Ganga Aarti: ಕೆನಡಾದ ನದಿ ತೀರದಲ್ಲಿ ಗಂಗಾ ಆರತಿ; ಹರ್ ಹರ್ ಗಂಗೆ ಎಂದ ನೆಟ್ಟಿಗರು
ಭಾರತೀಯ ಸಂಸ್ಕೃತಿಯನ್ನು ದೂರದ ಕೆನಡಾದಲ್ಲಿ ಜೀವಂತವಾಗಿಡಲು, ಭಾರತೀಯ ಸಮುದಾಯವು ಮಿಸಿಸಾನ್ಗಾದ ಕ್ರೆಡಿಟ್ ನದಿಯ ದಡದಲ್ಲಿ ಗಂಗಾ ಆರತಿ ಕಾರ್ಯಕ್ರಮ ಆಯೋಜಿಸಿತ್ತು. ದೀಪಗಳು, ಭಕ್ತಿಯ ಭಜನೆಗಳು ಮತ್ತು ಸಾಂಪ್ರದಾಯಿಕ ವಿಧಿಗಳೊಂದಿಗೆ ನಡೆದ ಈ ಆಧ್ಯಾತ್ಮಿಕ ಕಾರ್ಯಕ್ರಮ, ನದಿಯ ದಡದಲ್ಲಿ ಮಾಂತ್ರಿಕ ವಾತಾವರಣ ಸೃಷ್ಟಿಸಿತು ಎಂದು ಭಾಗವಹಿಸಿದವರು ವ ಜಿರ್ಣಿಸಿದ್ದಾರೆ.

ಗಂಗಾ ಆರತಿ

ಮಿಸಿಸಾನ್ಗಾ: ಭಾರತೀಯ ಸಂಸ್ಕೃತಿಯನ್ನು (Indian Culture) ದೂರದ ಕೆನಡಾದಲ್ಲಿ (Canada) ಜೀವಂತವಾಗಿಡಲು, ಭಾರತೀಯ ಸಮುದಾಯವು ಮಿಸಿಸಾನ್ಗಾದ ಕ್ರೆಡಿಟ್ ನದಿಯ (Credit River) ದಡದಲ್ಲಿ ಗಂಗಾ ಆರತಿ (Ganga Aarti) ಕಾರ್ಯಕ್ರಮ ಆಯೋಜಿಸಿತ್ತು. ದೀಪಗಳು, ಭಕ್ತಿಯ ಭಜನೆಗಳು ಮತ್ತು ಸಾಂಪ್ರದಾಯಿಕ ವಿಧಿಗಳೊಂದಿಗೆ ನಡೆದ ಈ ಆಧ್ಯಾತ್ಮಿಕ ಕಾರ್ಯಕ್ರಮ, ನದಿಯ ದಡದಲ್ಲಿ ಮಾಂತ್ರಿಕ ವಾತಾವರಣ ಸೃಷ್ಟಿಸಿತು ಎಂದು ಭಾಗವಹಿಸಿದವರು ವರ್ಣಿಸಿದ್ದಾರೆ.
ಕಾನ್ಸುಲ್ ಸಂಜೀವ್ ಸಕ್ಲಾನಿ ಈ ಕಾರ್ಯಕ್ರಮದಲ್ಲಿ ಕಾನ್ಸುಲೇಟ್ನ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಎಕ್ಸ್ನಲ್ಲಿ ಚಿತ್ರಗಳನ್ನು ಹಂಚಿಕೊಂಡ ಕಾನ್ಸುಲೇಟ್, "ಮಿಸಿಸಾನ್ಗಾದ ಎರಿಂಡೇಲ್ ಪಾರ್ಕ್ನ ಕ್ರೆಡಿಟ್ ನದಿಯ ದಡದಲ್ಲಿ ರೇಡಿಯೊ ಧಿಶೂಮ್ ತಂಡ ಆಯೋಜಿಸಿದ ಗಂಗಾ ಆರತಿಯ ಕಾರ್ಯಕ್ರಮ, ದೈವಿಕ ಭಜನೆಗಳು ಮತ್ತು ಪವಿತ್ರ ಮಂತ್ರಗಳಿಂದ ಕೂಡಿತ್ತು" ಎಂದು ತಿಳಿಸಿದೆ.
Consul Sanjeev Saklani represented the Consulate at the Ganga Aarti, a soulful evening of divine chants and pious mantras at the banks of the Credit River at Erindale Park, Mississauga organized by Team @RadioDhishum.@HCI_Ottawa @MEAIndia @diaspora_india pic.twitter.com/DO2ceopVVw
— IndiainToronto (@IndiainToronto) July 8, 2025
ಈ ಸುದ್ದಿಯನ್ನು ಓದಿ: Viral Video: ಸ್ಮಶಾನದಲ್ಲಿ ವಿವಾಹಿತ ಮಹಿಳೆಯೊಂದಿಗೆ ಬಿಜೆಪಿ ನಾಯಕನ ರಾಸಲೀಲೆ; ಕ್ಯಾಮರಾ ಕಣ್ಣಲ್ಲಿ ಸೆರೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ಕಾರ್ಯಕ್ರಮದ ವಿಡಿಯೋ, ಹರಿದ್ವಾರ, ರಿಷಿಕೇಶ್ ಮತ್ತು ವಾರಾಣಸಿಯ ಘಾಟ್ಗಳಲ್ಲಿ ನಡೆಯುವ ಗಂಗಾ ಆರತಿಯನ್ನು ಪ್ರತಿಬಿಂಬಿಸುತ್ತಿದೆ. ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಿದ ರೇಡಿಯೊ ಧಿಶೂಮ್ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದೆ.
ಈ ಘಟನೆಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬ ಬಳಕೆದಾರ, "ಹರ ಹರ ಗಂಗೆ – ಈ ವಿಡಿಯೋ ಭಾವನೆಗಳನ್ನು ತುಂಬಿದೆ" ಎಂದು ಪ್ರಶಂಸೆ ವ್ಯಕ್ತಪಡಿಸಿದರೆ, ಮತ್ತೊಬ್ಬರು, "ಕೆನಡಾದ ನದಿಗಳನ್ನು ಗಂಗೆಯಂತೆ ಮಾಲಿನ್ಯಗೊಳಿಸಬಾರದು" ಎಂದು ಟೀಕಿಸಿದರು. "ಇದು ಗಂಗಾ ನದಿಯೇ ಅಲ್ಲ, ಗಂಗಾ ಆರತಿ ಮಾಡುವುದನ್ನು ನಿಲ್ಲಿಸಿ. ಮುಂದೆ ಕುಂಭಮೇಳವನ್ನೂ ಇಲ್ಲಿ ಆಯೋಜಿಸಬಹುದು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ
ಟೀಕೆಗಳ ನಡುವೆ ಒಬ್ಬ ಬಳಕೆದಾರ ವಿಭಿನ್ನ ದೃಷ್ಟಿಕೋನ ನೀಡಿದ್ದಾರೆ “ಭಾರತಕ್ಕೆ ವಾಪಸ್ ಬನ್ನಿ, ಗಂಗಾ ನದಿಯನ್ನು ಸ್ವಚ್ಛಗೊಳಿಸೋಣ" ಈ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ಎತ್ತಿ ತೋರಿಸಿದರೂ, ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.