ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Dasara Fashion 2025: ದಸರಾ ಹಬ್ಬದ ಟ್ರೆಡಿಷನಲ್ ಲುಕ್‌ಗೆ ಇಲ್ಲಿದೆ ಒಂದಿಷ್ಟು ಐಡಿಯಾ

ದಸರಾ ಹಬ್ಬದ ಟ್ರೆಡಿಷನಲ್ ಲುಕ್‌ಗೆ ಇಲ್ಲಿದೆ ಒಂದಿಷ್ಟು ಐಡಿಯಾ

Dasara Fashion 2025: ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಸೂಕ್ತ ಟ್ರೆಡಿಷನಲ್ ಉಡುಪುಗಳನ್ನು ಆಯ್ಕೆ ಮಾಡುವುದರೊಂದಿಗೆ ಒಂದಿಷ್ಟು ಸ್ಟೈಲಿಂಗ್ ಹಾಗೂ ಮೇಕೋವರ್ ಐಡಿಯಾಗಳನ್ನು ಫಾಲೋ ಮಾಡಬೇಕು. ಆಗಷ್ಟೇ, ದಸರಾ ಸಂಭ್ರಮ ಹೆಚ್ಚಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ವರದಿ ಇಲ್ಲಿದೆ.

Dharmasthala Case: ಧರ್ಮಸ್ಥಳ ಪ್ರಕರಣಗಳ ತನಿಖೆ ಶೀಘ್ರದಲ್ಲಿ ಮುಕ್ತಾಯ: ಗೃಹ ಸಚಿವ ಪರಮೇಶ್ವರ್‌

ಧರ್ಮಸ್ಥಳ ಪ್ರಕರಣಗಳ ತನಿಖೆ ಶೀಘ್ರದಲ್ಲಿ ಮುಕ್ತಾಯ: ಗೃಹ ಸಚಿವ ಪರಮೇಶ್ವರ್‌

G Parameshwara: ಧರ್ಮಸ್ಥಳ ಪ್ರಕರಣದಲ್ಲಿ ಆದಷ್ಟು ಶೀಘ್ರದಲ್ಲಿ ಎಸ್‌ಐಟಿಯಿಂದ (SIT) ತನಿಖಾ ವರದಿ ಪಡೆಯಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಗೃಹ ಸಚಿವ ಪರಮೇಶ್ವರ್, ಇಡೀ ತನಿಖೆಯನ್ನು ಆದಷ್ಟು ಬೇಗ ಮುಗಿಸಬೇಕು ಅಂತ ಎಸ್‌ಐಟಿಗೆ ತಿಳಿಸಿದ್ದೇವೆ ಎಂದಿದ್ದಾರೆ.

Cauvery Aarti: ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಐದು ದಿನಗಳ ಕಾವೇರಿ ಆರತಿಗೆ ತೆರೆ

ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಐದು ದಿನಗಳ ಕಾವೇರಿ ಆರತಿಗೆ ತೆರೆ

KRS dam: ಶ್ರೀರಂಗಪಟ್ಟಣದ ಕೆಆರ್‌ಎಸ್ ಡ್ಯಾಂನ ಬೃಂದಾವನದಲ್ಲಿ ಸಾಂಕೇತಿಕವಾಗಿ ಕಳೆದ ಐದು ದಿನಗಳ ಕಾಲ ಕಾವೇರಿ ಆರತಿ ಕಾಲ ಜರುಗಿತು. ಈ ಆರತಿಗೆ ಕಳೆದ ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಗೋಧೂಳಿ ಸಮಯದಲ್ಲಿ ಚಾಲನೆ ನೀಡುವ ಮೂಲಕ ಹೊಸ ಆಚರಣೆಗೆ ಮುನ್ನುಡಿ ಬರೆದಿದ್ದರು.

Mallikarjun kharge: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಏರುಪೇರು, ಆಸ್ಪತ್ರೆಗೆ ದಾಖಲು

ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಏರುಪೇರು, ಆಸ್ಪತ್ರಗೆ ದಾಖಲು

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ದೇಹಸ್ಥಿತಿಯಲ್ಲಿ ಏರುಪೇರು ಸಂಭವಿಸಿದೆ. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಉಸಿರಾಟ ತೊಂದರೆ ಸಂಭವಿಸಿತ್ತು.

ಹಬ್ಬದ ಸೀಸನ್ ಆರಂಭದಲ್ಲಿಯೇ ಹೀರೋ ಮೋಟೋಕಾರ್ಪ್‌ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ

ಹೀರೋ ಮೋಟೋಕಾರ್ಪ್‌ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ

ಕಂಪನಿಯು ದೇಶಾದ್ಯಂತ ತನ್ನ ಡೀಲರ್‌ ಶಿಪ್‌ ಗಳಲ್ಲಿನ ಚಟುವಟಿಕೆಗಲು ಗಮನಾರ್ಹ ಏರಿಕೆ ಯಾಗಿರು ವುದು ಗಮನಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೀರೋ ಮೋಟೋಕಾರ್ಪ್ ಉತ್ಪನ್ನಗಳ ಮೇಲಿನ ಗ್ರಾಹಕರ ಆಸಕ್ತಿಯು ಗಣನೀಯವಾಗಿ ಏರಿದೆ. ಅದಕೆ ಜಿ ಎಸ್ ಟಿ ಇಳಿಕೆಯಿಂದ ಉಂಟಾಗಿರುವ ಬೆಲೆ ರಿಯಾಯಿತಿ ಕಾರಣವಾಗಿದೆ.

ಪುನರಾವರ್ತಿತ ಕೆಲಸಗಳನ್ನೆಲ್ಲಾ ಎಐ ಮಾಡುತ್ತಿರುವ ಈ ಸಂದರ್ಭದಲ್ಲಿ ಮಾನವ ಶಕ್ತಿ ಅವಶ್ಯವಿರುವ ಹುದ್ದೆಗಳತ್ತ ಭಾರತೀಯ ವೃತ್ತಿಪರರ ಗಮನ: ಲಿಂಕ್ಡ್‌ ಇನ್

ಮಾನವ ಶಕ್ತಿ ಅವಶ್ಯವಿರುವ ಹುದ್ದೆಗಳತ್ತ ಭಾರತೀಯ ವೃತ್ತಿಪರರ ಗಮನ

“ಎಐ ಯಾರ ವೃತ್ತಿ ಜೀವನವನ್ನೂ ಬದಲಿಸುತ್ತಿಲ್ಲ. ಬದಲಿಗೆ ಅದು ವೇಗವಾಗಿ ಸಾಗಲು ಸಹಾಯ ಮಾಡುತ್ತಿದೆ. ಇವತ್ತು ಗೆಲ್ಲುತ್ತಿರುವ ಮಂದಿ ಮೂರು ಸರಳ ವಿಷಯ ಗಳನ್ನು ಅನುಸರಿಸುತ್ತಾರೆ: ಕೌಶಲ್ಯ ಗಳನ್ನು ಹೊಂದುವುದು, ಅದಕ್ಕೆ ತಕ್ಕ ಪುರಾವೆ ತೋರಿಸುವುದು ಮತ್ತು ಎಐ ಅನ್ನು ಹೊಸ ಅವಕಾಶ ಗಳ ಗಳಿಸಲು ಬಳಸಿಕೊಳ್ಳುವುದು

ಬೀಸ್ಪೋಕ್ ಎಐ ಏರ್ ಕಂಡಿಷನರ್‌ ಗಳ ಮೇಲೆ “ಗೋ ಸೇವ್ ಟುಡೇ” ಆಫರ್ ಘೋಷಿಸಿದ ಸ್ಯಾಮ್‌ಸಂಗ್

ಎಐ ಏರ್ ಕಂಡಿಷನರ್‌ ಗಳ ಮೇಲೆ “ಗೋ ಸೇವ್ ಟುಡೇ” ಆಫರ್ ಘೋಷಿಸಿದ ಸ್ಯಾಮ್‌ಸಂಗ್

ಗೋ ಸೇವ್ ಆಫರ್ ಮೂರು ವಿಷಯಗಳ ಆಧಾರದಲ್ಲಿ ರೂಪುಗೊಂಡಿದ್ದು, ಜಿ.ಎಸ್.ಟಿ ಕಡಿತದ ಲಾಭ, ವಿಸ್ತೃತ ವಾರಂಟಿ ಪ್ರಯೋಜನಗಳು ಮತ್ತು ಇಂಧನ ಉಳಿತಾಯದ ಲಾಭ ಒದಗಿಸಲಿದೆ. ಬೀಸ್ಪೋಕ್ ಎಐ ಏರ್ ಕಂಡಿಷನರ್ ಖರೀದಿಸುವವರಿಗೆ ಉಚಿತ ಇನ್ ಸ್ಟಾಲೇಷನ್, ಆಕರ್ಷಕ ಕ್ಯಾಶ್ ಬ್ಯಾಕ್ ಮತ್ತು ಹಬ್ಬದ ಸೀಸನ್‌ ನಲ್ಲಿ ವಿಸ್ತೃತ ವಾರಂಟಿ ಪ್ರಯೋಜನಗಳು ಲಭ್ಯ. ಗ್ರಾಹಕರಿಗೆ ಹಬ್ಬದ ಆಫರ್‌ ನ ಭಾಗವಾಗಿ ಒಟ್ಟು 21,000 ರೂಪಾಯಿಗಳವರೆಗಿನ ಪ್ರಯೋಜನಗಳು ದೊರೆಯಲಿದೆ.

ಬೆಂಗಳೂರಿನಲ್ಲಿ ಕಲ್ಯಾಣ್ ಜ್ಯುವೆಲರ್ಸ್‌ ನ ಹೊಚ್ಚಹೊಸ ಶೋರೂಮ್ ಉದ್ಘಾಟಿಸಿದ ಬಾಲಿವುಡ್ ಸ್ಟಾರ್ ಅಜಯ್ ದೇವಗನ್

ಕಲ್ಯಾಣ್ ಜ್ಯುವೆಲರ್ಸ್‌ ನ ಹೊಸ ಶೋರೂಮ್ ಉದ್ಘಾಟಿಸಿದ ಬಾಲಿವುಡ್ ಸ್ಟಾರ್

ಉದ್ಘಾಟನಾ ಕಾರ್ಯಕ್ರದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳು ಉಲ್ಲಸಿತರಾಗಿ ಭಾಗವಹಿಸಿದರು. ಅಭಿಮಾನಿಗಳು ಮತ್ತು ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಬಂದು ಸೂಪರ್‌ ಸ್ಟಾರ್‌ ಅಜಯ್ ದೇವಗನ್ ಅವರನ್ನು ನೋಡುವ ಕುತೂಹಲ ವ್ಯಕ್ತಪಡಿಸಿದರು. ಈ ಶೋರೂಮ್ ಉದ್ಘಾಟನೆಯ ಸಂಭ್ರಮ ಮತ್ತು ನಿರೀಕ್ಷೆಯನ್ನು ಪ್ರತಿಬಿಂಬಿ ಸುವಂತೆ ವಾತಾವರಣ ಪೂರ್ತಿ ಉತ್ಸಾಹ ತುಂಬಿತ್ತು

Bengaluru News: ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ದುರ್ಮರಣ

ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಇಬ್ಬರ ಸಾವು

Bengaluru News: ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ಹಾಕಲು ಮಣ್ಣು ತೆಗೆಯುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪಿಲ್ಲರ್‌ಗಾಗಿ 20ಕ್ಕೂ ಹೆಚ್ಚು ಅಡಿ ಮಣ್ಣು ತೆಗೆಯಲಾಗುತ್ತಿತ್ತು. ಈ ವೇಳೆ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಮಣ್ಣು ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಶಿಕ್ಷಣದಲ್ಲಿ "ಎಐ ಆಧಾರಿತ" ಕಲಿಕೆ ಉತ್ತೇಜಿಸುವ "ಕಲಿಕೆಯ ಭವಿಷ್ಯ" ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇಂಟೆಲ್‌

"ಕಲಿಕೆಯ ಭವಿಷ್ಯ" ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇಂಟೆಲ್‌

ಪ್ರತಿಯೊಂದು ವಿದ್ಯಾರ್ಥಿಯು ಡಿಜಿಟಲ್‌ ಶಿಕ್ಷಣ ಜ್ಞಾನ ಹೊಂದದೇ ಹೋದಲ್ಲಿ, ಮುಂದೆಯೂ ಇದೇ ರೀತಿಯ ಹಿನ್ನಡೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಗ್ರಾಮೀಣ ಮಟ್ಟದಲ್ಲಿಯೂ ಸಹ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವತಃ ಕಂಪ್ಯೂಟರ್‌ ಹೊಂದುವ ಅವಶ್ಯಕತೆ ಇದೆ. ಪ್ರಸ್ತುತ ಶೇ.90 ರಷ್ಟು ಯುವಕರು ಸ್ಮಾರ್ಟ್‌ಫೋನ್‌ ಹೊಂದಿದ್ದರೆ, ಕೇವಲ ಶೇ.9ರಷ್ಟು ಜನರು ಕಂಪ್ಯೂಟರ್‌ ಹೊಂದಿದ್ದಾರೆ.

MLA C B SureshBabu Fan: ತಮ್ಮ ವಾಹನಕ್ಕೆ ಶಾಸಕರ ಹೆಸರಿಟ್ಟ ಅಭಿಮಾನಿ !

ತಮ್ಮ ವಾಹನಕ್ಕೆ ಶಾಸಕರ ಹೆಸರಿಟ್ಟ ಅಭಿಮಾನಿ !

ಕ್ಷೇತ್ರದ ಶಾಸಕರ ಮೇಲಿರುವ ಅತೀವ ಅಭಿಮಾನವನ್ನು ವ್ಯಕ್ತಪಡಿಸಲು ಸಿ.ಬಿ.ಸುರೇಶಬಾಬು ಅವರ ಕಟ್ಟಾ ಅಭಿಮಾನಿ ಎನ್ನಲಾದ ಜಾಣೇಹಾರ್ ಗ್ರಾಮದ ಬೈಲಪ್ಪ ಎಂಬ ದಿವ್ಯಾಂಗರು ಸರಕಾರ ದಿಂದ ಪಡೆದಿರುವ ದ್ವಿಚಕ್ರ ವಾಹನದ ಮುಂಭಾಗದಲ್ಲಿ ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ಸಿಬಿಎಸ್ ಅಭಿಮಾನಿ ಎಂದು ಬರೆಸಿದ್ದಾರೆ.

Sadguru Sri Madhusudan Sai: ಮೃತ್ಯುಂಜಯನ ಆರಾಧನೆಯಿಂದ ಮೃತ್ಯು ಭಯ ದೂರ: ಸದ್ಗುರು ಶ್ರೀ ಮಧುಸೂದನ ಸಾಯಿ

ಮೃತ್ಯುಂಜಯನ ಆರಾಧನೆಯಿಂದ ಮೃತ್ಯು ಭಯ ದೂರ: ಶ್ರೀ ಮಧುಸೂದನ ಸಾಯಿ

Sadguru Sri Madhusudan Sai: 'ಮೃತ್ಯುಂಜಯ ಮಂತ್ರದ ಮನನದಿಂದ ನಮಗೆ ಸಾವು ಇಲ್ಲದಂತೆ ಆಗುವುದಿಲ್ಲ. ಆದರೆ ಯಥಾರ್ಥ ಜ್ಞಾನದಿಂದ ಸಾವಿನ ಭಯ ದೂರವಾಗುತ್ತದೆ. ಶಿವನು ಮೋಕ್ಷ ಕೊಡುತ್ತಾನೆ. ಸಾವು ಎನ್ನುವುದು ಕೇವಲ ರೂಪಾಂತರ ಮಾತ್ರ. ಅಜ್ಞಾನಿಯು ಸಾವಿನಿಂದ ಸಾವಿಗೆ ಸಂಚರಿಸುತ್ತಾನೆ. ಜ್ಞಾನಿಯು ಜನ್ಮದಿಂದ ಜನ್ಮಕ್ಕೆ ಸಂಚರಿಸುತ್ತಾನೆ' ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಶೀರ್ವಚನದಲ್ಲಿ ನುಡಿದರು.

Navaratra Namasya: ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡರೆ ಆಪತ್ತು ಖಚಿತ: ರಾಘವೇಶ್ವರ ಶ್ರೀ

ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡರೆ ಆಪತ್ತು ಖಚಿತ: ರಾಘವೇಶ್ವರ ಶ್ರೀ

Navaratra Namasya: ಸಾಗರದ ಶ್ರೀ ರಾಘವೇಶ್ವರ ಸಭಾ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ʼನವರಾತ್ರ ನಮಸ್ಯಾʼದ 9ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

Karnataka Floods: ಪ್ರವಾಹದಿಂದ ಬೆಳೆ ಹಾನಿ; NDRF ಹಣದ ಜತೆಗೆ ಪ್ರತೀ ಹೆಕ್ಟೇರ್‌ಗೆ ಹೆಚ್ಚುವರಿ 8500 ರೂ. ಪರಿಹಾರ  ಘೋಷಿಸಿದ ಸಿಎಂ

ಬೆಳೆ ಹಾನಿ; NDRF ಪರಿಹಾರದ ಜತೆಗೆ ಹೆಚ್ಚುವರಿ ಪ್ಯಾಕೇಜ್ ಘೋಷಿಸಿದ ಸಿಎಂ

Crop damage: ಪ್ರವಾಹದಿಂದ ಬೆಳೆ ಜೊತೆಗೆ ಮೂಲಭೂತ ಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿ ಆಗಿರುವುದರಿಂದ ರಾಜ್ಯಕ್ಕೆ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ವೈಮಾನಿಕ ಸಮೀಕ್ಷೆ ಬಳಿಕ ಶಾಸಕರು, ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿ ನಾಲ್ಕು ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

DK Shivakumar: ಕುಮಾರಸ್ವಾಮಿ ಜತೆ ಬಹಿರಂಗ ಚರ್ಚೆಗೆ ನಾನು ಸಿದ್ಧ, ಮಾಧ್ಯಮಗಳೇ ವೇದಿಕೆ ಕಲ್ಪಿಸಲಿ: ಡಿಕೆಶಿ ಸವಾಲು

ಕುಮಾರಸ್ವಾಮಿ ಜತೆ ಬಹಿರಂಗ ಚರ್ಚೆಗೆ ನಾನು ಸಿದ್ಧ: ಡಿ.ಕೆ. ಶಿವಕುಮಾರ್ ಸವಾಲು

DK Shivakumar: ಮೊದಲಿನಿಂದಲೂ ನನ್ನನ್ನು ಜೈಲಿಗೆ ಹಾಕಿಸಲೇಬೇಕು ಎಂದು ಕುಮಾರಸ್ವಾಮಿ ಅವರು ಸಂಕಲ್ಪ ಮಾಡಿ ಷಡ್ಯಂತ್ರ ಮಾಡುತ್ತಿದ್ದಾರೆ. ಈಗಲೂ ಅದನ್ನೇ ಮುಂದುವರಿಸುತ್ತಿರುವುದಾಗಿ ಅವರೇ ಹೇಳಿದ್ದು, ಜೈಲಿಗೆ ಹೋಗುವ ದಿನ ಹತ್ತಿರ ಬರುತ್ತಿದೆ ಎಂದಿದ್ದಾರೆ. ಹಬ್ಬ ಮುಗಿದ ಬಳಿಕ ಅವರಿಗೆ ಉತ್ತರ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Karnataka Floods: ಉತ್ತರ ಕರ್ನಾಟಕದಲ್ಲಿ ಪ್ರವಾಹ; ಬೆಳೆ ಹಾನಿ ಸಮೀಕ್ಷೆ ನಂತರ ಪರಿಹಾರ ವಿತರಣೆ ಎಂದ ಸಿಎಂ

ಬೆಳೆ ಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ: ಸಿಎಂ ಭರವಸೆ

CM Siddaramaiah: ಸೆಪ್ಟೆಂಬರ್ ಮೊದಲ ವಾರದವರೆಗೂ ಆಗಿರುವ ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಮುಗಿದು ಪರಿಹಾರ ವಿತರಣೆ ಆಗುವ ಸಿದ್ಧತೆಯಲ್ಲಿದ್ದಾಗ ಎರಡನೇ ಸುತ್ತಿನ ಬೆಳೆ ಹಾನಿ ಆಗಿದೆ. ಹೀಗಾಗಿ ಸೆಪ್ಟೆಂಬರ್ ಮೊದಲ ವಾರದ ಬಳಿಕವೂ ಆಗಿರುವ ಬೆಳೆ ಹಾನಿಯ ಸಮೀಕ್ಷೆಯನ್ನೂ ಮುಗಿಸಿ ಎಲ್ಲರಿಗೂ ಒಟ್ಟಿಗೇ ಪರಿಹಾರ ಕೊಟ್ಟರೆ ಒಳ್ಳೆಯದು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Karnataka Floods: ಕಲ್ಯಾಣ ಕರ್ನಾಟಕಕ್ಕೆ ನೆರೆ ಪರಿಹಾರ ಪ್ಯಾಕೇಜ್‌ ಘೋಷಿಸಿ: ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಕಲ್ಯಾಣ ಕರ್ನಾಟಕಕ್ಕೆ ನೆರೆ ಪರಿಹಾರ ಪ್ಯಾಕೇಜ್‌ ಘೋಷಿಸಿ: ಎಚ್‌ಡಿಕೆ ಆಗ್ರಹ

HD Kumaraswamy: ಮುಖ್ಯಮಂತ್ರಿ ಸೇರಿ ಸಂಪುಟದ 36 ಸಚಿವರಿಗೆ ಇವತ್ತು ಜ್ಞಾನೋದಯವಾಗಿದೆ. ಅಷ್ಟೂ ಸಚಿವರು ಇಲ್ಲಿವರೆಗೆ ಏನು ಮಾಡುತ್ತಿದ್ದರು? ಮಾಧ್ಯಮಗಳು ಮತ್ತು ಪ್ರತಿಪಕ್ಷಗಳಿಂದ ಸರ್ಕಾರದ ವಿರುದ್ಧ ಟೀಕೆಗಳು ಶುರುವಾದ ಮೇಲೆ ಮುಖ್ಯಮಂತ್ರಿಗಳು ನೆರೆಪೀಡಿತ ಜಿಲ್ಲೆಗಳಿಗೆ ತೆರಳಿ ಏರಿಯಲ್‌ ಸರ್ವೇ ಮಾಡಿದ್ದಾರೆ. ಆದರೆ, ನೆರೆ ಪ್ರತಿ ವರ್ಷದ ಸಮಸ್ಯೆ. ಕಳೆದ 3 ತಿಂಗಳಿಂದ ಈ ಸರ್ಕಾರ ಗಾಢ ನಿದ್ರೆಯಲ್ಲಿತ್ತು ಎಂದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Blackmail Case: ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ 8 ಲಕ್ಷ ವಸೂಲಿ; ಇಬ್ಬರ ವಿರುದ್ಧ ಎಫ್‌ಐಆರ್‌

ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌; ಕೇಸ್‌ ದಾಖಲು

Bengaluru News: ಮಹಿಳೆ ಬಳಿ ಕಷ್ಟ ಎಂದು ಹೇಳಿಕೊಂಡು ಆರೋಪಿಯೊಬ್ಬ 4 ಲಕ್ಷ ರೂ. ಹಣ ಪಡೆದಿದ್ದ. ಆದರೆ, ಮಹಿಳೆ ಹಣ ವಾಪಸ್ ಕೇಳಿದಾಗ ಆಕೆಯ ಖಾಸಗಿ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ನಂತರ ಹೆಚ್ಚುವರಿ 4 ಲಕ್ಷಕ್ಕೂ ಅಧಿಕ ಪಡೆದಿದ್ದಾನೆ. ಹೀಗಾಗಿ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Star Fashion 2025: ಭರತ್ ಸಾಗರ್ ಡಿಸೈನರ್‌ವೇರ್‌ನಲ್ಲಿ ಕಿಚ್ಚ ಸುದೀಪ್ ಅತ್ಯಾಕರ್ಷಕ ಲುಕ್

ಭರತ್ ಸಾಗರ್ ಡಿಸೈನರ್‌ವೇರ್‌ನಲ್ಲಿ ಕಿಚ್ಚ ಸುದೀಪ್ ಅತ್ಯಾಕರ್ಷಕ ಲುಕ್

Star Fashion 2025: ಕನ್ನಡ ಬಿಗ್‌ ಬಾಸ್ ರಿಯಾಲಿಟಿ ಶೋ ನ ಆರಂಭದ ಎಪಿಸೋಡ್‌ನಲ್ಲಿ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್ ವಿಶೇಷ ಔಟ್‌ಫಿಟ್‌ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಏನಿದು ಸ್ಪೆಷಲ್ ಔಟ್‌ಫಿಟ್ಸ್? ಇದರ ವಿಶೇಷತೆಯೇನು? ಈ ಕುರಿತಂತೆ ಖುದ್ದು ಡಿಸೈನರ್ ವಿಶ್ವವಾಣಿ ಟಿವಿ ಸ್ಪೆಷಲ್‌ಗೆ ವಿವರಿಸಿದ್ದಾರೆ.

‌ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ; ಇಬ್ಬರು ಅರೆಸ್ಟ್, ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಟಾರ್ಗೆಟ್‌!

ವೇಶ್ಯಾವಾಟಿಕೆ ದಂಧೆ; ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಟಾರ್ಗೆಟ್‌!

ಮೈಸೂರಿನ ಒಡನಾಡಿ ಸಂಸ್ಥೆಯ ಪರಶು ಮತ್ತು ಸ್ಟಾನ್ಲಿ ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರನ್ನು ಬಂಧಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಬೆಂಗಳೂರಿನ ಶೋಭಾ ಮತ್ತು ತುಳಸಿಕುಮಾರ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.

Movie Ticket Price: ಟಿಕೆಟ್ ದರ ಗರಿಷ್ಠ 200 ರೂ. ಮಿತಿ; ಸರ್ಕಾರದ ಪರ ಅಂತಿಮ ತೀರ್ಪು ಬಂದರೆ ಪ್ರೇಕ್ಷಕರಿಗೆ ಹೆಚ್ಚುವರಿ ಹಣ ವಾಪಸ್‌

ಸಿನಿಮಾ ಟಿಕೆಟ್ ಏಕರೂಪ ದರ; ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​ಗೆ ನೋಟಿಸ್

High Court : ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟ ಮಾಡಿ ಸಂಗ್ರಹಿಸುವ ಹಣದ ಲೆಕ್ಕವನ್ನು ನಿರ್ವಹಿಸಬೇಕು. ಒಂದೊಮ್ಮೆ ನಿಯಮವನ್ನು ಪೀಠ ಎತ್ತಿಹಿಡಿದರೆ ಆ ಹಣವನ್ನು ಟಿಕೆಟ್ ಖರೀದಿದಾರರಿಗೆ ಮರಳಿಸಬೇಕು ಎಂದು ಆದೇಶಿಸಿದೆ.

Kalaburagi News: ಕಲಬುರಗಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಬಿ.ವೈ. ವಿಜಯೇಂದ್ರ ಭೇಟಿ

ಕಲಬುರಗಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಬಿ.ವೈ.ವಿ ಭೇಟಿ

BY Vijayendra: ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಹೊನಗುಂಟದಲ್ಲಿ ಅತಿವೃಷ್ಟಿಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಭೇಟಿ ನೀಡಿದರು.

Govinda Karajola: ಜಾತಿಗಣತಿ ವಿಷಯದಲ್ಲಿ ಗೊಂದಲ ಮೂಡಿಸುತ್ತಿದೆ ರಾಜ್ಯ ಸರ್ಕಾರ, ಕಾಂಗ್ರೆಸ್ ಹೈಕಮಾಂಡ್- ಗೋವಿಂದ ಕಾರಜೋಳ

ಜಾತಿಗಣತಿ ವಿಷಯದಲ್ಲಿ ನಾವು ಗೊಂದಲ ಸೃಷ್ಟಿಸುತ್ತಿಲ್ಲ- ಗೋವಿಂದ ಕಾರಜೋಳ

Govinda Karajola: ಜಾತಿ ಗಣತಿ ವಿಷಯದಲ್ಲಿ ನಾವು ಗೊಂದಲ ಸೃಷ್ಟಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ ಗೊಂದಲ ಮೂಡಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Hassan blast: ಹಾಸನದಲ್ಲಿ ನಿಗೂಢ ಸ್ಫೋಟ, ದಂಪತಿ ತೀವ್ರ ಗಾಯ, ಮಕ್ಕಳು ಪಾರು

ಹಾಸನದಲ್ಲಿ ನಿಗೂಢ ಸ್ಫೋಟ, ದಂಪತಿ ತೀವ್ರ ಗಾಯ, ಮಕ್ಕಳು ಪಾರು

Blast: ಸ್ಫೋಟದ ತೀವ್ರತೆಗೆ ಇಡೀ ಮನೆಯೇ ಧ್ವಂಸವಾಗಿದೆ. ಮನೆಯ ಹೊರಗಡೆ ಈ ಸ್ಫೋಟ ಆಗಿದ್ದು, ಮನೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕಾಂಪೌಂಡ್‌ ಕುಸಿದುಬಿದ್ದಿದೆ. ಸ್ಫೋಟದ ತೀವ್ರತೆ ನೋಡಿದರೆ ಇದು ಜಿಲೆಟಿನ್‌ ಅಥವಾ ಡಿಟೋನೇಟರ್‌ ಇರಬಹುದೇ ಎಂಬ ಅನುಮಾನ ಮೂಡಿದೆ. ಇಬ್ಬರು ಗಾಯಗೊಂಡಿದ್ದಾರೆ.

Loading...