ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

MLA Pradeep Eshwar: ಹಿಂದೆ ಬ್ರೋಕರ್‌ಗಳು ವಿಧಾನಸೌಧಕ್ಕೆ ಹೋಗುತ್ತಿದ್ದರು : ಈಗ ಜೋಕರ್ ಹೋಗುತ್ತಿದ್ದಾರೆ

ಬಸವನಗೌಡ ಪಾಟೀಲ್ ಯತ್ನಾಳ್ ನನ್ನನ್ನು ಜೋಕರ್ ಎಂದಿದ್ದು ಖುಷಿ ತಂದಿದೆ

ವಿಧಾನಸಭೆ ಎದುರು ೧೧ ಜೆಸಿಬಿಗಳನ್ನು ನಿಲ್ಲಿಸುವ ಮೊದಲು ಅವರದ್ದೇ ಕ್ಷೇತ್ರದ ಕೆಲವು ವಾರ್ಡ್ಗಳ ರಸ್ತೆ ಸರಿಪಡಿಸಲು ಜೆಸಿಜಿಗಳನ್ನು ಕಳುಹಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಜನಪ್ರತಿನಿಧಿ ಗಳು ಕಾರ್ಯನಿರ್ವಹಿಸಬೇಕು. ಇದನ್ನು ಬಿಟ್ಟು ಜೆಸಿಬಿ ತಂದು ಕಟ್ಟಡ ಹೇಗೆ ಕೆಡವಲಾಗುತ್ತದೆ. ಅವರಿಗೆ ಧೈರ್ಯವಿದ್ದಲ್ಲಿ ಕ್ಷೇತ್ರಗಳಿಗೆ ಜೆಸಿಬಿ ತಂದು ಕೆಲಸ ಮಾಡಿ ತೋರಿಸಲಿ

ಸ್ಮಾರ್ಟ್‌ ಕಾರ್ಯಸ್ಥಳಗಳ ಮರು ವ್ಯಾಖ್ಯಾನಿಸಲು ಬೆಂಗಳೂರಿನಲ್ಲಿ ಮೈವಿಪ್ರೋವರ್ಸ್‌ ಕೇಂದ್ರ ಪ್ರಾರಂಭಿಸಿದ ವಿಪ್ರೋ

ಬೆಂಗಳೂರಿನಲ್ಲಿ ಮೈವಿಪ್ರೋವರ್ಸ್‌ ಕೇಂದ್ರ ಪ್ರಾರಂಭಿಸಿದ ವಿಪ್ರೋ

ಹಿಂದಿನ ಕೇಂದ್ರಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯ ಆಧಾರದ ಮೇಲೆ, ವಿಪ್ರೋ ಈಗ ಬೆಂಗಳೂರಿನಲ್ಲಿ 2,500 ಚ.ಅಡಿ ವಿಸ್ತೀರ್ಣದ ಪ್ರಮುಖ ಇನೋವೇಷನ್ ಅನುಭವ ಕೇಂದ್ರವನ್ನು ಸ್ಥಾಪಿಸಿದೆ. ಭಾರತದ ತಂತ್ರಜ್ಞಾನ ರಾಜಧಾನಿ ಯಾಗಿ, ಅನೇಕ ಐಟಿ ಸಂಸ್ಥೆಗಳು, ಸ್ಟಾರ್ಟ್ಅಪ್‌ಗಳು ಮತ್ತು ಜಾಗತಿಕ ಕಂಪನಿಗಳ ಕೇಂದ್ರವಾಗಿ ರುವ ಬೆಂಗಳೂರು ಈ ಅತ್ಯಾಧುನಿಕ ಸೌಲಭ್ಯಕ್ಕಾಗಿ ಪರಿಪೂರ್ಣ ಸ್ಥಳವಾಗಿದೆ.

ತೀವ್ರ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಗೃಹಿಣಿಗೆ ಯಶಸ್ವಿ ಚಿಕಿತ್ಸೆ

ತೀವ್ರ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಗೃಹಿಣಿಗೆ ಯಶಸ್ವಿ ಚಿಕಿತ್ಸೆ

ಕಳೆದ ಎರಡು ವರ್ಷಗಳಿಂದ ತೀವ್ರ ಉಸಿರಾಟದ ತೊಂದರೆ, ಪಾದಗಳು ಊದಿಕೊಳ್ಳುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅಸಮರ್ಥತೆಗಳಿಂದಾಗಿ ಬಳಲುತ್ತಿದ್ದ 70 ವರ್ಷ ವಯಸ್ಸಿನ ಗೃಹಿಣಿಯೊಬ್ಬರಿಗೆ ಕರ್ನಾಟಕ ರಾಜ್ಯದಲ್ಲಿ ಭಾರತದ ಮೊದಲ ಮೇಕ್‌ ಇನ ಇಂಡಿಯಾ ಮೈಟರಲ್ ಕ್ಲಿಪ್‌ ಸಾಧನದ (ಮೈಕ್ಲಿಪ್)‌ ಮೂಲಕ ಯಶಸ್ವಿಯಾಗಿಚಿಕಿತ್ಸೆಯನ್ನು ನೀಡಲಾಗಿದೆ.

ಆಕಾಸ ಏರ್‌ʼನ ಕೆಫೆಯ ಮೆನು ನವೀಕರಣ: ಪ್ರಯಾಣಿಕರಿಗೆ ವಿಶೇಷ ಖಾದ್ಯ

ಆಕಾಸ ಏರ್‌ʼನ ಕೆಫೆಯ ಮೆನು ನವೀಕರಣ: ಪ್ರಯಾಣಿಕರಿಗೆ ವಿಶೇಷ ಖಾದ್ಯ

ಆಕಾಶ ಏರ್ ಪ್ರಾರಂಭವಾದಗಿನಿಂದಲೂ ಪ್ರತಿ ಹಬ್ಬಕ್ಕೂ ವಿಶೇಷ ಆಹಾರಗಳನ್ನು ಪರಿಚಯಿಸುತ್ತಾ ಬರಲಾಗಿದೆ. ಪ್ರಮುಖವಾಗಿ ಮಕರ ಸಂಕ್ರಾಂತಿ, ಪ್ರೇಮಿಗಳ ದಿನ, ಹೋಳಿ, ಈದ್, ತಾಯಂದಿರ ದಿನ, ಅಂತರರಾಷ್ಟ್ರೀಯ ಯೋಗ ದಿನ, ಮಾನ್ಸೂನ್, ನವರೋಜ್, ಓಣಂ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಮತ್ತು ಕ್ರಿಸ್‌ಮಸ್‌ವರೆಗೆ ತನ್ನ ಪ್ರಯಾಣಿಕರಿಗೆ ಹಬ್ಬದ ಊಟವನ್ನು ಉಣಬಡಿಸುತ್ತಿದೆ.

ಅಮೆಜಾನ್‌ನಲ್ಲಿಯೂ ಈಗ ಜಾವಾ ಯೆಜ್ಡಿ ಬೈಕ್‌ ಖರೀದಿ ಅತಿ ಸುಲಭ

ಅಮೆಜಾನ್‌ನಲ್ಲಿಯೂ ಈಗ ಜಾವಾ ಯೆಜ್ಡಿ ಬೈಕ್‌ ಖರೀದಿ ಅತಿ ಸುಲಭ

ಎಂಡ್-ಟು-ಎಂಡ್ ಡಿಜಿಟಲ್ ಪ್ರಯಾಣವು ಕಂಪನಿಯ ನಿಖರವಾದ ಆಫ್‌ಲೈನ್ ಸಿದ್ಧತೆಯನ್ನು ಪ್ರತಿ ಬಿಂಬಿಸುತ್ತದೆ. ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಈಗಾಗಲೇ ತನ್ನ ಡೀಲರ್ ನೆಟ್‌ವರ್ಕ್ ಅನ್ನು ಭಾರತದಾದ್ಯಂತ 450 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳಿಗೆ ವಿಸ್ತರಿಸಿದೆ ಮತ್ತು ಖರೀದಿದಾರ ರಿಗೆ 100 ಪ್ರತಿಶತ ಜಿಎಸ್‌ಟಿ 2.0 ಸುಧಾರಣಾ ಪ್ರಯೋಜನಗಳನ್ನು ರವಾನಿಸಿದೆ.

ST tag for Kurubas: ಕುರುಬರಿಗೆ ಎಸ್‌ಟಿ ಮೀಸಲಾತಿ; ನಾವು ಸಂವಿಧಾನಬದ್ಧ ಹಕ್ಕು ಪಡೆಯುತ್ತಿದ್ದೇವೆ ಎಂದ ನಿರಂಜನಾನಂದಪುರಿ ಶ್ರೀ

ನಾವು ಸಂವಿಧಾನಬದ್ಧ ಹಕ್ಕು ಪಡೆಯುತ್ತಿದ್ದೇವೆ: ನಿರಂಜನಾನಂದಪುರಿ ಶ್ರೀ

Niranjanaanandapuri Swamiji: ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವುದಕ್ಕೆ ನಾಯಕ (ವಾಲ್ಮೀಕಿ) ಸಮುದಾಯವು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಕುರುಬ ಸಮುದಾಯದವರು ಯಾವುದೇ ಜಾತಿಯ ಹಕ್ಕು ಕಿತ್ತುಕೊಳ್ಳದೇ ಸಂವಿಧಾನಿಕ ಹಕ್ಕನ್ನು ಪಡೆದುಕೊಳ್ಳುತ್ತಿದೆ. ಊಹಾಪೋಹಗಳ ಹೇಳಿಕೆ ಕೊಡುವುದು ಸಮಂಜಸವಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಕರುಳಿನ ಗ್ಯಾಂಗ್ರೀನ್‌! ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಕರುಳಿನ ಗ್ಯಾಂಗ್ರೀನ್‌! ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಯುವ ರೋಗಿಯನ್ನು ವೆಂಟಿಲೇಟರ್‍‌ ಬೆಂಬಲದೊಂದಿಗೆ ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ತಪಾಸಣೆಯಲ್ಲಿ ಕರುಳಿನ ಅಸಮಾನ್ಯ ತಿರುಚುವಿಕೆಯಿಂದ ಸಣ್ಣ ಕರುಳಿನ ಬಹುಪಾಲು ಹಾಗೂ ದೊಡ್ಡ ಕರುಳಿನ ಕೆಲ ಭಾಗದಲ್ಲಿ ಗ್ಯಾಂಗ್ರಿನ್‌ ಉಂಟಾಗಿದ್ದು ಪತ್ತೆಯಾಗಿದೆ. ನುರಿತ ತಜ್ಞರ ತಂಡ ದೋಷಪೂರಿತ ಕರುಳಿನ ಭಾಗವನ್ನು ತೆಗೆದು ಇಂಟೆನ್ಸಿವ್‌ ಸಪೋರ್ಟಿವ್‌ ಕೇರ್‍‌ ನಲ್ಲಿ ನಿಗಾ ವಹಿಸಲಾಗಿದೆ.

Chikkanayakanahalli News: ಸಂತರ ಜಯಂತಿ ಒಂದೇ ದಿನ ಆಚರಣೆಗೆ ತೀವ್ರ ವಿರೋಧ

ಸಂತರ ಜಯಂತಿ ಒಂದೇ ದಿನ ಆಚರಣೆಗೆ ತೀವ್ರ ವಿರೋಧ

ಪ್ರತಿಯೊಬ್ಬ ಸಂತನಿಗೂ ಅವರದೇ ಆದ ವಿಶಿಷ್ಟ ಕೊಡುಗೆ ಮತ್ತು ಇತಿಹಾಸವಿದೆ. ಜಯಂತಿ ಆಚರಣೆ ಯ ಉದ್ದೇಶ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಅವರ ಆದರ್ಶಗಳನ್ನು ಸಮಾಜಕ್ಕೆ ಮುಟ್ಟಿಸು ವುದಾಗಿದೆ. ಒಂದೇ ದಿನ ಎಲ್ಲಾ ದಾರ್ಶನಿಕರ ಜಯಂತಿ ಆಚರಿಸಿದರೆ ಮಹಾತ್ಮರಿಗೆ ಸೂಕ್ತ ನ್ಯಾಯ ಸಿಗುವುದಿಲ್ಲ. ಕಾರ್ಯಕ್ರಮಗಳ ಗಡಿಬಿಡಿಯಲ್ಲಿ ಅವರ ಸಂದೇಶಗಳು ಕಡೆಗಣಿಸಲ್ಪಡುತ್ತವೆ

ಆರೋಗ್ಯ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ವಿಪಿನ್‌ ಸಿಂಗ್ ಭೇಟಿಯಾದ ಸಿ.ಎಸ್‌. ಷಡಾಕ್ಷರಿ; ವಿವಿಧ ವಿಷಯಗಳ ಕುರಿತು ಚರ್ಚೆ

ಆರೋಗ್ಯ ಇಲಾಖೆ ಕಾರ್ಯನಿರ್ವಾಹಕರನ್ನು ಭೇಟಿಯಾದ ಸಿ.ಎಸ್‌. ಷಡಾಕ್ಷರಿ

Government Employees: ಸಿ.ಜಿ.ಎಚ್.‌ಎಸ್.‌ ದರಗಳಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಆದೇಶ ಪಡೆಯುವುದು, ಕೆಎಎಸ್‌ಎಸ್‌ ಯೋಜನೆಗೆ ಸಂಬಂಧಪಟ್ಟಂತೆ ಸಹಾಯವಾಣಿ ಕೇಂದ್ರಗಳು ಹಾಗೂ ಅವುಗಳ ದೂರವಾಣಿ ಸಂಖ್ಯೆ ಒದಗಿಸುವುದು ಸೇರಿ ವಿವಿಧ ವಿಷಯಗಳ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು, ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರ ಜತೆ ಚರ್ಚಿಸಿದ್ದಾರೆ.

ಭಾರತ ಒಂದು ದೇಶವಾಗಿ ಭೂಪಟದಲ್ಲಿ ನಿಲ್ಲಲು ಮಾರ್ಕೆಟಿಂಗ್ ಮತ್ತು ಇನ್ನೋವೇಶನ್ ಅಗತ್ಯ- ಸ್ವಾಮಿ ವಿಗ್ಯಾನ್ಆನಂದ ಜಿ

ದೇಶವಾಗಿ ಭಾರತ,ಭೂಪಟದಲ್ಲಿ ನಿಲ್ಲಲು ಮಾರ್ಕೆಟಿಂಗ್ ಮತ್ತು ಇನ್ನೋವೇಶನ್ ಅಗತ್ಯ

81 ವರ್ಷಗಳ ಪರಂಪರೆ ಹಿನ್ನೆಲೆಯಲ್ಲಿ ಸಹಸ್ರ ಗ್ರಾಹಕ ಚಂದ್ರ ದರ್ಶನ ಎಂಬ ಪರಿಕಲ್ಪನೆ, ಸಾವಿರ ಗ್ರಾಹಕರನ್ನು ಒಂದೇ ದಿನ ಕರೆದು ಅವರಿಗೆ ಆಭರಣ ಮಾರಾಟ ಮಾಡಿ ವರ್ಲ್ಡ್ ರೆಕಾರ್ಡ್ ಮಾಡುವ ಕಲ್ಪನೆ ನಿಜವಾಗಿಯೂ ವಿಶೇಷ ರೀತಿಯ ಇನ್ನೋವೇಶನ್ ಕಾರ್ಯಕ್ರಮ, ಬಹಳ ಸುಂದರ ಮತ್ತು ಆನಂದದಾಯಕ"

GBA elections: ಜಿಬಿಎ ಪಾಲಿಕೆಗಳ ಚುನಾವಣೆ; ಶೇ.50ರಷ್ಟು ಟಿಕೆಟ್ ಮಹಿಳೆಯರಿಗೆ ಎಂದ ಡಿಕೆಶಿ

ಜಿಬಿಎ ಚುನಾವಣೆ; ಶೇ.50ರಷ್ಟು ಟಿಕೆಟ್ ಮಹಿಳೆ ಅಭ್ಯರ್ಥಿಗಳಿಗೆ: ಡಿಕೆಶಿ

DK Shivakumar: ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇ.50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಲ್ಲಿ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್‌ಗಳು ಇರುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Sri Madhusudan Sai: ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಎಲ್ಲರಿಗೂ ಲಭ್ಯವಾಗಬೇಕು: ಶ್ರೀ ಮಧುಸೂದನ ಸಾಯಿ

ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಎಲ್ಲರಿಗೂ ಲಭ್ಯವಾಗಬೇಕು

Sathya Sai Grama: ಆರೋಗ್ಯ ಸೇವೆಯು ಎಲ್ಲರಿಗೂ ನ್ಯಾಯಯುತವಾಗಿ ಸಿಗಬೇಕು. ಇದು ವ್ಯವಹಾರವಾಗಲು ಸಾಧ್ಯವಿಲ್ಲ, ಜನರಿಗೆ ಈ ಸೇವೆಯನ್ನು ಪಡೆಯಲು ಸ್ವಾತಂತ್ರ್ಯವಿರಬೇಕು, ಹಣ ಪಾವತಿಸುವ ಶಕ್ತಿ ಇಲ್ಲ ಎನ್ನುವ ಕಾರಣಕ್ಕೆ ಇದನ್ನು ನಿರಾಕರಿಸುವಂತಿಲ್ಲ, ಸಾಕಷ್ಟು ಮಂದಿಗೆ ಈ ಸೇವೆ ಸಿಗುತ್ತಿಲ್ಲ. ಇದಕ್ಕಾಗಿ ಉಚಿತ ಆರೋಗ್ಯ ಸೇವೆ ನೀಡುವ ಬೃಹತ್ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಿಳಿಸಿದ್ದಾರೆ.

Caste Census: ಗಣತಿದಾರರ ಸಮಸ್ಯೆ ಪರಿಹರಿಸಲು ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರಿ ನೌಕರರ ಸಂಘ ಮನವಿ

ಗಣತಿದಾರರ ಸಮಸ್ಯೆ ಪರಿಹರಿಸಲು ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ

Bengaluru News: ಬೆಂಗಳೂರಿನಲ್ಲಿ ಪ್ರತಿ ಗಣತಿದಾರನಿಗೆ 150 ಮನೆಗಳಲ್ಲಿ ಮಾತ್ರ ಸಮೀಕ್ಷೆ ಮಾಡಲು ಸೀಮಿತಗೊಳಿಸುವುದು. ಗಣತಿದಾರರನ್ನು ಕನಿಷ್ಠ 10 ಕಿ.ಮೀ. ವ್ಯಾಪ್ತಿಯಲ್ಲಿಯೇ ಗಣತಿ ಕಾರ್ಯಕ್ಕೆ ನಿಯೋಜಿಸುವುದು. ಬಹುಮಹಡಿ ಕಟ್ಟಡಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಗಣತಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರಿ ನೌಕರರು ಸಲ್ಲಿಸಿದ್ದಾರೆ.

HIV Positive Blood: ರೋಗಿಗೆ ಎಚ್‌ಐವಿ ಸೋಂಕಿನ ರಕ್ತ; ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಂಡ

ರೋಗಿಗೆ ಎಚ್‌ಐವಿ ಸೋಂಕಿನ ರಕ್ತ; ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಂಡ

Tumkur News: ಎಚ್‌ಐವಿ ಸೋಂಕು ಇರುವ ರಕ್ತ ನೀಡಿದ್ದರಿಂದಲೇ ರೋಗಕ್ಕೆ ಸಿಲುಕಿದಂತಾಗಿದೆ ಎಂದು ವೃದ್ಧರೊಬ್ಬರು ಆರೋಪಿಸಿದ್ದರು. ಹೀಗಾಗಿ ಆರೋಗ್ಯ ಸೇವೆಯಲ್ಲಿ ನಿರ್ಲಕ್ಷ್ಯ ಹಾಗೂ ಸೇವಾ ಲೋಪವನ್ನು ಪರಿಗಣಿಸಿ 50 ಸಾವಿರ ಪರಿಹಾರ, ನ್ಯಾಯಾಲಯ ವೆಚ್ಚವಾಗಿ 8 ಸಾವಿರ ಪಾವತಿಸುವಂತೆ ತುಮಕೂರಿನ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ಕೋರ್ಟ್‌ ಸೂಚಿಸಿದೆ.

Bigg Boss Kannada 12: ಜಾಲಿವುಡ್ ಸ್ಟುಡಿಯೋ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್‌ಬಾಸ್ ತಂಡ ಕೆಂಡಾಮಂಡಲ

ಜಾಲಿವುಡ್ ಸ್ಟುಡಿಯೋ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್‌ಬಾಸ್ ತಂಡ ಕಿಡಿ

Jollywood studios: ಸ್ಟುಡಿಯೋ ನಡೆಸಲು ಎಲ್ಲಾ ಅನುಮತಿ ಇದೆಯೆಂದು ಜಾಲಿವುಡ್ ಮ್ಯಾನೇಜ್‌ಮೆಂಟ್‌ ಸುಳ್ಳು ಹೇಳಿತ್ತು. ನೆನ್ನೆ ಜಾಲಿವುಡ್‌ಗೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಬರುವವರೆಗೂ ಜಾಲಿವುಡ್ ಗೌಪ್ಯತೆ ಕಾಪಾಡಿತ್ತು. ಇದರಿಂದ ಬಿಗ್‌ ಬಾಸ್‌ ಶೋ ಸ್ಥಗಿತವಾಗುವ ಪರಿಸ್ಥಿತಿ ಬಂದಿರುವ ಹಿನ್ನೆಲೆ ರಿಯಾಲಿಟಿ ಶೋ ಆಯೋಜಕರು ಅಸಮಾಧಾನ ಹೊರಹಾಕಿದ್ದಾರೆ.

Hasanamba Utsav 2025: ನಾಳೆಯಿಂದ ಹಾಸನಾಂಬ ದರ್ಶನೋತ್ಸವ; ಈ ಬಾರಿ ವಿಐಪಿ ಸಂಸ್ಕೃತಿಗೆ ಬ್ರೇಕ್‌, ಏನೆಲ್ಲಾ ವ್ಯವಸ್ಥೆ?

ನಾಳೆಯಿಂದ ಹಾಸನಾಂಬ ದರ್ಶನೋತ್ಸವ; ಈ ಬಾರಿ ವಿಐಪಿ ಸಂಸ್ಕೃತಿಗೆ ಬ್ರೇಕ್‌

Hasanamba Jathra 2025: ಈ ಬಾರಿ‌ ಹಾಸನಾಂಬೆ ದರ್ಶನಕ್ಕೆ ದರ್ಶನಕ್ಕೆ ಸಂಬಂಧಿಸಿ ಕೆಲ ಬದಲಾವಣೆ ಮಾಡಲಾಗಿದೆ. ಭಕ್ತರಿಗೆ ಜಿಲ್ಲಾಡಳಿತ ಡ್ರೆಸ್ ಕೋಡ್ ನಿಗದಿಪಡಿಸಿದೆ. ದೇವಾಲಯಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ದೇವಿ ದರ್ಶನ ಮಾಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Hasanamba Jathra 2025: ನಾಳೆಯಿಂದ ಹಾಸನಾಂಬ ಜಾತ್ರೆ; ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ನಾಳೆಯಿಂದ ಹಾಸನಾಂಬ ಜಾತ್ರೆ; ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

Hasanamba Utsav 2025: ಹಾಸನಾಂಬ ದರ್ಶನೋತ್ಸವಕ್ಕೆ ಈ ಬಾರಿ 25 ಲಕ್ಷಕ್ಕೂ ಹೆಚ್ಚು ಮಂದಿ ಬರುವ ನಿರೀಕ್ಷೆ ಇದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದೇವಿ ದರ್ಶನಕ್ಕೆ 80 ವರ್ಷಕ್ಕಿಂತ ಮೇಲಿನವರು ಹಾಗೂ ಅಂಗವಿಕಲರಿಗೆ ನೇರದರ್ಶನ ವ್ಯವಸ್ಥೆ ಮಾಡಲಾಗಿದೆ. ಗಂಟೆಗೆ 6 ಸಾವಿರ ಮಂದಿಯಂತೆ ಪ್ರತಿದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

DK Shivakumar: ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದನ್ನು ಖಂಡಿಸಬೇಕು: ಡಿ.ಕೆ.ಶಿವಕುಮಾರ್

CJI ಮೇಲೆ ಶೂ ಎಸೆತ ಘಟನೆ ತಪ್ಪು: ಡಿಕೆಶಿ

Shoe throwing case in Supreme Court: ಸುಪ್ರೀಂಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಘಟನೆ ತಪ್ಪು. ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದನ್ನು ನಾವೆಲ್ಲರೂ ಖಂಡಿಸಬೇಕು. ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Nikhil Kumaraswamy: ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯವಲ್ಲ, ಜಾತಿ ಗಣತಿ ಮುಖ್ಯ- ನಿಖಿಲ್ ಕುಮಾರಸ್ವಾಮಿ

ಶಾಲಾ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ರಾಜ್ಯ ಸರ್ಕಾರ- ನಿಖಿಲ್

Nikhil Kumaraswamy on caste census: ರಾಜ್ಯ ಸರ್ಕಾರ ಸಮೀಕ್ಷೆಗಾಗಿ ಶಾಲಾ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯವಲ್ಲ. ಜಾತಿ ಗಣತಿ ಮುಖ್ಯ ಎಂಬುದು ಇದರಿಂದ ಸ್ಪಷ್ಟ ತಿಳಿಯುತ್ತೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Srinivasa Sagara Dam: ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಅನ್ಯ ಕೋಮಿನ ಯುವತಿಯರ ದುರ್ವರ್ತನೆ; ವಿಡಿಯೋ ವೈರಲ್‌

ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಯುವತಿಯರ ದುರ್ವರ್ತನೆ!

chikkaballapur Falls: ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಜಲಾಶಯದ ಬಳಿ ನೀರಿನಲ್ಲಿ ಆಟವಾಡುವ ಸಮಯದಲ್ಲಿ ಗಂಗಮ್ಮ ದೇವಿ ವಿಗ್ರಹದ ಮೇಲೆ ಅನ್ಯ ಕೋಮಿನ ಯುವತಿಯರು ಕಾಲಿಟ್ಟು ದುರ್ವರ್ತನೆ ತೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಹಿಂದೂಪರ ಮುಖಂಡರುಗಳಿಂದ ಆಕ್ರೋಶ ವ್ಯಕ್ತವಾಗಿದೆ.

Pradeep Eshwar: ಸಂಸದ ಸುಧಾಕರ್‌ ತಾಯಿ ಹೆಸರಲ್ಲಿ ಹೃದ್ರೋಗ ಘಟಕ ಸ್ಥಾಪಿಸುವೆ: ಪ್ರದೀಪ್ ಈಶ್ವ‌ರ್

ಸಂಸದರ ತಾಯಿ ಹೆಸರಲ್ಲಿ ಹೃದ್ರೋಗ ಘಟಕ ಸ್ಥಾಪಿಸುವೆ: ಪ್ರದೀಪ್ ಈಶ್ವ‌ರ್

chikkaballapur News: ಚಿಕ್ಕಬಳ್ಳಾಪುರದಲ್ಲಿ ಆಸತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ 80 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರ ತಾಯಿ ಶಾಂತಮ್ಮ ಅವರ ಹೆಸರಿನಲ್ಲಿ ಶಾಂತಮ್ಮ ಕಾರ್ಡಿಯಾಕ್ ಕೇರ್‌ ಸೆಂಟರ್‌ ನಿರ್ಮಿಸುತ್ತೇನೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

Bigg Boss Kannada 12: ಬಿಗ್‌ಬಾಸ್‌ಗೂ ನನಗೂ ಸಂಬಂಧವಿಲ್ಲ, ಉಲ್ಲಂಘನೆ ಸರಿಮಾಡಲು ಅವಕಾಶ ಕೊಡಿ: ಡಿಕೆ ಶಿವಕುಮಾರ್

ಬಿಗ್‌ಬಾಸ್‌ಗೂ ನನಗೂ ಸಂಬಂಧವಿಲ್ಲ, ತಪ್ಪು ಸರಿಪಡಿಸಲು ಅವಕಾಶ ಕೊಡಿ: ಡಿಕೆಶಿ

DK Shivakumar: ಜನರಿಗೆ ಮನರಂಜನೆ ನೀಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿರುತ್ತಾರೆ. ಏನಾದ್ರೂ ತಪ್ಪಾಗಿದ್ದರೂ ಅವಕಾಶ ಕೊಡಲು ಹೇಳಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೆ ಫೋನ್ ಮಾಡಿದೆ. ಆಗಲೇ ನನಗೆ ವಿಷಯ ಗೊತ್ತಾಗಿದ್ದು, ಎಂಟರ್ ಟೈನ್ ಮೆಂಟ್ ನಮಗೆ ಬೇಕು ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

Viral Video: ಏರ್‌ಪೋರ್ಟ್‌ನ ಚೇರ್‌ ಮೇಲೆ ಶ್ವಾನದ ಗಡದ್‌ ನಿದ್ದೆ... ಫ್ಲೈ ಮಿಸ್ಸಾಯ್ತೇ ಎಂದ ನೆಟ್ಟಿಗರು

ಏರ್‌ಪೋರ್ಟ್‌ ಚೇರ್‌ ಮೇಲೆ ಶ್ವಾನದ ಗಡದ್‌ ನಿದ್ದೆ!

Plane Missing: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತ ಪ್ರಯಾಣಿಕನೋರ್ವನ ವಿಡಿಯೊ ವೈರಲ್ ಆಗಿದೆ. ಕುರ್ಚಿಯಲ್ಲಿ ಮಲಗಿರುವ ಈತ ಯಾರ ಭಯವೂ ಇಲ್ಲದೆ ಗಡದ್ದಾಗಿ ನಿದ್ದೆ ಮಾಡಿದ್ದಾನೆ. ಈ ವಿಡಿಯೊ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಅಷ್ಟಕ್ಕೂ ಯಾರೀ ಅನಿರೀಕ್ಷಿತ ಪ್ರಯಾಣಿಕ ಅಂತೀರಾ, ಈ ವಿಡಿಯೊ ನೋಡಿ.

Bigg Boss Kannada 12: ಬಿಗ್‌ ಬಾಸ್‌ ಮನೆಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್‌ ಅರ್ಜಿ

ಬಿಗ್‌ ಬಾಸ್‌ ಮನೆಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

Jollywood Studios: ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಸಮಯದಲ್ಲಿ ಆದೇಶ ಹೊರಡಿಸಲಾಗಿದೆ. ತಮ್ಮ ಅಹವಾಲು ಆಲಿಸದೆ ತರಾತುರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಅರ್ಜಿದಾರರ ವ್ಯವಹಾರಕ್ಕೆ ಹಾನಿ ಮಾಡುವ ಉದ್ದೇಶ ಇದರ ಹಿಂದಿದೆ ಎಂದು ಅರ್ಜಿಯಲ್ಲಿ ವೆಲ್ಸ್ ಸ್ಟುಡಿಯೋ ಆರೋಪಿಸಿದೆ.

Loading...