ಕೈಕೊಟ್ಟ ರೋಹಣಿ ಮಳೆ, ರೈತರಲ್ಲಿ ಮೂಡಿದ ಆತಂಕ
ಒಂದು ಕಾಲದಲ್ಲಿ ಬಿಳಿ ಬಂಗಾರಕ್ಕೆ ಹೆಸರಾಗಿದ್ದ ತಾಲೂಕಿನಲ್ಲಿ ಖರ್ಚು ವೆಚ್ಚ, ನಿರ್ವಹಣೆ ಮಾಡಲಾ ಗದೆ ಹತ್ತಿ ಬೆಳೆಯನ್ನು ಬಿಟ್ಟು ಗೋವಿನಜೋಳ, ಹೆಸರು, ಸೂರ್ಯಪಾನ, ಶೆಂಗಾ, ಗೋದಿ ಬೆಳೆಯು ತ್ತಿದ್ದಾರೆ. ಗೋವಿನ ಜೋಳ ಬಿತ್ತನೆಗೆ ಕಾದು ಕುಳಿತಿದ್ದಾರೆ. ನೀರಿನ ಸೌಲಭ್ಯ ಇರುವ ರೈತರು ಹತ್ತಿ ಬೆಳೆಯಲು ಮುಂದಾಗಿದ್ದಾರೆ. ಕೆಲ ರೈತರು ಹೆಸರು ಜತೆಗೆ ಬಿಟಿ ಹತ್ತಿ ಬೆಳೆದಿರುವುದು ಕಂಡು ಬಂದಿತು.


ಪ್ರಭು ಗುಡಾರದ, ನರಗುಂದ
ಮುಂಗಾರು ಪೂರ್ವ ಅಬ್ಬರಿಸಿದ್ದ ಮಳೆರಾಯ ಮುಂಗಾರು ಕಾಲಿಟ್ಟ ನಂತರ ಮಳೆ ಮಾಯ ವಾಗಿದೆ, ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನಿರೀಕ್ಷೆಗೂ ಮೀರಿ ಮುಂಗಾರು ಪೂರ್ವ ಮಳೆ ಯಾಗಿದ್ದರಿಂದ ತಾಲೂಕಿನಲ್ಲಿ ಸಾವಿರಾರು ರೈತರು ಹೆಸರು ಬಿತ್ತನೆ ಮಾಡಿದ್ದಾರೆ, ಆದರೆ ಬಿತ್ತನೆ ನಂತರ ನಿರೀಕ್ಷೆ ಮೂಡಿಸಿದ್ದ ರೋಹಣಿ ಮಳೆ ಕೈಕೊಟ್ಟಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಲ್ಲೆ ದೇವಿಗೆ ಉಡಿ ತುಂಬಿದ ರೈತರು ಸಂತಷದಲ್ಲಿದ್ದರು, ಮೇ ತಿಂಗಳ ಕೊನೆವಾರದಲ್ಲಿ ದೇವಿಗೆ ಉಡಿ ತುಂಬಿದ ನಂತರ ಬಿತ್ತನೆಗೆ ಮಳೆರಾಯ ಬಿಡುವು ಬಿಟ್ಟಿದ್ದರಿಂದ ಕಳೆದ ಹತ್ತು ದಿನಗಳಲ್ಲಿ ಶೇ.90ರಷ್ಟು ರೈತರು ಹೆಸರು ಬಿತ್ತನೆ ಕಾರ್ಯ ಪೂರ್ಣ ಗೊಳಿಸಿದ್ದಾರೆ.
ಆದರೆ ಹೆಸರು ಬಿತ್ತನೆಗೆ ಭೂಮಿ ಹದ ಮಾಡಿ ಬಿತ್ತನೆ ಮಾಡಿದ ನಂತರ ಸಂಪೂರ್ಣವಾಗಿ ಮೊಳಕೆ ಒಡೆಯದೆ ಇದ್ದರಿಂದ ರೈತರು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಮುಂಗಾರು ಪೂರ್ವ ಮಳೆಯಿಂದ ಕೃಷಿ ಭೂಮಿಯಲ್ಲಿ ತೇವಾಂಶ ಹೆಚ್ಚಿದ್ದು ಅದು ಮುಂಗಾರು ಬಿತ್ತನೆಗೆ ಹೆಚ್ಚಿನ ನೆರವು ನೀಡಿದೆ. ಆದರೆ ಕಳೆದ ಹತ್ತು ದಿನಗಳಿಂದ ಮಳೆಯಾಗದೆ ಇದ್ದರಿಂದ ಬಿತ್ತನೆ ನಂತರ ಮಳೆಯಾದರೆ ಅಳಿದು ಳಿದ ಬೀಜ ಮೊಳಕೆ ಒಡೆದು ಭರಪೂರ ಇಳುವರಿ ಬರುತ್ತದೆ.
ಒಂದು ಕಾಲದಲ್ಲಿ ಬಿಳಿ ಬಂಗಾರಕ್ಕೆ ಹೆಸರಾಗಿದ್ದ ತಾಲೂಕಿನಲ್ಲಿ ಖರ್ಚು ವೆಚ್ಚ, ನಿರ್ವಹಣೆ ಮಾಡಲಾಗದೆ ಹತ್ತಿ ಬೆಳೆಯನ್ನು ಬಿಟ್ಟು ಗೋವಿನಜೋಳ, ಹೆಸರು, ಸೂರ್ಯಪಾನ, ಶೆಂಗಾ, ಗೋದಿ ಬೆಳೆಯುತ್ತಿದ್ದಾರೆ. ಗೋವಿನ ಜೋಳ ಬಿತ್ತನೆಗೆ ಕಾದು ಕುಳಿತಿದ್ದಾರೆ. ನೀರಿನ ಸೌಲಭ್ಯ ಇರುವ ರೈತರು ಹತ್ತಿ ಬೆಳೆಯಲು ಮುಂದಾಗಿದ್ದಾರೆ. ಕೆಲ ರೈತರು ಹೆಸರು ಜತೆಗೆ ಬಿಟಿ ಹತ್ತಿ ಬೆಳೆದಿರುವುದು ಕಂಡು ಬಂದಿತು.
ರೋಹಣಿ ಮಳೆಯ ಕೊನೆ ದಿನ ದಟ್ಟವಾದ ಮೋಡ ಕವಿದು ಭಾರಿ ಮಳೆ ಆಗುವ ನಿರೀಕ್ಷೆ ಮೂಡಿಸಿತ್ತು. ಆದರೆ ಹತ್ತು ನಿಮಿಷ ತುಂತುರು ಮಳೆ ಸುರಿದ ರೈತರಲ್ಲಿ ನಿರಾಶೆ ಮುಡಿಸಿ ಹೋಗಿದೆ. ಮಳೆ ಆಗದೆ ಇದ್ದಲ್ಲಿ ರೈತರು ಮುಂದಿನ ವಾರ ಮಳೆಗಾಗಿ ಪ್ರಾರ್ಥಿಸಿ ದೇವರ ಮೋರೆ ಹೋಗುವ ನಿರೀಕ್ಷೆ ಇದೆ. ಒಟ್ಟಿಗೆ ರೈತರನ್ನು ಮಳೆಗಾಗಿ ಮೋಡದತ್ತ ಮುಖ ಮಾಡಿ ಕಾಯುವಂತೆ ಮಾಡಿದೆ.
ಶೇ.90ರಷ್ಟು ಬಿತ್ತನೆ
ಪ್ರಸಕ್ತ ಸಾಲಿನಲ್ಲಿ 36 ಸಾವಿರ ಹೆಕ್ಟರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಿದ್ದು 8500 ಹೆಕ್ಟರ್ ಪ್ರದೇಶ ದಲ್ಲಿ ಹೆಸರು ಬಿತ್ತನೆ ಆಗುವ ನಿರೀಕ್ಷೆಯಂತೆ ಶೇ.90ರಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಇನ್ನೂ ಕೆಲ ರೈತರು ಮುಂಗಾರು ಮಳೆಗಾಗಿ ಕಾದು ಕುಳಿತಿದ್ದಾರೆ. ರೋಹಣಿ ಮಳೆ ಕೊನೆಯಾಗಿದ್ದು ಮೃಗಶಿರ ಮಳೆ ಆರಂಭವಾಯಿತು. ಭಾರಿ ಗಾಳಿ, ಬಿರು ಬಿಸಲಿನಲ್ಲೆ ರೋಹಣಿ ಕಾಲಹರಣ ಮಾಡಿದ್ದು ಮೃಗಶಿರ ಮಳೆಗಾಗಿ ರೈತರು ಜಪಿಸುವಂತೆ ಮಾಡಿದೆ.