ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sharmishta Panoli: ಎಲ್ಲರ ಕಣ್ಣು ಶರ್ಮಿಷ್ಠಾ ಮೇಲೆ; ಬಂಧನದಲ್ಲಿರುವ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್‌ಗೆ ಬೆಂಬಲ ಸೂಚಿಸಿದ ಡಚ್‌ ಲೀಡರ್‌

ಕ್ಷಮೆಯಾಚನೆಯ ಹೊರತಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ಕೋಮುವಾದಿ ಹೇಳಿಕೆ ನೀಡಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರಿಂದ ಬಂಧಿಸಲ್ಪಟ್ಟ 22 ವರ್ಷದ ಪುಣೆ ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿಗೆ ಸಾಮಾಜಿಕ ಬೆಂಬಲ ನೀಡುತ್ತಿದ್ದಾರೆ. ಇದೀಗ ಡಚ್‌ ಬಲಪಂಥೀಯ ನಾಯಕರೊಬ್ಬರು ಶರ್ಮಿಷ್ಠಾ ಪರ ಧ್ವನಿ ಎತ್ತಿದ್ದಾರೆ.

ಶರ್ಮಿಷ್ಠಾಗೆ ಬೆಂಬಲ ಸೂಚಿಸಿ ಪೋಸ್ಟ್‌ ಹಾಕಿದ ಡಚ್‌ ಲೀಡರ್‌

Profile Vishakha Bhat Jun 1, 2025 3:02 PM

ಕೊಲ್ಕತ್ತಾ: ಕ್ಷಮೆಯಾಚನೆಯ ಹೊರತಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ಕೋಮುವಾದಿ ಹೇಳಿಕೆ ನೀಡಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರಿಂದ ಬಂಧಿಸಲ್ಪಟ್ಟ 22 ವರ್ಷದ ಪುಣೆ ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿಗೆ (Sharmishta Panoli) ಸಾಮಾಜಿಕ ಬೆಂಬಲ ನೀಡುತ್ತಿದ್ದಾರೆ. ಇದೀಗ ಡಚ್‌ ಬಲಪಂಥೀಯ ನಾಯಕರೊಬ್ಬರು ಶರ್ಮಿಷ್ಠಾ ಪರ ಧ್ವನಿ ಎತ್ತಿದ್ದಾರೆ. ಡಚ್ ಸಂಸತ್ತಿನ ಸಂಸದ ಮತ್ತು ಬಲಪಂಥೀಯ ಪಾರ್ಟಿ ಫಾರ್ ಫ್ರೀಡಂನ ನೇತೃತ್ವ ವಹಿಸಿರುವ ಗೀರ್ಟ್ ವೈಲ್ಡರ್ಸ್, ಅವರ ಬಂಧನವನ್ನು "ವಾಕ್ ಸ್ವಾತಂತ್ರ್ಯಕ್ಕೆ ಅವಮಾನ" ಎಂದು ಬಣ್ಣಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಸಹಾಯ ಮಾಡುವಂತೆ ಒತ್ತಾಯಿಸಿದ್ದಾರೆ.

ಧೈರ್ಯಶಾಲಿ ಶರ್ಮಿಷ್ಠಾ ಪನೋಲಿಯನ್ನು ಬಿಡುಗಡೆ ಮಾಡಿ! ಅವರನ್ನು ಬಂಧಿಸಿರುವುದು ವಾಕ್ ಸ್ವಾತಂತ್ರ್ಯಕ್ಕೆ ಮಾಡಿದ ಅವಮಾನ. ಪಾಕಿಸ್ತಾನ ಮತ್ತು ಮುಹಮ್ಮದ್ ಬಗ್ಗೆ ಸತ್ಯ ಹೇಳಿದ್ದಕ್ಕಾಗಿ ಅವರನ್ನು ಶಿಕ್ಷಿಸಬೇಡಿ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಶರ್ಮಿಷ್ಠಾ ಅವರ ಫೋಟೋವನ್ನು ಹಂಚಿಕೊಂಡ ಗೀರ್ಟ್ ವೈಲ್ಡರ್ಸ್ ಎಲ್ಲರ ಕಣ್ಣು ಶರ್ಮಿಷ್ಠಾ ಮೇಲೆ ಎಂದು ಬರೆದಿದ್ದಾರೆ.



ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ಅದರಲ್ಲಿ ಕೋಮುವಾದಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕೋಲ್ಕತ್ತಾ ಪೊಲೀಸರು ಪನೋಲಿಯನ್ನು ನಿನ್ನೆ ಬಂಧಿಸಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ರಾಷ್ಟ್ರವು ಸಶಸ್ತ್ರ ಪಡೆಗಳನ್ನು ಬೆಂಬಲಿಸಿದಾಗ, ಆಪರೇಷನ್ ಸಿಂದೂರ್ ಸಮಯದಲ್ಲಿ ಮೌನ ವಹಿಸಿದ್ದಕ್ಕಾಗಿ ಬಾಲಿವುಡ್ ನಟ ನಟಿಯರನ್ನು ವಿದ್ಯಾರ್ಥಿನಿ ಟೀಕಿಸಿದ್ದರು. ಕೊಲ್ಕತ್ತಾ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಆಕೆಯನ್ನು ಬಂಧಿಸಲಾಗಿದೆ. ತನ್ನ ಹೇಳಿಕೆಗಳ ಮೂಲಕ ದ್ವೇಷವನ್ನು ಉತ್ತೇಜಿಸಿದ್ದಾರೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Sharmishta Panoli: ಜಾತ್ಯತೀತತೆ ಎರಡು ದಾರಿಗಳ ಬೀದಿಯಾಗಿರಬೇಕು; ಶರ್ಮಿಷ್ಠ ಪನೋಲಿ ಬಂಧನವನ್ನು ಪ್ರಶ್ನಿಸಿದ ಪವನ್ ಕಲ್ಯಾಣ್, ಕಂಗನಾ

ಕ್ಷಮೆ ಕೇಳಿದ ಬಳಿಕವೂ ಬಂಗಾಳ ಸರ್ಕಾರ ಆಕೆಯನ್ನು ಬಂಧಿಸಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಮಮತಾ ಬ್ಯಾನರ್ಜಿ ಅವರ ಸರ್ಕಾರವನ್ನು ಟೀಕಿಸಿದ್ದಾರೆ. ಜಾತ್ಯತೀತತೆಯು ದ್ವಿಮುಖವಾಗಿರಬೇಕು ಎಂದು ಅವರು ಹೇಳಿದ್ದಾರೆ. ಪರೇಷನ್ ಸಿಂಧೂರ್ ಸಮಯದಲ್ಲಿ, ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಮಾತನಾಡುತ್ತಾ, ತನ್ನ ಮಾತುಗಳು ವಿಷಾದಕರ ಮತ್ತು ಕೆಲವರಿಗೆ ನೋವುಂಟುಮಾಡಿದವು. ಅವಳು ತನ್ನ ತಪ್ಪನ್ನು ಒಪ್ಪಿಕೊಂಡಳು, ವೀಡಿಯೊವನ್ನು ಅಳಿಸಿಹಾಕಿದಳು ಮತ್ತು ಕ್ಷಮೆಯಾಚಿಸಿದಳು. ಪಶ್ಚಿಮ ಬಂಗಾಳ ಪೊಲೀಸರು ಶರ್ಮಿಷ್ಠಾ ವಿರುದ್ಧ ಕ್ರಮ ಕೈಗೊಂಡು ತ್ವರಿತವಾಗಿ ಕಾರ್ಯನಿರ್ವಹಿಸಿದರು. ಆದರೆ ಟಿಎಂಸಿಯ ಚುನಾಯಿತ ನಾಯಕರು, ಸಂಸದರು ಸನಾತನ ಧರ್ಮವನ್ನು ಅಪಹಾಸ್ಯ ಮಾಡಿದಾಗ ಲಕ್ಷಾಂತರ ಜನರ ಮೇಲೆ ಉಂಟಾದ ಆಳವಾದ, ತೀವ್ರವಾದ ನೋವಿನ ಬಗ್ಗೆ ಏನು? ನಮ್ಮ ನಂಬಿಕೆಯನ್ನು 'ಗಂಧ ಧರ್ಮ' ಎಂದು ಕರೆಯುವಾಗ ಆಕ್ರೋಶ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ