ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Chikkaballapur News: ಜುಲೈ 18ರಂದು ಶ್ರೀ ಶರಭಯೋಗೇಂದ್ರ ಸ್ವಾಮಿಯವರ 307ನೇ ಆರಾಧನಾ ಮತ್ತು ರಥೋತ್ಸವ.

ಶ್ರೀ ಶರಭಯೋಗೇಂದ್ರ ಸ್ವಾಮಿಯವರ 307ನೇ ಆರಾಧನಾ ಮತ್ತು ರಥೋತ್ಸವ.

ಶ್ರೀ ದಕ್ಷಿಣಕಾಶಿ ಪಂಚನಂದಿ ಮಹಾ ಪುಣ್ಯ ಕ್ಷೇತ್ರ ಪಾಪಾಗ್ನಿ ಮಠ ಆಶ್ರಯದಲ್ಲಿ ನಡೆಯಲಿರುವ 307ನೇ ಆರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಆರಂಭ ಜುಲೈ 17 ಗುರುವಾರ ದಿಂದ ಆರಂಭ ವಾಗಲಿದ್ದು ಅಂದು ಬೆಳಿಗ್ಗೆ 6ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ, ತೀರ್ಥಗ್ರಹಣ, ದಶಶಾಂತಿ ಜೊತೆಗೆ ಸಂಜೆ ಕಾಶಿವಿಶ್ವನಾಥ ದೇವರಿಗೆ ರುದ್ರಾಭಿ ಷೇಕ, ಅಷ್ಟಧಿಕ್ಪಾಲ ಕಾರಾಧನೆ, ನೈವೇದ್ಯ, ಪ್ರಧಾನ ಕಳಶಾರಾಧನೆ, ಮಹಾನ್ಯಾಸ ಪೂರ್ವಕ ಅಭಿಷೇಕ, ಅಗ್ನಿ ಪ್ರತಿಷ್ಠಾಪನೆ,ಶರಭಯೋಗೇಂದ್ರಸ್ವಾಮಿ ಮಹಾಮಂತ್ರ ಹೋಮ ಮಂಗಳಾರತಿ ನಡೆಯಲಿದೆ

BRAT Movie: ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರದ ಟೀಸರ್ ಔಟ್‌

ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರದ ಟೀಸರ್ ಔಟ್‌

BRAT Movie: ಶಶಾಂಕ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ʼಬ್ರ್ಯಾಟ್ʼ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬದ ಸಲುವಾಗಿ ಈ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಆ ಮೂಲಕ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದೆ. ಈ ಕುರಿತ ವಿವರ ಇಲ್ಲಿದೆ.

ಮಗನಿಗೆ ಮಚ್ಚಿನೇಟು: ತಾಯಿ ಹೃದಯಾಘಾತದಿಂದ ಸಾವು

ಮಗನಿಗೆ ಮಚ್ಚಿನೇಟು ಹಾಕಿದ್ದ ಆರೋಪಿ ಬಂಧನ

ಕೋರೇನಹಳ್ಳಿಯಲ್ಲಿ ಯಶೋಧಮ್ಮ ಮೃತ ತಾಯಿ. ಆಕೆಯ ಪುತ್ರ ನವೀನ್ ಎಂಬ ಯುವಕ ಬುಧವಾರ ಸಂಜೆ ಗ್ರಾಮದ ಹಾಲಿನ ಡೇರಿಗೆ ಹಾಲು ಹಾಕಲು ಹೊರಟಿದ್ದ. ಅಷ್ಟರಲ್ಲಿ ಹಿಂದಿನಿಂದ ಬಂದ ಗ್ರಾಮದ ಶಿವಣ್ಣ ಅಲಿಯಾಸ್ ಶಿವಶಂಕರರೆಡ್ಡಿ ಎಂಬ ವ್ಯಕ್ತಿ ಮಚ್ಚಿನಿಂದ ನವೀನ್ ಮೇಲೆ ಬೀಸಿದ್ದಾನೆ. ಅಷ್ಟರಲ್ಲಿ ನವೀನ್ ತಪ್ಪಿಸಿಕೊಂಡು ಓಡಿದ್ದಾನೆ.

DK Shivakumar: ಶಾಲಾ-ಕಾಲೇಜು, ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆ; 25 ಕೋಟಿ ರೂ. ಮೀಸಲು: ಡಿ.ಕೆ.ಶಿವಕುಮಾರ್

ಸರ್ಕಾರದಿಂದ ಶಾಲಾ-ಕಾಲೇಜು, ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆ: ಡಿಕೆಶಿ

DK Shivakumar: ಸರ್ಕಾರದ ವತಿಯಿಂದ ಶಾಲಾ-ಕಾಲೇಜು ಹಾಗೂ ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆಯನ್ನು ವರ್ಷಕ್ಕೆ ಮೂರು ದಿನ ಏರ್ಪಡಿಸಲಾಗುವುದು. ಇದಕ್ಕಾಗಿ 25 ಕೋಟಿ ರೂ. ಮೀಸಲಿಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಜಾತಿ ಸಮೀಕ್ಷೆಯಲ್ಲಿ ತಪ್ಪದೇ ಮಾದಿಗ ಎಂದು ನಮೂದಿಸಿ: ಮಾಜಿ ಸಚಿವ ಎಚ್.ಆಂಜನೇಯ

ಮಾದಿಗ ಸಮುದಾಯದ ಅಭಿವೃದ್ಧಿಗೆ ಒಳ ಮೀಸಲಾತಿಯೇ ಮದ್ದು

ಮಾದಿಗ ಸಮುದಾಯ ಅತ್ಯಂತ ಹಿಂದುಳಿದಿದ್ದು, ಎಲ್ಲ ರೀತಿಯಲ್ಲಿಯೂ ಸಂಕಷ್ಟ ಎದುರಿಸಿದೆ. ರಾಜ್ಯದಲ್ಲಿ ಕಳೆದ ೩೫ ವರ್ಷಗಳಿಂದ ಸಮುದಾಯಕ್ಕೆ ನ್ಯಾಯವಾಗಿ ದೊರೆಯಬೇಕಾದ ಮೀಸ ಲಾತಿ ಸೌಲಭ್ಯ ದೊರೆಯುತ್ತಿಲ್ಲ. ಹಾಗಾಗಿ ಒಳಮೀಸಲಾತಿ ಕಲ್ಪಿಸಿಕೊಡಲು ಸರ್ಕಾರಕ್ಕೆ ಮನವಿ ಮಾಡಲಾ ಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಲಿದ್ದಾರೆ

Nava Brindavana: ನವ ವೃಂದಾವನ ಪೂಜೆ ವಿವಾದ; ಸಾಮರಸ್ಯದಿಂದ ಸಮಸ್ಯೆಗೆ ಇತಿಶ್ರೀ ಹಾಡಲು ರಾಯರ ಮಠ-ಉತ್ತರಾದಿ ಮಠದ ಶ್ರೀಗಳ ನಿರ್ಧಾರ

ನವ ವೃಂದಾವನ ಪೂಜೆ ವಿವಾದಕ್ಕೆ ಇತಿಶ್ರೀ ಹಾಡಲು ಉಭಯ ಶ್ರೀಗಳ ನಿರ್ಧಾರ

Nava Brindavana Pooja controversy: ಕೊಪ್ಪಳ ಜಿಲ್ಲೆಯ ಆನೆಗೊಂದಿಯ ನವ ವೃಂದಾವನದ ಪೂಜೆ ವಿವಾದವನ್ನು ಸಾಮರಸ್ಯದಿಂದ ಪರಿಹರಿಸಿಕೊಳ್ಳುವುದಾಗಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.

Karnataka Rains: ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್; ಕೊಡಗಿನ ಶಾಲಾ-ಕಾಲೇಜುಗಳಿಗೆ ರಜೆ

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್

Karnataka Rains: ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಜೂನ್ 13ರಂದು ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ನೀಡಲಾಗಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ.

Ahmedabad Plane Crash: ವಿಮಾನ ದುರಂತದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ: ಮಲ್ಲಿಕಾರ್ಜುನ ಖರ್ಗೆ

ವಿಮಾನ ದುರಂತದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ: ಮಲ್ಲಿಕಾರ್ಜುನ ಖರ್ಗೆ

Ahmedabad Plane Crash: ಅಹಮದಾಬಾದ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಮ್ಮ ಪಕ್ಷದ ವತಿಯಿಂದ ಏನು ಸಹಾಯ ಮಾಡಬೇಕೋ ಅದನ್ನು ಮಾಡುತ್ತೇವೆ. ಈ ಬಗ್ಗೆ ಗುಜರಾತ್ ಕಾಂಗ್ರೆಸ್ ಘಟಕಕ್ಕೆ ಸೂಚಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Star Saree Fashion 2025:‌ ನಟಿ ಮೇಘಾ ಶೆಟ್ಟಿಯ ಪಾಸ್ಟೆಲ್‌ ಶೇಡ್‌ ಸಾದಾ ಸೀರೆ ಲುಕ್‌ಗೆ ಹುಡುಗರು ಫಿದಾ!

ನಟಿ ಮೇಘಾ ಶೆಟ್ಟಿಯ ಪಾಸ್ಟೆಲ್‌ ಶೇಡ್‌ ಸಾದಾ ಸೀರೆ ಲುಕ್‌ಗೆ ಹುಡುಗರು ಫಿದಾ!

Star Saree Fashion 2025: ನಟಿ ಮೇಘಾ ಶೆಟ್ಟಿ ಉಟ್ಟಿರುವ ಪಾಸ್ಟೆಲ್‌ ಶೇಡ್‌ನ ಸಾದಾ ಸೀರೆಯು ಸೀರೆ ಪ್ರಿಯರನ್ನು ಮಾತ್ರವಲ್ಲ, ಫ್ಯಾನ್‌ ಫಾಲೋವಿಂಗ್‌ ಹುಡುಗರನ್ನು ಫಿದಾ ಆಗಿಸಿದೆ. ಅತ್ಯಾಕರ್ಷಕವಾಗಿ ಕಾಣಿಸುತ್ತಿರುವ ಈ ಲುಕ್‌ಗಾಗಿ ನೀವು ಮಾಡಬೇಕಾದ್ದೇನು? ಇಲ್ಲಿದೆ ಒಂದಿಷ್ಟು ಟಿಪ್ಸ್.

Ahmedabad Plane Crash: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮಂಗಳೂರಿನ ಸಹ ಪೈಲಟ್‌ ಕ್ಲೈವ್‌ ಕುಂದರ್ ಸಾವು

ವಿಮಾನ ದುರಂತದಲ್ಲಿ ಮಂಗಳೂರಿನ ಸಹ ಪೈಲಟ್‌ ಕ್ಲೈವ್‌ ಕುಂದರ್ ಸಾವು

Ahmedabad Plane Crash: 1,100 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಇವರು, ಇಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್‌ ಇಂಡಿಯಾ ವಿಮಾನದ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ಜತೆ ಸಹ ಪೈಲಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

Mangalore plane crash: ಮಂಗಳೂರಲ್ಲೂ ನಡೆದಿತ್ತು ಭೀಕರ ವಿಮಾನ ದುರಂತ; ಅಂದು ಜೀವ ಕಳೆದುಕೊಂಡವರೆಷ್ಟು?

15 ವರ್ಷದ ಹಿಂದೆ ಮಂಗಳೂರಲ್ಲೂ ನಡೆದಿತ್ತು ಭೀಕರ ವಿಮಾನ ದುರಂತ!

Mangalore Plane Crash: 2010 ಮೇ 22ರ ಮುಂಜಾನೆ ದುಬೈನಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿಮಾನ ಇನ್ನೇನು ಲ್ಯಾಂಡಿಂಗ್ ಆಗಲಿದೆ ಅನ್ನುವಷ್ಟರಲ್ಲಿ ರನ್‌ವೇಯಿಂದ ನಿಯಂತ್ರಣ ತಪ್ಪಿ ಆಳ ಪ್ರದೇಶಕ್ಕೆ ಉರುಳಿ ಬಿದ್ದಿತ್ತು. ಈ ದುರಂತದಲ್ಲಿ 158 ಮಂದಿ ಮೃತಪಟ್ಟಿದ್ದರು.

DK Shivakumar: ಅಹಮದಾಬಾದ್ ವಿಮಾನ ದುರಂತ ಆಘಾತಕಾರಿ- ಡಿ.ಕೆ.ಶಿವಕುಮಾರ್‌

ಅಹಮದಾಬಾದ್ ವಿಮಾನ ದುರಂತ ಆಘಾತಕಾರಿ: ಡಿ.ಕೆ.ಶಿವಕುಮಾರ್‌

DK Shivakumar: ಅಹಮದಾಬಾದ್ ವಿಮಾನ ದುರಂತದ ಈ ಘಟನೆಯ ಬಗ್ಗೆ ಕೇಳಿ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಜಗತ್ತಿಗೆ ಹಾಗೂ ದೇಶಕ್ಕೆ ಇದು ಆಘಾತಕಾರಿ ಸುದ್ದಿ. ಹೆಚ್ಚಿನ ಸಾವು ಆಗದಿರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಕರ್ನಾಟಕದ ಸರ್ಕಾರದ ಹಾಗೂ ಪಕ್ಷದ ಸಹಾನುಭೂತಿ ಹಾಗೂ ಪ್ರಾರ್ಥನೆ ಇದ್ದೇ ಇರುತ್ತದೆ. ದೇಶದಲ್ಲಿ ವಿಮಾನಯಾನ ಕ್ಷೇತ್ರ ಅಭಿವೃದ್ಧಿ ಕಾಣುತ್ತಿತ್ತು. ಆದರೆ ಈ ದುರಂತ ನಡೆಯಬಾರದಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

Bengaluru stampede: ಕಾಲ್ತುಳಿತ ಪ್ರಕರಣ; ನಿಖಿಲ್‌ ಸೋಸಲೆ ಸೇರಿ ನಾಲ್ವರಿಗೆ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು

ನಿಖಿಲ್‌ ಸೋಸಲೆ ಸೇರಿ ನಾಲ್ವರಿಗೆ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು

ಮ್ಯಾಜಿಸ್ಟ್ರಿಯಲ್‌ ಅಥವಾ ನ್ಯಾಯಾಂಗ ವಿಚಾರಣಾ ಆಯೋಗ ನಡೆಸುವ ತನಿಖೆಗೆ ಆರೋಪಿಗಳು ಸಹಕರಿಸಬೇಕು. ತಲಾ 1 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತೆಯನ್ನು ಅರ್ಜಿದಾರರು ಒದಗಿಸಬೇಕು ಎಂದು ಷರತ್ತು ವಿಧಿಸಿ ಹೈಕೋರ್ಟ್‌, ಮಧ್ಯಂತರ ಜಾಮೀನು ನೀಡಿದೆ.

Caste census: ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಸಿಎಂ

ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಸಿಎಂ

Caste census: ಹಿಂದುಳಿದ ಜಾತಿಗಳ ಶಾಶ್ವತ ಆಯೋಗ ಸಲ್ಲಿಸಿರುವ ವರದಿಯ ಮೇಲೆ ಇಂದು ಅಂತಿಮವಾಗಿ ಚರ್ಚೆ ಮಾಡಲು ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಇಂದು ಒಂದೇ ವಿಷಯದ ಮೇಲೆ ಚರ್ಚೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Ahmedabad Plane Crash: ಅಹಮದಾಬಾದ್‌ ವಿಮಾನ ದುರಂತ; ಸಿಎಂ ಸಿದ್ದರಾಮಯ್ಯ ಸಂತಾಪ

ಅಹಮದಾಬಾದ್‌ ವಿಮಾನ ದುರಂತ; ಸಿಎಂ ಸಿದ್ದರಾಮಯ್ಯ ಸಂತಾಪ

Ahmedabad Plane Crash: ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಈ ಅವಘಡ ಸಂಭವಿಸಿದೆ. ಏರ್‌ ಇಂಡಿಯಾ ವಿಮಾನ ಸುಮಾರು 800 ಅಡಿ ಎತ್ತರದಿಂದ ಪತನವಾಗಿದ್ದು, ಘಟನೆ ವೇಳೆ ಸುಮಾರು 242 ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

Caste Census: ರಾಜ್ಯದಲ್ಲಿ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಒಪ್ಪಿಗೆ

ರಾಜ್ಯದಲ್ಲಿ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಒಪ್ಪಿಗೆ

Caste Census: ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎದ್ದಿರುವ ಹಿನ್ನಲೆಯಲ್ಲಿ, ಈಗಾಗಲೇ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಗೆ ಮರುಗಣತಿ ನಡೆಸಲು ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ತಿಳಿಸಿದ್ದರು. ಇದೀಗ ಈ ಸಂಬಂದ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Green Oscar Award: ಕರ್ನಾಟಕದ ಸೆಲ್ಕೋ ಸೋಲಾರ್ ಸಂಸ್ಥೆಗೆ ಪ್ರತಿಷ್ಠಿತ ಗ್ರೀನ್‌ ಆಸ್ಕರ್‌ ಪುರಸ್ಕಾರ

ಕರ್ನಾಟಕದ ಸೆಲ್ಕೋ ಸೋಲಾರ್ ಸಂಸ್ಥೆಗೆ ಪ್ರತಿಷ್ಠಿತ ಗ್ರೀನ್‌ ಆಸ್ಕರ್‌

ಈ ವರ್ಷ 25ನೇ ವರ್ಷದ ಗ್ರೀನ್‌ ಆಸ್ಕರ್‌ (Green Oscar) ಪುರಸ್ಕಾರಗಳನ್ನು ಆಶ್ಡೆನ್‌ ಸಂಸ್ಥೆ ನೀಡುತ್ತಿದೆ. ಈ ವರ್ಷದ ಔಟ್‌ಸ್ಟಾಂಡಿಂಗ್‌ ಅಚೀವ್‌ಮೆಂಟ್‌ ಅವಾರ್ಡ್-‌ ಇಂಟರ್‌ನ್ಯಾಶನಲ್‌ʼ ಅನ್ನು ಸೆಲ್ಕೋ ತನ್ನದಾಗಿಸಿಕೊಂಡಿದೆ. ಕಳೆದ ಮೂರು ದಶಕಗಳಲ್ಲಿ ಮೂರನೇ ಬಾರಿಗೆ ಈ ಪ್ರಶಸ್ತಿಯನ್ನು ಸೆಲ್ಕೋ ತನ್ನದಾಗಿಸಿಕೊಳ್ಳುತ್ತಿದೆ.

ಜಿಲ್ಲೆ ಜನ ಮರೆತಿಲ್ಲ ಆಕ್ಸಿಜನ್ ದುರಂತ, ಕೊಟ್ಟ ಭರವಸೆ ಮರೆಯಿತೆ ಸರಕಾರ?

ಕೊಟ್ಟ ಭರವಸೆ ಮರೆಯಿತೆ ಸರಕಾರ?

ಕೊರೊನಾ ಎರಡನೇ ಅಲೆ 201ರ ಮೇ 9 ರ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೇ 36 ಮಂದಿ ಅಸುನೀಗಿದ್ದರು. ಅದರಲ್ಲೂ ಎಲ್ಲಾ ಬಡ ಕುಟುಂಬಗಳು, ಕೆಲವರು ಸಂಸಾರದ ಹೊಣೆ ಹೊತ್ತವರು,ಇನ್ನು ಕೆಲವರು ಕುಟುಂಬದ ಆಧಾರಸ್ತಂಭವಾದವರು, ಈ ವೇಳೆ ಮೃತಪಟ್ಟ ಒಂದೊಂದು ಕುಟುಂಬವೂ ಒಂದೊಂದು ದಾರುಣ ಕಥೆಯನ್ನೇ ಹೇಳುತ್ತವೆ.

Sirsi News: ಸಂಚಾರ ದಟ್ಟಣೆ ತಡೆಯಲು ರಸ್ತೆಯ ಮಧ್ಯದಲ್ಲಿಯ ಹೊಂಡ ಮುಚ್ಚಿದ ಪೊಲೀಸ್ ಸಿಬ್ಬಂದಿ

ಟ್ರಾಫಿಕ್ ತಡೆಯಲು ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ

ಶಿರಸಿಯ ನಗರದಲ್ಲಿ ಹಲವು ಕಡೆಗಳಲ್ಲಿಯ ಸರ್ಕಲ್ ಗಳು ಧುತ್ತನೆ ವಾಹನವನ್ನು ನಿಲ್ಲಿಸು ವಂತೆ ಮಾಡುತ್ತವೆ. ಈಗಲೇ ಹೊಸದಾಗಿ ಆರಂಭವಾಗಿರುವ ಟ್ರಾಪಿಕ್ ಸ್ಟೇಷನ್ ಇದೆ ಟ್ರಾಫಿಕ್ ಪೊಲೀಸ್ ತಡೆಯುತ್ತಾರೆಂದಲ್ಲ. ರಸ್ತೆಯ ಮಧ್ಯೆ ಇರುವ ದೊಡ್ಡ ಹೊಂಡಗಳಿಂದಾಗಿ. ಸರ್ಕಲ್ ಗಳ ರಸ್ತೆ ಮಧ್ಯೆ ಇರುವ ಹೊಂಡದಿಂದಾಗಿ ವಾಹನ ಸವಾರರಿಗೆ ಇದು ತೊಂದರೆಯಾಗುತ್ತಿತ್ತು

ದಯಾ ಕಿರಣ ಪೋಷಕರ ಆಶಾಕಿರಣ: ಅನಾಥ ಮಕ್ಕಳ ಪಾಲಿಗೆ ಸುರಕ್ಷಿತ ತಾಣ

ದಯಾ ಕಿರಣ ಪೋಷಕರ ಆಶಾಕಿರಣ

ಅನಾಥ ಮಕ್ಕಳನ್ನು ರಕ್ಷಿಸಿ ಆರೈಕೆ ಮಾಡುತ್ತಿರುವ ಜಿಲ್ಲೆಯ ಕುಣಿಗಲ್ ತಾಲೂಕಿನ ವಾಣಿಗೆರೆಯ ದಯಾ ಕಿರಣ ಸಂಸ್ಥೆ ರಾಜ್ಯದಲ್ಲಿಯೇ ಮಾದರಿಯಾಗಿದೆ. ಏಡ್ಸ್ ಪೀಡಿತ ಮಕ್ಕಳನ್ನು ಪೋಷಿಸುತ್ತಿರುವ ದಯಾ ಭವನ ಸಂಸ್ಥೆಯಡಿ 2019ರಿಂದ ಸೇವೆ ಮಾಡುತ್ತಿರುವ ‘ದಯಾ ಕಿರಣ’ ಸಂಸ್ಥೆ ಇಲ್ಲಿಯವರೆಗೂ 210 ಅನಾಥ ಮಕ್ಕಳನ್ನು ರಕ್ಷಿಸಿದೆ.

Kalaburagi News: ಕಳೆದು ಹೋಗಿದ್ದ 46.54 ಲಕ್ಷ ಮೌಲ್ಯದ 225 ಮೊಬೈಲ್ ಪತ್ತೆ; ಕಲಬುರಗಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ

ಕಲಬುರಗಿಯಲ್ಲಿ ಕಳೆದು ಹೋಗಿದ್ದ 46.54 ಲಕ್ಷ ಮೌಲ್ಯದ 225 ಮೊಬೈಲ್ ಪತ್ತೆ!

Kalaburagi News: ದೂರುಗಳ ಸಂಬಂಧ ಮೊಬೈಲ್‌ಗಳ ಪತ್ತೆಗಾಗಿ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಮುಂದಾಳತ್ವದಲ್ಲಿ ತಾಂತ್ರಿಕ ಮತ್ತು ಸೆನ್ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಒಳಗೊಂಡ ತನಿಖಾ ತಂಡ ರಚಿಸಿ, ಮೊಬೈಲ್‌ಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು.

IAS Transfer: ರೋಹಿಣಿ ಸಿಂಧೂರಿ ದಾಸರಿ, ಡಿ. ರೂಪಾ ವರ್ಗಾವಣೆ

ರೋಹಿಣಿ ಸಿಂಧೂರಿ ದಾಸರಿ, ಡಿ. ರೂಪಾ ವರ್ಗಾವಣೆ

IAS Transfer: ಕರ್ನಾಟಕ ಸಿಲ್ಕ್‌ ಮಾರ್ಕೆಟಿಂಗ್‌ ಬೋರ್ಡ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೊಪಾಲಿಟನ್‌ ಟಾಸ್ಕ್‌ ಪೋರ್ಸ್‌ನ ಹೆಚ್ಚುವರಿ ಡಿಜಿಪಿ ಆಗಿ ವರ್ಗಾಯಿಸಲಾಗಿದೆ. ರೋಹಿಣಿ ಸಿಂಧೂರಿ ದಾಸರಿ ಅವರನ್ನು ಕೃಷಿ ಇಲಾಖೆಯ ಆಹಾರ ಸಂಸ್ಕರಣೆ ಮತ್ತು ಬೆಳೆ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಸ್ಥಾನದಿಂದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗ ಮಾಡಲಾಗಿದೆ.

CM Siddaramaiah: ಕರ್ನಾಟಕದ ತೋತಾಪುರಿ ಮಾವು ಆಂಧ್ರದಲ್ಲಿ ನಿಷೇಧ, ತೆರವುಗೊಳಿಸಲು ಚಂದ್ರಬಾಬು ನಾಯ್ಡುಗೆ ಸಿಎಂ ಸಿದ್ದರಾಮಯ್ಯ ಪತ್ರ

ಕರ್ನಾಟಕದ ತೋತಾಪುರಿಗೆ ಆಂಧ್ರ ನಿಷೇಧ, ತೆರವುಗೊಳಿಸಲು ನಾಯ್ಡುಗೆ ಸಿಎಂ ಪತ್ರ

CM Siddaramaiah: ಕೋಲಾರದ ಶ್ರೀನಿವಾಸಪುರದ ತೋತಾಪುರಿ ಮಾವು ಖರೀದಿ ಮಾಡದಂತೆ ಆಂಧ್ರದ ಚಿತ್ತೂರು ಜಿಲ್ಲಾಡಳಿತ ಮೌಖಿಕ ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ಮಾವು ಬೆಲೆ ಕುಸಿತ ಉಂಟಾಗಿ ಮಾವು ಬೆಳೆಗಾರರಿಗೆ ನಷ್ಟ ಉಂಟಾಗಿತ್ತು. ಆತಂಕಗೊಂಡ ರೈತರು ಮಾವುಗಳನ್ನು ರಸ್ತೆಗೆ ಸುರಿದು ಧರಣಿ ಮಾಡಿದ್ದಾರೆ.

Kantara Chapter 1: ʼಕಾಂತಾರʼ ಚಲನಚಿತ್ರಕ್ಕೆ ಮತ್ತೊಂದು ವಿಘ್ನ: ಹೃದಯಾಘಾತದಿಂದ ಕಲಾವಿದ ಸಾವು

ʼಕಾಂತಾರʼ ಚಲನಚಿತ್ರಕ್ಕೆ ಮತ್ತೊಂದು ವಿಘ್ನ: ಹೃದಯಾಘಾತದಿಂದ ಕಲಾವಿದ ಸಾವು

Kantara Chapter 1: ವಿಜು ವಿ. ಕೆ ಎಂಬ ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ಕಾಂತಾರ ಚಲನಚಿತ್ರದ ಶೂಟಿಂಗ್‌ಗಾಗಿ ಆಗಮಿಸಿದ್ದು, ಆಗುಂಬೆ ಸಮೀಪದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ನಿನ್ನೆ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.