73ನೇ ದಿನದ ರೈತರ ಹೋರಾಟಕ್ಕೆ ಇಸ್ರೋ ನೌಕರರ ಸಾಥ್
ಸರಕಾರ ಕೆಐಎಡಿಬಿ ಮುಖಾಂತರ ಭೂಸ್ವಾಧೀನ ಮಾಡಲು ಹೊರಟಿರುವುದು ದುರಾಡಳಿತದ ಪರಮಾ ವಧಿ. ಅತ್ಯಂತ ಫಲವತ್ತಾದ ಭೂಮಿ ಇದಾಗಿದೆ. ರಾಜಕೀಯ ದುರುದ್ದೇಶ ಹೊಂದಿರುವ ಈ ಬೃಹತ್ ಭೂಕಬಳಿಕೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಸೌಜನ್ಯಕ್ಕಾದರೂ ಸರಕಾರದ ಪ್ರತಿನಿಧಿಗಳು ಬಾರದಿರುವುದು ನೋವಿನ ಸಂಗತಿ