ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nitish Kumar: ವೇದಿಕೆಯಲ್ಲಿ ಪ್ರಧಾನಿ ಮೋದಿ ಹೆಸರನ್ನು ಮರೆತು ಕಕ್ಕಾಬಿಕ್ಕಿಯಾದ ಬಿಹಾರ ಸಿಎಂ; ವಿಡಿಯೋ ನೋಡಿ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಪ್ರಧಾನಿ ಮೋದಿ ಅವರ ಎದುರು ಮಾತನಾಡಿದ ವಿಡಿಯೋ ಒಂದು ವೈರಲ್‌ ಆಗಿದೆ. ಕರಕಟ್‌ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರ (PM Modi) ಹೆಸರನ್ನು ಮರೆತು ಅವರನ್ನು ಅಟಲ್ ಬಿಹಾರಿ ವಾಜಪೇಯಿ ಎಂದು ಕರೆದಿದ್ದಾರೆ.

ವೇದಿಕೆಯಲ್ಲಿ ಪ್ರಧಾನಿ ಹೆಸರನ್ನು ಮರೆತು ಕಕ್ಕಾಬಿಕ್ಕಿಯಾದ  ಬಿಹಾರ ಸಿಎಂ!

Profile Vishakha Bhat May 31, 2025 4:43 PM

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಪ್ರಧಾನಿ ಮೋದಿ ಅವರ ಎದುರು ಮಾತನಾಡಿದ ವಿಡಿಯೋ ಒಂದು ವೈರಲ್‌ ಆಗಿದೆ. ಕರಕಟ್‌ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರ (PM Modi) ಹೆಸರನ್ನು ಮರೆತು ಅವರನ್ನು ಅಟಲ್ ಬಿಹಾರಿ ವಾಜಪೇಯಿ ಎಂದು ಕರೆದಿದ್ದಾರೆ. ಪ್ರಧಾನಿಯನ್ನು ಉಲ್ಲೇಖಿಸುವಾಗ ಸಿಎಂ ಕುಮಾರ್ ಕ್ಷಣಕಾಲ ವಿಚಲಿತರಾದರು. ನಂತರು ಅವರು ಮೋದಿ ಅವರ ಹೆಸರನ್ನು ಮರೆತು ಅಟಲ್‌ ಜೀ ಎಂದು ಕರೆದಿದ್ದಾರೆ.

ಶುಕ್ರವಾರ ರೋಹ್ತಾಸ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕುಮಾರ್, ಜಾತಿ ಆಧಾರಿತ ಜನಗಣತಿಯನ್ನು "ಐತಿಹಾಸಿಕ ಹೆಜ್ಜೆ" ಮತ್ತು ಅವರು ಪ್ರತಿಪಾದಿಸಿದ ದೀರ್ಘಕಾಲದ ಬೇಡಿಕೆ ಎಂದು ಕರೆದರು. ಬಿಹಾರದ ಅಭಿವೃದ್ಧಿ ಪ್ರಯಾಣದಲ್ಲಿ "ಅಚಲ" ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಅವರು, ನೆರೆದಿದ್ದ ಜನರು ಎದ್ದು ನಿಂತು ಪ್ರಧಾನಿ ಮೋದಿಗೆ ಸಾಮೂಹಿಕ ಕೃತಜ್ಞತೆ ಸಲ್ಲಿಸುವಂತೆ ಒತ್ತಾಯಿಸಿದರು. ಮೋದಿ ಎಂದು ಹೇಳುವ ಬದಲು ಅಟಲ್‌ಜೀ ಎಂದು ಸಂಬೋಧಿಸಿದ್ದಾರೆ. ಆಮೇಲೆ ಅಟಲ್ ಬಿಹಾರಿ ವಾಜಪೇಯಿ ಮೊದಲೇ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಎಂದು ತಮ್ಮ ಮಾತನ್ನು ಬದಲಾಯಸಿದ್ದಾರೆ.



ಜನವರಿಯ ಆರಂಭದಲ್ಲಿ, ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ನಡೆದ ಗೌರವ ನಮನದ ಸಂದರ್ಭದಲ್ಲಿ ಕುಮಾರ್ ಇದ್ದಕ್ಕಿದ್ದಂತೆ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂದಿತು. ಮಾರ್ಚ್‌ನ ಆರಂಭದಲ್ಲಿ, ಪಾಟ್ನಾದಲ್ಲಿ ನಡೆದ ಕ್ರೀಡಾಕೂಟವೊಂದರಲ್ಲಿ ರಾಷ್ಟ್ರಗೀತೆಯ ಸಮಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಗುತ್ತಾ ಮತ್ತು ಹರಟೆ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈಗ ವಿಪಕ್ಷಗಳು ಸಿಎಂಗೆ ಅನಾರೋಗ್ಯಗ ಕಾಡುತ್ತಿದೆ ಎಂದು ಹೇಳಿವೆ.

ಈ ಸುದ್ದಿಯನ್ನೂ ಓದಿ: Shehbaz Sharif: ಮೋದಿ ನಡೆಯನ್ನೇ ಅನುಕರಿಸಿದ ಪಾಕ್‌ ಪ್ರಧಾನಿ ಪಾಕ್‌ ಪ್ರಧಾನಿ ಶೆಹಬಾಜ್​ ಶರೀಫ್; ಸೇನಾ ನೆಲೆಗೆ ಭೇಟಿ

ದೇಶದ ಜನಪ್ರಿಯ ಪ್ರಧಾನಿ ವಾಜಪೇಯಿ ಎಂದು ಮೊದಲು ಹೇಳಿ, ನಂತರ ನರೇಂದ್ರ ಮೋದಿ ಎಂದರು. ಅಷ್ಟೇ ಅಲ್ಲದೇ, ಎಲ್ಲರೂ ಎದ್ದು ನಿಂತು ಅವರಿಗೆ ಗೌರವವನ್ನು ಸಲ್ಲಿಸಿ ಎಂದರು. ಈ ಘಟನೆಯನ್ನು ಉಲ್ಲೇಖಿಸಿ, ನಿತೀಶ್ ಕುಮಾರ್ ಅವರ ಆರೋಗ್ಯದಲ್ಲಿ ಸಮಸ್ಯೆ ಇದೆಯಾ ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.