Adnan Sami: ಮುಂಬೈ ಏರ್ಪೋರ್ಟ್ ಪ್ರಣಾಮ್ ಸೇವೆ ಕುರಿತು ಖ್ಯಾತ ಗಾಯಕ ಅದ್ನಾನ್ ಸಮಿ ಕಿಡಿಕಾರಿದ್ಯಾಕೆ?
ಇತ್ತೀಚೆಗಷ್ಟೇ ಗಾಯಕ ಅದ್ನಾನ್ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದು ಅಲ್ಲಿನ ವಿಮಾನ ನಿಲ್ದಾಣದ ಪ್ರಾಣಾಮ್ ಸೇವೆ ಬಗ್ಗೆ ಆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಮಾನ ಸೇವೆಯಲ್ಲಿ ಸಾಕಷ್ಟು ಬಾರಿ ವೈಫಲ್ಯ ಕಂಡಿದ್ದು ಹಲವು ಭಾರಿ ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.


ಮುಂಬೈ: ಬಾಲಿವುಡ್ ನ ಖ್ಯಾತ ಗಾಯಕ ಅದ್ನಾನ್ ಸಮಿ (Adnan Sami) ಅವರು ಸದಾ ಒಂದಲ್ಲ ಒಂದು ವಿಚಾರ ದಿಂದ ಸುದ್ದಿಯಲ್ಲಿರುತ್ತಾರೆ. ಹಿಂದಿ, ಉರ್ದು, ಇಂಗ್ಲಿಷ್, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಗೀತವನ್ನು ಹಾಡಿ ಜನಮನಗೆದ್ದ ಗಾಯಕ ಇದೀಗ ಮತ್ತೆ ಸುದ್ದಿಯಲ್ಲಿ ದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಇವರು ಈ ಬಾರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಆದ ಕಹಿ ಅನುಭವದ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ಎಕ್ಸ್ ಖಾತೆ ಯಲ್ಲಿ ಮುಂಬೈ ಏರ್ ಪೋರ್ಟ್ ಪ್ರಣಾಮ್ ಸೇವೆ ಕುರಿತು ಬಹಿರಂಗವಾಗಿ ಟೀಕೆ ಮಾಡಿದ ಇವರ ಪೋಸ್ಟ್ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ಗಾಯಕ ಅದ್ನಾನ್ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದು ಅಲ್ಲಿನ ವಿಮಾನ ನಿಲ್ದಾಣದ ಪ್ರಣಾಮ್ ಸೇವೆ ಬಗ್ಗೆ ಆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಮಾನ ಸೇವೆಯಲ್ಲಿ ಸಾಕಷ್ಟು ವೈಫಲ್ಯ ಕಂಡಿದ್ದರ ಬಗ್ಗೆ ಹಲವು ಬಾರಿ ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಣಾಮ್ ಸೇವೆಯು ಅತ್ಯಂತ ಅಸಮರ್ಥ, ಅಸಡ್ಡೆ ಮತ್ತು ಸೋಮಾರಿತ ನದಿಂದ ಕೂಡಿದ ಸೇವೆಯಾಗಿದೆ. ಅವರು ತಮ್ಮ ಗ್ರಾಹಕರ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಅವರು ಬರೆದಿದ್ದಾರೆ. ಆದರೆ ವಿಮಾನ ನಿಲ್ದಾಣದ ಯಾವ ನ್ಯೂನ್ಯತೆ ಅವರಿಗೆ ಬೇಸರ ತಂದಿದೆ ಎಂಬ ಬಗ್ಗೆ ಗಾಯಕ ತಿಳಿಸಿಲ್ಲ. ಗಾಯಕನ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಮುಂಬೈ ವಿಮಾನ ನಿಲ್ದಾಣ ಆಡಳಿತ ವ್ಯವಸ್ಥೆ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದೆ.
Dear Mr Sami, thank you for writing to us. We are really concerned to hear this. We take your feedback very seriously and have communicated it to the concerned team for their attention. The comfort, safety and well-being of our passengers is our topmost priority. Team CSMIA
— Mumbai Airport (@CSMIA_Official) May 31, 2025
ವಿಮಾನ ನಿಲ್ದಾಣದ ಅಧಿಕೃತ ಖಾತೆಯ ಮೂಲಕ ಅವರ ದೂರಿಗೆ ಪ್ರತಿಕ್ರಿಯಿಸಲಾಗಿದೆ. ಗ್ರಾಹಕರ ಬಗ್ಗೆ ನಮಗೆ ನಿಜವಾಗಿಯೂ ಕಾಳಜಿ ಇದೆ. ನಿಮ್ಮ ಪ್ರತಿಕ್ರಿಯೆಯನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ಸಂಬಂಧಪಟ್ಟ ತಂಡಕ್ಕೆ ಈ ಬಗ್ಗೆ ತಿಳಿಸಿದ್ದೇವೆ. ನಮ್ಮ ಪ್ರಯಾಣಿಕರ ಸುರಕ್ಷತೆ, ಯೋಗಕ್ಷೇಮ, ಸೌಕರ್ಯ ಇತ್ಯಾದಿಗಳು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಪೋಸ್ಟ್ ಹಂಚಿಕೊಂಡಿದೆ. ವಿಶ್ವದ ಅತ್ಯಂತ ವೇಗದ ಕೀಬೋರ್ಡ್ ವಾದಕ ಎಂಬ ಖ್ಯಾತಿ ಪಡೆದ ಗಾಯಕ ಅದ್ನಾನ್ ಸಮಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ. ಸದ್ಯ ಇವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.