Indi (Vijayapura) News: ಹಣ, ಆಸ್ತಿ. ಸಂಪತ್ತು ಯಾವುದು ನಮ್ಮ ಹಿಂದೆ ಬರುವುದಿಲ್ಲ, ಒಳ್ಳೆತನ ಮಾತ್ರ ಇಡೀ ಸಮಾಜ ಗೌರವಿಸುತ್ತದೆ
ವೈದ್ಯರು ದೇವರ ಸಮಾನ ಪ್ರಾಚೀನ ಕಾಲದಿಂದ ಇಂದಿನವರೆಗೂ ವೈದ್ಯ ನಾರಾಯಣೋ ಹರಿ ಎಂದು ಗೌರವದಿಂದ ಕಾಣುತ್ತಾರೆ. ವೈದ್ಯರು ಬಡವರನ್ನು ದೀನರನ್ನು ಪ್ರೀತಿ, ವಿಶ್ವಾಸ ಅಂತಃಕರಣದಿಂದ ಕಾಣಿ. ರೋಗಿಗಳನ್ನು ಪ್ರೀತಿ ಅಕ್ಕರೆಯಿಂದ ವೈದ್ಯರು ಕಂಡರೆ ರೋಗಿಗಳ ಅರ್ಧ ರೋಗ ವಾಸಿಯಾಗುತ್ತದೆ.

ತಾಲೂಕಾ ಆಸ್ಪತ್ರೆಯಲ್ಲಿ 15ನೇ ಹಣಕಾಸು ಆಯೋಗದ ಅಡಿಯಲ್ಲಿ ಪ್ರಯೋಗಾಲಯ ಕಟ್ಟಡ ಉದ್ಘಾಟಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.

ಇಂಡಿ: ಸರಕಾರಿ ಸಾರ್ವಜನಿಕ ಆಸ್ಪತ್ರೆಗಳಿಗೆ ಬರುವ ಜನರು ಬಡವರು, ಇಂತಹವರನ್ನು ಪ್ರೀತಿ, ವಿಶ್ವಾಸಗಳಿಂದ ಗೌರವಿಸಿ ದೀನರಲ್ಲಿ ದೇವರನ್ನು ಕಾಣುವ ಗುಣ ವೈದ್ಯರಲ್ಲಿರಬೇಕು. ಹಣ ಆಸ್ತಿ. ಸಂಪತ್ತು ಯಾವುದು ನಮ್ಮ ಹಿಂದೆ ಬರುವುದಿಲ್ಲ ಒಳ್ಳೆತನ ಮಾತ್ರ ಇಡೀ ಸಮಾಜ ಗೌರವಿಸುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಾ ಆಸ್ಪತ್ರೆಯಲ್ಲಿ 15ನೇ ಹಣಕಾಸು ಆಯೋಗದ ಅಡಿಯಲ್ಲಿ ಪ್ರಯೋಗಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ವೈದ್ಯರು ದೇವರ ಸಮಾನ ಪ್ರಾಚೀನ ಕಾಲದಿಂದ ಇಂದಿನವರೆಗೂ ವೈದ್ಯ ನಾರಾಯಣೋ ಹರಿ ಎಂದು ಗೌರವದಿಂದ ಕಾಣುತ್ತಾರೆ. ವೈದ್ಯರು ಬಡವರನ್ನು ದೀನರನ್ನು ಪ್ರೀತಿ, ವಿಶ್ವಾಸ ಅಂತಃಕರಣ ದಿಂದ ಕಾಣಿ. ರೋಗಿಗಳನ್ನು ಪ್ರೀತಿ ಅಕ್ಕರೆಯಿಂದ ವೈದ್ಯರು ಕಂಡರೆ ರೋಗಿಗಳ ಅರ್ಧ ರೋಗ ವಾಸಿಯಾಗುತ್ತದೆ. 2019ರಲ್ಲಿ ಕೋವಿಡ್ -19 ಮಹಾ ಮಾರಿ ಇಡೀ ವಿಶ್ವಕ್ಕೆ ಒಂದು ಪಾಠ ಕಲಿಸಿದೆ ಅನೇಕ ಒಳ್ಳೆಯವರು ನಮ್ಮಿಂದ ಅಗಲಿದ್ದಾರೆ.
ಇದನ್ನೂ ಓದಿ:Indi (Vijayapura) News: ಉಸಿರು ಹೋದರೂ ಹೆಸರು ಉಳಿಯಬೇಕು: ಶಾಸಕ ಯಶವಂತರಾಯಗೌಡ ಪಾಟೀಲ
ಎಲ್ಲ ಸಂಪತ್ತುಗಳು ಗಳಿಸಬಹುದು ಆರೋಗ್ಯ ಸಂಪತ್ತು ಗಳಿಸುವುದು ಕಷ್ಟ ಆದ್ದರಿಂದ ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ಇರಲಿ.ಈ ಹಿಂದೆ ಭಯಾನಕ ರೋಗಗಳಿದ್ದವು ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಇಲಿಯಾಸ ಬೋರಾಮಣಿ, ಜಾವೇದ ಮೋಮಿನ, ಪ್ರಶಾಂತ ಕಾಳೆ, ಶಿವಯೋಗೇಪ್ಪ ಚನಗೊಂಡ , ಎಸಿ ಅನುರಾಧಾ ವಸ್ತçದ, ತಹಶೀಲ್ದಾರ ಕಡಕ ಭಾವಿ, ಮಹಮ್ಮದ ಸೌದಾಗರ, ತಾ.ಪಂ ಅಧಿಕಾರಿ ನಂದೀಪ ರಾಠೋಡ, ತಾಲೂಕಾ ಆರೋಗ್ಯಾಧಿ ಕಾರಿ ಅರ್ಚನಾ ಕುಲಕರ್ಣಿ, ಅಪ್ಪಾಸಾಹೇಬ ಇನಾಮದಾರ, ಗುತ್ತಿಗೆದಾರ ಬಲವಂತಗೌಡ, ಡಾ.ಆರ್.ಟಿ ಕೊಳೇಕರ್, ಭೀಮಣ್ಣಾ ಕೌಲಗಿ, ಜೀತಪ್ಪಕಲ್ಯಾಣಿವೇದಿಕೆಯಲ್ಲಿದ್ದರು.
ಡಾ.ವಿಫುಲ ಕೊಳೇಕರ್, ಡಾ.,ಸಂತೋಷ ರಾಠೋಡ, ಡಾ.ವಿಕಾಸ ಸಿಂದಗಿಲ, ಡಾ.ಭತಗುಣಕಿ, ವಿಜಯಲಕ್ಷ್ಮೀ ಹಾದಿಮನಿ, ವಿಜಯಕುಮಾರ ಪೋಳ ಸೇರಿದಂತೆ ಸರಕಾರಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು.