2028ರವರೆಗೆ ಯಾರೂ ಹಾರ- ತುರಾಯಿ ತರಬೇಡಿ: ನಿಖಿಲ್ ಕುಮಾರಸ್ವಾಮಿ
Nikhil Kumaraswamy: ನಾನು ಮಾಡುತ್ತಿರುವುದು ಒಂದು ದಿನದ ಪ್ರವಾಸ ಅಲ್ಲ, ನನ್ನ ಪ್ರವಾಸ 58 ದಿನಗಳ ಕಾಲ ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ. ನಾನು ಹೋಗುತ್ತಿರುವುದು ಮುಖಂಡರು ಮತ್ತು ಕಾರ್ಯಕರ್ತರ ಜತೆ ನಾನಿದ್ದೇನೆ ಎಂದು ಹೇಳುವುದ್ದಕ್ಕೆ ಮತ್ತು ಯಾವ ಯಾವ ಜಿಲ್ಲೆಗಳಲ್ಲಿ ಏನೇನು ಸಮಸ್ಯೆಗಳಿದೆ, ಸ್ಥಳೀಯರ ಸಮಸ್ಯೆ ಏನು? ಅದಕ್ಕೆ ಉತ್ತರ ಏನು ಪಡೆದುಕೊಳ್ಳುವುದಕ್ಕೆ ಎಂದು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.