಿಸುತ್ತಾರೆ. ರಾಜ ಋತುಪರ್ಣನಿಗೂ ಈ ಮಾಹಿತಿ ಸಿಗುತ್ತದೆ. ಆ ಸಮಯದಲ್ಲಿ ಋತುಪರ್ಣ ನಳನೊಂದಿಗೆ ಸ್ವಯಂವರಕ್ಕೆ ಹೋಗುತ್ತಾನೆ. ದಾರಿಯಲ್ಲಿ ಋತುಪರ್ಣನು ರಾಜ ನಳನಿಗೆ ಅಕ್ಷ ಹೃದಯ ಮಂತ್ರ ವನ್ನು ಕಲಿಸಿದನು. ರಾಜ ನಳ ಈ ಮಂತ್ರದ ಮೂಲಕ ಪುಷ್ಕರನನ್ನು ಸೋಲಿಸಿದನು. ಇದರೊಂದಿಗೆ ರಾಜ ನಳ ತನ್ನ ಕಳೆದುಹೋದ ರಾಜ್ಯವನ್ನು ಮರಳಿ ಪಡೆದುಕೊಂಡನು. ಅಕ್ಷ ಹೃದಯ ವಿದ್ಯೆ ಅಥವಾ ಮಂತ್ರವೆಂದರೆ ಬಯಸಿದ್ದನ್ನೆಲ್ಲಾ ನೀಡುವ ಮಂತ್ರ.

ಹೀಗೆ ಜೂಜಾಟದ ಮೋಹದಿಂದ ತನ್ನೆಲ್ಲ ಐಶ್ವರ್ಯವನ್ನು ಕಳೆದುಕೊಂಡ ನಳ ಮಹಾರಾಜ ಪಡಬಾರದ ಕಷ್ಟಪಟ್ಟು ಕೊನೆಗೂ ತನ್ನ ರಾಜ ವೈಭೋಗಕ್ಕೆ ಮರಳಿದನು. ಆದರೆ ಸಾಮಾನ್ಯರಾದ ನಮ್ಮ ಗತಿ ಏನು? ಜೂಜಾಟದ ಆಮಿಷಕ್ಕೆ ಬಿದ್ದ ಯುವಕರು ಜೀವನವನ್ನೇ ಹಾಳು ಮಾಡಿ ಕೊಳ್ಳುತ್ತಾರೆ. ಇನ್ನು ಸುಲಭ ದನದ ಆಸೆಗೆ ಅನೇಕರು ತಾವು ದುಡಿದ ಹಣವನ್ನ ಜೂಜಿನಲ್ಲಿ ಕಳೆದು ಮನೆಯವರನ್ನೂ ಕಷ್ಟಕ್ಕೆ ದೂಡುತ್ತಾರೆ. ಜೀವನದಲ್ಲಿ ಸುಖವಾಗಿ ಬದುಕಲು ಯಾವುದೇ ವಾಮ ಮಾರ್ಗಗಳಿಲ್ಲ. ಅಲ್ಲಿ ಪರಿಶ್ರಮ ಪಟ್ಟಾಗ ಮಾತ್ರ ಪ್ರತಿಫಲ ದೊರೆಯುತ್ತದೆ.