ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vadhu Serial: ಶುರುವಾದ ಐದೇ ತಿಂಗಳಿಗೆ ಅಂತ್ಯ: ಕಲರ್ಸ್​ನಲ್ಲಿ ಮುಕ್ತಾಯವಾಗುತ್ತಿದೆ ಮತ್ತೊಂದು ಧಾರಾವಾಹಿ

ಜನವರಿ 27, 2025 ರಂದು ಬಿಗ್ ಬಾಸ್ ಪ್ರಸಾರವಾಗುತ್ತಿದ್ದ ಸ್ಲಾಟ್‌ನಲ್ಲೇ ವೀಕ್ಷಕರಿಗೆ ಮನರಂಜನೆ ಕೊಡಲು ವಧು ಧಾರಾವಾಹಿ ಪ್ರಾರಂಭವಾಯಿತು. ಡಿವೋರ್ಸ್ ಲಾಯರ್‌ ಮದುವೆ ಕಥೆಯನ್ನ ಹೊತ್ತು ಬಂದ ವಧು ಇನ್ನೂ ಸರಿಯಾಗಿ 100 ಸಂಚಿಕೆಗಳನ್ನ ಮುಟ್ಟಿಲ್ಲ. ಪ್ರಾರಂಭವಾದ ಐದೇ ತಿಂಗಳಿಗೆ ಅಂತ್ಯವಾಗುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಕಲರ್ಸ್​ನಲ್ಲಿ ಮುಕ್ತಾಯವಾಗುತ್ತಿದೆ ಮತ್ತೊಂದು ಧಾರಾವಾಹಿ

Vadhu Serial

Profile Vinay Bhat Jun 5, 2025 7:36 AM

ಧಾರಾವಾಹಿ ಪ್ರಿಯರಿಗೆ ಒಂದರ ಹಿಂದೆ ಒಂದರಂತೆ ಶಾಕಿಂಗ್ ಸುದ್ದಿ ಬರುತ್ತಿದೆ. ಒಂದು ತಿಂಗಳ ಹಿಂದೆ ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯನ್ನು ಕೊನೆಗೊಳಿಸಲಾಯಿತು. ಬಳಿಕ ಇತ್ತೀಚೆಗಷ್ಟೆ ಝೀ ಕನ್ನಡ ಸೀತಾ ರಾಮ ಸೀರಿಯಲ್ ಅನ್ನು ಕೂಡ ಮುಗಿಸಿತು. ಇದೀಗ ಕಲರ್ಸ್​ನಲ್ಲಿ ಮತ್ತೊಂದು ಧಾರಾವಾಹಿ ಮುಕ್ತಾಯವಾಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ತಕ್ಷಣ ಶುರುವಾದ ವಧು ಸೀರಿಯಲ್ ಈಗ ಕೊನೆಯಾಗುತ್ತಿದೆ. ಪ್ರಾರಂಭವಾದ ಐದೇ ತಿಂಗಳಿಗೆ ಅಂತ್ಯವಾಗುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಜನವರಿ 27, 2025 ರಂದು ಬಿಗ್ ಬಾಸ್ ಪ್ರಸಾರವಾಗುತ್ತಿದ್ದ ಸ್ಲಾಟ್‌ನಲ್ಲೇ ವೀಕ್ಷಕರಿಗೆ ಮನರಂಜನೆ ಕೊಡಲು ವಧು ಧಾರಾವಾಹಿ ಪ್ರಾರಂಭವಾಯಿತು. ಡಿವೋರ್ಸ್ ಲಾಯರ್‌ ಮದುವೆ ಕಥೆಯನ್ನ ಹೊತ್ತು ಬಂದ ವಧು ಇನ್ನೂ ಸರಿಯಾಗಿ 100 ಸಂಚಿಕೆಗಳನ್ನ ಮುಟ್ಟಿಲ್ಲ. ವಧು ಸೀರಿಯಲ್‌ ಶುರುವಾಗಿ ಕೇವಲ 4 ತಿಂಗಳು ಉರುಳಿದೆ ಅಷ್ಟೇ. ಅಷ್ಟು ಬೇಗ ವಧು ಸೀರಿಯಲ್‌ ಮುಕ್ತಾಯವಾಗುತ್ತಿದೆ. ವಧು ಧಾರಾವಾಹಿಯಲ್ಲಿ ನಾಯಕಿ ವಧು, ನಾಯಕ ಸಾರ್ಥಕ್. ತಾನು ಮಾಡುವ ವಕೀಲೆ ವೃತ್ತಿಯಿಂದಲೇ ವಧುವಿಗೆ ಮದುವೆ ಆಗುತ್ತಿರಲಿಲ್ಲ. ಇದರಿಂದ ನಿತ್ಯವೂ ವಧು ಮನೆಯಲ್ಲಿ ಅವಮಾನಕ್ಕೆ ಒಳಗಾಗುತ್ತಿರುತ್ತಾಳೆ. ಸಾರ್ಥಕ್‌ಗೆ ಆತನ ಪತ್ನಿಯೇ ಸಮಸ್ಯೆಯಾಗಿದೆ. ಪತ್ನಿಯಿಂದ ಡಿವೋರ್ಸ್ ಪಡೆಯಲು ಸಾರ್ಥಕ್ ನಾಯಕಿ ವಧು ಬಳಿ ಬರುತ್ತಾನೆ. ಆಮೇಲೆ ಏನಾಗುತ್ತದೆ ಎನ್ನೋದು ಈ ಧಾರಾವಾಹಿಯ ಕಥೆ.

ಆದರೆ, ನಿರೀಕ್ಷೆಯಂತೆ ವೀಕ್ಷಕರ ಮನ ಮುಟ್ಟುವಲ್ಲಿ ಈ ಸೀರಿಯಲ್ ಯಶಸ್ವಿ ಆಗಲಿಲ್ಲ. TRP ರೇಟಿಂಗ್​ನಲ್ಲಿ ಸುಧಾರಣೆ ಕಾಣಲಿಲ್ಲ, ಇದರ ನಡುವೆ ಸಮಯ ಬದಲಾವಣೆ ಮತ್ತಷ್ಟು ಹೊಡೆತ ಕೊಟ್ಟಿತ್ತು. ಬರಹಗಾರರ ತಂಡ ಬದಲಾಗಿದ್ದು, ಮತ್ತೊಂದು ಹೊಡೆತವಾಗಿತ್ತು. ಮೊದಲು ಕನ್ನಡತಿ ಧಾರಾವಾಹಿಗೆ ಕಥೆ ಬರೆದಿದ್ದ ನಿರ್ದೇಶಕ, ಚಾನಲ್​ ಹೆಡ್​ ಆಗಿದ್ದ ಪರಮೇಶ್ವರ್ ಗುಂಡ್ಕಲ್ ಅವರು ವಧುಗೆ ಸ್ಟೋರಿ ಮಾಡಿದ್ದರು. ಮೊದಲ ಪ್ರೋಮೋ ಕೂಡ ಇವರೇ ನಿರ್ದೇಶನ ಮಾಡಿದ್ದರು. ಆದರೆ, ಶುರುವಾದ ಕೆಲ ದಿನಗಳಲ್ಲಿ ಈ ಧಾರಾವಾಹಿಯ ಹಿನ್ನಲೆ ಟೀಮ್ ಬದಲಾಯಿತು.

ವಧು ಸೀರಿಯಲ್‌ನಲ್ಲಿ ಡಿವೋರ್ಸ್ ಲಾಯರ್‌ ವಧು ಪಾತ್ರವನ್ನ ನಿರ್ವಹಿಸುತ್ತಿರುವವರು ನಟಿ ದುರ್ಗಾಶ್ರೀ ಸೋಷಿಯಲ್ ಮೀಡಿಯಾದಲ್ಲಿ ಒಂದು ರೀಲ್ಸ್ ಹಂಚಿಕೊಂಡಿದ್ದಾರೆ. ಇದು ವಧು ಧಾರಾವಾಹಿಯ ಕ್ಲೈಮ್ಯಾಕ್ಸ್ ದೃಶ್ಯದ್ದು. ರೀಲ್ಸ್ ಜೊತೆಗೆ ಕಡೆಯ ಬಾರಿಗೆ ನಮ್ಮ ಮೂವರ ಕಾಂಬಿನೇಶನ್ ಎಂದು ಬರೆದುಕೊಂಡು ದಿ ಎಂಡ್‌ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

Rakesh Poojary: ರಾಕೇಶ್ ಪೂಜಾರಿ ಮನೆಗೆ ದಿಢೀರ್ ಭೇಟಿಕೊಟ್ಟ ರಿಷಭ್ ಶೆಟ್ಟಿ: ತಾಯಿ, ಸಹೋದರಿಗೆ ಸಾಂತ್ವನ