ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Nikhil Kumaraswamy: 2028ರವರೆಗೆ ಯಾರೂ ಹಾರ-ತುರಾಯಿ ತರಬೇಡಿ; ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಮನವಿ

2028ರವರೆಗೆ ಯಾರೂ ಹಾರ- ತುರಾಯಿ ತರಬೇಡಿ: ನಿಖಿಲ್ ಕುಮಾರಸ್ವಾಮಿ

Nikhil Kumaraswamy: ನಾನು ಮಾಡುತ್ತಿರುವುದು ಒಂದು ದಿನದ ಪ್ರವಾಸ ಅಲ್ಲ, ನನ್ನ ಪ್ರವಾಸ 58 ದಿನಗಳ ಕಾಲ ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ. ನಾನು ಹೋಗುತ್ತಿರುವುದು ಮುಖಂಡರು ಮತ್ತು ಕಾರ್ಯಕರ್ತರ ಜತೆ ನಾನಿದ್ದೇನೆ ಎಂದು ಹೇಳುವುದ್ದಕ್ಕೆ ಮತ್ತು ಯಾವ ಯಾವ ಜಿಲ್ಲೆಗಳಲ್ಲಿ ಏನೇನು ಸಮಸ್ಯೆಗಳಿದೆ, ಸ್ಥಳೀಯರ ಸಮಸ್ಯೆ ಏನು? ಅದಕ್ಕೆ ಉತ್ತರ ಏನು ಪಡೆದುಕೊಳ್ಳುವುದಕ್ಕೆ ಎಂದು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

Dinesh Gundu Rao: ಮೈಸೂರನ್ನು ಯೋಗ ಜಿಲ್ಲೆಯನ್ನಾಗಿ ರೂಪಿಸಲು ಕೇಂದ್ರಕ್ಕೆ ಪ್ರಸ್ತಾವನೆ: ದಿನೇಶ್ ಗುಂಡೂರಾವ್

ವಿಶ್ವ ಯೋಗ ದಿನದಂದು 'ಯೋಗ ಸಂಗಮ' ಕಾರ್ಯಕ್ರಮ: ದಿನೇಶ್ ಗುಂಡೂರಾವ್

Dinesh Gundu Rao: ರಾಜ್ಯದಲ್ಲಿ ಮೈಸೂರನ್ನು 'ಯೋಗ ಜಿಲ್ಲೆಯನ್ನಾಗಿ' ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಮೈಸೂರು ಜಿಲ್ಲೆಯ ಪ್ರತಿಯೊಂದು ಮನೆಗಳಲ್ಲಿ ಒಬ್ಬರಾದರೂ ಯೋಗಭ್ಯಾಸ ನಡೆಸುವಂತಾಗಬೇಕು ಎಂಬ ಗುರಿ ಹೊಂದಲಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಒಂದು ಜಿಲ್ಲೆಯನ್ನು ಸಂಪೂರ್ಣವಾಗಿ ಯೋಗ ಜಿಲ್ಲೆಯನ್ನಾಗಿ ರೂಪಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಕೈ ಹಾಕಿದ್ದು, ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Bengaluru News: ಅಡ್ವೋಕೇಟ್‌ ಕೆ.ಆರ್.ಜೊಬಿ ಮತ್ತು ಆರು ಜನರನ್ನು ರಾಜ್ಯಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರಾಗಿ ನೇಮಕ

ರಾಜ್ಯಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರಾಗಿ ನೇಮಕ

ಕರ್ನಾಟಕ ಸರ್ಕಾರವು 2025ರ ಜೂ.12 ರಂದು ಹೊರಡಿಸಿದ ಆದೇಶಾನುಸಾರ ಅಡ್ವೋಕೇಟ್‌ ಕೆ.ಆರ್.ಜೊಬಿ ಮತ್ತು ಇತರ ಆರು ಜನರನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಸದಸ್ಯರು ಕ್ರಿಶ್ಚಿಯನ್, ಮುಸ್ಲಿಂ, ಸಿಖ್, ಜೈನ್ ಮತ್ತು ಬೌದ್ಧ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆ. ಈ ಪಟ್ಟಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಅಂಗೀಕರಿಸಲಾಗಿದೆ.

House collapse: ಮಳೆ ಅವಾಂತರ; ಕಲಬುರಗಿಯಲ್ಲಿ ಮನೆ ಕುಸಿದು 10 ವರ್ಷದ ಬಾಲಕ ಸಾವು

ಕಲಬುರಗಿಯಲ್ಲಿ ಮನೆ ಕುಸಿದು 10 ವರ್ಷದ ಬಾಲಕ ಸಾವು

House collapse: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗುಡೂರ ಗ್ರಾಮದಲ್ಲಿ ದುರಂತ ನಡೆದಿದೆ. ಕಲ್ಲು, ಮಣ್ಣಿನಿಂದ ನಿರ್ಮಿಸಿದ್ದ ಮನೆ ಶಿಥಿಲಗೊಂಡಿತ್ತು, ಮಳೆಯಿಂದಾಗಿ ಚಾವಣಿ ಕುಸಿದು ದುರಂತ ಸಂಭವಿಸಿದೆ. ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Chikkanayakanahalli (Tumkur) News: ಜೂ.19ರಂದು ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದ ಗರ್ಭಿಣಿಯರಿಗೆ ತವರಿನ ಮಡಿಲು ಕಾರ್ಯಕ್ರಮದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ

ತವರಿನ ಮಡಿಲು ಕಾರ್ಯಕ್ರಮದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ

ಅಣ್ಣತಂಗಿಯರ ಬಾಂಧವ್ಯ ಬೆಸೆಯುವ ತವರಿನ ಮಡಿಲು ಕಾರ್ಯಕ್ರಮ ದಲ್ಲಿ ನಮ್ಮ ವಿಧಾನ ಸಭಾ ಕ್ಷೇತ್ರದಲ್ಲಿರುವ ಎಲ್ಲಾ ಗರ್ಭಿಣಿಯರಿಗೆ ಸಮೂಹಿಕ ಸೀಮಂತ ಕಾರ್ಯ ಕ್ರಮವನ್ನು ಜೂ.19ರ ಗುರುವಾರದಂದು ಆಯೋಜಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿ ಕಾರಿ ಡಾ.ಚೇತನ್ ತಿಳಿಸಿದ್ದಾರೆ

Tumkur News: ವಿವಿಧ ಪ್ರಕರಣಗಳಲ್ಲಿ 170 ಕಳ್ಳರ ಬಂಧನ, 5.61 ಕೋಟಿ ಮೌಲ್ಯದ ಚಿನ್ನಾಭರಣ ಸೇರಿ ಕಳವು ಮಾಲು ವಶಕ್ಕೆ

ವಿವಿಧ ಪ್ರಕರಣಗಳಲ್ಲಿ 170 ಕಳ್ಳರ ಬಂಧನ, 5.61 ಕೋಟಿ ಮೌಲ್ಯದ ಚಿನ್ನಾಭರಣ ವಶ

Tumkur News: ತುಮಕೂರು ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, 2025ರ ಫೆಬ್ರವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ 170 ಜನ ಕಳ್ಳರನ್ನು ಬಂಧಿಸಿ 5,61,34,580 ರೂ. ಮೌಲ್ಯದ ಕಳವು ಮಾಲುಗಳನ್ನು ಪತ್ತೆ ಮಾಡಲಾಗಿದೆ ಎಂದು ಎಸ್‌ಪಿ ಕೆ.ವಿ. ಅಶೋಕ್‌ ತಿಳಿಸಿದ್ದಾರೆ.

Indi (Vijayapura) News: ರಕ್ತ ಪೂರೈಸುವ ಕಾರ್ಯ ಅವಳಿ ಸಹೋದರರ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ

ರಕ್ತದಾನ ಇನ್ನೊಬ್ಬರ ಪ್ರಾಣ ಉಳಿಸಲು ಅತ್ಯಂತ ಸಹಕಾರಿ

ಅವಳಿ ಸಹೋದರರು ಚಿಕ್ಕವರಿಂದಲೇ ಸಾರ್ವಜನಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಬಸವ ಜಯಂತಿಯಂದು ಸಾಮೂಹಿಕ ಮದುವೆ ಮಾಡಿ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ಹೊರೆ ತಪ್ಪಿಸಿದ್ದಾರೆ. ಇಂತಹ ಸಹೋದರರು ಮಾದರಿಯಾಗಿ ಪ್ರತೀವರ್ಷ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

Chikkaballapur News: ರೈಲ್ವೇ ಮೇಲ್ಸೇತುವೆ ಮೇಲೆ ಎಲ್‌ಇಡಿ ಲೈಟುಗಳ ಅಳವಡಿಕೆ: ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳಿಗೆ ಕೃತಜ್ಞತೆ

ರೈಲ್ವೇ ಮೇಲ್ಸೇತುವೆ ಮೇಲೆ ಎಲ್‌ಇಡಿ ಲೈಟುಗಳ ಅಳವಡಿಕೆ

ರೈಲ್ವೆ ಇಲಾಖೆ ಉತ್ತಮ ಗುಣಮಟ್ಟದ ವೈರಿಂಗ್ ಮತ್ತು ಸುಮಾರು ಅರವತ್ತು ಎಲ್‌ಇಡಿ ಲೈಟುಗಳನ್ನು ರೈಲ್ವೇ ಮೇಲುಸೇತುವೆ ಮೇಲೆ ಹೊಸದಾಗಿ ಅಳವಡಿಸಿದ್ದಾರೆ. ಇದರಿಂದಾಗಿ, ರೈಲ್ವೆ ಮೇಲ್ಸೇತುವೆ ಮೇಲೆ ರಾತ್ರಿ ಹೊತ್ತಿನಲ್ಲಿ ಹಾದು ಹೋಗುವ ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಅನುಕೂಲವಾಗಿದೆ.

DK Shivakumar: ಡಿ.ಕೆ.ಸುರೇಶ್‌ಗೆ ಇಡಿ ಸಮನ್ಸ್; ತನಿಖೆಗೆ ನಮ್ಮ ಸಹಕಾರ ಇರಲಿದೆ ಎಂದ ಡಿಸಿಎಂ ಡಿಕೆಶಿ

ಡಿ.ಕೆ.ಸುರೇಶ್‌ಗೆ ಇಡಿ ಸಮನ್ಸ್; ತನಿಖೆಗೆ ನಮ್ಮ ಸಹಕಾರ ಇರಲಿದೆ ಎಂದ ಡಿಕೆಶಿ

DK Shivakumar: ರಾಜ್ಯದಲ್ಲಿ ಮುಂದೆ ಬಿಜೆಪಿ- ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ʼಅವರಿಗೆ ಯಾವ ರೀತಿಯ ಪಂಚೆ, ಅಂಗಿ, ಜುಬ್ಬಾ, ಪ್ಯಾಂಟ್, ಮೇಲಂಗಿ ಬೇಕು ಎಂಬುದನ್ನು ಕಳುಹಿಸಿ ಕೊಡೋಣ. ಮಾಧ್ಯಮದವರ ಕೈಗೆ ಇವೆಲ್ಲವನ್ನು ನೀಡುತ್ತೇನೆ. ನೀವೇ ಅವರಿಗೆ ತಲುಪಿಸಿಬಿಡಿʼ ಎಂದು ಕುಹಕವಾಡಿದ್ದಾರೆ.

Chikkaballapur News: ಅಲಕಾಪುರ ಗ್ರಾಮದ ಸಪಲಮ್ಮ ದೇವಿಗೆ ಗ್ರಾಮಸ್ಥ =ರಿಂದ ಶ್ರದ್ದಾಭಕ್ತಿಯಿಂದ ದೀಪೋತ್ಸವ

ಸಪಲಮ್ಮ ದೇವಿಗೆ ಗ್ರಾಮಸ್ಥರಿಂದ ಶ್ರದ್ದಾಭಕ್ತಿಯಿಂದ ದೀಪೋತ್ಸವ

ತಾಲೂಕಿನ ಅಲಕಾಪುರ ಗ್ರಾಮದಲ್ಲಿ ನೆಲೆಸಿರುವ ಸಪಲಮ್ಮ ದೇವಿಗೆ ಗ್ರಾಮಸ್ಥ ರಿಂದ ಶ್ರದ್ದಾಭಕ್ತಿಯಿಂದ ದೀಪೋತ್ಸವ ನೆರವೇರಿತು. ಲೋಕ ಕಲ್ಯಾಣಾರ್ಥವಾಗಿ ಹಾಗೂ ಗ್ರಾಮಕ್ಕೆ ಒಳಿತಾಗಲಿ ಎಂದು ಗ್ರಾಮದ ಶಕ್ತಿದೇವತೆ ಸಪಲಮ್ಮ ದೇವಿಗೆ ದೀಪೋತ್ಸವವನ್ನು ಹಮ್ಮಿ ಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದರು.

Kannappa Movie: ವಿಷ್ಣು ಮಂಚು ನಟನೆಯ ʼಕಣ್ಣಪ್ಪʼ ಚಿತ್ರ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್

ʼಕಣ್ಣಪ್ಪʼ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್

Kannappa Movie: ಸೂಪರ್‌ಸ್ಟಾರ್ ರಜನಿಕಾಂತ್ ಅವರು ವಿಷ್ಣು ಮಂಚು ಅಭಿನಯದ ʼಕಣ್ಣಪ್ಪʼ ಚಿತ್ರ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುತಾರಾಗಣದ ಈ‌ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ‌ ಭಾಷೆಗಳಲ್ಲಿ‌ ಜೂನ್ 27 ರಂದು ಬಿಡುಗಡೆ ಆಗಲಿದೆ. ಈ ಕುರಿತ ವಿವರ ಇಲ್ಲಿದೆ.

SIRA (Tumkur) News: ಜೂ.19ಕ್ಕೆ ಶಿರಾ ನಗರಕ್ಕೆ ನಿಖಿಲ್ ಕುಮಾರಸ್ವಾಮಿ ಆಗಮನ; ಸತ್ಯಪ್ರಕಾಶ್

ನಗರದ ಸಿರಿಗಂಧ ಪ್ಯಾಲೇಸ್‌ನಲ್ಲಿ ಬೃಹತ್ ಸಮಾವೇಶ

ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟನಾ ಉದ್ದೇಶದಿಂದ ರಾಜ್ಯ ಪ್ರವಾಸ ಕೈಗೊಂಡು ಮಿಸ್ ಕಾಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಸೇರಿದಂತೆ ಪಕ್ಷದ ಸಮಾವೇಶದಲ್ಲಿ ಭಾಗವಹಿಸ ಲಿದ್ದಾರೆ. ಈಗಾಗಲೇ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಚಾಲನೆ ನೀಡಿದ್ದಾರೆ. ಜೂ.19ರಂದು ಶಿರಾಕ್ಕೆ ಆಗಮಿಸಲಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಶಸ್ವೀಗೊಳಿಸಿ ಎಂದರು.

SIRA (Tumkur) News: ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ:: ಚಿದಾನಂದ್ ಎಂ.ಗೌಡ

ನಗರದ ಸಿರಿಗಂಧ ಪ್ಯಾಲೇಸ್‌ನಲ್ಲಿ ಪದಗ್ರಹಣ ಸಮಾರಂಭ

ದೇಶದಲ್ಲಿ ಬಿಜೆಪಿ ಪಕ್ಷ ಸಮರ್ಥವಾಗಿದ್ದು, ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಶಿರಾ ಕ್ಷೇತ್ರದಲ್ಲಿ ಮುಂದಿನ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕರಾಗುವುದು ನಿಶ್ಚಿತ. ಶಿರಾದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರು ವುದೇ ನನ್ನ ಗುರಿ. ಯಾವುದೇ ಅನುಮಾನ ಬೇಡ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸ ಲಿದ್ದಾರೆ.

Karnataka Rains: ಯೆಲ್ಲೋ ಅಲರ್ಟ್;‌ ರಾಜ್ಯದ ಈ ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ ನಿರೀಕ್ಷೆ

ಯೆಲ್ಲೋ ಅಲರ್ಟ್;‌ ರಾಜ್ಯದ ಈ ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ ನಿರೀಕ್ಷೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆ ಸಾಧ್ಯತೆ ಇದೆ. ಕರಾವಳಿಯಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Transfer guidelines: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ವರ್ಗಾವಣೆ ಅವಧಿ ಜೂನ್‌ 30ರವರೆಗೆ ವಿಸ್ತರಣೆ

ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಅವಧಿ ಜೂನ್‌ 30ರವರೆಗೆ ವಿಸ್ತರಣೆ

Transfer guidelines: ಈ ಮೊದಲು ಷರತ್ತುಗಳಿಗೊಳಪಟ್ಟು ಮೇ 12 ರಿಂದ ಜೂನ್ 14ರವರೆಗೆ‌ ವರ್ಗಾವಣೆ ಕೈಗೊಳ್ಳಲು ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಿ ಆದೇಶಿಸಲಾಗಿತ್ತು. ಇದೀಗ ವರ್ಗಾವಣೆ ಅವಧಿಯನ್ನು ವಿಸ್ತರಿಸಲಾಗಿದೆ.

Rachita Ram: ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ನಿರ್ದೇಶಕ ನಾಗಶೇಖರ್‌ ದೂರು; ಕಾರಣವೇನು?

ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ನಿರ್ದೇಶಕ ನಾಗಶೇಖರ್‌ ದೂರು

Rachita Ram: ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್ ಆಗುವ ಮುನ್ನ ಮತ್ತು ನಂತರ ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ರಚಿತಾ ಭಾಗಿಯಾಗಿಲ್ಲ ಎಂದು ನಿರ್ದೇಶಕ ನಾಗಶೇಖರ್‌ ಅಸಮಾಧಾನ ಹೊರಹಾಕಿದ್ದಾರೆ.

Visvesvaraya Jala Nigam: ಎತ್ತಿನಹೊಳೆ ಯೋಜನೆಗಾಗಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಐಐಎನ್ ಪ್ಲಾಟಿನಂ 2025 ರಾಷ್ಟ್ರೀಯ ಪ್ರಶಸ್ತಿ

ಎತ್ತಿನಹೊಳೆ ಯೋಜನೆಗಾಗಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ರಾಷ್ಟ್ರೀಯ ಪ್ರಶಸ್ತಿ

ಅಕ್ವಡಕ್ಟ್ ಎಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಆರೋಗ್ಯ, ಸುರಕ್ಷತೆ, ಪರಿಸರ ಸ್ನೇಹಿ ಮಾದರಿಯಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತಕ್ಕೆ (VJNL) 2025ನೇ ಸಾಲಿನ ಪ್ರತಿಷ್ಠಿತ ಐಐಎನ್ ಪ್ಲಾಟಿನಮ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಕುರಿತ ವಿವರ ಇಲ್ಲಿದೆ.

Fake Bride: ಕನ್ಯೆ ಎಂದು ನಂಬಿಸಿ 2 ಮಕ್ಕಳ ತಾಯಿ ಜತೆ ಕೊಪ್ಪಳದ ಯುವಕನಿಗೆ ಮದುವೆ; 4 ಲಕ್ಷ ವಂಚನೆ!

ಕನ್ಯೆ ಎಂದು ನಂಬಿಸಿ 2 ಮಕ್ಕಳ ತಾಯಿ ಜತೆ ಕೊಪ್ಪಳದ ಯುವಕನಿಗೆ ಮದುವೆ!

Fake Bride: ಐದು ದಿನ ವಧುವಾಗಿ ನಟಿಸಿದರೆ 50 ಸಾವಿರ ಕೊಡುತ್ತೇವೆ ಎಂದು ವಿವಾಹಿತ ಯುವತಿಗೆ ಬ್ರೋಕರ್ಸ್‌ ಆಮಿಷ ಒಡ್ಡಿದ್ದರು. ಅದರಂತೆ ಹುಡುಗನಿಂದ 4 ಲಕ್ಷ ಹಣ ಪಡೆದು, ಇಬ್ಬರು ಮಕ್ಕಳ ತಾಯಿ ಜತೆ ಮದುವೆ ಮಾಡಿಸಿದ್ದಾರೆ. ಇದೀಗ ನ್ಯಾಯಕ್ಕಾಗಿ ಪೊಲೀಸರಿಗೆ ಯುವಕ ದೂರು ನೀಡಿದ್ದಾನೆ.

Cleft lip: ಪಾಲಕರನ್ನು ಭಯಕ್ಕೀಡು ಮಾಡುವ ಸೀಳುತುಟಿ: ಇದಕ್ಕೂ ಇದೆ ಪರಿಹಾರ!

ಸೀಳು ತುಟಿಗೂ ಇದೆ ಪರಿಹಾರ; ಏನು ಮಾಡುಬೇಕು?

ಮನೆಯಲ್ಲಿ ಮಕ್ಕಳು ಹುಟ್ಟಿದ್ದಾರೆನ್ನುವ ಸುದ್ದಿಯೇ ಕುಟುಂಬಸ್ಥರಿಗೆಲ್ಲರಿಗೂ ಸಂತೋಷವನ್ನುಂಟು ಮಾಡುತ್ತದೆ. ಕೆಲವೊಮ್ಮೆ ಹುಟ್ಟುವ ಮಕ್ಕಳಿಗೆ ಆರೋಗ್ಯ ಸಮಸ್ಯೆಯೂ ಎದುರಾಗುತ್ತದೆ. ಅದರಲ್ಲಿ ಸೀಳುತುಟಿ ಸಮಸ್ಯೆಯೂ ಒಂದು. ಒಂಬತ್ತು ತಿಂಗಳುಗಳ ಕಾಲ ಪಾಲನೆ ಮಾಡಿದ ಮಗುವಿನ ಮುಖದಲ್ಲಿ ಸೀಳುತುಟಿ ಸಮಸ್ಯೆ ಕಾಣಿಸಿಕೊಂಡರೆ ಅದು ಪಾಲಕರಿಗೆ ಮಾನಸಿಕ ಒತ್ತಡ ಮತ್ತು ನೋವನ್ನು ಉಂಟು ಮಾಡುತ್ತದೆ.

Viral Video: ಅಂಗಡಿಯ ನೇಮ್ ಬೋರ್ಡ್‌ನಲ್ಲಿ  ಕನ್ನಡವಿಲ್ಲವೆಂದು ಕ್ಯಾತೆ ತೆಗೆದ ಹಿರಿಯ ನಾಗರಿಕ

ಅಂಗಡಿಯ ನೇಮ್‍ ಬೋರ್ಡ್‌ ವಿಷಯಕ್ಕೆ ನಡೆದ ಜಗಳ

ಬೆಂಗಳೂರಿನಲ್ಲಿ ಮಹಿಳಾ ಉದ್ಯಮಿಯೊಬ್ಬಳು ತನ್ನ ಶಾಪ್‍ನ ನೇಮ್‍ ಬೋರ್ಡ್‍ನಲ್ಲಿ ಕನ್ನಡವನ್ನು ಬಳಸದ ಕಾರಣ ಹಿರಿಯ ನಾಗರಿಕರೊಬ್ಬರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಮರ್ಷಿಯಲ್ ಬೋರ್ಡ್‍ಗಳಲ್ಲಿ ಬರೆದ ಪದಗಳು 60% ಕನ್ನಡದಲ್ಲಿರಬೇಕು ಎಂಬ ಬಿಬಿಎಂಪಿಯ ಭಾಷಾ ನೀತಿಯನ್ನು ಪಾಲಿಸುವಂತೆ ಒತ್ತಾಯಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

HD Kumaraswamy: ಇಸ್ರೇಲ್-ಇರಾನ್‌ ಸಂಘರ್ಷ: ಇಸ್ರೇಲ್‌ನಲ್ಲಿರುವ ಕನ್ನಡಿಗರ ಜತೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಇಸ್ರೇಲ್‌ನಲ್ಲಿರುವ ಕನ್ನಡಿಗರ ಜತೆ ಮಾತನಾಡಿದ ಕೇಂದ್ರ ಸಚಿವ ಎಚ್‌ಡಿಕೆ

HD Kumaraswamy: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಪ್ರಸ್ತುತ ಇಸ್ರೇಲ್‌ನಲ್ಲಿ ಸಿಲುಕಿರುವ ಹಲವಾರು ಕನ್ನಡಿಗರೊಂದಿಗೆ ವೀಡಿಯೋ ಕರೆ ಮಾಡಿ ಅವರ ಕ್ಷೇಮ, ಸುರಕ್ಷತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

DK Shivakumar: ಬಿಜೆಪಿಯವರನ್ನು ಹೆಗಲ ಮೇಲೆ ಹಾಕಿಕೊಂಡು ಹೊರೋಣ: ಡಿ.ಕೆ.ಶಿವಕುಮಾರ್ ವ್ಯಂಗ್ಯ

ಬಿಜೆಪಿಯವರನ್ನು ಹೆಗಲ ಮೇಲೆ ಹಾಕಿಕೊಂಡು ಹೊರೋಣ: ಡಿ.ಕೆ.ಶಿವಕುಮಾರ್ ವ್ಯಂಗ್ಯ

DK Shivakumar: ಕಾಲ್ತುಳಿತ ಪ್ರಕರಣದಲ್ಲಿ ಯಾರ‍್ಯಾರಿಗೆ ಶಿಕ್ಷೆ ಕೊಡಬೇಕೋ ಆ ಕೆಲಸವನ್ನು ಸರ್ಕಾರ ಮಾಡಿದೆ. ತನಿಖೆಗಾಗಿ ಏಕ ಸದಸ್ಯ ಆಯೋಗವನ್ನು ಸಹ ನೇಮಕ ಮಾಡಲಾಗಿದೆ. ಇಡೀ ದೇಶದಲ್ಲಿ ನೂರಾರು ಘಟನೆಗಳು ನಡೆದಿವೆ. ಆದರೂ ಕಾಂಗ್ರೆಸ್ ಪಕ್ಷ ಎಂದಿಗೂ ಹೆಣದ ಮೇಲೆ ರಾಜಕೀಯ ಮಾಡಿಲ್ಲ ಎಂದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

World Environment Day: ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ ಅಳವಡಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ ಅಳವಡಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

World Environment Day: ಪರಿಸರ ಸಂರಕ್ಷಣೆ, ಅದರ ಬಗೆಗಿನ ಜ್ಞಾನ ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಅತ್ಯಂತ ಅವಶ್ಯ. ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಇಂದು ಬೋಧಿಸಲಾಗಿರುವ ಪ್ರತಿಜ್ಞಾ ವಿಧಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಬೆಂಗಳೂರಿನ ಪ್ರೀಮಿಯಂ ಬೈಕ್‌ಗಳ ಮೇಲಿನ ಉತ್ಸಾಹಕ್ಕೆ ಇಂಬು ನೀಡಲು ಜಾವಾ ಯೆಜ್ಡಿ 12 ನೇ ಡೀಲರ್‌ಶಿಪ್ ಪ್ರಾರಂಭ

ಜಾವಾ ಯೆಜ್ಡಿ 12 ನೇ ಡೀಲರ್‌ಶಿಪ್ ಪ್ರಾರಂಭ

ಐಕಾನಿಕ್ ಮೋಟಾರ್ಸ್ ಜೊತೆಗೂಡಿ, ಕಂಪನಿಯು ಕರ್ನಾಟಕದಲ್ಲಿ 22 ಡೀಲರ್‌ಗಳನ್ನು ಹೊಂದಿದೆ, ಇದು ಬ್ರ್ಯಾಂಡ್‌ಗಳ ವೇಗವಾಗಿ ಬೆಳೆಯುತ್ತಿರುವ ಕೆಲವು ಮಾರುಕಟ್ಟೆಗಳಿಗೆ ನೆಲೆ ಯಾಗಿದೆ, ಇದರಲ್ಲಿ ಬೆಂಗಳೂರು ಸೇರಿದಂತೆ ಜಾವಾ ಮತ್ತು ಯೆಜ್ಡಿಯ ಮೋಟಾರ್‌ಸೈಕಲ್‌ಗಳ ಮೇಲಿನ ಉತ್ಕಟ ಬ್ರಾಂಡ್ ಪ್ರೀತಿಯ ಪರಂಪರೆಯನ್ನು ಹೊಂದಿದೆ.