ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಜೂ.12 ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ; ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ

ಜೂ.12 ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

ಜೂನ್.12ರಂದು ಜಿಲ್ಲಾ ಕೇಂದ್ರದಲ್ಲಿ “ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ” ಆಚರಿಸುವ ಸಂಬಂಧ ರೂಪುರೇಷೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಮಂಗಳವಾರ ಜಿಲ್ಲಾಧಿಕಾರಿ ಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ “ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಜಿಲ್ಲಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Chikkaballapur News: ಸರ್ಕಾರಿ ಶಾಲೆಗೇ ಮಕ್ಕಳನ್ನು ದಾಖಲಿಸಿ, ಉತ್ತಮ ಭವಿಷ್ಯ ಕಲ್ಪಿಸಿ: ಉಪನಿರ್ದೇಶಕ ರಮೇಶ್.ವಿ ಮನವಿ

ಸರ್ಕಾರಿ ಶಾಲೆಗೇ ಮಕ್ಕಳನ್ನು ದಾಖಲಿಸಿ, ಉತ್ತಮ ಭವಿಷ್ಯ ಕಲ್ಪಿಸಿ

ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳಿಗೆ ಶಾಲಾರಂಭದಲ್ಲಿಯೇ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಲು ಸೂಚನೆ ನೀಡಲಾಗಿದೆ.ಇದರ ಜತೆಗೆ ಜಿಲ್ಲೆಯ ಸರ್ಕಾರಿ ಶಾಲೆಗಳ ಎಲ್ಲಾ ಅರ್ಹ ವಿದ್ಯಾರ್ಥಿ ಗಳಿಗೆ ಪ್ರತಿ ವರ್ಷ ವಿದ್ಯಾರ್ಥಿವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಈ ಎಲ್ಲಾ ಸೌಲಭ್ಯ ಸರಕಾರಿ ಶಾಲೆಯ ಮಕ್ಕಳು ಬಳಸಿಕೊಳ್ಳಿ ಎಂದರು.

Chikkaballapur News: ಕೋರ್ಟಿನ ಮೂಲಕ ನ್ಯಾಯ ಪಡೆದ ಶಿಕ್ಷಕರಿಗೆ ನೇಮಕಾತಿ ಪತ್ರ ವಿತರಿಸಿದ ಡಿಡಿಪಿಐ

ದಾಖಲಾತಿ ಪರಿಶೀಲನೆ ಮೂಲಕ ಕೌನ್ಸೆಲಿಂಗ್ ನಂತರ ಶಾಲೆಯ ಆಯ್ಕೆ ಪೂರ್ಣ

ಮಂಗಳವಾರ ನಡೆದ ದಾಖಲಾತಿ ಪರಿಶೀಲನೆಯಲ್ಲಿ ಲವಲವಿಕೆಯಿಂದ ಭಾಗಿಯಾದ 10 ಮಂದಿ ಪದವೀಧರ ಶಿಕ್ಷಕಿಯರು ಸರಾಸರಿ 3 ವರ್ಷಗಳ ಸುಧೀರ್ಘ ಕಾನೂನು ಸಂಘರ್ಷದ ವನವಾಸದಿಂದ ಹೊರ ಬಂದು ಸುಪ್ರಿಂಕೋಟ್ ಮೂಲಕ ತಮ್ಮ ಬದುಕಿಗೆ ಬೇಕಾದ ಬೆಳಕನ್ನು ಪಡೆದುಕೊಂಡಿದ್ದು ಎಲ್ಲರಿಗೂ ಮಾದರಿಯಂತಿದೆ.

Transport workers Strike: ಹೈಕೋರ್ಟ್‌ ಆದೇಶದ ಹಿನ್ನೆಲೆ ಸಾರಿಗೆ ಮುಷ್ಕರ ವಾಪಸ್‌; ನಾಳೆ ಎಂದಿನಂತೆ ಬಸ್‌ಗಳ ಸಂಚಾರ

ನಾಳಿನ ಸಾರಿಗೆ ಮುಷ್ಕರ ವಾಪಸ್‌; ಎಂದಿನಂತೆ ಬಸ್‌ಗಳ ಸಂಚಾರ

ಮುಷ್ಕರ ಬಿಟ್ಟು ಸರ್ಕಾರದೊಂದಿಗೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಾರಿಗೆ ನೌಕರರ ಸಂಘಟನೆಗಳಿಗೆ ಹೈಕೋರ್ಟ್‌ ಸೂಚನೆ ನೀಡಿದೆ. ಇನ್ನು ಹೈಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ಮುಷ್ಕರ ಹಿಂದಕ್ಕೆ ಪಡೆಯುತ್ತಿರೋದಾಗಿ ಕೆಎಸ್‌ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೆ ಅರಸ್ ತಿಳಿಸಿದ್ದಾರೆ.

Congress Sadhana Samavesha: 2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಡಿ.ಕೆ. ಶಿವಕುಮಾರ್ ವಿಶ್ವಾಸ

2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಡಿಕೆಶಿ

DK Shivakumar: ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಬದುಕಿನಲ್ಲಿ ಬದಲಾವಣೆ ತಂದಿದೆ. ಇಡೀ ದೇಶಕ್ಕೆ ಒಂದು ಮಾದರಿ ಸರ್ಕಾರವನ್ನು ಕೊಟ್ಟಿದೆ, ಅದನ್ನು ಉಳಿಸಿಕೊಂಡು ಹೋಗುತ್ತೇವೆ. ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ ಹೇಳಿದ್ದಾರೆ.

3 ವರ್ಷಗಳಲ್ಲಿ ತಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್ ಮುಖಂಡರು ಹೇಳಲಿ: ಸಿ.ಟಿ. ರವಿ ಸವಾಲು

3 ವರ್ಷಗಳಲ್ಲಿ ತಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್ ಮುಖಂಡರು ಹೇಳಲಿ

CT Ravi: ಕರ್ನಾಟಕ ರಾಜ್ಯದ ಸಮಗ್ರ ಸಾಲ 10 ಲಕ್ಷ ಕೋಟಿ ರೂಪಾಯಿ. ಸಾಲ ಮಾಡದೇ ಗ್ಯಾರಂಟಿ ಯೋಜನೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಸಾಧನೆ ಯಾವುದು? ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ ಎಂದು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

Fuel Supply: ಕರ್ನಾಟಕದಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ಇಂಧನ ಪೂರೈಕೆ ಮುಂದುವರಿಕೆ; ತೈಲ ಕಂಪನಿಗಳಿಂದ ಭರವಸೆ

ಕರ್ನಾಟಕದಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ಇಂಧನ ಪೂರೈಕೆ ಮುಂದುವರಿಕೆ

ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನ ವಿತರಣಾ ಕಾರ್ಯಾಚರಣೆಗಳು ಸುಗಮವಾಗಿ ಮುಂದುವರಿದಿದ್ದು, ನಿಗದಿತ ಸುರಕ್ಷತೆ ಮತ್ತು ಕಾರ್ಯಾಚರಣೆಯ ಮಾನದಂಡಗಳಿಗೆ ಅನುಗುಣವಾಗಿ ಯಾವುದೇ ನಿರ್ಬಂಧಗಳಿಲ್ಲದೆ ಪೂರೈಕೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದು ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ ಸಿದ್ಧಾರ್ಥ್ ಅಗರ್ವಾಲ್ ತಿಳಿಸಿದ್ದಾರೆ.

Gubbi News: ಮೇ.25 ರಂದು ಅರ್ಥಪೂರ್ಣ ಬಸವ ಜಯಂತಿ: ತಾಲ್ಲೂಕಿನಾದ್ಯಂತ ಪ್ರಚಾರಕ್ಕೆ ಚಾಲನೆ ನೀಡಿದ ಪ್ರಮುಖರು.

ಮೇ.25 ರಂದು ಅರ್ಥಪೂರ್ಣ ಬಸವ ಜಯಂತಿ

ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಇದೇ ತಿಂಗಳ 25ರಂದು ಬಸವ ಜಯಂತಿ ಆಚರಣೆ ಯನ್ನು ಹೇರೂರು ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯಭವನದಲ್ಲಿ ಬೆಳಿಗ್ಗೆ 7 ಗಂಟೆಗೆ ಇಷ್ಟಲಿಂಗ ಪೂಜೆ ಮೂಲಕ ಆರಂಭಿಸಲಾಗುವುದು. ತಾಲ್ಲೂಕಿನ ಎಲ್ಲಾ ಧರ್ಮ ಗುರುಗಳ ಉಪಸ್ಥಿತಿ ಯಲ್ಲಿ ನಡೆಯುವ ಇಷ್ಟ ಲಿಂಗ ಪೂಜೆಗೆ ತಾಲ್ಲೂಕಿನ ಎಲ್ಲಾ ಸಮಾಜದ ಬಂಧುಗಳು ಆಗಮಿಸಬೇಕು

Chikkaballapur News: ಇದು ಸಾಧನಾ ಸಮಾವೇಶ ಅಲ್ಲ ವೇದನಾ ಸಮಾವೇಶ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಇದು ಸಾಧನಾ ಸಮಾವೇಶ ಅಲ್ಲ ವೇದನಾ ಸಮಾವೇಶ

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು 3 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ 'ಸಾಧನಾ ಸಮಾವೇಶ'ವನ್ನು ಟೀಕಿಸಿದ ಛಲವಾದಿ ನಾರಾಯಣಸ್ವಾಮಿ ಇದು ಸಾಧನಾ ಸಮಾವೇಶವಲ್ಲ ವೇದನಾ ಸಮಾವೇಶವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ತುಮಕೂರಿನ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?: ಸಿಎಂಗೆ ವಿಜಯೇಂದ್ರ ಪ್ರಶ್ನೆ

ತುಮಕೂರಿನ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?: ವಿಜಯೇಂದ್ರ

BY Vijayendra: ಗ್ಯಾರಂಟಿಗಳೇ ಅಭಿವೃದ್ಧಿ ಎಂದು ಬಿಂಬಿಸುವ ಕೆಲಸವನ್ನು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ರಸ್ತೆಗೆ ಆದ್ಯತೆ ನೀಡಿದ್ದೀರಾ? ನೀರಾವರಿ ಯೋಜನೆಗಳಿಗೆ ಹಣ ಒದಗಿಸಿದ್ದೀರಾ? ಆಸ್ಪತ್ರೆಗಳು, ಶಾಲೆಗಳಿಗೆ ಕಾಂಗ್ರೆಸ್ ಸರ್ಕಾರ ನೀಡಿದೆಯೇ? ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಯುರೋಪ್‌ ಈಗ ಮತ್ತಷ್ಟು ಹತ್ತಿರ: ಬೆಂಗಳೂರು-ಜ್ಯೂರಿಕ್‌ ನೇರ ವಿಮಾನ ಅಕ್ಟೋಬರ್‌ನಿಂದ ಆರಂಭ

ಬೆಂಗಳೂರು - ಜ್ಯೂರಿಕ್‌ ನೇರ ವಿಮಾನ ಅಕ್ಟೋಬರ್‌ನಿಂದ ಆರಂಭ

Bangalore To Zurich Flight: ಬೆಂಗಳೂರಿಗರಿಗೆ 'ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್' (ಸ್ವಿಸ್‌) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಭಾರತ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವಿನ ವಿಮಾನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಬೆಂಗಳೂರು ಹಾಗೂ ಸ್ವಿಸ್‌ನ ಪ್ರಮುಖ ನಗರ 'ಜ್ಯೂರಿಕ್' ನಡುವೆ ಹೊಸದಾಗಿ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಸಂಸ್ಥೆ ಘೋಷಿಸಿದೆ.

Komala J: ಯೋಗದಲ್ಲಿ ಅಸಾಧಾರಣ ಪ್ರತಿಭೆ ತೋರಿದ ಕೋಮಲಾ; ಮಾರಣಾಂತಿಕ ಕಾಯಿಲೆ ಗೆದ್ದುಬಂದ ಈಕೆಯ ಯಶೋಗಾಥೆ ಇಲ್ಲಿದೆ

ಯೋಗದಲ್ಲಿ ಅಸಾಧಾರಣ ಪ್ರತಿಭೆ ತೋರಿದ ಕೋಮಲಾ

Yoga Practitioner Komalaʼs success story: ಡಬ್ಲ್ಯುಎಫ್ಎಫ್‌ವೈಎಸ್ಐ ರಾಜ್ಯ ಮಟ್ಟದ 4ನೇ ಯೋಗಾಸನ ಸ್ಪರ್ಧೆಯ 2026ರ ʼಚಾಂಪಿಯನ್ ಆಫ್ ಚಾಂಪಿಯನ್ಸ್ʼ ಪ್ರಶಸ್ತಿ ವಿಜೇತರಾಗುವ ಮೂಲಕ ಬೆಂಗಳೂರಿನ ಕೋಮಲಾ ಗಮನ ಸೆಳೆದಿದ್ದಾರೆ. ಇಲ್ಲಿವರೆಗಿನ ಜೀವನದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ; ಅದು ಕಲ್ಲು ಮುಳ್ಳುಗಳ ಹಾದಿಯಾಗಿತ್ತು. ಇವರ ಯಶೋಗಾಥೆ ಇಲ್ಲಿದೆ.

ಸ್ಲೈಸಿಂಗ್ ತಂತ್ರಜ್ಞಾನದ ಮೂಲಕ 5ಜಿ ನೆಟ್‌ ವರ್ಕ್ ಮೇಲ್ದರ್ಜೆಗೆ: ಅತಿ ಹೆಚ್ಚು ರಶ್ ಇರುವ ಸಮಯದಲ್ಲೂ ಸಿಗಲಿದೆ ಹೈ-ಸ್ಪೀಡ್ ಇಂಟರ್ನೆಟ್

ಏರ್‌ ಟೆಲ್‌ ನಿಂದ ಪ್ರಯಾರಿಟಿ ಪೋಸ್ಟ್‌ ಪೇಯ್ಡ್ ಸೌಲಭ್ಯ ಬಿಡುಗಡೆ

ಉದ್ಯೋಗ, ವೃತ್ತಿಪರ ಕೆಲಸಗಳು, ಮನರಂಜನೆ ಅಥವಾ ಆನ್‌ ಲೈನ್ ಮೀಟಿಂಗ್‌ಗಳಿಗಾಗಿ ಯಾವುದೇ ಅಡೆತಡೆಯಿಲ್ಲದ ಕನೆಕ್ಟಿವಿಟಿಯನ್ನು ಬಯಸುವ ಬಿಡುವಿಲ್ಲದ ಗ್ರಾಹಕರಿಗಾಗಿಯೇ ಈ ಸೇವೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ಸೇವೆಗಾಗಿ ಏರ್‌ಟೆಲ್ ತನ್ನ ಹಾಲಿ 5ಜಿ ನೆಟ್‌ ವರ್ಕ್ ಅನ್ನು ಸುಧಾರಿತ ಸಾಮರ್ಥ್ಯದ ಸ್ಲೈಸಿಂಗ್ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೆ ಏರಿಸಿದೆ.

ಭಾರತದ ಆರ್ಥಿಕತೆಗೆ ಎಐ ಬಲ: 2030ರ ವೇಳೆಗೆ ಎಐನಿಂದ 500 ಶತಕೋಟಿ ಡಾಲರ್ ಕೊಡುಗೆಯ ನಿರೀಕ್ಷೆ- IBM- ಇಂಡಿಯಾ ಎಐ ಅಧ್ಯಯನ ವರದಿಯಲ್ಲಿ ಘೋಷಣೆ

2030ರ ವೇಳೆಗೆ ಭಾರತವು ಪ್ರಮುಖ ಜಾಗತಿಕ ಎಐ ರಾಷ್ಟ್ರವಾಗಿ ಉದಯಿಸಲಿದೆ

2030ರ ವೇಳೆಗೆ ಎಐ ತಂತ್ರಜ್ಞಾನವು ಭಾರತದ ಆರ್ಥಿಕತೆಗೆ 500 ಶತಕೋಟಿ ಡಾಲರ್‌ ಗಿಂತಲೂ ಹೆಚ್ಚಿನ ಕೊಡುಗೆ ನೀಡಲಿದ್ದು, ವಿಶ್ವದ ಅತ್ಯಂತ ಕ್ರಿಯಾತ್ಮಕ ಎಐ ಆಧರಿತ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತ ವನ್ನು ಪ್ರಮುಖ ಘಟ್ಟದಲ್ಲಿ ನಿಲ್ಲಿಸಲಿದೆ ಎಂದು ತಿಳಿಸಿದೆ. ‘ಭರವಸೆಯಿಂದ ಶಕ್ತಿಯವರೆಗೆ ಎಂಬ ಶೀರ್ಷಿಕೆ: ಎಐ ಭಾರತದ ಆರ್ಥಿಕ ಭವಿಷ್ಯವನ್ನು ಹೇಗೆ ಮರು ರೂಪಿಸುತ್ತಿದೆ’ ಎಂಬ ಶೀರ್ಷಿಕೆಯ ಈ ಅಧ್ಯಯನ ವರದಿಯು, ಎಐ ಮಹತ್ವಾಕಾಂಕ್ಷೆ ಮತ್ತು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾದ ತುರ್ತು ಅಗತ್ಯದ ಮಹತ್ವವನ್ನು ತೋರಿಸುತ್ತದೆ.

ತುಮಕೂರು ಜಿಲ್ಲೆಯಲ್ಲಿ ಒಂದೇ ದಿನ 600 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ನೇಮಕಾತಿ ಪತ್ರ ವಿತರಣೆ: ಹೆಬ್ಬಾಳ್ಕರ್

ತುಮಕೂರಿನಲ್ಲಿ ಒಂದೇ ದಿನ 600 ಅಂಗನವಾಡಿ ನೌಕರರ ನೇಮಕಾತಿ

Laxmi Hebbalkar: ತುಮಕೂರು ಜಿಲ್ಲೆ ಒಂದರಲ್ಲೇ 600 ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಒಂದೇ ದಿನ ನೇಮಕಾತಿ ಪತ್ರವನ್ನು ಕೊಡಲಾಗಿದ್ದು, ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಟ್ಟಿಗೆ ದಾಖಲೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಭಾರತದಲ್ಲಿ ನಾವೀನ್ಯತೆ ಮತ್ತು ಸಂಶೋಧನೆಗೆ ಬೂಸ್ಟ್: ಗೇಟ್ಸ್ ಫೌಂಡೇಶನ್ ಜೊತೆ ವಾಧ್ವಾನಿ ಫೌಂಡೇಶನ್ ಮಹತ್ವದ ಒಪ್ಪಂದ

ಗೇಟ್ಸ್ ಫೌಂಡೇಶನ್ ಜೊತೆ ವಾಧ್ವಾನಿ ಫೌಂಡೇಶನ್ ಮಹತ್ವದ ಒಪ್ಪಂದ

ಕಳೆದ ವರ್ಷ, ಅಂದರೆ ಏಪ್ರಿಲ್ 29, 2025 ರಂದು ಪ್ರಧಾನಿ ನರೇಂದ್ರ ಮೋದಿ ಅವರು 'ವಾಧ್ವಾನಿ ಇನ್ನೋವೇಶನ್ ನೆಟ್‌ವರ್ಕ್' (ಡಬ್ಯೂಐಎನ್‌) ಗೆ ಚಾಲನೆ ನೀಡಿದ್ದರು. ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು ಮತ್ತು ಹೂಡಿಕೆದಾರರನ್ನು ಒಂದೇ ವೇದಿಕೆಯಡಿ ತಂದು, ಸಂಶೋಧನೆಗಳನ್ನು ಮಾರುಕಟ್ಟೆಗೆ ತರುವ ಮಾರ್ಗವನ್ನು ಸುಗಮಗೊಳಿಸಲು ವಾಧ್ವಾನಿ ಫೌಂಡೇಶನ್ ಇದನ್ನು ಸ್ಥಾಪಿಸಿತ್ತು. ಇದೀಗ 'ಎನ್‌ಐಎನ್‌' ಮೂಲಕ ಈ ಮಾದರಿಯನ್ನು ಇಡೀ ದೇಶಾದ್ಯಂತ ವಿಸ್ತರಿಸಲಾಗುತ್ತಿದೆ.

ಬಜಾಜ್ ಜನರಲ್ ಇನ್ಶೂರೆನ್ಸ್ ಎಂಎಚ್‌ಸಿಪಿ ಎಡ್ಜ್+ ಎಂಬ, ಅನುಕೂಲಕರ, ಭವಿಷ್ಯದ ದಿನಗಳಿಗೆ ಸೂಕ್ತವಾದ ಆರೋಗ್ಯ ಪರಿಹಾರ ಪ್ಲಾನ್ ಬಿಡುಗಡೆ

ಬಜಾಜ್ ಜನರಲ್ ಇನ್ಶೂರೆನ್ಸ್ ಎಂಎಚ್‌ಸಿಪಿ ಎಡ್ಜ್+: ಪ್ಲಾನ್ ಬಿಡುಗಡೆ

ಭಾರತದ ಪ್ರಮುಖ ಖಾಸಗಿ ಜನರಲ್ ಇನ್ಶೂರರ್‌ಗಳಲ್ಲಿ ಒಂದಾದ ಬಜಾಜ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಈ ಮೊದಲು ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಎಂದು ಕರೆಯಲ್ಪಡುತ್ತಿತ್ತು), ಇಂದು 'ಮೈ ಹೆಲ್ತ್ ಕೇರ್ ಪ್ಲಾನ್ ಎಡ್ಜ್+' (ಎಂಎಚ್‌ಸಿಪಿ ಎಡ್ಜ್+) ಆರಂಭಿಸಿದ್ದು , ಇದು ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚಗಳನ್ನು ಪರಿಹರಿಸಲು ಮತ್ತು ಹೆಚ್ಚುವರಿ ಅನುಕೂಲ ಮತ್ತು ಕಸ್ಟಮೈಸೇಶನ್ ಮೂಲಕ ಜೇಬಿನಿಂದ ಖರ್ಚು ಮಾಡುವ ವೆಚ್ಚಗಳನ್ನು ಕಡಿಮೆ ಮಾಡಲು ವಿನ್ಯಾಸ ಗೊಳಿಸಲಾದ ಸಮಗ್ರ ಆರೋಗ್ಯ ಪರಿಹಾರ ಉತ್ಪನ್ನವಾಗಿದೆ.

Congress Sadhana Samavesha: ಕರ್ನಾಟಕ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು: ಸಿಎಂ ಸಿದ್ದರಾಮಯ್ಯ

ಕರ್ನಾಟಕ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು: ಸಿಎಂ

Congress Sadhana Samavesha: ಜಿ.ಪರಮೇಶ್ವರ್ ಅಧ್ಯಕ್ಷತೆಯ‌ ಪ್ರಣಾಳಿಕೆ ಸಮಿತಿ ಸಿದ್ಧಪಡಿಸಿದ್ದ ಪ್ರಣಾಳಿಕೆಯಲ್ಲಿನ‌ 580 ಭರವಸೆಗಳಲ್ಲಿ 290ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ. ಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಜನರ ಜೇಬಿಗೆ ಕತ್ತರಿ ಹಾಕುತ್ತಲೇ 3 ವರ್ಷ ಸವೆಸಿದ್ದು ಒಂದು ಸಾಧನೆಯೇ?: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಕಿಡಿ

ಜನರ ಜೇಬಿಗೆ ಕತ್ತರಿ ಹಾಕುತ್ತಲೇ 3 ವರ್ಷ ಸವೆಸಿದ್ದು ಒಂದು ಸಾಧನೆಯೇ?: ಜೋಶಿ

Pralhad Joshi: ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದು ಬಳಿಕ ಒಂದೊಂದೇ ಅಗತ್ಯತೆಗಳ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಲೇ ಮೂರು ವರ್ಷ ಸವೆಸಿದ್ದು, ಜನರನ್ನು‌ ದುಸ್ಥಿತಿಗೆ ತಳ್ಳಿರುವುದು ಈ ಸರ್ಕಾರದ ಸಾಧನೆಯೇ? ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದ್ದಾರೆ.

Elephant Marthanda Dies: ದುಬಾರೆಯಲ್ಲಿ ಸಾಕಾನೆಗಳ ಕಾಳಗ; ಗಾಯಗೊಂಡಿದ್ದ ʼಮಾರ್ತಾಂಡʼ ಆನೆ ಚಿಕಿತ್ಸೆ ಫಲಿಸದೆ ಸಾವು

ದುಬಾರೆ ಸಾಕಾನೆಗಳ ಕಾಳಗ; ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು

ದುಬಾರೆ ಆನೆಗಳ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಮಾರ್ತಾಂಡ ಆನೆ ಗಂಭೀರವಾಗಿ ಗಾಯಗೊಂಡಿತ್ತು. ಕಂಜನ್ ಆನೆಯು ಚೂಪಾದ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ತಿವಿದು ಗಂಭೀರ ಗಾಯಗೊಳಿಸಿತ್ತು. ಇದರಿಂದ ಚಿಕಿತ್ಸೆ ಫಲಿಸದೆ ಮಾರ್ತಾಂಡ ಮೃತಪಟ್ಟಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್‌; ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪ್ರಾರ್ಥನೆ

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್‌

ತಿರುಮಲಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ದಂಪತಿ ಮಂಗಳವಾರ ಭೇಟಿ ನೀಡಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌ ಅವರು. ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಬಳಲಬಾರದು. ಎಲ್ಲರಿಗೂ ಶಕ್ತಿ, ಉತ್ತಮ ಆರೋಗ್ಯ ಲಭಿಸಲಿ. ರಾಜ್ಯದಲ್ಲಿ ಉತ್ತಮ ಮಳೆ ಬರಲಿ ಎಂದು ಭಗವಂತ ವೆಂಕಟೇಶ್ವರನ ಬಳಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸಾರಿಗೆ ಮುಷ್ಕರ ನಡೆಸುವಂತಿಲ್ಲ; ಹೈಕೋರ್ಟ್‌ ಖಡಕ್‌ ಆದೇಶ

ರಾಜ್ಯದಲ್ಲಿ ಸಾರಿಗೆ ಮುಷ್ಕರ ನಡೆಸುವಂತಿಲ್ಲ; ಹೈಕೋರ್ಟ್‌

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಹಮ್ಮಿಕೊಂಡಿದ್ದರು. ಇದೀಗ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು ಬಸ್ ಮುಷ್ಕರ ಮಾಡಬೇಡಿ ಎಂದು ರಾಜ್ಯದ ಸಾರಿಗೆ ನೌಕರರಿಗೆ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.

ನಾಳೆ ಸಾರಿಗೆ ಮುಷ್ಕರ ನಡೆಯುತ್ತಾ? ಸಂಘಟನೆಗಳಲ್ಲಿಯೇ ಒಡಕು?

ನಾಳೆ ಬಸ್​ ಸಂಚಾರ ಬಂದ್ ಆಗೋದು ಡೌಟ್​?

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟಗಳು ಜಂಟಿಯಾಗಿ ಮೇ 20ರಿಂದ (ಬುಧವಾರ) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಆದರೆ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಮುಷ್ಕರದಿಂದ ಹಿಂದೆ ಸರಿದಿದೆ. ಜಂಟಿ ಕ್ರಿಯಾ ಸಮಿತಿಯಿಂದ ಹೊರ ಬಂದಿದೆವೆಂದು ಪತ್ರ ಬರೆದಿದೆ.

ದುಬಾರೆ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ; ಪ್ರವಾಸಿಗರಿಗೆ ಮಾರ್ಗಸೂಚಿ ಪ್ರಕಟ

ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ; ಪ್ರವಾಸಿಗರಿಗೆ ಮಾರ್ಗಸೂಚಿ ಪ್ರಕಟ

ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ್ದ ಮಹಿಳೆಯೊಬ್ಬರು ಎರಡು ಸಾಕಾನೆಗಳ ನಡುವೆ ನಡೆದ ದಿಢೀರ್ ಕಾಳಗಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡು ಅರಣ್ಯ ಇಲಾಖೆ, ಇನ್ಮುಂದೆ ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

Loading...