ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮದುವೆ ಮನೆಯಲ್ಲಿ ಕೂಲರ್ ವಿಚಾರಕ್ಕೆ ನಡೆಯಿತು ಮಾರಮಾರಿ

ಉತ್ತರ ಪ್ರದೇಶದ ಝಾನ್ಸಿಯ ಸಿಪ್ರಿ ಬಜಾರ್‌ನಲ್ಲಿ ಮೇ 28ರಂದು ನಡೆದ ಮದುವೆಯೊಂದರಲ್ಲಿ ಕೂಲರ್ ಬಗ್ಗೆ ವಧು ಮತ್ತು ವರನ ಕುಟುಂಬ ಸದಸ್ಯರು ಜಗಳ ಮಾಡಿಕೊಂಡಿದ್ದು, ಹಿಂಸೆಯ ರೂಪ ತಾಳಿದೆ. ಇದರಿಂದ ಮದುವೆ ಮನೆ ರಣಾಂಗಣವಾಗಿ ಪರಿವರ್ತನೆಯಾಗಿದೆ. ಇದರ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ತ್ವರಿತವಾಗಿ ವೈರಲ್ ಆಗಿದೆ.

ಕೂಲರ್‌ಗಾಗಿ ರಣರಂಗವಾದ ಮದುವೆ ಮನೆ

ಲಖನೌ: ಮದುವೆ ಮನೆಯಲ್ಲಿ ಕೂಲರ್ (Cooler) ವಿಚಾರಕ್ಕೆ ಜಗಳ ಭುಗಿಲೆದ್ದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ (Jhansi) ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಕೂಲರ್ ವಿಚಾರವಾಗಿ ವಧು ಮತ್ತು ವರನ ಕಡೆಯವರ ಮಧ್ಯೆ ವಾಗ್ವಾದ ಪ್ರಾರಂಭವಾಗಿ ಹಿಂಸೆಗೆ ತಿರುಗಿರುವ ಘಟನೆ ಸಿಪ್ರಿ ಬಜಾರ್‌ನಲ್ಲಿ ಮೇ 28ರಂದು ನಡೆದಿದೆ. ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ.

ಉತ್ತರ ಪ್ರದೇಶದ ಝಾನ್ಸಿಯ ಸಿಪ್ರಿ ಬಜಾರ್‌ನಲ್ಲಿ ಮೇ 28ರಂದು ನಡೆದ ಮದುವೆಯೊಂದರಲ್ಲಿ ಕೂಲರ್ ಬಗ್ಗೆ ವಧು ಮತ್ತು ವರನ ಕುಟುಂಬ ಸದಸ್ಯರು ಜಗಳ ಮಾಡಿಕೊಂಡಿದ್ದು, ಹಿಂಸೆಯ ರೂಪ ತಾಳಿದೆ. ಇದರಿಂದ ಮದುವೆ ಮನೆ ರಣಾಂಗಣವಾಗಿ ಪರಿವರ್ತನೆಯಾಗಿದೆ. ಇದರ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ತ್ವರಿತವಾಗಿ ವೈರಲ್ ಆಗಿದೆ.

ಸಿಪ್ರಿ ಬಜಾರ್‌ನಲ್ಲಿ ವಿವಾಹ ವಿಧಿವಿಧಾನಗಳು ಸುಗಮವಾಗಿ ನಡೆಯುತ್ತಿತ್ತು. ನವವಿವಾಹಿತರಿಗಾಗಿ ಕೂಲರ್ ಇರಿಸಲಾಗಿತ್ತು. ವರನ ಕಡೆಯ ಕೆಲವು ಸದಸ್ಯರು ಕೂಲರ್‌ನ ಮುಂದೆ ನೇರವಾಗಿ ಕುಳಿತು ಗಾಳಿಯ ಹರಿವನ್ನು ತಡೆಯುತ್ತಿದ್ದರು. ಇದಕ್ಕೆ ವಧುವಿನ ಕಡೆಯ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಬೇರೆ ಕಡೆ ಅವರನ್ನು ಕುಳಿತುಕೊಳ್ಳಲು ಹೇಳಿದ್ದು ವಾಗ್ವಾದಕ್ಕೆ ಕಾರಣವಾಯಿತು. ಇದು ಬಳಿಕ ತೀವ್ರಗೊಂಡು ಅತಿಥಿಗಳು ಪರಸ್ಪರ ಪ್ಲಾಸ್ಟಿಕ್ ಕುರ್ಚಿ, ಪಾತ್ರೆಗಳನ್ನು ಎಸೆಯತೊಡಗಿದರು. ಇದಕ್ಕೆ ಪುರುಷರು, ಮಹಿಳೆಯರೂ ಸೇರಿದರು. ಇನ್ನು ಕೆಲವರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಜಗಳದಿಂದ ಹೊರಗುಳಿದಿರುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ಬಳಿಕ ವರನ ಕಡೆಯವರು ಊಟವನ್ನು ಬಿಟ್ಟು ಮದುವೆ ಮಂಟಪದಿಂದ ಹೊರನಡೆದರು.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪೊಲೀಸರಿಗೆ ವಧುವಿನ ಕಡೆಯವರು ವಿಡಿಯೊ ಸಾಕ್ಷಿಯನ್ನು ನೀಡಿ ಬಳಿಕ ಎಸ್‌ಎಸ್‌ಪಿ ಕಚೇರಿಗೆ ಆಗಮಿಸಿ ಔಪಚಾರಿಕವಾಗಿ ದೂರು ದಾಖಲಿಸಿದರು.



ಈ ಬಗ್ಗೆ ಮಾಹಿತಿ ನೀಡಿರುವ ವಧುವಿನ ಸಹೋದರ, ನಾವು ಊಟ ಬಡಿಸುತ್ತಿದ್ದಾಗ ಕೆಲವು ಹುಡುಗರು ಕೂಲರ್ ಮುಂದೆ ಕುಳಿತಿದ್ದರು. ದಂಪತಿಗೆ ಸ್ವಲ್ಪ ಗಾಳಿ ಸಿಗುವಂತೆ ನಾವು ಅವರನ್ನು ಬೇರೆ ಕಡೆ ಕುಳಿತುಕೊಳ್ಳಲು ಹೇಳಿದೆವು. ಆದರೆ ಅವರು ನಮ್ಮೊಂದಿಗೆ ಜಗಳವಾಡಲು ಪ್ರಾರಂಭಿಸಿದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: No-Fly Zone: ತಿರುಮಲ ದೇವಸ್ಥಾನದ ಮೇಲೆ ವಿಮಾನ ಹಾರಾಟ; ನೋ ಫ್ಲೈ ಝೋನ್‌ ಘೋಷಿಸಲು ಹೆಚ್ಚಾಯ್ತು ಆಗ್ರಹ

ಈ ಕುರಿತು ಪ್ರತಿಕ್ರಿಯಿಸಿರುವ ವೃತ್ತ ಅಧಿಕಾರಿ ರಾಮ್‌ವೀರ್ ಸಿಂಗ್, ಮದುವೆಯೊಂದರಲ್ಲಿ ನಡೆದ ಜಗಳವನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಮತ್ತು ಸ್ಥಳವನ್ನು ಸಿಪ್ರಿ ಬಜಾರ್ ಎಂದು ಗುರುತಿಸಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಡಿಯೊಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು, ಅನೇಕರು ತಮಾಷೆಯಾಗಿ ಪರಿಗಣಿಸಿದ್ದಾರೆ. ಒಬ್ಬರು ಉತ್ತರ ಭಾರತೀಯರು ಗಲಾಟೆ ಮಾಡಲು ಇರುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ಇಂತಹ ಮದುವೆಗಳು ಡಬ್ಲ್ಯುಡಬ್ಲ್ಯುಇಗಿಂತ 100 ಪಟ್ಟು ಉತ್ತಮ. ಅಂತಹ ಮದುವೆಗಳನ್ನು ಎಂದಿಗೂ ತಪ್ಪಿಸಿಕೊಳ್ಳಬೇಡಿ ಮತ್ತು ಪಾಪ್‌ಕಾರ್ನ್‌ಗಳನ್ನು ಕೊಂಡೊಯ್ಯಲು ಮರೆಯಬೇಡಿ ಎಂದು ಹೇಳಿದ್ದಾರೆ.

ಇನ್ನೊಬ್ಬರು ಮದುವೆ ಮಂಟಪಕ್ಕೆ ಆಗಿರುವ ಹಾನಿಯನ್ನು ಯಾರು ಭರಿಸುತ್ತಾರೆ? ರಿಸೆಪ್ಷನ್ ನಡೆಯುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.