ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Shamanur shivashankarappa Death: ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ನಿಧನ

ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ನಿಧನ

ಶಾಮನೂರು ಶಿವಶಂಕರಪ್ಪ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಶಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅವರು ಭಾನುವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಇವರು 6 ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ.

Bangalore News: ಭವಿಷ್ಯದ ತಂತ್ರಜ್ಞಾನಕ್ಕೆ ವೇದಿಕೆಯಾದ ಮಾಹೆ ಬೆಂಗಳೂರು: 'ಸೂಪರ್‌ಕಂಪ್ಯೂಟಿಂಗ್ ಇಂಡಿಯಾ' ಸಮ್ಮೇಳನಕ್ಕೆ ತೆರೆ

ಭವಿಷ್ಯದ ತಂತ್ರಜ್ಞಾನಕ್ಕೆ ವೇದಿಕೆಯಾದ ಮಾಹೆ ಬೆಂಗಳೂರು

ಮಾಹೆ ಬೆಂಗಳೂರು ಕ್ಯಾಂಪಸ್‌ ಅನ್ನು ತಂತ್ರಜ್ಞಾನ ಹಾಗೂ ಅಂತರರಾಷ್ಟ್ರೀಯ ಸಂಶೋಧನಾ ಸಹಯೋಗದ ಹಬ್ ಆಗಿ ರೂಪಿಸುವಲ್ಲಿ ಈ ಸಮ್ಮೇಳನ ಪರಿಣಾಮಕಾರಿಯಾಯಿತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದ್ದ ಈ ಕಾರ್ಯಕ್ರಮದಲ್ಲಿ ಉನ್ನತ ಮಟ್ಟದ ತಾಂತ್ರಿಕ ಚರ್ಚೆಗಳು ಮತ್ತು ವಿಷಯ ಮಂಡನೆಗಳು ನಡೆದವು.

‘ಸ್ವಯಂಸೇವಕರು ನಿಜವಾದ ಬದಲಾವಣೆಯ ಸೃಷ್ಟಿಕರ್ತರು’

ಸ್ವಯಂಸೇವಕರು ನಿಜವಾದ ಬದಲಾವಣೆಯ ಸೃಷ್ಟಿಕರ್ತರು

CRY ದಕ್ಷಿಣದ ಪ್ರಾದೇಶಿಕ ನಿರ್ದೇಶಕ ಜಾನ್ ರಾಬರ್ಟ್ಸ್ ಅವರು ಸ್ವಯಂಸೇವಕರನ್ನು “ನಿಜವಾದ ಬದಲಾವಣೆಯ ಸೃಷ್ಟಿಕರ್ತರು” ಎಂದು ವರ್ಣಿಸಿದರು. ಅವರು ಒಂದು ಶಕ್ತಿಯುತ ಐತಿಹಾಸಿಕ ಉದಾಹರಣೆಯನ್ನು ನೆನಪಿಸಿದರು: “1990ರ ದಶಕದಲ್ಲಿ, ಶಿಕ್ಷಣ ಇನ್ನೂ ಮೌಲಿಕ ಹಕ್ಕಾಗಿರ ದಿದ್ದಾಗ, ದೇಶಾದ್ಯಂತ ಸ್ವಯಂಸೇವಕರು ‘ವಾಯ್ಸ್ ಆಫ್ ಇಂಡಿಯಾ’ ಎಂಬ ಬೃಹತ್ ಅಭಿಯಾನ ಪ್ರಾರಂಭಿಸಿ ದರು. ಒಂದು ಲಕ್ಷ ಪೋಸ್ಟ್‌ಕಾರ್ಡ್‌ಗಳನ್ನು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸ ಲಾಯಿತು.

Koratagere News: ಕೊರಟಗೆರೆಯ 13 ಪೌರ ಕಾರ್ಮಿಕರಿಗೆ ಮನೆ ಹಸ್ತಾಂತರಿಸಿದ ಗೃಹ ಸಚಿವ ಪರಮೇಶ್ವರ್‌

ಕೊರಟಗೆರೆ ಪಪಂ ಪೌರ ಕಾರ್ಮಿಕರಿಗೆ ಗೃಹ ಸಚಿವರಿಂದ ಗೃಹ ಭಾಗ್ಯ

ಕೊರಟಗೆರೆ ಪಟ್ಟಣದ ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಸಮೀಪ ನಿರ್ಮಿಸಲಾಗಿರುವ 13 ನೂತನ ಮನೆಗಳನ್ನು ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಉದ್ಘಾಟಿಸಿ, ಪೌರಕಾರ್ಮಿಕರಿಗೆ ಹಸ್ತಾಂತರಿಸಿದರು. ಪ್ರತಿ ಮನೆಯನ್ನು 7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಮಹಿಳೆಗೆ ವಂಚನೆ, ಲೈಂಗಿಕ ಕಿರುಕುಳ ಆರೋಪ; ಬ್ರಹ್ಮಾನಂದ ಗುರೂಜಿ ವಿರುದ್ಧ ಎಫ್‌ಐಆರ್‌

ಮಹಿಳೆಗೆ ಕಿರುಕುಳ; ಬ್ರಹ್ಮಾನಂದ ಗುರೂಜಿ ವಿರುದ್ಧ ಎಫ್‌ಐಆರ್‌

Brahmananda Guruji Case: ಸೈಟ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಲ್ಲದೆ, ಅದನ್ನು ವಾಪಸ್ ಕೇಳಿದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ?; ಕೊಹ್ಲಿ ಭಾಗಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ

Chinnaswamy Stadium" ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಲಿದೆಯೇ ಎಂಬುದು ಡಿ.16ರಂದು ಗೊತ್ತಾಗಲಿದೆ. ಈ ಪ್ರಕರಣದ ತನಿಖಾ ಪ್ರಗತಿ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್‌ ಸಿಐಡಿಗೆ ಸೂಚಿಸಿತ್ತು. ಅಂತೆಯೇ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದೆ

ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ಹೋರಾಟ: ಡಿಸಿಎಂ ಡಿ.ಕೆ. ಶಿವಕುಮಾರ್

ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ಹೋರಾಟ: ಡಿಕೆಶಿ

Congress Protest in Delhi: ದೇಶದ ಚುನಾವಣೆಗಳು ಈಗ ನ್ಯಾಯಸಮ್ಮತವಾಗಿಲ್ಲ. ಮತಕಳ್ಳತನ ಮಾಡಲಾಗುತ್ತಿದೆ. ಹೀಗಾಗಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂಬ ಸಂದೇಶವನ್ನು ಹೋರಾಟದ ಮೂಲಕ ನೀಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Chikkamagaluru News: ಪ್ರೀತಿಸಿದವಳಿಗೆ ಕೈಕೊಟ್ಟು ಬೇರೊಬ್ಬರ ಜೊತೆ ಮದುವೆ; ಕಲ್ಯಾಣ ಮಂಟಪಕ್ಕೆ ನುಗ್ಗಿ ಯುವತಿ ರಂಪಾಟ

ಪ್ರೀತಿಸಿದವನಿಗಾಗಿ ಕಲ್ಯಾಣ ಮಂಟಪಕ್ಕೆ ನುಗ್ಗಿ ಯುವತಿ ರಂಪಾಟ

ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಕೈಕೊಟ್ಟು ಬೇರೊಬ್ಬಳ ಜೊತೆ ಮದುವೆಯಾಗುತ್ತಿದ್ದ ಯುವಕನ ಮದುವೆ ಮಂಟಪಕ್ಕೆ ಬಂದು ಗಲಾಟೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮದುವೆ ನಡೆದು ಮುಗಿದ ಬಳಿಕ ಯುವಕನ ಕುಟುಂಬಸ್ಥರು ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Sirsi News: ಎಲ್ಲ ಗ್ರಾಮಗಳಿಗೂ ಇಂದು ನಗರವಾಗುವ ಧಾವಂತ

ಎಲ್ಲ ಗ್ರಾಮಗಳಿಗೂ ಇಂದು ನಗರವಾಗುವ ಧಾವಂತ

ಎಲ್ಲ ಗ್ರಾಮಗಳಿಗೂ ಇಂದು ನಗರವಾಗುವ ಧಾವಂತ. ಆದರೆ ಹಳ್ಳಿಗಳ ಉಳಿಸಿಕೊಳ್ಳುವ ಕಾರ್ಯವನ್ನು ಗ.ನಾ. ಕೋಮಾರರಂಥವರು ಇಂಥ ಮಹನೀಯರು ಸಂಘಟಕರಾಗಿ ಸಮಾಜ ಸೇವೆಯ ಮೂಲಕ ನಿರ್ವಹಿಸುತ್ತಿದ್ದು ನಿಜಕ್ಕೂ ಪ್ರಶಂಸನೀಯ ಅಭಿನಂದನಾರ್ಹ ಎಂದು ವಿಮರ್ಶಕ ಸಾಹಿತಿ ಶ್ತೀಧರ ಬಳಗಾರ ಹೇಳಿದರು

Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಈ ಶಿಬಿರವು ಏಳು ದಿನಗಳ ಕಾಲ ಇರಲಿದ್ದು, ಇಲ್ಲಿಗೆ ಬರುವವರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ನ ಮೂರು ನಕಲಿ ಪ್ರತಿಗಳನ್ನು ತರಬೇಕು. ದಿವ್ಯಾಂಗರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಿಬಿರದ ಮಾರ್ಗದರ್ಶಕರಾದ ಗೌತಮ್‌ ಚಂದ್‌ ನಹಾರ್‌ ತಿಳಿಸಿದ್ದಾರೆ.

ಫುಟ್‌ʼಪಾತ್‌ ಪಾರ್ಕಿಂಗ್‌ ಹೆಚ್ಚಳ

ಫುಟ್‌ʼಪಾತ್‌ ಪಾರ್ಕಿಂಗ್‌ ಹೆಚ್ಚಳ

ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದರೆ ಸಾವಿರ ರುಪಾಯಿ ದಂಡ ವಿಧಿಸಲು ಅವಕಾಶವಿದೆ. ಇದೇ ರೀತಿ ಮುಂದುವರೆದರೆ ವಾಹನವನ್ನು ಟೋಯಿಂಗ್ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ಇನ್ನು ವಾಹನವನ್ನು ಸಂಚರಿಸಿದರೆ, ಸಾವಿರ ರುಪಾಯಿ ದಂಡದೊಂದಿಗೆ, ಪುನಾರಾವರ್ತನೆ ಮಾಡಿದರೆ ನ್ಯಾಯಾಲಯದ ಮೂಲಕ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದು ಮಾಡುವುದಕ್ಕೂ ಅವಕಾಶ ನೀಡಲಾಗಿದೆ.

Anjali Nimbalkar: ವಿಮಾನದಲ್ಲಿ ಕುಸಿದು ಬಿದ್ದ ಮಹಿಳೆಗೆ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಚಿಕಿತ್ಸೆ; ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ವಿಮಾನದಲ್ಲಿ ಕುಸಿದು ಬಿದ್ದ ಮಹಿಳೆಗೆ ಮಾಜಿ ಶಾಸಕಿ ಡಾ. ಅಂಜಲಿ ಚಿಕಿತ್ಸೆ

CM Siddaramaiah: ವಿಮಾನದಲ್ಲಿ ತೀವ್ರ ಅಸ್ವಸ್ಥಗೊಂಡ ಯುವತಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೆರಿಕ ಮೂಲದ ಯುವತಿಯೊಬ್ಬರು ವಿಪರೀತ ನಡುಕ ಉಂಟಾಗಿ, ಆಕೆ ಸ್ಥಳದಲ್ಲೇ ಪ್ರಜ್ಞಾಹೀನರಾಗಿ ಕುಸಿದುಬಿದ್ದಿದ್ದರು.

ದಾವಣಗೆರೆ ಗಡಿ ಗ್ರಾಮದಲ್ಲಿ ನಿಗೂಢ ಶಬ್ದ; ಕಂಪಿಸಿದ ಭೂಮಿ, ಬೆಚ್ಚಿ ಬಿದ್ದ ಗ್ರಾಮಸ್ಥರು

ದಾವಣಗೆರೆ ಗಡಿ ಗ್ರಾಮದಲ್ಲಿ ನಿಗೂಢ ಶಬ್ದ; ಕಂಪಿಸಿದ ಭೂಮಿ

Davanagere News: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಶನಿವಾರ ರಾತ್ರಿ ಭಾರೀ ಶಬ್ಧವೊಂದು ಕೇಳಿ ಬಂದಿದ್ದು, ಜನರು ಬೆಚ್ಚಿ ಬಿದ್ದಿದ್ದಾರರೆ. ಕೆಲ ಕಡೆ ಭೂಮಿ ಕಂಪಿಸಿದ ಅನುಭವವೂ ಆಗಿದೆ ಎಂದು ತಿಳಿದು ಬಂದಿದೆ. ಚಿಕ್ಕಮಲ್ಲನಹೊಳೆ ಗ್ರಾಮವು ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಗಳ ಗಡಿಭಾಗದಲ್ಲಿದೆ.

New Year celebrations: ಹೊಸ ವರ್ಷಾಚರಣೆ; ಬೆಂಗಳೂರಿನಾದ್ಯಂತ ಬಿಗಿ ಭದ್ರತೆ; ತನಿಖಾ ಸಂಸ್ಥೆಗಳು ಹೈ ಅಲರ್ಟ್‌

ಹೊಸ ವರ್ಷಾಚರಣೆ; ತನಿಖಾ ಸಂಸ್ಥೆಗಳು ಹೈ ಅಲರ್ಟ್‌

ಕೆಲವೇ ದಿನಗಳಲ್ಲಿ 2025 ಮುಗಿಯಲಿದ್ದು, ಹೊಸ ವರ್ಷ ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ತುಸು ಹೆಚ್ಚಾಗಿಯೇ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಲರ್ಟ್​​ ಆಗಿದ್ದಾರೆ.​​

Chintamani News: ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳ ಸ್ಥಾಪನೆಗಾಗಿ ಜಾಗ ಖರೀದಿ:ನಾರಮಾಕಲಹಳ್ಳಿ ಕೃಷ್ಣಪ್ಪ

ಕರ್ನಾಟಕ ಮಾದರ ಮಹಾಸಭಾ ನೋಂದಣಿಯ ಜಾಗೃತಿಸಭೆ

ಕಿರಿಯ ಮುಖಂಡರು ಈ ಸಮುದಾಯದ ಹಿರಿಯರು, ಮಹಾಸಭಾದ ಸದಸ್ಯತ್ವವನ್ನು ಹೆಚ್ಚಿನ ಪ್ರಮಾಣ ದಲ್ಲಿ ಮಾಡುವ ಮೂಲಕ ಮಹಾಸಭಾವು ಅತ್ಯಂತ ಹೆಚ್ಚು ಸದಸ್ಯತ್ವ ಪಡೆಯುವಂತೆ ಮಾಡಬೇಕು. ಇದಕ್ಕೆ ಪೂರಕವಾಗಿ ಸಮುದಾಯದವರು ಹೆಚ್ಚಿನ ಸದಸ್ಯತ್ವವನ್ನು ಪಡೆಯುವ ಮೂಲಕ ಸಮುದಾಯ ಸಂಘವಾಗಬೇಕೆಂದರು.

NREGA: ನರೇಗ ಕಾಮಗಾರಿಗಳ ಪರಿಶೀಲನೆ ನಡೆಸಿದ ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ

ನರೇಗ ಕಾಮಗಾರಿಗಳ ಪರಿಶೀಲನೆ ನಡೆಸಿದ ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ

ದಿನನಿತ್ಯದ ಕಾರ್ಯದಲ್ಲಿ ಎದುರಾಗುತ್ತಿರುವ ಅಡಚಣೆಗಳು, ವೇತನ ವಿತರಣೆಯ ಸಮಸ್ಯೆಗಳು, ಕೆಲಸಗಳ ಲಭ್ಯತೆ, ಕೆಲಸದ ಸುರಕ್ಷತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳ ಕುರಿತು ವಿಚಾರಿಸಿದರು. ಕಾರ್ಮಿಕರು ಪ್ರಸ್ತಾಪಿಸಿದ ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿ, ಬಾಕಿ ವಿಷಯಗಳನ್ನು ಶೀಘ್ರದಲ್ಲಿ ಪರಿಹರಿಸುವ ಭರವಸೆ ನೀಡಿದರು

Lok Adalat: ಅಣ್ಣ ತಮ್ಮಂದಿರು ತಮ್ಮ ಆಸ್ತಿಪಾಸ್ತಿಗಳ ಸಮಸ್ಯೆಗಳನ್ನು ಮೂಲದಲ್ಲೇ ಬಗೆ ಹರಿಸಿಕೊಳ್ಳಿ : ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಮನವಿ

ತಮ್ಮ ಆಸ್ತಿಪಾಸ್ತಿಗಳ ಸಮಸ್ಯೆಗಳನ್ನು ಮೂಲದಲ್ಲೇ ಬಗೆ ಹರಿಸಿಕೊಳ್ಳಿ

ಅಣ್ಣ ತಮ್ಮಂದಿರು ತಮ್ಮ ಜಮೀನು, ಆಸ್ತಿಪಾಸ್ತಿಗಳ ಸಮಸ್ಯೆಗಳನ್ನು ಮೂಲದಲ್ಲೇ ಬಗೆ ಹರಿಸಿ ಕೊಂಡರೆ ಸಮಸ್ಯೆಗಳು ಪ್ರಕರಣಗಳಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಶ್ಯಕತೆ ಇರುವುದಿಲ್ಲ ಎಂದ ಅವರು ಅಣ್ಣತಮ್ಮಂದಿರ ಆಸ್ತಿ ಸಮಸ್ಯೆಗಳು ನ್ಯಾಯಾಲಯದ ಮೆಟ್ಟಿಲು ಏರಿದಲ್ಲಿ ಸಂಬಂಧ ಗಳು ಹದಗೆಡುತ್ತವೆ ಎಂದರು.

Chikkaballapur News: ಹೆಲ್ಮೆಟ್ ಕಡ್ಡಾಯ ಜಾರಿಯ ಬೆನ್ನಲ್ಲೇ ದಂಡ ವಸೂಲಿ ಜೋರು : ಹಾದಿ ಬೀದಿಯಲ್ಲಿ ತಲೆಯೆತ್ತಿದ ಹೆಲ್ಮೆಟ್ ಮಾರಾಟ ವ್ಯಾಪಾರ

ಹೆಲ್ಮೆಟ್ ಕಡ್ಡಾಯ ಜಾರಿಯ ಬೆನ್ನಲ್ಲೇ ದಂಡ ವಸೂಲಿ ಜೋರು

ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮೈಸೂರು, ದೆಹಲಿ, ರಾಜಸ್ಥಾನ, ಬಿಹಾರ ಮೂಲದ ವ್ಯಾಪಾರಿಗಳು  ಹೆಲ್ಮೆಟ್‌ಗಳನ್ನು ಇಟ್ಟುಕೊಂಡು ವ್ಯಾಪಾರಕ್ಕಿಳಿದಿದ್ದಾರೆ. ಆಕರ್ಷಕವಾದ ಬಣ್ಣಗಳ ಹೆಲ್ಮೆಟ್‌ಗಳನ್ನು 300 ರಿಂದ 500 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇವುಗಳು ನೋಡಲು ಸುಂದರ ಬಣ್ಣದಿಂದ ಕೂಡಿ, ಹಿಂಬದಿಯಲ್ಲಿ ಐಎಸ್‌ಐ ಮಾರ್ಕಿನ ಚಿತ್ರವಿದ್ದರೂ ಗುಣಮಟ್ಟದಲ್ಲಿ ಕಡಿಮೆ ಎನಿಸುತ್ತದೆ.

8 ಬಾರಿ ವಿಧಾನಪರಿಷತ್ ಸದಸ್ಯರಾಗುವ ಮೂಲಕ ವಿಶ್ವ ದಾಖಲೆ ಬರೆದ ಬಸವರಾಜ ಹೊರಟ್ಟಿ; ಅಭಿನಂದಿಸಿದ ಸಿದ್ದರಾಮಯ್ಯ

ಸಭಾಪತಿಗಳ ಕುರ್ಚಿಗೆ ಹೊರಟ್ಟಿ ನ್ಯಾಯ ಒದಗಿಸುತ್ತಾರೆ: ಸಿದ್ದರಾಮಯ್ಯ

CM Siddaramaiah: ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಪಕ್ಷಾತೀತವಾಗಿ ಇಂದು ಸನ್ಮಾನಿಸಲಾಗಿದೆ. ಎಲ್ಲ ಪಕ್ಷದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹೊರಟ್ಟಿ ಅಜಾತಶತ್ರು. ನೇರ ನುಡಿಯ ದಿಟ್ಟ ವ್ಯಕ್ತಿತ್ವದ ರಾಜಕಾರಣಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Congress Protest in Delhi: ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗೆ ಮತಕಳ್ಳತನದ ವಿರುದ್ಧ ಹೋರಾಟ: ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗೆ ಮತಕಳ್ಳತನದ ವಿರುದ್ಧ ಹೋರಾಟ: ಡಿಕೆಶಿ

ಈ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮತ‌ಕಳ್ಳತನದ ಬಗ್ಗೆ ದೊಡ್ಡ ಹೋರಾಟ ರೂಪಿಸಿದ್ದೆವು. ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ನಾವು ಜನರ ಹಕ್ಕನ್ನು ಕಸಿಯಲು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ದೆಹಲಿ ತಲುಪಿದ ಡಿಸಿಎಂ ಡಿ.ಕೆ.ಶಿವಕುಮಾರ್‌; ಸೋನಿಯಾ ಗಾಂಧಿ ಭೇಟಿ ಬಗ್ಗೆ ಹೇಳಿದ್ದೇನು?

ದೆಹಲಿ ತಲುಪಿದ ಡಿಕೆಶಿ; ಸೋನಿಯಾ ಗಾಂಧಿ ಭೇಟಿ ಬಗ್ಗೆ ಹೇಳಿದ್ದೇನು?

DK Shivakumar: ಮತಗಳ್ಳತನ ವಿರುದ್ಧ ಕಾಂಗ್ರೆಸ್‌ ವತಿಯಿಂದ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹೋರಾಟದಲ್ಲಿ ಭಾಗಿಯಾಗಲು ಡಿಸಿಎಂ ಶಿವಕುಮಾರ್‌ ಸೇರಿ ಹಲವು ನಾಯಕರು ಕರ್ನಾಟಕದರಿಂದ ತೆರಳಿದ್ದಾರೆ. ಪ್ರತಿಭಟನೆ ಬಗ್ಗೆ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಡಿಸಿಎಂ ಮಾತನಾಡಿದ್ದಾರೆ.

ಕೊರಟಗೆರೆಯ ನೇಗಿಲ ಸಿದ್ದ ಎಫ್‌ಪಿಓಗೆ ʼಸಿಐಐ ಎಫ್‌ಪಿಓ ಉತ್ಕೃಷ್ಟತಾ ಪ್ರಶಸ್ತಿ-2025ʼ

ನೇಗಿಲ ಸಿದ್ಧ ಎಫ್‌ಪಿಓಗೆ ʼಸಿಐಐ ಎಫ್‌ಪಿಓ ಉತ್ಕೃಷ್ಟತಾ ಪ್ರಶಸ್ತಿ-2025ʼ

ಈಶ ಔಟ್‌ರೀಚ್‌ನ ಬೆಂಬಲದೊಂದಿಗೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆಯ ನೇಗಿಲ ಸಿದ್ದ ರೈತ ಉತ್ಪಾದಕ ಸಂಸ್ಥೆಯು ಕೊರಟಗೆರೆಯ ಮೊದಲ ಹುಣಸೆಹಣ್ಣು ಸಂಸ್ಕರಣಾ ಘಟಕವನ್ನು ಪರಿಚಯಿಸಿದ್ದಕ್ಕಾಗಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (ಎಫ್‌ಪಿ‌ಸಿಎಲ್) ಪ್ರತಿಷ್ಠಿತ ಸಿಐಐ ಎಫ್‌ಪಿಓ ಉತ್ಕೃಷ್ಟತಾ ಪ್ರಶಸ್ತಿಗಳು 2025 ರಲ್ಲಿ ಮೌಲ್ಯವರ್ಧನೆ ಮತ್ತು ಬ್ರ್ಯಾಂಡಿಂಗ್ ವಿಭಾಗದಲ್ಲಿ ರನ್ನರ್-ಅಪ್ ಪ್ರಶಸ್ತಿ ಪಡೆದಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಚಹಾ ಸೇವಿಸಿದ ‌ವಿದೇಶಿ ವ್ಲಾಗರ್‌ನಿಂದ ಭಾರತೀಯ ಆತಿಥ್ಯಕ್ಕೆ ಮೆಚ್ಚುಗೆ: ವಿಡಿಯೊ ಇಲ್ಲಿದೆ

ಬೆಂಗಳೂರಿನ ಆತಿಥ್ಯಕ್ಕೆ ಮನಸೋತ ವಿದೇಶಿ ಪ್ರವಾಸಿಗ

Viral Video: ಇತ್ತೀಚೆಗೆ ಅಮೆರಿಕದ ವ್ಲಾಗರ್ ಒಬ್ಬರು ಬೆಂಗಳೂರಿಗೆ ಭೇಟಿ ನೀಡಿದ್ದು ಭಾರತೀಯ ಜನರ ಔದರ್ಯ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವರು ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಆದ ಒಂದು ವಿಶಿಷ್ಟ ಅನುಭವವನ್ನು ಶೇರ್ ಮಾಡಿದ್ದಾರೆ. ಸಣ್ಣ ಚಹಾ ಅಂಗಡಿಯೊಂದರ ಮಾಲೀಕರೊಬ್ಬರು ತನ್ನ ಬಳಿ ಹಣ ಪಡೆಯಲು ನಿರಾಕರಿಸಿದ ಸರಳ ಸೌಜನ್ಯಕ್ಕೆ ಅವರು ಫಿದಾ ಆಗಿದ್ದು ವಿಡಿಯೊ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ಪಟ್ಟಣ ಠಾಣೆಯ ಕಾರ್ಯವೈಖರಿಗೆ ಐಜಿಪಿ ಲಾಬೂ ರಾಮ್ ಮೆಚ್ಚುಗೆ

ಚಿಕ್ಕನಾಯಕನಹಳ್ಳಿ ಪಟ್ಟಣ ಠಾಣೆಯ ಕಾರ್ಯವೈಖರಿಗೆ ಐಜಿಪಿ ಮೆಚ್ಚುಗೆ

Chikkanayakanahalli News: ಚಿಕ್ಕನಾಯಕನಹಳ್ಳಿ ಪಟ್ಟಣದ ಪೊಲೀಸ್ ಠಾಣೆಗೆ ವಾರ್ಷಿಕ ತಪಾಸಣೆಗಾಗಿ ಶನಿವಾರ ಭೇಟಿ ನೀಡಿದ್ದ ಕೇಂದ್ರ ವಲಯ ಐಜಿಪಿ ಲಾಬು ರಾಮ್, ಪಟ್ಟಣದ ಪೊಲೀಸ್ ಠಾಣೆಯ ಆಡಳಿತಾತ್ಮಕ ನಿರ್ವಹಣೆ ಹಾಗೂ ಸಿಬ್ಬಂದಿಯ ಕಾರ್ಯ ವೈಖರಿ ಅತ್ಯಂತ ತೃಪ್ತಿದಾಯಕವಾಗಿದೆ ಎಂದು ಶ್ಲಾಘಿಸಿದ್ದಾರೆ.

Loading...