Chikkaballapur News: ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಜೂ.8 ರಂದು ಜನಜಾಗೃತಿ ಧರ್ಮ ಸಮಾರಂಭ
ಗುರು-ಶಿಷ್ಯರ ಸಂಬಂಧಗಳು ಗಟ್ಟಿಯಾಗಲು ಜನಜಾಗೃತಿ ಧರ್ಮ ಸಮಾರಂಭ ಹೆಚ್ಚು ಸಹಕಾರಿ ಯಾಗಲಿದೆ ಎಂದರು, ಮಾನವ ಮೌಲ್ಯಗಳು ಹಾಗೂ ಸಂಬಂಧಗಳು ಗಟ್ಟಿಯಾಗಲು ಮತ್ತು ಪರಸ್ಪರ ಸೌಹಾರ್ಧತೆ ನೆಲಸಲು ಸಮಾರಂಭಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ವಿಚಾರಧಾರೆ ಗಳನ್ನು ತಿಳಿದುಕೊಳ್ಳಬೇಕು

ಗೌರಿಬಿದನೂರು ನಗರದ ವೀರಶೈವ ಸೇವಾ ಸಮಿತಿ ಕಚೇರಿ ಆವರಣದಲ್ಲಿ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಶ್ರಿಗಳು ಮಠದ 19ನೇ ವಾರ್ಷಿಕೋತ್ಸವ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿ ಆರ್ಶೀವಚನ ನೀಡಿದರು.

ಸಾಮೂಹಿಕ ವಿವಾಹ/ಪಲ್ಲಕ್ಕಿ ಉತ್ಸವ/ಸಸಿ ವಿತರಣ/ದಾಸೋಹ ಭವನ ಉದ್ಘಾಟನೆ /ದೀಕ್ಷಾ ಸಮಾರಂಭ
ಗೌರಿಬಿದನೂರು : ಸಮಾಜದಲ್ಲಿ ಸೌಹಾರ್ಧತೆ, ಜೀವನದ ಮೌಲ್ಯಗಳ ಹಾಗೂ ಆಚಾರ ವಿಚಾರಗಳ ಅರಿವು ಮೂಡಿಸುವ ಸಲುವಾಗಿ ಮಠಗಳ ವಾರ್ಷಿಕೋತ್ಸವಗಳು ಸಮಾಜಕ್ಕೆ ಹೆಚ್ಚು ಸಹಕಾ ರಿ ಯಾಗಲಿದೆ ಎಂದು ಶ್ರೀ ಕ್ಷೇತ್ರ ಸಿದ್ದರ ಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ನಗರದ ಬಸವೇಶ್ವರ ಸಮುದಾಯ ಭವನದ ವೀರಶೈವ ಸೇವಾ ಸಮಿತಿಯ ಕಚೇರಿಗೆ ಆಗಮಿಸಿ ಶ್ರೀ ಕ್ಷೇತ್ರ ಸಿದ್ಧರಬೆಟ್ಟ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ 19ನೇ ವರ್ಷದ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ, ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಹಾಗೂ ಸಾಮೂಹಿಕ ವಿವಾಹಗಳು ಮತ್ತು ಜನಜಾಗೃತಿ ಧರ್ಮ ಸಮಾರಂಭದ ಆಹ್ವಾನ ಪತ್ರಿಕೆಯನ್ನು ವಿತರಿಸುವ ಮೂಲಕ ಆಹ್ವಾನಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕೋಟ್ಪಾ ದಾಳಿ
ಗುರು-ಶಿಷ್ಯರ ಸಂಬಂಧಗಳು ಗಟ್ಟಿಯಾಗಲು ಜನಜಾಗೃತಿ ಧರ್ಮ ಸಮಾರಂಭ ಹೆಚ್ಚು ಸಹಕಾರಿ ಯಾಗಲಿದೆ ಎಂದರು, ಮಾನವ ಮೌಲ್ಯಗಳು ಹಾಗೂ ಸಂಬಂಧಗಳು ಗಟ್ಟಿಯಾಗಲು ಮತ್ತು ಪರಸ್ಪರ ಸೌಹಾರ್ಧತೆ ನೆಲಸಲು ಸಮಾರಂಭಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು ಎಂದರು.
ಜೂ.6 ರಿಂದ ಪ್ರಾರಂಭವಾಗುವ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿದೆ, ಜೂ.6 ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಗಂಗೆ ಪೂಜೆಯೊಂದಿಗೆ ಪ್ರಾರಂಭಗೊಳ್ಳಲಿದ್ದು, ಜೂ.7 ರಂದು ಪುಸ್ತಕ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಜೂ.8 ರಂದು ಉಚಿತ ಸಹಿಕ ದೀಕ್ಷಾ ಸಮಾರಂಭ,ಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾವ ಮಹೋತ್ಸವ ಶ್ರೀಗಳಿಂದ ಜನ ಜಾಗೃತಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ಮಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ನೀಡಲಿದ್ದಾರೆ, ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ರೈಲ್ವೆ ಖಾತೆ ಮತ್ತು ಜಲಶಕ್ತಿ ಕೇಂದ್ರ ಸಚಿವ ವಿ.ಸೋಮಣ್ಣ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ವಹಿಸಲಿದ್ದಾರೆ, ನೂತನ ದಾಸೋಹ ಭವನವನ್ನು ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ವಸತಿ ಗೃಹ ಉದ್ಘಾಟನೆಯನ್ನು ಆಂಧ್ರಪ್ರದೇಶದ ಮಾಜಿ ಮಂತ್ರಿ ರಘುವೀರ ರೆಡ್ಡಿ, ಮಾಂಗಲ್ಯ ವಿತರಣೆಯನ್ನು ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ರೈತರಿಗೆ ಸಸ ವಿತರಣೆಯನ್ನು ತುಮಕೂರು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ತುಮಕೂರು ಸಂಸದರ ವಿವಿಧ ತಾಲೂಕು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸನ್ಮಾನ: ಅಖಿಲ ಭಾರತ ವೀರಶೈವ ಮಹಾಸಭಾ ಯುವಘಟಕದ ನೂತನ ಸದಸ್ಯರಾಗಿ ನೇಮಕ ಗೊಂಡಿರುವ ಜಿ.ರಾಜಣ್ಣ ಅವನ್ನು ಶ್ರೀಗಳು ಸನ್ಮಾನಿಸಿ ಅಭಿನಂದಿಸಿದರು.
ವೀರಶೈವ ಸೇವಾ ಸಮಿತಿ ಅಧ್ಯಕ್ಷ ತರಿದಾಳು ಚಿಕ್ಕಣ್ಣ, ಕಾರ್ಯದರ್ಶಿ ಶಿವಪ್ರಸಾದ್, ಖಜಾಂಚಿ ನಂಜುಂಡಪ್ಪ, ನಿರ್ದೇಶಕರಾದ ಮಲ್ಲಿಕಾರ್ಜುನಯ್ಯ, ನವೀನ್ಕುಮಾರ್, ದೇವಿಮಂಜುನಾಥ್, ಪ್ರವೀಣ್ ಕುಮಾರ್, ನಟರಾಜ್,ಶಿವಕುಮಾರ್, ನಾಗರಾಜು, ಹೆಚ್.ಪಿ.ನಟರಾಜ್,ಸತೀಶ್, ಅ.ಬಾ.ವೀ.ಮ.ಸಭಾ ಅಧ್ಯಕ್ಷ ಮಹೇಂದ್ರ, ಖಜಾಂಚಿ ಆರ್.ಮಂಜುನಾಥ್, ವೀರಶೈವ ಮುಖಂಡ ರಾದ ಶಿವಶಂಕರ ಆರಾಧ್ಯ, ಮುದ್ದುವೀರಪ್ಪ, ಜಿ.ರಾಜಣ್ಣ, ವಿ.ಗೌರೀಶ್, ಚನ್ನಬಸವ, ಡಾ.ಸಿ.ನಾಗ ರತ್ನಮ್ಮ, ಮಲ್ಲಿಕಾರ್ಜುನ್, ಶಿವಶಂಕರ್, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.