ರಾಜ್ಯಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರಾಗಿ ನೇಮಕ
ಕರ್ನಾಟಕ ಸರ್ಕಾರವು 2025ರ ಜೂ.12 ರಂದು ಹೊರಡಿಸಿದ ಆದೇಶಾನುಸಾರ ಅಡ್ವೋಕೇಟ್ ಕೆ.ಆರ್.ಜೊಬಿ ಮತ್ತು ಇತರ ಆರು ಜನರನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಸದಸ್ಯರು ಕ್ರಿಶ್ಚಿಯನ್, ಮುಸ್ಲಿಂ, ಸಿಖ್, ಜೈನ್ ಮತ್ತು ಬೌದ್ಧ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆ. ಈ ಪಟ್ಟಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಅಂಗೀಕರಿಸಲಾಗಿದೆ.