ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಾರಾಜ ಟ್ರೋಫಿ ಆಟಗಾರರ ಹರಾಜು; ಭಾರೀ ಮೊತ್ತ ಪಡೆದ ಪಡಿಕ್ಕಲ್, ಅಭಿನವ್

Maharaja Trophy Auction: ವಿದ್ವತ್ ಕಾವೇರಪ್ಪ 10.80 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್‌ಗೆ ಸೇರಿದರು. ವಿದ್ಯಾಧರ್ ಪಾಟೀಲ್ ಬೆಂಗಳೂರು ಬ್ಲಾಸ್ಟರ್ಸ್‌ನಿಂದ 8.40 ಲಕ್ಷಗಳನ್ನು ಪಡೆದರು. ಆಟಗಾರರನ್ನು ಎ, ಬಿ, ಸಿ ಹಾಗೂ ಡಿ ಎಂಬ 4 ಕೆಟಗರಿಯಲ್ಲಿ ವಿಂಗಡಿಸಲಾಗಿತ್ತು. ಹುಬ್ಬಳ್ಳಿ ಟೈಗರ್ಸ್​ ತಂಡ ಗರಿಷ್ಠ ಮೊತ್ತದೊಂದಿಗೆ ಹರಾಜಿನಲ್ಲಿ ಭಾಗವಹಿಸಿತ್ತು. ಅದರಂತೆ ಭಾರೀ ಮೊತ್ತ ನೀಡಿ ಇಬ್ಬರು ಸ್ಟಾರ್‌ ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತು.

ಮಹಾರಾಜ ಟ್ರೋಫಿ ಆಟಗಾರರ ಹರಾಜು; ಭಾರೀ ಮೊತ್ತ ಪಡೆದ ಪಡಿಕ್ಕಲ್

Profile Abhilash BC Jul 15, 2025 2:25 PM

ಬೆಂಗಳೂರು: ಆಗಸ್ಟ್​ 11ರಿಂದ 27ರವರೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಕೆಎಸ್​ಸಿಎ ಟಿ20 ಟೂರ್ನಿಗೆ ಪೂರ್ವಭಾವಿಯಾಗಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ(Maharaja Trophy Auction) ನಿರೀಕ್ಷೆಯಂತೆ ಆರ್​ಸಿಬಿ ತಂಡದ ಐಪಿಎಲ್​ ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿದ್ದ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್(Devdutt Padikkal)​, ಕಳೆದ ಆವೃತ್ತಿಯಲ್ಲಿ ಸಿಕ್ಸರ್​ ಮಳೆ ಸುರಿಸಿದ್ದ ಅಭಿನವ್​ ಮನೋಹರ್​, ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ದೊಡ್ಡ ಮೊತ್ತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಇದುವರೆಗೂ ನಡೆದ ಹರಾಜು ಪ್ರಕ್ರಿಯೆಯಲ್ಲಿ ದೇವದತ್ ಪಡಿಕ್ಕಲ್ 13.20 ಲಕ್ಷಕ್ಕೆ ಮಾರಾಟವಾಗುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಅವರನ್ನು ಹುಬ್ಬಳ್ಳಿ ಟೈಗರ್ಸ್ ತಂಡ ಖರೋದಿ ಮಾಡಿತು. ಮನೀಷ್​ ಪಾಂಡೆ ಮತ್ತು ಅಭಿನವ್​ ಮನೋಹರ್ 12.20 ಲಕ್ಷ ಪಡೆದು ಜಂಟಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದಾರೆ. ಅಭಿನವ್ ಹುಬ್ಬಳ್ಳಿ ತಂಡದ ಪಾಲಾದರೆ, ಪಾಂಡೆ ಹಾಲಿ ಚಾಂಪಿಯನ್​ ಮೈಸೂರು ವಾರಿಯರ್ಸ್ ತಂಡಕ್ಕೆ ಮಾರಾಟವಾಗಿದ್ದಾರೆ. ಕೆ. ಗೌತಮ್(4.20) ಕೂಡ ಮೈಸೂರು ತಂಡದ ಪಾಲಾದರು.

ವಿದ್ವತ್ ಕಾವೇರಪ್ಪ 10.80 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್‌ಗೆ ಸೇರಿದರು. ವಿದ್ಯಾಧರ್ ಪಾಟೀಲ್ ಬೆಂಗಳೂರು ಬ್ಲಾಸ್ಟರ್ಸ್‌ನಿಂದ 8.40 ಲಕ್ಷಗಳನ್ನು ಪಡೆದರು. ಆಟಗಾರರನ್ನು ಎ, ಬಿ, ಸಿ ಹಾಗೂ ಡಿ ಎಂಬ 4 ಕೆಟಗರಿಯಲ್ಲಿ ವಿಂಗಡಿಸಲಾಗಿತ್ತು. ಹುಬ್ಬಳ್ಳಿ ಟೈಗರ್ಸ್​ ತಂಡ ಗರಿಷ್ಠ ಮೊತ್ತದೊಂದಿಗೆ ಹರಾಜಿನಲ್ಲಿ ಭಾಗವಹಿಸಿತ್ತು. ಅದರಂತೆ ಭಾರೀ ಮೊತ್ತ ನೀಡಿ ಇಬ್ಬರು ಸ್ಟಾರ್‌ ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತು.

ಇದನ್ನೂ ಓದಿ IND vs ENG: ಲಾರ್ಡ್ಸ್‌ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್‌ ವಿರುದ್ಧ ಆರ್‌ ಅಶ್ವಿನ್‌ ಕಿಡಿ!