ಶ್ರೀ ಶರಭಯೋಗೇಂದ್ರ ಸ್ವಾಮಿಯವರ 307ನೇ ಆರಾಧನಾ ಮತ್ತು ರಥೋತ್ಸವ.
ಶ್ರೀ ದಕ್ಷಿಣಕಾಶಿ ಪಂಚನಂದಿ ಮಹಾ ಪುಣ್ಯ ಕ್ಷೇತ್ರ ಪಾಪಾಗ್ನಿ ಮಠ ಆಶ್ರಯದಲ್ಲಿ ನಡೆಯಲಿರುವ 307ನೇ ಆರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಆರಂಭ ಜುಲೈ 17 ಗುರುವಾರ ದಿಂದ ಆರಂಭ ವಾಗಲಿದ್ದು ಅಂದು ಬೆಳಿಗ್ಗೆ 6ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ, ತೀರ್ಥಗ್ರಹಣ, ದಶಶಾಂತಿ ಜೊತೆಗೆ ಸಂಜೆ ಕಾಶಿವಿಶ್ವನಾಥ ದೇವರಿಗೆ ರುದ್ರಾಭಿ ಷೇಕ, ಅಷ್ಟಧಿಕ್ಪಾಲ ಕಾರಾಧನೆ, ನೈವೇದ್ಯ, ಪ್ರಧಾನ ಕಳಶಾರಾಧನೆ, ಮಹಾನ್ಯಾಸ ಪೂರ್ವಕ ಅಭಿಷೇಕ, ಅಗ್ನಿ ಪ್ರತಿಷ್ಠಾಪನೆ,ಶರಭಯೋಗೇಂದ್ರಸ್ವಾಮಿ ಮಹಾಮಂತ್ರ ಹೋಮ ಮಂಗಳಾರತಿ ನಡೆಯಲಿದೆ