ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KY Nanjegowda: ಕೋಮುಲ್‌ ಚುನಾವಣೆ ವೇಳೆ ಹೈಡ್ರಾಮಾ; ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ರೇಗಾಡಿದ ಕಾಂಗ್ರೆಸ್ ಶಾಸಕ ನಂಜೇಗೌಡ!

KY Nanjegowda: ಕೋಲಾರದಲ್ಲಿ ಕೋಮುಲ್‌ ಚುನಾವಣೆ ವೇಳೆ ಘಟನೆ ನಡೆದಿದೆ. ಪ್ರವಾಸಕ್ಕೆ ಕರೆದೊಯ್ದಿದ್ದ ಮತದಾರರಲ್ಲಿ ಮೂವರು ನಾಪತ್ತೆಯಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಹೀಗಾಗಿ ಮತದಾರರ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ ಶಾಸಕ ನಂಜೇಗೌಡ, ಪೊಲೀಸರ ಮೇಲೆ ಕೂಗಾಡಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ರೇಗಾಡಿದ ಕಾಂಗ್ರೆಸ್ ಶಾಸಕ ನಂಜೇಗೌಡ

Profile Prabhakara R Jun 25, 2025 7:01 PM

ಕೋಲಾರ: ನಗರದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೋಮುಲ್ ಚುನಾವಣೆ ವೇಳೆ ಮಾಲೂರು ಶಾಸಕ ಹಾಗೂ ಪೊಲೀಸರ ನಡುವೆ ಭಾರಿ ಹೈಡ್ರಾಮಾ ನಡೆದಿದೆ. ಪೊಲೀಸರ ವಿರುದ್ಧ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ (KY Nanjegowda) ಅವರು ರೇಗಾಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೋಮುಲ್ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ನಂಜೇಗೌಡ, 3 ಬಸ್​ಗಳಲ್ಲಿ ಮತದಾರರನ್ನು ಕರೆತಂದಿದ್ದಾರೆ. ಆದರೆ, ಕಾಣೆಯಾಗಿರುವ ಮತದಾರರ ಬಗ್ಗೆ ಹೇಳಿಕೆ ಪಡೆಯಲು ಪೊಲೀಸರು ಮುಂದಾದಾಗ ಅವರನ್ನು ಶಾಸಕ ನಂಜೇಗೌಡ ತಡೆದಿದ್ದು, ನೀವು ಅವರೊಂದಿಗೆ ಏನೂ ಮಾತನಾಡುವುದು ಬೇಡ, ಯಾವ ಹೇಳಿಕೆಯನ್ನೂ ಪಡೆಯೋದು ಬೇಡ ಎಂದು ಹೇಳಿದ್ದಾರೆ.

ಶಾಸಕನ ಮೇಲೆಯೇ ನೀವು ರಾಜಕೀಯ ಮಾಡ್ತೀರಾ? ಎಂದು ಪೊಲೀಸರ ವಿರುದ್ಧ ಶಾಸಕ ಕಿಡಿಕಾರಿದ್ದು, ಈ ವೇಳೆ ಪೊಲೀಸರು ನಿಮ್ಮ ಮುಂದೆಯೇ ಹೇಳಿಕೆ ದಾಖಲು ಮಾಡಿಕೊಳ್ಳುತ್ತೇವೆ ಎಂದರೂ ಶಾಸಕ, ಬೇಡವೇ ಬೇಡ ಎಂದು ಹೇಳಿದ್ದಾರೆ. ಬೇತಮಂಗಲ‌ ಪೊಲೀಸ್ ಠಾಣೆ ಸಿಪಿಐ ಮೇಲೆ ಶಾಸಕ ನಂಜೇಗೌಡ ರೇಗಾಡಿದ್ದು, ಕೋಲಾರ ಸರ್ಕಲ್ ಇನ್ಸ್ಪೆಕ್ಟರ್ ಸದಾನಂದ ಅವರಿಗೂ ನೀನು ಹೋಗು ಎಂದು ಹೇಳಿದ್ದಾರೆ.

ಪ್ರವಾಸಕ್ಕೆ ಕರೆದೊಯ್ದಿದ್ದ ಮತದಾರರಲ್ಲಿ ಮೂವರು ನಾಪತ್ತೆಯಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಮತದಾರರ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ ಶಾಸಕ ನಂಜೇಗೌಡ, ಪೊಲೀಸರ ಮೇಲೆ ಕೂಗಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Building Plan: ಇನ್ನುಮುಂದೆ ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಯಾರೂ ಮನೆ ಕಟ್ಟುವಂತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಬೂಡದಮಿಟ್ಟೆ ಹಾಲು ಉತ್ಪಾದಕರ ಸಂಘದ ಸುನಂದ, ಗೊಲ್ಲಹಳ್ಳಿ ಸಂಘದ ನೇತ್ರಾವತಿ, ಎಂ.ಕೊತ್ತೂರು ಗ್ರಾಮದ ಹಾಲು ಉತ್ಪಾದಕರ ಸಂಘದ ಗೀತಾ ಅವರು ನಾಪತ್ತೆಯಾಗಿದ್ದಾರೆ ಎಂದು ಬೇತಮಂಗಲ ಹಾಗೂ ಆಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹೇಳಿಕೆ ಪಡೆಯಲು ಪೊಲೀಸರು ಮುಂದಾದಾಗ ಶಾಸಕರು ಅಡ್ಡಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.